AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್ಯಸಭೆ ನಂತರ ಮತ್ತೊಂದು ‘ಮೇಲ್ಮನೆ’ ಮೇಲಾಟ, ಸೀಟು ಖಚಿತ ಎಂದುಕೊಂಡವ್ರಿಗೆ ಶುರುವಾಗಿದೆ ಆತಂಕ!

ಬೆಂಗಳೂರು: ರಾಜ್ಯಸಭೆಗೆ ಸೀಟು ಗಿಟ್ಟಿಸಲು ಸಿಎಂ ಮನೆಯ ಬಾಗಿಲು ತಟ್ಟಿದ್ರು. ಬಂಡಾಯ ಎದ್ದರು. ಆದ್ರೆ, ಆಕಾಂಕ್ಷಿಗಳು ಮಾತ್ರ ಹೈಕಮಾಂಡ್‌ ಕಳಿಸಿದ ಲಿಸ್ಟ್ ನೋಡಿ ಬೇಸ್ತು ಬಿದ್ದಿದ್ರು. ತುಟಿ ಬಿಚ್ಚದಂತೆ ಬಾಯಿಗೆ ಬೀಗ ಹಾಕಿಕೊಂಡು ಸುಮ್ಮನಾಗಿಬಿಟ್ರು. ಈ ಬೆಂಕಿ ಇನ್ನೂ ಹೊಗೆಯಾಡುತ್ತಿರುವಾಗ್ಲೇ ಮತ್ತೊಂದು ಮೇಲ್ಮನೆ ಮೇಲಾಟ ಶುರುವಾಗಿದೆ. ಸರ್ಕಾರ ಕೆಡವಿ ಅನರ್ಹ ಶಾಸಕರಾಗಿ ಉಪಚುನಾವಣೆಯಲ್ಲಿ ಸೋತವರಿಗೆ ಸಿಎಂ ಬಿಎಸ್‌ವೈ ಎಂಎಲ್‌ಸಿ ಮಾಡೋದಾಗಿ ಮಾತುಕೊಟ್ಟಿದ್ರು. ತಾವೇ ಹಲವು ಬಾರಿ ಕೊಟ್ಟ ಮಾತು ಉಳಿಸಿಕೊಳ್ತೀನಿ ಅಂದ್ರು. ಉಪಚುನಾವಣೆಯಲ್ಲಿ ಸೋತ ಎಂಟಿಬಿ ನಾಗರಾಜ್ […]

ರಾಜ್ಯಸಭೆ ನಂತರ ಮತ್ತೊಂದು ‘ಮೇಲ್ಮನೆ’ ಮೇಲಾಟ, ಸೀಟು ಖಚಿತ ಎಂದುಕೊಂಡವ್ರಿಗೆ ಶುರುವಾಗಿದೆ ಆತಂಕ!
ಆಯೇಷಾ ಬಾನು
ಆಯೇಷಾ ಬಾನು|

Updated on:Jun 11, 2020 | 4:01 PM

Share

ಬೆಂಗಳೂರು: ರಾಜ್ಯಸಭೆಗೆ ಸೀಟು ಗಿಟ್ಟಿಸಲು ಸಿಎಂ ಮನೆಯ ಬಾಗಿಲು ತಟ್ಟಿದ್ರು. ಬಂಡಾಯ ಎದ್ದರು. ಆದ್ರೆ, ಆಕಾಂಕ್ಷಿಗಳು ಮಾತ್ರ ಹೈಕಮಾಂಡ್‌ ಕಳಿಸಿದ ಲಿಸ್ಟ್ ನೋಡಿ ಬೇಸ್ತು ಬಿದ್ದಿದ್ರು. ತುಟಿ ಬಿಚ್ಚದಂತೆ ಬಾಯಿಗೆ ಬೀಗ ಹಾಕಿಕೊಂಡು ಸುಮ್ಮನಾಗಿಬಿಟ್ರು. ಈ ಬೆಂಕಿ ಇನ್ನೂ ಹೊಗೆಯಾಡುತ್ತಿರುವಾಗ್ಲೇ ಮತ್ತೊಂದು ಮೇಲ್ಮನೆ ಮೇಲಾಟ ಶುರುವಾಗಿದೆ.

