AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಲೆಹೊಟ್ಟಿನ ಸಮಸ್ಯೆಯನ್ನು ನಿರ್ಲಕ್ಷಿಸಬೇಡಿ! ಈ ಅಭ್ಯಾಸಗಳು ಸಮಸ್ಯೆಯನ್ನು ಹೆಚ್ಚಿಸಬಹುದು

ಡ್ಯಾಂಡ್ರಫ್ ಸಾಮಾನ್ಯ ಸಮಸ್ಯೆಯಾಗಿದ್ದರೂ ಅದನ್ನು ನಿರ್ಲಕ್ಷಿಸುವುದು ಸರಿಯಲ್ಲ. ಸರಿಯಾದ ಆರೈಕೆ, ಸಮತೋಲಿತ ಆಹಾರ, ಒತ್ತಡ ನಿಯಂತ್ರಣ ಹಾಗೂ ಸೂಕ್ತ ಆಂಟಿ-ಡ್ಯಾಂಡ್ರಫ್ ಶ್ಯಾಂಪೂ ಬಳಕೆಯಿಂದ ಈ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು. ಲಕ್ಷಣಗಳು ತೀವ್ರವಾಗಿದ್ದರೆ ಅಥವಾ ದೀರ್ಘಕಾಲ ಮುಂದುವರಿದರೆ ತಜ್ಞರನ್ನು ಸಂಪರ್ಕಿಸುವುದು ಅತ್ಯಗತ್ಯ. ಈ ಬಗ್ಗೆ ಹೆಚ್ಚಿನ ಮಾಹಿತಿ ಸ್ಟೋರಿಯಲ್ಲಿದೆ.

ತಲೆಹೊಟ್ಟಿನ ಸಮಸ್ಯೆಯನ್ನು ನಿರ್ಲಕ್ಷಿಸಬೇಡಿ! ಈ ಅಭ್ಯಾಸಗಳು ಸಮಸ್ಯೆಯನ್ನು ಹೆಚ್ಚಿಸಬಹುದು
Recurring DandruffImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on:Jul 30, 2026 | 11:08 PM

Share

ಮುಖ್ಯಾಂಶಗಳು

  • ಡ್ಯಾಂಡ್ರಫ್ ನಿಯಂತ್ರಿಸಲು ಏನು ಮಾಡಬೇಕು?
  • ತಲೆಹೊಟ್ಟಿನ ಸಮಸ್ಯೆ ಕಡಿಮೆಯಾಗುತ್ತಿಲ್ಲವೇ? ತಜ್ಞರು ಹೇಳಿರುವ ಈ ಸಲಹೆಗಳನ್ನು ಅನುಸರಿಸಿ
  • ಡ್ಯಾಂಡ್ರಫ್ ಮತ್ತೆ ಮತ್ತೆ ಬರುವುದನ್ನು ತಡೆಯಲು ಕೆಲವು ಅಭ್ಯಾಸಗಳನ್ನು ರೂಢಿಸಿಕೊಳ್ಳಿ

ತಲೆಹೊಟ್ಟಿನ (ಡ್ಯಾಂಡ್ರಫ್) ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಸಾಮಾನ್ಯವಾಗಿ ಕಂಡುಬರುತ್ತಿದೆ. ಉತ್ತಮ ಹೇರ್ ಕೇರ್ ಮಾಡಿದರೂ ಕೆಲವರಲ್ಲಿ ಡ್ಯಾಂಡ್ರಫ್ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತದೆ. ತಲೆಯ ಚರ್ಮದ ಭಾಗದಿಂದ ಬಿಳಿ ಅಥವಾ ಹಳದಿ ಬಣ್ಣದ ಸಣ್ಣ ಪದರಗಳು ಉದುರುವುದು, ತೀವ್ರ ತುರಿಕೆ, ಒಣ ಚರ್ಮ ಇವು ಇದರ ಸಾಮಾನ್ಯ ಲಕ್ಷಣಗಳಾಗಿವೆ. ಅನೇಕರು ಇದನ್ನು ಸಣ್ಣ ಸಮಸ್ಯೆ ಎಂದು ನಿರ್ಲಕ್ಷಿಸುತ್ತಾರೆ. ಆದರೆ ದೀರ್ಘಕಾಲ ಡ್ಯಾಂಡ್ರಫ್ ಮುಂದುವರಿದರೆ ಉರಿಯೂತ, ಕೆಂಪಾಗುವುದು, ಸಣ್ಣ ಗಾಯಗಳು ಹಾಗೂ ಕೂದಲು ಉದುರುವ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಡ್ಯಾಂಡ್ರಫ್ ಕಡಿಮೆಯಾದ ತಕ್ಷಣ ಅನುಸರಿಸುತ್ತಿರುವ ಸಲಹೆಗಳನ್ನು ನಿಲ್ಲಿಸುವುದು ಅಥವಾ ಸರಿಯಾದ ಆರೈಕೆ ಮಾಡದಿರುವುದು ಸಮಸ್ಯೆ ಮತ್ತೆ ಮರುಕಳಿಸಲು ಪ್ರಮುಖ ಕಾರಣವಾಗಬಹುದು. ಆದ್ದರಿಂದ ಕೇವಲ ಡ್ಯಾಂಡ್ರಫ್ ಹೋಗುವುದಷ್ಟೇ ಅಲ್ಲ, ಸ್ಕಾಲ್ಪ್ ಆರೋಗ್ಯ ಕಾಪಾಡಿಕೊಳ್ಳುವುದೂ ಅಷ್ಟೇ ಮುಖ್ಯ.

