AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜಕೀಯ ನಾಯಕರಿಗೆ ಚಿನ್ನ ಬೇಕೆಂದು ವ್ಯಾಪಾರಿಗೆ 3 ಕೆಜಿ ಚಿನ್ನ ಮತ್ತು 80 ಲಕ್ಷ ರೂ. ವಂಚನೆ ಆರೋಪ; ಪ್ರಕರಣ​ ದಾಖಲು

ಚುನಾವಣೆಯಲ್ಲಿ ರಾಜಕೀಯ ನಾಯಕರಿಗೆ ಚಿನ್ನ ಬೇಕೆಂದು ಹೇಳಿ ಕೆಆರ್ ಮಾರ್ಕೆಟ್ ಬಳಿಯ ಚಿನ್ನದ ವ್ಯಾಪಾರಿಗೆ 3 ಕೆಜಿ ಚಿನ್ನ ಮತ್ತು 80 ಲಕ್ಷ ಹಣ ವಂಚನೆ ಮಾಡಿರುವ ಕುರಿತು ಸಿಟಿ ಮಾರ್ಕೆಟ್ ಪೋಲಿಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ರಾಜಕೀಯ ನಾಯಕರಿಗೆ ಚಿನ್ನ ಬೇಕೆಂದು ವ್ಯಾಪಾರಿಗೆ 3 ಕೆಜಿ ಚಿನ್ನ ಮತ್ತು 80 ಲಕ್ಷ ರೂ. ವಂಚನೆ ಆರೋಪ; ಪ್ರಕರಣ​ ದಾಖಲು
ಪ್ರಾತಿನಿಧಿಕ ಚಿತ್ರ
ಕಿರಣ್ ಹನುಮಂತ್​ ಮಾದಾರ್
|

Updated on: May 05, 2023 | 9:51 AM

Share

ಬೆಂಗಳೂರು: ಚುನಾವಣೆಯಲ್ಲಿ ರಾಜಕೀಯ ನಾಯಕರಿಗೆ ಚಿನ್ನ ಬೇಕೆಂದು ಹೇಳಿ ಕೆಆರ್ ಮಾರ್ಕೆಟ್ ಬಳಿಯ ಚಿನ್ನದ ವ್ಯಾಪಾರಿಗೆ 3 ಕೆಜಿ ಚಿನ್ನ ಮತ್ತು 80 ಲಕ್ಷ ಹಣ ವಂಚನೆ ಮಾಡಿರುವ ಕುರಿತು ಸಿಟಿ ಮಾರ್ಕೆಟ್ ಪೋಲಿಸ್ ಠಾಣೆ(City Market Police Station)ಯಲ್ಲಿ ಕೇಸ್ ದಾಖಲಾಗಿದೆ. ವಿಶಾಲ್ ಜೈನ್ ಎಂಬ ಉದ್ಯಮಿಗೆ ವಂಚಿಸಿರುವ ಅರೋಪಿಗಳು. ಅಭಯ್, ಕಿರಣ್, ಸಂಕೇತ್, ನವೀನ್ ಮತ್ತು ಚರಣ್ ಎಂಬ ವ್ಯಕ್ತಿಗಳಿಂದ ವಂಚನೆ ಆರೋಪ ಕೇಳಿಬಂದಿದೆ. ಮೊದಲಿಗೆ ಒಂದು ಕೆಜಿ ಚಿನ್ನ ಬೇಕು ಎಂದು ಪಡೆದಿದ್ದಾರೆ. ಬಳಿಕ ಶಾಂಗ್ರೀಲಾ ಹೋಟೆಲ್​ನಲ್ಲಿ ಭೇಟಿ ಮಾಡಿ ರಾಜಕೀಯ ನಾಯಕರ ಪಿಎ ಜೊತೆ ಮಾತನಾಡಿದಂತೆ ಮಾಡಿ, ಮತ್ತೆ ಚಿನ್ನವನ್ನ ಪಡೆದಿದ್ದಾರೆ.

