AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳ್ಳಂದೂರು-ಕರ್ಮೇಲರಂ ನಡುವಿನ ರೈಲು ಹಳಿ ಡಬ್ಲಿಂಗ್ ಕಾಮಗಾರಿ 2024ರ ಮಾರ್ಚ್​​ನಲ್ಲಿ ಪೂರ್ಣ

498.73 ಕೋಟಿ ರೂ. ವೆಚ್ಚದ ಬೈಯಪ್ಪನಹಳ್ಳಿ-ಹೊಸೂರು ಡಬ್ಲಿಂಗ್ ಯೋಜನೆಯನ್ನು ಪೂರ್ಣಗೊಳಿಸಲು 2024 ಡಿಸೆಂಬರ್ ಗಡುವು ನೀಡಲಾಗಿದೆ. ಈ ಮಾರ್ಗ ಬೆಳ್ಳಂದೂರು ರೋಡ್​​, ಕರ್ಮೇಲರಂ, ಹುಸ್ಕೂರು, ಹೀಲಲಿಗೆ, ಆನೇಕಲ್ ಮತ್ತು ಮಾರಾಯನಾಯಕನಹಳ್ಳಿ ಕೊನೆಗೆ ಹೊಸೂರಿಗೆ ಸಂಪರ್ಕ ಕಲ್ಪಿಸುತ್ತದೆ.

ಬೆಳ್ಳಂದೂರು-ಕರ್ಮೇಲರಂ ನಡುವಿನ ರೈಲು ಹಳಿ ಡಬ್ಲಿಂಗ್ ಕಾಮಗಾರಿ 2024ರ ಮಾರ್ಚ್​​ನಲ್ಲಿ ಪೂರ್ಣ
ಡಬಲಿಂಗ್​ ಕಾಮಗಾರಿImage Credit source: The Indian Express
ವಿವೇಕ ಬಿರಾದಾರ
|

Updated on:Nov 03, 2023 | 8:03 AM

Share

ಬೆಂಗಳೂರು ನ.03: ಆರ್​​.ವಿ ರಸ್ತೆಯಿಂದ ಬೊಮ್ಮಸಂದ್ರವರೆಗೆ ಸಂಪರ್ಕ ಕಲ್ಪಿಸುವ ಬಹು ನಿರೀಕ್ಷಿತ ನಮ್ಮ ಮೆಟ್ರೋ (Metro) ಹಳದಿ ಮಾರ್ಗ ಯಾವಾಗ ಆರಂಭವಾಗುತ್ತದೆ ಎಂದು ಎಲೆಕ್ಟ್ರಾನಿಕ್​ ಸಿಟಿ ನೌಕರರು ಕುತೂಹಲದಿಂದ ಎದರು ನೋಡುತ್ತಿದ್ದಾರೆ. ಈ ನಡುವೆ ಬೈಯಪ್ಪನಹಳ್ಳಿಯಿಂದ ಹೊಸೂರಿಗೆ (Baiyappanahalli-Hosur) ಸಂಪರ್ಕ ಕಲ್ಪಿಸುವ 48 ಕಿಮೀ ರೈಲು ಹಳಿ ಡಬ್ಲಿಂಗ್​ ಕಾಮಗಾರಿ ನಡೆಯುತ್ತಿದೆ. ಬೆಳ್ಳಂದೂರು ರೋಡ್​​-ಕರ್ಮೇಲರಂ ನಡುವಿನ ಕಾಮಗಾರಿ 2024ರ ಮಾರ್ಚ್​​ನಲ್ಲಿ ಪೂರ್ಣಗೊಳ್ಳಲಿದೆ. ಚಂದಾಪುರ ಸಮೀಪದಲ್ಲಿರುವ ಹೀಲಲಿಗೆ ರೈಲು ನಿಲ್ದಾಣವು ಎಲೆಕ್ಟ್ರಾನಿಕ್ಸ್ ಸಿಟಿ-2 ಮತ್ತು ಎಲೆಕ್ಟ್ರಾನಿಕ್ ಸಿಟಿ-1 ರಿಂದ ಕ್ರಮವಾಗಿ 3 ಕಿಮೀ ಮತ್ತು 5 ಕಿಮೀ ದೂರದಲ್ಲಿದೆ.

