Elephants Attack: ನಡು ರಸ್ತೆಯಲ್ಲಿ ವಾಹನಗಳನ್ನು ಅಡ್ಡ ಗಟ್ಟಿ ಆನೆಗಳ ದಾಳಿ, ನಡುಕ ಹುಟ್ಟಿಸುವಂತ ದೃಶ್ಯ
ಚಾಮರಾಜನಗರ ಗಡಿ ಭಾಗವಾದ ಆಸನೂರು ಬಳಿ ಮರಿಯಾನೆ ಜೊತೆ ಹೆದ್ದಾರಿಗೆ ಬಂದ ಆನೆಗಳು ವಾಹನಗಳ ಮೇಲೆ ದಾಳಿ ನಡೆಸಿವೆ. ನಿನ್ನೆ ಸಂಜೆ ಈ ಘಟನೆ ನಡೆದಿದೆ.
ಚಾಮರಾಜನಗರ: ವಾಹನ ಸವಾರರು ಒಂದು ಕ್ಷಣ ಬೆಚ್ಚಿ ಬೀಳುವಂತಹ ಘಟನೆ ಚಾಮರಾಜನಗರ ನಡೆದಿದೆ. ಆನೆಗಳ ದಂಡು ವಾಹನಗಳನ್ನ ಅಡ್ಡ ಗಟ್ಟಿ ಕಾರನ್ನು ಜಖಂ ಗೊಳಿಸಿದೆ(Elephant Attacks). ತಮಿಳುನಾಡು ಡಿಂಡಿಗಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಾಮರಾಜನಗರ ಗಡಿ ಭಾಗವಾದ ಆಸನೂರು ಬಳಿ ಮರಿಯಾನೆ ಜೊತೆ ಹೆದ್ದಾರಿಗೆ ಬಂದ ಆನೆಗಳು ವಾಹನಗಳ ಮೇಲೆ ದಾಳಿ ನಡೆಸಿವೆ. ನಿನ್ನೆ ಸಂಜೆ ಈ ಘಟನೆ ನಡೆದಿದೆ. ಪದೇ ಪದೇ ಹೆದ್ದಾರಿಯಲ್ಲಿ ಇಂತಹ ಘಟನೆಗಳು ನಡೆಯುತ್ತಲೇ ಇವೆ. ಈ ಹಿಂದೆ ಕೂಡ ಬಸ್ ಹಾಗೂ ಲಾರಿಗಳ ಮೇಲೆ ಆನೆ ದಾಳಿ ಮಾಡಿತ್ತು. ವಾಹನ ಸವಾರರು ಆನೆಗಳಿಗೆ ಕೀಟಲೆ ಕೊಡುತ್ತಿರುವುದರಿಂದ ಘಟನೆ ಮರುಕಳಿಸುತ್ತಿದೆ ಎನ್ನಲಾಗಿದೆ. ಇದನ್ನೂ ಓದಿ: ಚಾಮರಾಜನಗರ: ಅರಣ್ಯ ಇಲಾಖೆ ವಾಹನದ ಮೇಲೆ ಕಾಡಾನೆ ದಾಳಿ, ಜೀಪ್ ನುಚ್ಚುನೂರು, ಅಧಿಕಾರಿ-ಸಿಬ್ಬಂದಿಗೆ ಗಾಯ
Published on: Jun 26, 2022 02:37 PM
Follow Us
Latest Videos
ಮಧ್ಯ ರಾತ್ರಿ 2 ಗಂಟೆ ಮೇಲೆ ರಕ್ಷಿತಾ ಪ್ರೇಮ್ ಕರೆ ಮಾಡಿದ್ರು: ಧ್ರುವ ಸರ್ಜಾ
ಕೆರೂರು PSI ಲೋಕಾಯುಕ್ತ ಬಲೆಗೆ: ಪಟಾಕಿ ಸಿಡಿಸಿ ಸಂಭ್ರಮಿಸಿದ ಯುವಕರು
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ

