AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ‘ಗೋಲ್ಡ್ ಕುಲ್ಫಿ’ ಎಂದಾದರೂ ತಿಂದಿದ್ದೀರಾ? ಇದು ಅಸಲಿಯೋ, ನಕಲಿಯೋ? ನೀವೇ ನೋಡಿ

ಇಂದೋರ್ನ ಬೀದಿ ಬದಿ ವ್ಯಾಪಾರಿಯೊಬ್ಬರು 'ಚಿನ್ನದ ಕುಲ್ಫಿ' ಮಾರಾಟ ಮಾಡುತ್ತಿರುವ ವೀಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇನ್ಸ್ಟಾಗ್ರಾಮ್ ಫುಡ್​​ ಬ್ಲಾಗರ್ ಕಲಾಶ್ ಸೋನಿ ಈ ವೀಡಿಯೊ ಹಂಚಿಕೊಂಡಿದ್ದಾರೆ.

Viral Video: 'ಗೋಲ್ಡ್ ಕುಲ್ಫಿ' ಎಂದಾದರೂ ತಿಂದಿದ್ದೀರಾ? ಇದು ಅಸಲಿಯೋ, ನಕಲಿಯೋ? ನೀವೇ ನೋಡಿ
ವೈರಲ್ ವೀಡಿಯೋ
ಪ್ರೀತಿ ಭಟ್​, ಗುಣವಂತೆ
| Edited By: |

Updated on:May 02, 2023 | 5:59 PM

Share

ಬೇಸಿಗೆಯಲ್ಲಿ ಅತ್ಯಂತ ಆನಂದವೆಂದರೆ ಕುಲ್ಫಿ ತಿನ್ನುವುದು. ಸುಡುವ ಬಿಸಿಲಿನಲ್ಲಿ ತಂಪಾದ ಔತಣದಂತಿರುವ ಕುಲ್ಫಿ ಎಲ್ಲ ಕಡೆಯಲ್ಲೂ ಜನಪ್ರಿಯ. ಅದರಲ್ಲಿಯೂ ನಮಗೆ ಹಲವಾರು ಆಯ್ಕೆಗಳು. ಸಾದಾ ಕುಲ್ಫಿ, ಪಿಸ್ತಾ ಕುಲ್ಫಿ, ಮಾವಿನ ಕುಲ್ಫಿ ಹಾಗೇ ವಿವಿಧ ರೀತಿಯ ಫ್ಲೇವರ್ ಹೊಂದಿದೆ. ಆದರೆ ನೀವು ಚಿನ್ನದ ಕುಲ್ಫಿಯ ಬಗ್ಗೆ ಎಂದಾದರೂ ಕೇಳಿದ್ದೀರಾ? ಇದೇನು ವಿಚಿತ್ರ ಅಂತ ಅಂದ್ಕೋತಿದೀರಾ? ಇತ್ತೀಚೆಗೆ, ಇಂದೋರ್ ಬೀದಿ ವ್ಯಾಪಾರಿಯೊಬ್ಬರು ‘ಚಿನ್ನದ ಕುಲ್ಫಿ’ ಮಾರಾಟ ಮಾಡುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

ಇನ್ಸ್ಟಾಗ್ರಾಮ್​​ನಲ್ಲಿ ಫುಡ್​ ಬ್ಲಾಗರ್ ಕಲಾಶ್ ಸೋನಿ ಹಂಚಿಕೊಂಡಿರುವ ವೀಡಿಯೊದಲ್ಲಿ, ಇಂದೋರ್ ಬೀದಿ ವ್ಯಾಪಾರಿಯೊಬ್ಬರು ಈ ಕುಲ್ಫಿಯನ್ನು ಮಾರಾಟ ಮಾಡುವುದನ್ನು ನೀವು ನೋಡಬಹುದು. ವೀಡಿಯೊದಲ್ಲಿ ಆಭರಣಗಳನ್ನು ಹಾಕಿಕೊಂಡಿರುವ ವ್ಯಕ್ತಿ ಫ್ರಿಜ್​​​​ನಿಂದ ಕುಲ್ಫಿಯ ತುಂಡನ್ನು ಹೊರತೆಗೆಯುತ್ತಾರೆ ಅದನ್ನು ’24 ಕ್ಯಾರೆಟ್ ಚಿನ್ನದ ಪೇಪರ್​​ನಲ್ಲಿ ಸುತ್ತಿಕೊಂಡಿರುತ್ತದೆ. ಕಲಾಶ್ ಸೋನಿ ಅವರು ಹೇಳುವ ಪ್ರಕಾರ, ಈ ಕುಲ್ಫಿಯ ಬೆಲೆ 351 ರೂ. ಕುಲ್ಫಿ ಮಾರಾಟ ಮಾಡುತ್ತಿರುವ ವ್ಯಾಪಾರಿ ಹೆಸರು ಪ್ರಕಾಶ್ ಕುಲ್ಫಿ ಎಂದು ಕರೆಯಲಾಗುತ್ತದೆ. ಇದು ಇಂದೋರ್ನ ಸರಾಫಾದಲ್ಲಿದೆ. ಇಲ್ಲಿದೆ ನೋಡಿ ವೀಡಿಯೊ