498.73 ಕೋಟಿ ರೂ. ವೆಚ್ಚದ ಬೈಯಪ್ಪನಹಳ್ಳಿ-ಹೊಸೂರು ಡಬ್ಲಿಂಗ್ ಯೋಜನೆಯನ್ನು ಪೂರ್ಣಗೊಳಿಸಲು 2024 ಡಿಸೆಂಬರ್ ಗಡುವು ನೀಡಲಾಗಿದೆ. ಈ ಮಾರ್ಗ ಬೆಳ್ಳಂದೂರು ರೋಡ್​​, ಕರ್ಮೇಲರಂ, ಹುಸ್ಕೂರು, ಹೀಲಲಿಗೆ, ಆನೇಕಲ್ ಮತ್ತು ಮಾರಾಯನಾಯಕನಹಳ್ಳಿ ಕೊನೆಗೆ ಹೊಸೂರಿಗೆ ಸಂಪರ್ಕ ಕಲ್ಪಿಸುತ್ತದೆ.

ಕರ್ನಾಟಕ ರೈಲ್ ಇನ್ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಎಂಟರ್‌ಪ್ರೈಸಸ್ (ಕೆ-ರೈಡ್) ಪ್ರಾಜೆಕ್ಟ್‌ಗಳ ನಿರ್ದೇಶಕ ಆರ್‌ಕೆ ಸಿಂಗ್ ಮಾತನಾಡಿ, ಕರ್ಮೇಲರಂನಿಂದ ಹೀಲಲಿಗೆ ನಿಲ್ದಾಣದವರೆಗಿನ 10.5 ಕಿ.ಮೀ. ಉದ್ದ ಮಾರ್ಗ ಈ ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಪೂರ್ಣಗೊಳ್ಳುತ್ತದೆ. ಹಾಗೆ ಬಹಳ ಮುಖ್ಯವಾದ ಬೆಳ್ಳಂದೂರು ರೋಡ್​​ನಿಂದ ಕಾರ್ಮೆಲಾರಂಗೆ ಸಂಪರ್ಕಿಸುವ 3.5 ಕಿಮೀ ಕಾಮಗಾರಿ ಮತ್ತು ಆನೇಕಲ್ ಮತ್ತು ಮಾರನಾಯಕನಹಳ್ಳಿ ನಡುವಿನ 7 ಕಿ.ಮೀ ಉದ್ದ ಕಾಮಗಾರಿಯನ್ನು ಪೂರ್ಣಗೊಳಿಸುತ್ತೇವೆ ಎಂದರು.

ಇದನ್ನೂ ಓದಿ: ಬೆಂಗಳೂರು ಸಬ್​ ಅರ್ಬನ್ ರೈಲು ಯೋಜನೆ: ನಾಚಿಕೆಯಿಲ್ಲದೆ ಸುಳ್ಳು ಹೇಳುವ ಸಿದ್ದರಾಮಯ್ಯ, ದಾಖಲೆ ಸಹಿತ ತೇಜಸ್ವಿ ಸೂರ್ಯ ತಿರುಗೇಟು

ಪ್ರಸ್ತುತ ಬೆಳ್ಳಂದೂರು ರೋಡ್ ರೈಲು ನಿಲ್ದಾಣದಲ್ಲಿ​​​ ಒಂದು ರೈಲು ಹಳಿ ಮಾರ್ಗವಿದ್ದು, ಇದನ್ನು ನಾಲ್ಕಕ್ಕೆ ಏರಿಸಲಾಗುವುದು. ಈ ಮೂಲಕ ಒಟ್ಟು ಐದು ಹಳಿಗಳು ಕಾರ್ಯನಿರ್ವಹಿಸುತ್ತದೆ. ಕರ್ಮೇಲರಂ ಮತ್ತು ಹೀಲಲಿಗೆ ನಡುವೆ ಹುಸ್ಕೂರಿನಲ್ಲಿ ಹೊಸ ರೈಲು ನಿಲ್ದಾಣ ನಿರ್ಮಿಸಲಾಗುತ್ತಿದೆ. ಇವೆಲ್ಲವೂ ಹೆಚ್ಚಿನ ರೈಲುಗಳನ್ನು ಓಡಿಸಲು ಮೂಲಸೌಕರ್ಯಗಳನ್ನು ನವೀಕರಿಸುವ ಕ್ರಮಗಳಾಗಿವೆ ಎಂದು ತಿಳಿಸಿದರು.