ಹೀಗೆ ಹಂತ ಹಂತವಾಗಿ ಒಟ್ಟು ಮೂರು ಕೆಜಿಗೂ ಅಧಿಕ ಚಿನ್ನ ಪಡೆದಿದ್ದಾರಂತೆ. ಕೊನೆಗೆ ಹಣ ಕೇಳಿದಾಗ, ನಮ್ಮ ಬಳಿ 8 ಕೆಜಿ ಚಿನ್ನದ ಗಟ್ಟಿ ಇದೆ. ಅದನ್ನು ತೆಗೆದುಕೊಂಡು ಉಳಿದ ಹಣ ವಾಪಸ್ಸು ಕೊಡಿ ಎಂದಿದ್ದಾರೆ. ಇದನ್ನು ನಂಬಿ ಎಂಟು ಕೆಜಿ ಪಡೆದು ಐವತ್ತು ಲಕ್ಷ ಹಣ ವಾಪಸ್ಸು ನೀಡಿದ್ದರು. ಬಳಿಕ ಮನೆಗೆ ಬಂದು ನೋಡಿದಾಗ ಅದು ನಕಲಿ ಚಿನ್ನ ಎನ್ನುವುದು ಗೊತ್ತಾಗಿದೆ. ಈ ವಿಚಾರ ಹೇಳಿ ಪ್ರಶ್ನೆ ಉದ್ಯಮಿ ಮಾಡಿದ್ದಾರೆ. ಈ ವೇಳೆ ನಾವು ಕೊಟ್ಟಿದ್ದು ಚಿನ್ನ ನೀವೆ ಕಬ್ಬಿಣ ಇಟ್ಟು, ನಾಟಕ ಮಾಡುತ್ತಿರ ಎಂದು ಬೆದರಿಕೆ ಹಾಕಿದ್ದಾರೆ.

ಇದನ್ನೂ ಓದಿ:Gold Rates: ಚಿನ್ನ ಮತ್ತೆ ದುಬಾರಿ; ಎರಡು ದಿನದಲ್ಲಿ 1,300 ರೂನಷ್ಟು ಏರಿಕೆ; ಬೆಳ್ಳಿಯೂ ಹಿಂದುಳಿದಿಲ್ಲ; ಇವತ್ತಿನ ದರಗಳೆಷ್ಟು, ನೋಡಿ ವಿವರ

ಇದಾದ ಬಳಿಕ ಕೊನೆಗೆ ರಾಜಕೀಯ ನಾಯಕರ ಹೆಸರು ಹೇಳಿ 30 ಲಕ್ಷ ಹಣ ವಸೂಲಿ ಮಾಡಿದ್ದು, ಈ ಮೂಲಕ ಒಟ್ಟು 3 ಕೆಜಿ ಚಿನ್ನದ ಆಭರಣ ಮತ್ತು 80 ಲಕ್ಷ ಹಣ ವಸೂಲಿ ಮಾಡಿ ವಂಚನೆ ಮಾಡಿದ್ದಾರೆ. ಈ ಘಟನೆ ಸಂಬಂಧ ವಿಶ್ವೇಶ್ವರ ಪುರ ಪೊಲೀಸರ ಮೂಲಕ ರಾಜಿಗೆ ಯತ್ನಿಸಿದ್ದಾರೆ. ಅಲ್ಲಿಯೂ ಚಿನ್ನ ಪಡೆದಿದ್ದಾಗಿ ಒಪ್ಪಿ ನಂತರ ವಾಪಸ್ಸು ನೀಡದೆ ವಂಚಿಸಿದ್ದಾರೆ. ಇನ್ನು ಈ ಎಲ್ಲ ಘಟನೆ ಸಂಬಂಧಿಸಿದಂತೆ ಸಿಟಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಿದ್ದಾರೆ. ಈ ಕುರಿತು ಪೊಲೀಸರು ಅರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಬಿಗ್​ಬಾಸ್​ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು
ಬಿಗ್​ಬಾಸ್​ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು
ಉಚ್ಛಾಟಿತ ಶಾಸಕ ಯತ್ನಾಳ್​ ಸಂಪರ್ಕದಲ್ಲಿದ್ಯಾ BJP ಹೈಕಮಾಂಡ್​?
ಉಚ್ಛಾಟಿತ ಶಾಸಕ ಯತ್ನಾಳ್​ ಸಂಪರ್ಕದಲ್ಲಿದ್ಯಾ BJP ಹೈಕಮಾಂಡ್​?
ತಮ್ಮ ಬಟ್ಟೆ ಬಗ್ಗೆ ಅಶ್ಲೀಲ ಕಾಮೆಂಟ್​ ಮಾಡಿದವರಿಗೆ ತಿರುಗೇಟು ಕೊಟ್ಟ ಶಾಸಕಿ
ತಮ್ಮ ಬಟ್ಟೆ ಬಗ್ಗೆ ಅಶ್ಲೀಲ ಕಾಮೆಂಟ್​ ಮಾಡಿದವರಿಗೆ ತಿರುಗೇಟು ಕೊಟ್ಟ ಶಾಸಕಿ