ಇದನ್ನೂ ಓದಿ:Viral Video: ರಸ್ತೆ ದಾಟುತ್ತಿರುವ ಹುಲಿ ಮರಿಗಳು, ನಿಧಾನವಾಗಿ ವಾಹನ ಚಲಾಯಿಸಿ ಎಂದ ಐಎಫ್ಎಸ್ ಅಧಿಕಾರಿ

ಇದೀಗ ಈ ವೀಡಿಯೊ 40,000 ಕ್ಕೂ ಹೆಚ್ಚು ಲೈಕ್ ಹಾಗೂ ಹಲವಾರು ಶೇರ್, ಕಾಮೆಂಟ್​​​ಗಳನ್ನು ಸಹ ಹೊಂದಿದೆ. ಈ ಪೋಸ್ಟ್ ನೋಡಿದ ಅನೇಕ ಕಮೆಂಟ್ ಮಾಡಿದ್ದಾರೆ, ಒಬ್ಬ ಬಳಕೆದಾರರು “ಹಣ ವ್ಯರ್ಥ” ಎಂದು ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು “ನಾನು ಅಲ್ಲಿಗೆ ಹೋಗಿದ್ದೆ, ಅದನ್ನು ತಿಂದೆ ಆದರೆ ಆ ದುಡ್ಡಿಗೆ ಅದು ಯೋಗ್ಯವಾಗಿಲ್ಲ ಎಂದು ಬರೆದುಕೊಂಡಿದ್ದಾರೆ. ಇನ್ನೊಬ್ಬರು “ಬ್ರೋ ಇದು ನಕಲಿ. ಇದು ಅರ್ಧ ಕ್ಯಾರೆಟ್ ಕೂಡ ಇಲ್ಲ, 24 ತೋ ಬೋಹೋತ್ ದುರ್ ಹೈ” ಎಂದು ಪೋಸ್ಟ್ ಮಾಡಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 5:58 pm, Tue, 2 May 23

ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಕೇಸ್​: ಸಿಎಂ ವಿರುದ್ಧ ಜೋಶಿ ವಾಗ್ದಾಳಿ
ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಕೇಸ್​: ಸಿಎಂ ವಿರುದ್ಧ ಜೋಶಿ ವಾಗ್ದಾಳಿ
ಕೆಪಿಸಿಸಿ ಕಚೇರಿಯಲ್ಲೇ ಮೊಳಗಿತು ‘ಮುಂದಿನ ಸಿಎಂ ಡಿಕೆ ಶಿವಕುಮಾರ್’ ಘೋಷಣೆ
ಕೆಪಿಸಿಸಿ ಕಚೇರಿಯಲ್ಲೇ ಮೊಳಗಿತು ‘ಮುಂದಿನ ಸಿಎಂ ಡಿಕೆ ಶಿವಕುಮಾರ್’ ಘೋಷಣೆ
ಹಳೆ ದ್ವೇಷಕ್ಕೆ ರೌಡಿಶೀಟರ್ ಅಪಹರಿಸಿ ಚಿತ್ರಹಿಂಸೆ: ಬೆರಳು ಕತ್ತರಿಸಿ ವಿಕೃತಿ
ಹಳೆ ದ್ವೇಷಕ್ಕೆ ರೌಡಿಶೀಟರ್ ಅಪಹರಿಸಿ ಚಿತ್ರಹಿಂಸೆ: ಬೆರಳು ಕತ್ತರಿಸಿ ವಿಕೃತಿ
ಸಿಎಂ ಕುರ್ಚಿ ಕದನ: ಇಲ್ಲಿದೆ ರಾಜ್ಯ ರಾಜಕೀಯದ ಬಿಗ್​​ ಅಪ್ಡೇಟ್​!
ಸಿಎಂ ಕುರ್ಚಿ ಕದನ: ಇಲ್ಲಿದೆ ರಾಜ್ಯ ರಾಜಕೀಯದ ಬಿಗ್​​ ಅಪ್ಡೇಟ್​!
ಈ ಸರ್ಕಾರಿ ಬಸ್​​ಗಳಿಗೆ ದೇವರೇ ಗತಿ
ಈ ಸರ್ಕಾರಿ ಬಸ್​​ಗಳಿಗೆ ದೇವರೇ ಗತಿ
ಶಾಮನೂರು ಕ್ಷೇತ್ರದಲ್ಲಿ ಬೈ ಎಲೆಕ್ಷನ್​: ಕಾಂಗ್ರೆಸ್​​ ಟಿಕೆಟ್​​ ಯಾರಿಗೆ?
ಶಾಮನೂರು ಕ್ಷೇತ್ರದಲ್ಲಿ ಬೈ ಎಲೆಕ್ಷನ್​: ಕಾಂಗ್ರೆಸ್​​ ಟಿಕೆಟ್​​ ಯಾರಿಗೆ?