AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೀದರ್: ಮದುವೆಯಾದ ಮೂರನೇ ದಿನಕ್ಕೆ ಅಪಘಾತಕ್ಕೆ ಬಲಿಯಾದ ಯುವಕ

ಮದುವೆಯಾದ ಮೂರನೇ ದಿನಕ್ಕೆ ಯುವಕನೋರ್ವ ಬೈಕ್ ಅಪಘಾತದಲ್ಲಿ ಮೃತಪಟ್ಟ ಹೃದಯ ವಿದ್ರಾವಕ ಘಟನೆ ಬೀದರ್ ನಗರದಲ್ಲಿ ನಡೆದಿದೆ.

ಬೀದರ್: ಮದುವೆಯಾದ ಮೂರನೇ ದಿನಕ್ಕೆ ಅಪಘಾತಕ್ಕೆ ಬಲಿಯಾದ ಯುವಕ
ಬೈಕ್ ಅಪಘಾತದಲ್ಲಿ ಮೃತಪಟ್ಟ ಬೀದರ್​ನ ನವ ವಿವಾಹಿತ ಅರುಣ ಕಾಶಿನಾಥ ಪಡಸಾಲೆ
ಸುರೇಶ ನಾಯಕ
| Updated By: Rakesh Nayak Manchi|

Updated on: Jul 02, 2023 | 8:37 PM

Share

ಬೀದರ್: ಮದುವೆಯಾದ ಮೂರನೇ ದಿನಕ್ಕೆ ಯುವಕನೋರ್ವ ಬೈಕ್ ಅಪಘಾತದಲ್ಲಿ (Accident) ಮೃತಪಟ್ಟ ಹೃದಯ ವಿದ್ರಾವಕ ಘಟನೆ ಬೀದರ್ (Bidar) ನಗರದಲ್ಲಿ ನಡೆದಿದೆ. ಕೋಳಾರ ಕೈಗಾರಿಕಾ ಪ್ರದೇಶದಲ್ಲಿ ಬಳಿದ ಬಳಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ‌ಸಂಸ್ಥತೆಯ ಬಸ್ ಬೈಕ್​​ಗೆ ಡಿಕ್ಕಿ ಹೊಡೆದ ಪರಿಣಾಮ ಯುವಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಕಮಲನಗರ ತಾಲೂಕಿನ ಬಳತ್ (ಬಿ) ಗ್ರಾಮದ ಅರುಣ ಕಾಶಿನಾಥ ಪಡಸಾಲೆ (33) ಮೃತಪಟ್ಟ ಯುವಕ.

ಕಳೆದ ಜೂ. 29 ರಂದು ಮದುವೆಯಾಗಿದ್ದ ಅರುಣ ಕಾಶಿನಾಥ, ತನ್ನ ಪತ್ನಿ ಗ್ರಾಮ ಹುಮನಾಬಾದ ತಾಲೂಕಿನ ಮುಗನೂರ್‌ನಿಂದ ನೌಬಾದ್‌ಗೆ ಬೈಕ್ ಮೇಲೆ ವಾಪಸ್ ಬರುವಾಗ ಸರ್ಕಾರಿ ಬಸ್‌ಗೆ ಡಿಕ್ಕಿ ಆಗಿದೆ. ತೀವ್ರ ರಕ್ತಸ್ರಾವವಾದ ಹಿನ್ನಲೆ ಅರುಣ ಕಾಶಿನಾಥ ಸ್ಥಳದಲ್ಲೇ ಮೃಪಟ್ಟಿದ್ದಾನೆ.

ಇದನ್ನೂ ಓದಿ: ವಿಜಯನಗರದಲ್ಲಿ ಎರಡು ಆಟೋ-ಲಾರಿ ನಡುವೆ ಅಪಘಾತ ಪ್ರಕರಣ: ಮೃತರ ಸಂಖ್ಯೆ ಎಂಟಕ್ಕೆ ಏರಿಕೆ

ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ ಅರುಣ ಕಾಶಿನಾಥ, ನೌಬಾದ್‌ನ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ. ಈಗ ಮದುವೆಯಾದ ಎರಡು ದಿನದಲ್ಲೇ ದುರಂತ ಸಂಭವಿಸಿರುವುದು ಎರಡು ಕುಟುಂಬಗಳಿಗೆ ಆಘಾತವನ್ನುಂಟು ಮಾಡಿದೆ. ಸ್ಥಳಕ್ಕೆ ನೂತನ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