ಪೊಲೀಸ್ ಇಲಾಖೆ ಹೆಸರಲ್ಲಿ ನಕಲಿ ನೇಮಕಾತಿ ವೆಬ್​ಸೈಟ್: 25 ಟೆಕ್ನಿಕಲ್ ಸ್ಟಾಪ್ ನೇಮಕಾತಿ ಪ್ರಕಟಣೆ‌

ಪೊಲೀಸ್ ಇಲಾಖೆ ಹೆಸರಲ್ಲಿ ಅನಧಿಕೃತ ವೆಬ್ ಲಿಂಕ್ ಮೂಲಕ ನಕಲಿ ನೇಮಕಾತಿ ಪ್ರಕಟಣೆಯನ್ನ ದುಷ್ಕರ್ಮಿಗಳು ಹೊರಡಿಸಿದ್ದಾರೆ. ಹೌದು ksprecruitment.co.in ಹೆಸರಲ್ಲಿ ಅನಧಿಕೃತ ಲಿಂಕ್ ತೆರೆದಿದ್ದು, ಅದು ಅನಧಿಕೃತ ವೆಬ್ ಲಿಂಕ್ ಮೂಲಕ ರಾಜ್ಯ ಪೊಲೀಸ್ ನೇಮಕಾತಿ ವಿಭಾಗದ ವೆಬ್ ಸೈಟ್ ಕನೆಕ್ಟ್ ಮಾಡಿದ್ದಾರೆ.

ಪೊಲೀಸ್ ಇಲಾಖೆ ಹೆಸರಲ್ಲಿ ನಕಲಿ ನೇಮಕಾತಿ ವೆಬ್​ಸೈಟ್: 25 ಟೆಕ್ನಿಕಲ್ ಸ್ಟಾಪ್ ನೇಮಕಾತಿ ಪ್ರಕಟಣೆ‌
ಪ್ರಾತಿನಿಧಿಕ ಚಿತ್ರ

Updated on: May 08, 2023 | 11:46 AM

ಬೆಂಗಳೂರು: ಪೊಲೀಸ್ ಇಲಾಖೆ(Police Department) ಹೆಸರಲ್ಲಿ ಅನಧಿಕೃತ ವೆಬ್ ಲಿಂಕ್ ಮೂಲಕ ನಕಲಿ ನೇಮಕಾತಿ ಪ್ರಕಟಣೆಯನ್ನ ದುಷ್ಕರ್ಮಿಗಳು ಹೊರಡಿಸಿದ್ದಾರೆ. ಹೌದು ksprecruitment.co.in ಹೆಸರಲ್ಲಿ ಅನಧಿಕೃತ ಲಿಂಕ್ ತೆರೆದಿದ್ದು, ಅದು ಅನಧಿಕೃತ ವೆಬ್ ಲಿಂಕ್ ಮೂಲಕ ರಾಜ್ಯ ಪೊಲೀಸ್ ನೇಮಕಾತಿ ವಿಭಾಗದ ವೆಬ್ ಸೈಟ್ ಕನೆಕ್ಟ್ ಮಾಡಿದ್ದಾರೆ. ಅದರಲ್ಲಿ ಕೆಎಸ್​ಪಿ ರಿಕ್ರೂಟ್ಮೆಂಟ್ ಟೆಕ್ನಿಕಲ್ ಸ್ಟಾಪ್ ಎಂಬ ಪುಟ ತೆರೆದು, 25 ಟೆಕ್ನಿಕಲ್ ಸ್ಟಾಪ್ ನೇಮಕಾತಿ ಇದೆ ಎಂದು ಪ್ರಕಟಣೆ ಹೊರಡಿಸಿದ್ದಾರೆ. ಜೊತೆಗೆ ಅರ್ಜಿ ಶುಲ್ಕ 2 ಸಾವಿರ ಇದ್ದು ಯುಪಿಐ ಮೂಲಕ ಹಣ ಪಾವತಿಸಲು ಸೂಚಿಸಿದ್ದು, ಈ ಬಗ್ಗೆ ಅಧಿಕಾರಿಗಳಿಂದ ಕೇಂದ್ರ ವಿಭಾಗ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅನಧಿಕೃತ ವೆಬ್ ಲಿಂಕ್ ತೆರೆದ ದುಷ್ಕರ್ಮಿಗಳಿಗಾಗಿ ಶೋಧಕಾರ್ಯ ಆರಂಭವಾಗಿದೆ.

