ಅದ್ವಾನದ ಹಾದಿ ಹಿಡಿದ ಸಿಎಂ ಸಿದ್ಧರಾಮಯ್ಯ ಮನೆ ಬಳಿ ಇರುವ ಮಕ್ಕಳ ಪಾರ್ಕ್

ಗಾಂಧಿ ಭವನ್ ಎದುರಿಗೆ ಇರುವ ಶಿವಾನಂದ್ ಪಾರ್ಕ್​​ ಇದೀಗ ಸಂಪೂರ್ಣ ಹಾಳಾಗಿದ್ದು, ಚರಂಡಿ ನೀರಿನಿಂದ ಗಬ್ಬುನಾರುತ್ತಿದೆ. ಸ್ಥಳೀಯ ಎಂಎಲ್​ಎ ರಿಸ್ವಾನ್ ಹರ್ಷದ್ ಅವರಿಗೆ ದೂರು ನೀಡಿದರೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಹೀಗಾಗಿ ಪಾರ್ಕ್ ಸರಿಮಾಡಿ ಕೊಡಿ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು, ಜುಲೈ 30: 40 ವರ್ಷದ ಮಕ್ಕಳ ಹಳೆಯ ಪಾರ್ಕ್ (park)​​ ಒಂದು ಸದ್ಯ ಚರಂಡಿ ನೀರಿನಿಂದ ಗಬ್ಬುನಾರುತ್ತಿದೆ. ಗಾಂಧಿ ಭವನ್ ಎದುರಿಗೆ ಇರುವ ಶಿವಾನಂದ್ ಪಾರ್ಕ್​​ ಇದೀಗ ಸಂಪೂರ್ಣ ಹಾಳಾಗಿದ್ದು, ಮಕ್ಕಳಿಗೆ ಆಟವಾಡಲು ಪಾರ್ಕ್ ಇಲ್ಲದೇ ಬೇಸತ್ತಿದ್ದಾರೆ. ಈ ಕುರಿತಾಗಿ ಸ್ಥಳೀಯ ಎಂಎಲ್​ಎ ರಿಸ್ವಾನ್ ಹರ್ಷದ್ ಅವರಿಗೆ ದೂರು ನೀಡಿದರೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಹೀಗಾಗಿ ಪಾರ್ಕ್ ಸರಿಮಾಡಿ ಕೊಡಿ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅದ್ವಾನ ಹಿಡಿದ ಮಕ್ಕಳ ಪಾರ್ಕ್

ಶಿವಾನಂದ್ ಪಾರ್ಕ್​​ನಲ್ಲಿ ಸಾರಾಯಿ ಬಾಟೆಲ್, ಬಿಯರ್ ಬಾಟೆಲ್, ಕಸ ಎಲ್ಲವನ್ನ ಎಸೆದಿದ್ದು, ಗಬ್ಬುನಾರುತ್ತಿದೆ. ಅಕ್ಕಪಕ್ಕದ ಸ್ಥಳೀಯರಿಗೆ ಇನ್ನಿಲ್ಲದ ಸಮಸ್ಯೆ ಕೂಡ ಉಂಟಾಗಿದೆ. ಇಷ್ಟೇಲ್ಲಾ ಅದ್ವಾನ ಹಿಡಿದಿರುವ ಮಕ್ಕಳ ಪಾರ್ಕ್​ಗೆ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ.

ಇದನ್ನೂ ಓದಿ: ದಾವಣಗೆರೆ: ಮದ್ಯವರ್ಜನ ಶಿಬಿರದಲ್ಲಿ ಜಗಳೂರು ಶಾಸಕ ಬಿ.ದೇವೇಂದ್ರಪ್ಪ ಭಜನೆ

ಪಾರ್ಕ್​ನಲ್ಲಿ ಮಕ್ಕಳಿಗೆ ಆಟವಾಡಲು ಜೋಕಾಲಿ, ಜಾರು ಬಂಡಿ ಎಲ್ಲವೂ ಇತ್ತು. ಆದರೆ ಪಾರ್ಕ್ ಹೈಟೆಕ್ ಮಾಡುತ್ತೇವೆ ಅಂತ ಹೇಳಿ ಅಲ್ಲಿದ್ದ ಎಲ್ಲಾ ಆಟದ ವಸ್ತುಗಳನ್ನು ತೆಗೆದುಕೊಂಡು ಹೋಗಿ ಮೂರು ವರ್ಷವಾದರೂ ಇಲ್ಲಿಯವರೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ.

ಇದನ್ನೂ ಓದಿ: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಬೈಕ್ ವೀಲ್ಹಿಂಗ್, ಕಾರಿ​ಗೆ ಡಿಕ್ಕಿಯಾಗಿ ಆಸ್ಪತ್ರೆ ಸೇರಿದ ಸವಾರರು

 ಪಾರ್ಕ್ ಸರಿಮಾಡುವಂತೆ ಸ್ಥಳೀಯರ ಆಕ್ರೋಶ

ಇನ್ನೂ ಇದೇ ಪಾರ್ಕ್​​ನ 300 ಮೀಟರ್ಸ್ ಅಂತರದಲ್ಲೇ ಸಿಎಂ ಸಿದ್ಧರಾಮಯ್ಯ ಮನೆ ಇದೆ. ಪ್ರತಿದಿನ ಇದೇ ರಸ್ತೆಯಲ್ಲಿ ಎಂಎಲ್​ಎ ಹಾಗೂ ಎಂಪಿಗಳು ಓಡಾಡುತ್ತಾರೆ. ಈ ಪಾರ್ಕ್ ಎದುರಿಗೆ ಮಧು ಬಂಗಾರಪ್ಪ ಅವರ ಆಫೀಸ್ ಕೂಡ ಇದೆ. ಪಾರ್ಕ್​ನ ಅವ್ಯವಸ್ಥೆ ಕಂಡರೂ ಕಾಣದಂತಿರುವುದು ಏಕೆ ಎಂದು ಸ್ಥಳೀಯರು ಪ್ರಶ್ನಿಸುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.