AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಿಟಕಿಯಿಂದ ಸೋಫಾ ಕೆಳಗಿಳಿಸಲು ಮುಂದಾದವರನ್ನು ನೋಡಿ ‘ಎಂಥಾ ಐಡಿಯಾ ಗುರೂ’ ಎಂದ ನೆಟ್ಟಿಗರು! ತಮಾಷೆಯ ವಿಡಿಯೋ ವೈರಲ್

Viral Video: ಮೂವರು ವ್ಯಕ್ತಿಗಳು ಸೇರಿ ಮನೆಯ ಮೇಲಿನ ಮಹಡಿಯಿಂದ ಕಿಟಕಿಯ ಮೂಲಕ ಸೋಫಾವನ್ನು ಕೆಳಗಿಳಿಸುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ.

ಕಿಟಕಿಯಿಂದ ಸೋಫಾ ಕೆಳಗಿಳಿಸಲು ಮುಂದಾದವರನ್ನು ನೋಡಿ ‘ಎಂಥಾ ಐಡಿಯಾ ಗುರೂ’ ಎಂದ ನೆಟ್ಟಿಗರು! ತಮಾಷೆಯ ವಿಡಿಯೋ ವೈರಲ್
TV9 Web
| Edited By: |

Updated on: Sep 30, 2021 | 10:18 AM

Share

ಸಾಮಾನ್ಯವಾಗಿ ಮನೆಯನ್ನು ಬದಲಾಯಿಸುವಾಗ ವಸ್ತುಗಳನ್ನೆಲ್ಲಾ ಸಾಗಿಸುತ್ತೇವೆ. ದೊಡ್ಡದಾದ ವಸ್ತುಗಳನ್ನು ಸಾಗಿಸುವಾಗ ಮನೆಯ ಎದುರಿನ ಬಾಗಿಲಿನಿಂದ ನಿಧಾನವಾಗಿ ಎಚ್ಚರದಲ್ಲಿ ಸಾಗಿಸುತ್ತೇವೆ. ಕೆಲವು ಸಂದರ್ಭದಲ್ಲಿ ಜನರು ವಿಲಕ್ಷಣ ತಂತ್ರಗಳನ್ನು ಅನ್ವಯಿಸುತ್ತಾರೆ. ಇಲ್ಲಿ ಮೂವರು ಸೇರಿ ಯೋಚಿಸಿ, ಮನೆಯ ಕಿಟಕಿಯಿಂದ ಸೋಫಾವನ್ನು ಕೆಳಗಿಳಿಸಲು ಯೋಚನೆ ಮಾಡಿದ್ದಾರೆ. ಕೊಂಚ ಸ್ಲಿಪ್ ಆದರೂ ಸೋಫಾ ಮೈಮೆಲೆಯೇ ಬೀಳುವುದು ಗ್ಯಾರೆಂಟಿ! ಇಂಥದ್ದೊಂದು ಯೋಚನೆಗೆ ನೆಟ್ಟಿಗರು ತಮಾಷೆಯಾಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.

ಮೂವರು ವ್ಯಕ್ತಿಗಳು ಸೇರಿ ಮನೆಯ ಮೇಲಿನ ಮಹಡಿಯಿಂದ ಕಿಟಕಿಯ ಮೂಲಕ ಸೋಫಾವನ್ನು ಕೆಳಗಿಳಿಸುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ಎದುರಿನ ಬಾಗಿಲಿನಿಂದ ಸೋಫಾವನ್ನು ಇಳಿಸಲು ಸಾಧ್ಯವಾಗದ ಕಾರಣ ಉಪಾಯ ಮಾಡಿ ಕಿಟಕಿಯಿಂದ ಸೋಫಾವನ್ನು ಕೆಳಗಿಳಿಸುಲು ಪ್ರಯತ್ನ ಮಾಡಿದ್ದಾರೆ.

ಐರ್ಲೆಂಡ್​ನಲ್ಲಿ ಈ ದೃಶ್ಯವನ್ನು ಕ್ಯಾಮರಾದಲ್ಲಿ ಸೆರೆ ಹಿಡಿಯಲಾಗಿದೆ. ಓರ್ವರು ಮನೆಯ ಒಳಗಿನ ಕಿಟಕಿಯಿಂದ ಸೋಫಾವನ್ನು ಇಳಿಸುತ್ತಿದ್ದಾರೆ. ಕೆಳಗೆ ನಿಂತ ಇಬ್ಬರು ಎಚ್ಚರಿಕೆಯಿಂದ ಸೋಫಾ ಕೆಳಗಿಳಿಸುತ್ತಿದ್ದಾರೆ. ಸೋಫಾ ಕೆಳಗೆ ಬೀಳದಂತೆ ನೆಲವನ್ನು ಒರೆಸುವ ಬ್ರಷ್​ಗಳನ್ನು ಬಳಸಿರುವುದನ್ನು ವಿಡಿಯೋದಲ್ಲಿ ನೋಡಬಹುದು.

ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ವಿಭಾಗದಲ್ಲಿ ಹಂಚಿಕೊಂಡಿದ್ದು, ಮಾಸ್ಟರ್ ಪ್ಲ್ಯಾನ್ ಇದು ಎಂದು ಓರ್ವರು ಹೇಳಿದ್ದಾರೆ. ಇಷ್ಟು ಕಷ್ಟ ಪಡುವುದಕ್ಕಿಂತ ಸೋಫಾದ ಒಂದು ಭಾಗವನ್ನು ಕಳಚುವುದು ಸುಲಭ ಎಂದು ಮತ್ತೋರ್ವರು ಹೇಳಿದ್ದಾರೆ. ಇದು ನಿಜಕ್ಕೂ ಅದ್ಭುತವಾಗಿದೆ. ಎಂಥಾ ಪ್ಲ್ಯಾನ್ ಗುರೂ.. ಎಂದು ಮತ್ತೋರ್ವರು ಹೇಳಿದ್ದಾರೆ. ಇನ್ನು ಕೆಲವರು, ಎದುರು ಬಾಗಿಲಿನಿಂದ ಹೊರ ತೆಗೆಯಲು ಆಗದಿದ್ದಾಗ ಸೋಫಾವನ್ನು ಸಂಪೂರ್ಣವಾಗಿ ಬಿಚ್ಚುವುದು ಒಳ್ಳೆಯದಿತ್ತು ಎಂಬ ಅಭಿಪ್ರಾಯಗಳೂ ಕೇಳಿ ಬಂದಿದೆ.

ಇದನ್ನೂ ಓದಿ:

Viral Video: ಎಲ್ಲೆಡೆ ಸಖತ್ ಸದ್ದು ಮಾಡ್ತಿದೆ ಈ ‘ದೇಸಿ ಮೈಕಲ್ ಜಾಕ್ಸನ್’ ನೃತ್ಯ; ವಿಡಿಯೊ ನೋಡಿ

Viral Video: ಅಳಿಲಿಗೆ ಆಟ, ಬೆಕ್ಕಿಗೆ ಸಂಕಟ!; ಇದೇನಿದು ಹೊಸ ಗಾದೆ? ತಮಾಷೆಯ ಈ ವಿಡಿಯೊ ನೋಡಿ

ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!
ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!
ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಹೋಟೆಲ್ ಉದ್ಯಮದಿಂದ ಭಾರಿ ತೆರಿಗೆ ವಂಚನೆ: 70 ಸಾವಿರ ಕೋಟಿ ಅಕ್ರಮ ಬಯಲು
ಹೋಟೆಲ್ ಉದ್ಯಮದಿಂದ ಭಾರಿ ತೆರಿಗೆ ವಂಚನೆ: 70 ಸಾವಿರ ಕೋಟಿ ಅಕ್ರಮ ಬಯಲು
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ಮಳೆ, ರಾಜ್ಯಕಾರಣದ ಬಗ್ಗೆ ಬಬಲಾದಿ ಕಾಲಜ್ಞಾನ ಸ್ಫೋಟಕ ಭವಿಷ್ಯ
ಮಳೆ, ರಾಜ್ಯಕಾರಣದ ಬಗ್ಗೆ ಬಬಲಾದಿ ಕಾಲಜ್ಞಾನ ಸ್ಫೋಟಕ ಭವಿಷ್ಯ
ಶೆಟ್ಟಿ ಗ್ಯಾಂಗ್ ಮೆರೆತ ರಶ್ಮಿಕಾ ಮಂದಣ್ಣ: ಬಂದಿಲ್ಲ ಮದುವೆ ಆಹ್ವಾನ
ಶೆಟ್ಟಿ ಗ್ಯಾಂಗ್ ಮೆರೆತ ರಶ್ಮಿಕಾ ಮಂದಣ್ಣ: ಬಂದಿಲ್ಲ ಮದುವೆ ಆಹ್ವಾನ
ಮೈಸೂರು: ಡಾ ಯತೀಂದ್ರ ಕಟೌಟ್ ನಿಲ್ಲಿಸಲು ರಸ್ತೆ ಬ್ಲಾಕ್; ಸವಾರರು ಆಕ್ರೋಶ
ಮೈಸೂರು: ಡಾ ಯತೀಂದ್ರ ಕಟೌಟ್ ನಿಲ್ಲಿಸಲು ರಸ್ತೆ ಬ್ಲಾಕ್; ಸವಾರರು ಆಕ್ರೋಶ