ಸರ್ಕಾರ ಕೆಡವಿ ಅನರ್ಹ ಶಾಸಕರಾಗಿ ಉಪಚುನಾವಣೆಯಲ್ಲಿ ಸೋತವರಿಗೆ ಸಿಎಂ ಬಿಎಸ್‌ವೈ ಎಂಎಲ್‌ಸಿ ಮಾಡೋದಾಗಿ ಮಾತುಕೊಟ್ಟಿದ್ರು. ತಾವೇ ಹಲವು ಬಾರಿ ಕೊಟ್ಟ ಮಾತು ಉಳಿಸಿಕೊಳ್ತೀನಿ ಅಂದ್ರು. ಉಪಚುನಾವಣೆಯಲ್ಲಿ ಸೋತ ಎಂಟಿಬಿ ನಾಗರಾಜ್ ಮತ್ತು ಹೆಚ್.ವಿಶ್ವನಾಥ್, ಚುನಾವಣಾ ಕಣದಿಂದಲೇ ದೂರ ಉಳಿದ ಆರ್.ಶಂಕರ್‌, ಯಡಿಯೂರಪ್ಪನವ್ರ ಇದೇ ಮಾತನ್ನ ನಂಬಿ ಓಡಾಡುತ್ತಿದ್ದರು. ಆದ್ರೀಗ, ಅವರಲ್ಲೇ ಭೀತಿ ಶುರುವಾಗಿದೆ.

ಎಂಟಿಬಿ, ಶಂಕರ್‌, ವಿಶ್ವನಾಥ್‌ಗೆ ಶುರುವಾಯ್ತು ಡವಡವ! ರಾಜ್ಯಸಭೆ ಅಭ್ಯರ್ಥಿ ಆಯ್ಕೆಯಲ್ಲಿ ಹೈಕಮಾಂಡ್‌ ಕೊಟ್ಟ ಶಾಕ್‌ನಿಂದ ಖುದ್ದು ಯಡಿಯೂರಪ್ಪನವ್ರೇ ಹೊರಬಂದಿಲ್ಲ. ಆದ್ರೆ, ಅಷ್ಟರಲ್ಲೇ ಸಿಎಂ ಗೃಹಕಚೇರಿ ಕೃಷ್ಣಾಗೆ ರಮೇಶ್ ಜಾರಕಿಹೊಳಿ ಜೊತೆ ದೌಡಾಯಿಸಿದ ಎಂಟಿಬಿ ನಾಗರಾಜ್, ಸಿಎಂ ಜೊತೆ ಕೆಲಕಾಲ ಚರ್ಚಿಸಿದ್ರು.

‘ಅನರ್ಹ’ ಶಾಸಕರಿಗೆ ಡವಡವ! ಖಾಲಿಯಾಗುವ ಏಳು ಸ್ಥಾನಗಳಲ್ಲಿ ಬಿಜೆಪಿಯ 4 ಸ್ಥಾನಗಳಿಗೆ ಡಜನ್‌ಗೂ ಹೆಚ್ಚು ಆಕಾಂಕ್ಷಿಗಳಿದ್ದಾರೆ. ಇವರೆಲ್ಲರಿಗೂ ಈಗ ರಾಜ್ಯಸಭೆ ಆಯ್ಕೆ ಮಾದರಿ ನೋಡಿ ಆತಂಕ ಶುರುವಾಗಿದೆ. ಒಬ್ಬರು ಸವಿತಾ ಸಮಾಜ ಮತ್ತೊಬ್ಬರು ಲಿಂಗಾಯತ ಪಂಚಮಸಾಲಿ ಜಾತಿಗೆ ಟಿಕೆಟ್‌ ನೀಡಿತ್ತು. ಈ ಜಾತಿವಾರು ಲೆಕ್ಕಾಚಾರ ನೋಡಿದ್ರೆ ಅನರ್ಹ ಶಾಸಕರಿಗೆ ಟಿಕೆಟ್ ಸಿಗೋದು ಡೌಟು.

