ಮೆಟ್ರೋ ಕಾಮಗಾರಿ ಸ್ಥಳದಲ್ಲಿ 30 ಅಡಿ ಕುಸಿದ ಮಣ್ಣು; ಬೆಂಗಳೂರಿನಲ್ಲಿ ತಪ್ಪಿದ ಭಾರೀ ಅನಾಹುತ

| Updated By: sandhya thejappa

Updated on: Sep 30, 2021 | 12:24 PM

ಮುಚ್ಚಿರುವ ಬಾವಿ ಜಾಗದಲ್ಲಿ ಮಣ್ಣು ಕುಸಿದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಝಬೀ ಎಂಬುವರಿಗೆ ಸೇರಿದ ಜಾಗದಲ್ಲಿ ಮಣ್ಣು ಕುಸಿದಿದೆ.

ಮೆಟ್ರೋ ಕಾಮಗಾರಿ ಸ್ಥಳದಲ್ಲಿ 30 ಅಡಿ ಕುಸಿದ ಮಣ್ಣು; ಬೆಂಗಳೂರಿನಲ್ಲಿ ತಪ್ಪಿದ ಭಾರೀ ಅನಾಹುತ
ಬ್ಯಾರಿಕೇಡ್​ ಹಾಕಿದ್ದಾರೆ
Follow us on

ಬೆಂಗಳೂರು: ಮೆಟ್ರೋ ಕಾಮಗಾರಿ ಸ್ಥಳದಲ್ಲಿ ಸುಮಾರು 30 ಅಡಿ ಮಣ್ಣು ಕುಸಿದ ಘಟನೆ ಬೆಂಗಳೂರಿನ ಟ್ಯಾನರಿ ರಸ್ತೆಯಲ್ಲಿ ನಡೆದಿದೆ. ಗೊಟ್ಟಿಗೆರೆಯಿಂದ ನಾಗವಾರದವರೆಗೆ ಮೆಟ್ರೋ ಕಾಮಗಾರಿ ನಡೆಯುತ್ತಿದೆ. ಇತ್ತೀಚೆಗಷ್ಟೇ ಸುರಂಗ ಕೊರೆದು ಟಿಬಿಎಂ ಹೊರಗೆ ಬಂದಿದ್ದತ್ತು. ಸುರಂಗ ಕೊರೆದ ಬಳಿಕ ಪ್ರಷರ್​ನಿಂದ ಮಣ್ಣು ಕುಸಿದಿರಬಹುದೆಂದು ಹೇಳಲಾಗುತ್ತಿದೆ.

ಮುಚ್ಚಿರುವ ಬಾವಿ ಜಾಗದಲ್ಲಿ ಮಣ್ಣು ಕುಸಿದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಝಬೀ ಎಂಬುವರಿಗೆ ಸೇರಿದ ಜಾಗದಲ್ಲಿ ಮಣ್ಣು ಕುಸಿದಿದ್ದು, ಇದಕ್ಕೆ ಬಿಎಂಆರ್​ಸಿಎಲ್​ ಕಾರಣ ಅಂತ ಮಾಲೀಕರು ಹೇಳುತ್ತಿದ್ದಾರೆ. ಬಿಎಂಆರ್​ಸಿಲ್​ ಹಳ್ಳ ಮುಚ್ಚಲು ಬೆಳಗ್ಗೆಯಿಂದ 2 ಲೋಡ್ ಮಣ್ಣು ತರಿಸಿದೆ. ಹಳ್ಳ ಮುಚ್ಚಲು 15ಕ್ಕೂ ಹೆಚ್ಚು ಜನರು ಹರಸಾಹಸ ಪಡುತ್ತಿದ್ದಾರೆ.

ಟ್ಯಾನ್ರಿ ರಸ್ತೆಯಲ್ಲಿ ಮುಚ್ಚಿದ್ದ ಬಾವಿ ಮಣ್ಣು ಕುಸಿದಿದೆ. ಮುಂಜಾನೆ 3 ಗಂಟೆಗೆ ಮಣ್ಣು ಕುಸಿದಿದೆ. ಮಣ್ಣು ಕುಸಿಯಲು ಬಿಎಂಆರ್‌ಸಿಎಲ್ ಅಧಿಕಾರಿಗಳೇ ಕಾರಣವೆಂದು ಆರೋಪಿಸುತ್ತಿರುವ ಜಾಗ ಮಾಲೀಕರು ಇದಕ್ಕೆ ಪರಿಹಾರ ನೀಡಲಿ ಅಂತಿದ್ದಾರೆ.

ಇದನ್ನೂ ಓದಿ

ಚಾಮರಾಜಪೇಟೆ ಆಸ್ಪತ್ರೆಯಿಂದ ಮಗು ಕಳ್ಳತನ ಪ್ರಕರಣ: ಕೋರ್ಟ್​ನಲ್ಲಿ ಹೆತ್ತ ತಾಯಿ-ಸಾಕು ತಾಯಿ ನಡುವೆ ಕಾದಾಟ, ಕೊನೆಗೆ ಮಗು ಸೇರಿದ್ದು ಯಾರ ಕೈಗೆ?

ಕಿಟಕಿಯಿಂದ ಸೋಫಾ ಕೆಳಗಿಳಿಸಲು ಮುಂದಾದವರನ್ನು ನೋಡಿ ‘ಎಂಥಾ ಐಡಿಯಾ ಗುರೂ’ ಎಂದ ನೆಟ್ಟಿಗರು! ತಮಾಷೆಯ ವಿಡಿಯೋ ವೈರಲ್

Published On - 11:26 am, Thu, 30 September 21