ಡ್ಯಾಂಡ್ರಫ್ ಹೆಚ್ಚಾಗಲು ಕಾರಣ:

ಆಂಟಿ-ಡ್ಯಾಂಡ್ರಫ್ ಶ್ಯಾಂಪೂವನ್ನು ಬೇಗ ನಿಲ್ಲಿಸುವುದು: ಡ್ಯಾಂಡ್ರಫ್ ಕಡಿಮೆಯಾದ ಕೂಡಲೇ ಹಲವರು ಔಷಧೀಯ ಶ್ಯಾಂಪೂ ಬಳಕೆಯನ್ನು ನಿಲ್ಲಿಸುತ್ತಾರೆ. ಇದರಿಂದ ಸಮಸ್ಯೆ ಮತ್ತೆ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗುತ್ತದೆ.

ಶ್ಯಾಂಪೂವನ್ನು ತಕ್ಷಣ ತೊಳೆಯುವುದು: ಆಂಟಿ-ಡ್ಯಾಂಡ್ರಫ್ ಶ್ಯಾಂಪೂವನ್ನು ಕೂದಲಿನ ಬುಡಕ್ಕೆ ಹಚ್ಚಿದ ಬಳಿಕ ಕನಿಷ್ಠ 3–5 ನಿಮಿಷ ಇರಿಸಿ ನಂತರ ತೊಳೆಯಬೇಕು. ಇದರಿಂದ ಅದರಲ್ಲಿರುವ ಔಷಧೀಯ ಅಂಶಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತವೆ.

ಕೂದಲಿನ ಬುಡವನ್ನು ಸರಿಯಾಗಿ ಸ್ವಚ್ಛಗೊಳಿಸದಿರುವುದು: ಕೂದಲನ್ನು ಮಾತ್ರ ತೊಳೆಯುವುದು ಸಾಕಾಗುವುದಿಲ್ಲ. ಅದರ ಬುಡದ ಎಣ್ಣೆ, ಧೂಳು ಹಾಗೂ ಸತ್ತ ಚರ್ಮದ ಕೋಶಗಳು ಸೇರುವುದರಿಂದ ಡ್ಯಾಂಡ್ರಫ್ ಹೆಚ್ಚಾಗಬಹುದು.

ಅತಿಯಾಗಿ ಹೇರ್ ಆಯಿಲ್ ಮತ್ತು ಸ್ಟೈಲಿಂಗ್ ಉತ್ಪನ್ನಗಳ ಬಳಕೆ: ಅತಿಯಾಗಿ ಎಣ್ಣೆ, ಹೇರ್ ಜೆಲ್, ಹೇರ್ ಸ್ಪ್ರೇ ಹಾಗೂ ಇತರ ಸ್ಟೈಲಿಂಗ್ ಉತ್ಪನ್ನಗಳನ್ನು ಬಳಸುವುದರಿಂದ ತಲೆಚರ್ಮದಲ್ಲಿ ಎಣ್ಣೆ ಮತ್ತು ಕೊಳಕು ಹೆಚ್ಚಾಗಿ ಡ್ಯಾಂಡ್ರಫ್ ತೀವ್ರವಾಗಬಹುದು.