ಬೆಂಗಳೂರು ಕಂಟೋನ್ಮೆಂಟ್‌ನಲ್ಲಿ ನಾಲ್ಕು ಹೊಸ ಫ್ಲಾಟ್​ಫಾರ್ಮ್​​ಗಳನ್ನು ನಿರ್ಮಿಸಲಾಗಿದೆ. ಈ ಮೂಲಕ 2024ರ ಮಾರ್ಚ್​​​ನಿಂದ ಕಂಟೋನ್ಮೆಂಟ್‌ನಿಂದ ಹೀಲಲಿಗೆ ಕಡೆಗೆ ಪ್ರತಿ 30 ನಿಮಿಷಗಳಿಗೊಮ್ಮೆ ರೈಲನ್ನು ಓಡಿಸಬಹುದು. ಈ ಹೆಚ್ಚಿನ ರೈಲು ಓಡಿಸಲು ಎರಡು ಹೊಸ ಮೆಮು 8 ಕೋಚ್ ರೈಲುಗಳನ್ನು ಸಿದ್ಧಪಡಿಸಬೇಕಾಗಿದೆ. ಡಬ್ಲಿಂಗ್ ಯೋಜನೆಗೆ ಸಂಬಂಧಿಸಿದಂತೆ ಬೈಯಪ್ಪನಹಳ್ಳಿ ಮತ್ತು ವೈಟ್‌ಫೀಲ್ಡ್ ನಡುವಿನ ರಸ್ತೆ ಕೆಳ ಸೇತುವೆಯನ್ನು ಸಹ ವಿಸ್ತರಿಸಲಾಗುತ್ತಿದೆ.

ನಗರ ಸಾರಿಗೆ ತಜ್ಞ ಸಂಜೀವ್ ದ್ಯಾಮ್ಮನವರ್ ಮಾತನಾಡಿ, ಬೆಂಗಳೂರು ಕಂಟೋನ್ಮೆಂಟ್ ಮತ್ತು ವೈಟ್‌ಫೀಲ್ಡ್ ನಡುವಿನ ಚತುಷ್ಪಥ ಯೋಜನೆ ಮತ್ತು ಈ ಡಬಲಿಂಗ್​​ ಯೋಜನೆಯು ಜನರ ಪ್ರಯಾಣದ ಮಾರ್ಗದಲ್ಲಿ ದೊಡ್ಡ ಬದಲಾವಣೆಯನ್ನು ತರಬಹುದು. ಚಂದಾಪುರ ಜಂಕ್ಷನ್ ಹೇಲಲಿಗೆ ನಿಲ್ದಾಣದ ಆಸುಪಾಸಿನಲ್ಲಿದೆ. ಇದು ಎಲೆಕ್ಟ್ರಾನಿಕ್ಸ್ ಸಿಟಿ-2 ಗೆ ಸಮೀಪದಲ್ಲಿದೆ ಮತ್ತು ಎಲೆಕ್ಟ್ರಾನಿಕ್ಸ್ ಸಿಟಿ-1 ರಿಂದ 5 ಕಿ.ಮೀ ದೂರದಲ್ಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 7:56 am, Fri, 3 November 23

Follow Us
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಸಚಿವ ಮುನಿಯಪ್ಪ ಮೇಲೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್​​ ಗರಂ!
ಸಚಿವ ಮುನಿಯಪ್ಪ ಮೇಲೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್​​ ಗರಂ!