545 ಪಿಎಸ್​ಐ ನೇಮಕಾತಿಯಲ್ಲಿ ಅಕ್ರಮ; ಭಾಗಿಯಾದವರ ವಿರುದ್ದ ಕ್ರಮ

ಈ ಹಿಂದೆ ಕರ್ನಾಟಕ ಪೊಲೀಸ್ ಇಲಾಖೆಯಲ್ಲಿನ 545 ಪಿಎಸ್​ಐ ಹುದ್ದೆಗಳ ಭರ್ತಿಗಾಗಿ ನೇಮಕಾತಿ ಪರೀಕ್ಷೆ ನಡೆಸಿತ್ತು. ಕಳೆದ ಅಕ್ಟೋಬರ್ 3 ರಂದು ಪಿಎಸ್ಐ ನೇಮಕಾತಿ ಪರೀಕ್ಷೆ ಬೆಂಗಳೂರು ಸೇರಿದಂತೆ ರಾಜ್ಯದ 7 ಜಿಲ್ಲೆಗಳಲ್ಲಿ 93 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು. ಈ ಪರೀಕ್ಷೆಯಲ್ಲಿ ಕೆಲವು ಅಭ್ಯರ್ಥಿಗಳು ಹುದ್ದೆಗಳನ್ನು ಅಕ್ರಮವಾಗಿ ಗಿಟ್ಟಿಸಿಕೊಳ್ಳಲು ಲಕ್ಷಾಂತರ ರೂಪಾಯಿ ಹಣ ನೀಡಿದ್ದರು. ಈ ಪ್ರಕರಣ ಬೆಳಕಿಗೆ ಬಂದು ತನಿಖೆ ನಡೆಸಿದಾಗ ಪರೀಕ್ಷಾ ಹಗರಣದಲ್ಲಿ ಹಣದ ಹೊಳೆಯೇ ಹರಿದಿರುವುದು ದೃಢವಾಗಿತ್ತು.

ಇದನ್ನೂ ಓದಿ:Viral Video: ‘ಗೋಲ್ಡ್ ಕುಲ್ಫಿ’ ಎಂದಾದರೂ ತಿಂದಿದ್ದೀರಾ? ಇದು ಅಸಲಿಯೋ, ನಕಲಿಯೋ? ನೀವೇ ನೋಡಿ

ಸಿಐಡಿಗೆ ತನಿಖೆ ವಹಿಸಿದ್ದ ಸರ್ಕಾರ

ಕೋಟಿ ಕೋಟಿ ಹಣ ಪತ್ತೆ ಹಿನ್ನೆಲೆ ಪ್ರಕರಣದ ಗಂಭೀರತೆಯನ್ನು ಅರಿತು ಸರ್ಕಾರ ತನಿಖೆಯನ್ನ ಸಿಐಡಿಗೆ ವಹಿಸಿತು. 545 ಪಿಎಸ್​ಐ ಹುದ್ದೆಗಳಿಗೆ ನೇಮಕಾತಿಯಲ್ಲಿ ಅಕ್ರಮ ಪ್ರಕರಣ ಹಿನ್ನೆಲೆ ಪಿಎಸ್ಐ ನೇಮಕಾತಿ ವಿಭಾಗದಲ್ಲಿ ಅಧಿಕಾರಿಗಳಿಗಿಂತ ಬ್ರೋಕರ್​ಗಳಿಗೂ ಹಣದ ಹೊಳೆ ಹರಿದಿದೆ. ಬ್ರೋಕರ್​ಗಳ ಹಂತದಲ್ಲಿಯೂ ಕನಿಷ್ಠ ಹತ್ತು ಲಕ್ಷ ಹಣ ಕೊಡಬೇಕಿತ್ತು. ನೇಮಕಾತಿ ವಿಭಾಗದ ಅಧಿಕಾರಿಗೆ ಮೂವತ್ತ ರಿಂದ ಮೂವತ್ತೈದು ಲಕ್ಷ ತಲುಪುತ್ತಿತ್ತು. ಮೂವರು ನಾಲ್ವರು ಬ್ರೋಕರ್​ಗಳ ಹಂತದಲ್ಲಿ ಮೂವತ್ತು ನಲವತ್ತು ಲಕ್ಷ ಹಣ ನೀಡಲಾಗುತ್ತಿತ್ತು. ಅಷ್ಟೂ ಬ್ರೋಕರ್​ಗಳ ಮೂಲಕ ಹಣ ಕೊನೆಗೆ ನೇಮಕಾತಿ ವಿಭಾಗದ ಅಧಿಕಾರಿಗಳ ಕೈಗೆ ಸೇರುತ್ತಿತ್ತು.

ಹಗರಣ ಹಿನ್ನೆಲೆ ಲಿಖಿತ ಪರೀಕ್ಷೆಯನ್ನೇ ರದ್ದುಗೊಳಿಸಿದ ಸರ್ಕಾರ, ಮರುಪರೀಕ್ಷೆಗೆ ನಿರ್ಧರಿಸಿತ್ತು. ಪ್ರಾಮಾಣಿಕ ಅಭ್ಯರ್ಥಿಗಳಿಗೆ ಅನ್ಯಾಯವಾಗದಂತೆ ಮರು ಪರೀಕ್ಷೆ ನಡೆಸಲಾಗುವುದು. ಆರೋಪಿಗಳಿಗೆ ಮರು ಪರೀಕ್ಷೆಯಲ್ಲಿ ಅವಕಾಶ ಸಿಗುವುದಿಲ್ಲ. ಶೀಘ್ರವೇ ಮರು ಪರೀಕ್ಷೆ ದಿನಾಂಕ ಪ್ರಕಟಿಸುತ್ತೇವೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದರು. ಆದರೆ ಮರು ಪರೀಕ್ಷೆ ಯನ್ನು ಕೈಬಿಡುವಂತೆ ಒತ್ತಾಯಿಸಿ ಅಭ್ಯರ್ಥಿಗಳು ಪ್ರತಿಭಟನೆ ನಡೆಸಿದ್ದವು. ಅಲ್ಲದೆ, ಹೈಕೋರ್ಟ್ ಮೆಟ್ಟಿಲು ಕೂಡ ಎರಿದ್ದರು.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