ಡಿಕೆ ಶಿವಕುಮಾರ್​​ ಮುಖ್ಯಮಂತ್ರಿ ಆಗುವ ಗ್ಯಾರಂಟಿ ಠುಸ್ ಆಯ್ತು ಎಂದು ಕಾಲೆಳೆದ ಮಾಜಿ ಸಚಿವ ಆರ್​​ ಅಶೋಕ್​​

| Updated By: ಸಾಧು ಶ್ರೀನಾಥ್​

Updated on: Jul 05, 2023 | 4:08 PM

ಡಿಕೆ ಶಿವಕುಮಾರ್​​ ಮುಖ್ಯಮಂತ್ರಿ ಆಗುವ ಗ್ಯಾರಂಟಿ ಠುಸ್ ಆಯ್ತು ಎಂದು ಕಾಲೆಳೆದ ಮಾಜಿ ಸಚಿವ ಆರ್​​ ಅಶೋಕ್​​

ವಿಧಾನಸಭೆಯಲ್ಲಿ ನಿಲುವಳಿ ಪ್ರಸ್ತಾವ ಮಂಡನೆ ವೇಳೆ ಶಾಸಕ ಆರ್. ಅಶೋಕ್ ಹೇಳಿಕೆ: ಉಚಿತ ಬಸ್​ ಭಾಗ್ಯದ ಬಗ್ಗೆ ಮಾತನಾಡುತ್ತಾ ಸಿಎಂ ನನ್ನ ಹೆಂಡ್ತಿಗೂ ಫ್ರೀ ಎಂದಿದ್ದರು. ಆ ನಂತರ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ರಾಜಹಂಸದಲ್ಲಿ ಉಚಿತ ಇಲ್ಲ ಅಂತಾ ಹೇಳಿದ್ದರು. ಆಗ ಸಿಎಂ ಮಧ್ಯ ಪ್ರವೇಶಿಸಿ, ಎಲ್ಲರೂ ಹೋಗಲಿ ಬಿಡ್ರೀ ಅಂದಿದ್ದರು. ಈಗ ಆ ಮಾತಿನಂತೆ ಎಲ್ಲಾ ಬಸ್ ಗಳಲ್ಲೂ ಎಲ್ಲಿ ಫ್ರೀ ಇದೆ? ಎಂದು ಅಶೋಕ್ ತರಾಟೆಗೆ ತೆಗೆದುಕೊಂಡರು.

ಮುಂದುವರಿದು ಮಾತನಾಡಿದ ಅಶೋಕ್, ನೀವು ಮೊದಲು ಗ್ಯಾರಂಟಿ ಘೋಷಣೆ ‌ಮಾಡಿ ಸ್ವಾಮಿ, ಜಾರಿ ಮಾಡಲು ಯೋಗ್ಯತೆ ಇಲ್ಲ ಎಂದು ಕಾಲೆಳೆದರು. ಆ ವೇಳೆ ಅಶೋಕ್ ಮಾತಿಗೆ ಆಡಳಿತ ಪಕ್ಷದಿಂದ ತೀವ್ರ ವಿರೋಧ ವ್ಯಕ್ತವಾಯಿತು. ಆಡಳಿತ ಮತ್ತು ವಿಪಕ್ಷ ಸದಸ್ಯರ ಮಧ್ಯೆ ಮಾತಿನ ಸಮರ ನಡೆಯಿತು. ಇದೇ ವೇಳೆ ಡಿಕೆ ಶಿವಕುಮಾರ್​​ ಮುಖ್ಯಮಂತ್ರಿ ಆಗುವ ಗ್ಯಾರಂಟಿ ಠುಸ್ ಆಯ್ತು ಎಂದು ಮಾಜಿ ಸಚಿವ ಆರ್​​ ಅಶೋಕ್​​ ಕಾಲೆಳೆದು, ಕುಳಿತರು.

Follow us on