ಎಂಟಿಬಿ, ಆರ್‌.ಶಂಕರ್ ಮತ್ತು ವಿಶ್ವನಾಥ್ ಮೂವರು ಒಂದೇ ಸಮುದಾಯದವರು. ಹೀಗಾಗಿ, ಒಂದೇ ಸಮುದಾಯಕ್ಕೆ ಟಿಕೆಟ್ ನೀಡ್ತಾರಾ ಅನ್ನೋ ಭಯ ಶುರುವಾಗಿದೆ. ಇನ್ನು, ರಾಜ್ಯಸಭೆಯಲ್ಲಿ ಮೂಲ ಬಿಜೆಪಿ ಕಾರ್ಯಕರ್ತರನ್ನ ಪರಿಗಣಿಸಿರೋದ್ರಿಂದ ಪರಿಷತ್‌ನಲ್ಲೂ ಬಿಜೆಪಿ ಜಿಲ್ಲಾ ನಾಯಕರಿಗೆ ಆಸೆ ಚಿಗುರೊಡೆದಿದೆ. ಆದ್ರೂ, ಬಹಿರಂಗವಾಗಿ ಲಾಬಿ ಮಾಡಿದ್ರೆ ಟಿಕೆಟ್ ಸಿಗುತ್ತೋ ಇಲ್ವೋ ಅನ್ನೋ ಭಯವಿದೆ.

ಈಗಾಗ್ಲೇ, ಕತ್ತಿ ಬ್ರದರ್ಸ್ ಊಟದ ಕೂಟ ಸೇರಿಸಿದ್ದೇ ಮುಳುವಾಯ್ತು ಎಂಬ ಮಾತು ಬಿಜೆಪಿಯಲ್ಲಿ ಕೇಳಿಬರ್ತಿದೆ. ಹೀಗಾಗಿ, ಯಾರೂ ಬಹಿರಂಗವಾಗಿ ಆಕಾಂಕ್ಷೆ ಹೇಳಿಕೊಳ್ಳುವ ಗೋಜಿಗೆ ಮುಂದಾಗಿಲ್ಲ. ಹೆಚ್ಚು ಪ್ರಚಾರ ತಗೆದುಕೊಳ್ಳದೇ ಒಳಗೊಳಗೆ ಯಾವ್ಯಾವ ನಾಯಕರನ್ನು ಭೇಟಿಯಾಗಿ ಲಾಬಿ ನಡೆಸಬೇಕೋ ಆ ಕೆಲಸವನ್ನು ಆಕಾಂಕ್ಷಿಗಳು ಅಚ್ಚುಕಟ್ಟಾಗಿ ಮಾಡ್ತಿದ್ದಾರೆ. ಲಿಂಗಾಯತ ಮುಖಂಡ ಪರಮಶಿವಯ್ಯ, ಸ್ವಾಮೀಜಿಗಳನ್ನ ಕರೆತಂದು ಸಿಎಂ ಬಳಿ ಲಾಬಿ ಮಾಡುವ ಯತ್ನ ಮಾಡಿದ್ರು.

ಒಟ್ಟಿನಲ್ಲಿ, ರಾಜ್ಯಸಭೆಯಂತೆಯೇ ವಿಧಾನಪರಿಷತ್‌ನಲ್ಲೂ ಮತ್ತೊಮ್ಮೆ ಕಾರ್ಯಕರ್ತರಿಗೆ ಟಿಕೆಟ್ ನೀಡುತ್ತಾ. ನಮ್ಮದು ಕಾರ್ಯಕರ್ತರ ಕೇಂದ್ರಿತ ಪಕ್ಷ ಅಂತ ಬಿಜೆಪಿ ಸಂದೇಶ ನೀಡುತ್ತಾ ಅನ್ನೋದು ಸದ್ಯದ ಕುತೂಹಲ.

Published On - 7:29 am, Thu, 11 June 20

Follow Us
Ayesha Banu
Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