ಇದನ್ನೂ ಓದಿ: ಪದೇ ಪದೇ ಗ್ಯಾಸ್ ಆಗುವುದಕ್ಕೆ ಈ ತಪ್ಪುಗಳೇ ಕಾರಣ! ಜೀರ್ಣಕ್ರಿಯೆ ಸಮಸ್ಯೆ ತಡೆಯಲು ಈ ಸಲಹೆಗಳನ್ನು ಅನುಸರಿಸಿ

ತಲೆಯನ್ನು ಪದೇ ಪದೇ ಕೆರೆದುಕೊಳ್ಳುವುದು: ನಿರಂತರವಾಗಿ ತುರಿಕೆ ಗಾಯವಾಗಬಹುದು. ಇದರಿಂದ ಬ್ಯಾಕ್ಟೀರಿಯಾ ಸೋಂಕಿನ ಅಪಾಯವೂ ಹೆಚ್ಚಾಗಬಹುದು.

ಡ್ಯಾಂಡ್ರಫ್ ನಿಯಂತ್ರಿಸಲು ಏನು ಮಾಡಬೇಕು?

  • ವೈದ್ಯರು ಅಥವಾ ತಜ್ಞರು ಸೂಚಿಸಿದ ಆಂಟಿ-ಡ್ಯಾಂಡ್ರಫ್ ಶ್ಯಾಂಪೂವನ್ನು ಸರಿಯಾಗಿ ಬಳಸಿ.
  • ವಾರಕ್ಕೆ 2–3 ಬಾರಿ ಕೂದಲನ್ನು ಸ್ವಚ್ಛವಾಗಿ ತೊಳೆಯಿರಿ.
  • ಶ್ಯಾಂಪೂವನ್ನು ಕೂದಲಿನ ಬುಡಕ್ಕೆ ಹಚ್ಚಿ ಕೆಲವು ನಿಮಿಷಗಳ ಕಾಲ ಇರಿಸಿ ನಂತರ ತೊಳೆಯಿರಿ.
  • ಹೇರ್ ಆಯಿಲ್ ಮತ್ತು ಸ್ಟೈಲಿಂಗ್ ಉತ್ಪನ್ನಗಳನ್ನು ಮಿತವಾಗಿ ಬಳಸಿ.
  • ವೈಯಕ್ತಿಕ ಟವೆಲ್ ಮತ್ತು ಹಣಿಗೆಯನ್ನು ಬಳಸಿ ಮತ್ತು ಅದನ್ನು ಸ್ವಚ್ಛವಾಗಿಡಿ.
  • ಸಮತೋಲಿತ ಆಹಾರ ಸೇವಿಸಿ ಹಾಗೂ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಿರಿ.
  • ಒತ್ತಡ (Stress) ಕಡಿಮೆ ಮಾಡಲು ಯೋಗ, ಧ್ಯಾನ ಅಥವಾ ನಿಯಮಿತ ವ್ಯಾಯಾಮ ಮಾಡಿ.

ಯಾವಾಗ ವೈದ್ಯರನ್ನು ಸಂಪರ್ಕಿಸಬೇಕು?

  • ಹಲವು ವಾರಗಳ ಚಿಕಿತ್ಸೆಯ ಬಳಿಕವೂ ಡ್ಯಾಂಡ್ರಫ್ ಕಡಿಮೆಯಾಗದಿದ್ದರೆ
  • ತೀವ್ರ ತುರಿಕೆ ಅಥವಾ ಉರಿಯೂತ ಇದ್ದರೆ
  • ಚರ್ಮ ಕೆಂಪಾಗುವುದು ಅಥವಾ ನೋವು ಕಾಣಿಸಿಕೊಂಡರೆ
  • ಕೂದಲಿನ ಬುಡದಲ್ಲಿ ಊತ ಅಥವಾ ಕೀವು ಕಾಣಿಸಿಕೊಂಡರೆ
  • ಕೂದಲು ಅತಿಯಾಗಿ ಉದುರಲು ಆರಂಭಿಸಿದರೆ

ಗಮನಿಸಿ: ಈ ಲೇಖನವು ಆರೋಗ್ಯ ಮಾಹಿತಿಗಾಗಿ ಮಾತ್ರ. ಯಾವುದೇ ಚಿಕಿತ್ಸೆ ಅಥವಾ ಔಷಧಿಗಳನ್ನು ವೈದ್ಯರ ಸಲಹೆಯ ಮೇರೆಗೆ ಮಾತ್ರ ಬಳಸಬೇಕು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:06 pm, Thu, 30 July 26

Follow Us
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