ಬಂಡೀಪುರ ಅಭಯಾರಣ್ಯದಲ್ಲಿ ಪ್ರವಾಸಿಗರಿಗೆ ದರ್ಶನ ಭಾಗ್ಯ ನೀಡಿದ ಅತಿ ಉದ್ದನೆಯ ದಂತ ಹೊಂದಿರುವ ಗಜರಾಜ!

Wild Tusker: ಇದೀಗ ಭೋಗೇಶ್ವರನನ್ನೆ ಹೋಲುವ ಕಾಡಾನೆಯೊಂದು ಬಂಡೀಪುರದಲ್ಲಿ ಪ್ರವಾಸಿಗರಿಗೆ ದರ್ಶನ ಭಾಗ್ಯ ನೀಡಿದೆ. ಸದರಿ ಕಾಡಾನೆಯು ತನ್ನ ಉದ್ದನೆಯ ದಂತಗಳೊಂದಿಗೆ ಗಮನ ಸೆಳೆಯುತ್ತಿದೆ. ನೆಲಕ್ಕೆ ತಾಗುವಂತಿರುವ ದಂತಗಳನ್ನ ಕಂಡು ಪ್ರವಾಸಿಗರು ಮನಸೋತಿದ್ದಾರೆ. ಎರಡು ಮೀಟರ್‌ ಗೂ ಹೆಚ್ಚು ಉದ್ದ ಇರುವ ದಂತ ಇದಾಗಿದೆ.

ಬಂಡೀಪುರ ಅಭಯಾರಣ್ಯದಲ್ಲಿ ಪ್ರವಾಸಿಗರಿಗೆ ದರ್ಶನ ಭಾಗ್ಯ ನೀಡಿದ ಅತಿ ಉದ್ದನೆಯ ದಂತ ಹೊಂದಿರುವ ಗಜರಾಜ!
ಬಂಡೀಪುರ ಅಭಯಾರಣ್ಯದಲ್ಲಿ ಅತಿ ಉದ್ದದ ದಂತ ಹೊಂದಿರುವ ಗಜರಾಜನ ದರ್ಶನ ಭಾಗ್ಯ!
Edited By: ಸಾಧು ಶ್ರೀನಾಥ್​

Updated on: Sep 04, 2023 | 1:04 PM

ಚಾಮರಾಜನಗರ, ಸೆಪ್ಟೆಂಬರ್​ 4: ಬಂಡೀಪುರ ಅಭಯಾರಣ್ಯದಲ್ಲಿ (Bandipur National Park) ಅತಿ ಉದ್ದನೆಯ ದಂತ ಹೊಂದಿರುವ ಗಜರಾಜ ಪ್ರತ್ಯಕ್ಷವಾಗಿದ್ದಾನೆ! ಬಂಡೀಪುರದಲ್ಲಿ ಅತಿ ಉದ್ದದ ದಂತ ಹೊಂದಿರುವ ಆನೆ ಪತ್ತೆಯಾಗಿದ್ದು, ಆ ದಂತಗಳ (Tusker) ಕಂಡು ಪ್ರವಾಸಿಗರು (tourists) ಪುಳಕಿತರಾಗಿದ್ದಾರೆ. ಕಬಿನಿ ಹಿನ್ನೀರಿನ ಭೋಗೇಶ್ವರನನ್ನೇ ಹೋಲುವ ಕಾಡಾನೆ (Wild Elephant) ಹೀಗೆ ದರ್ಶನ ನೀಡಿದೆ. ಏಷ್ಯಾದಲ್ಲಿಯೇ ಅತಿ ಉದ್ದದ ದಂತ ಹೊಂದಿದ್ದ ಆನೆ ಎಂಬ ಖ್ಯಾತಿ ಭೋಗೇಶ್ವರನದ್ದಾಗಿತ್ತು (Chamarajanagar).

ಭೋಗೇಶ್ವರ ಕಳೆದ ವರ್ಷ ಸಹಜ ಸಾವಿಗೀಡಾಗಿದ್ದ. ಇದೀಗ ಭೋಗೇಶ್ವರನನ್ನೆ ಹೋಲುವ ಕಾಡಾನೆಯೊಂದು ಬಂಡೀಪುರದಲ್ಲಿ ಪ್ರವಾಸಿಗರಿಗೆ ದರ್ಶನ ಭಾಗ್ಯ ನೀಡಿದೆ. ಸದರಿ ಕಾಡಾನೆಯು ತನ್ನ ಉದ್ದನೆಯ ದಂತಗಳೊಂದಿಗೆ ಗಮನ ಸೆಳೆಯುತ್ತಿದೆ. ನೆಲಕ್ಕೆ ತಾಗುವಂತಿರುವ ದಂತಗಳನ್ನ ಕಂಡು ಪ್ರವಾಸಿಗರು ಮನಸೋತಿದ್ದಾರೆ.

ಇದನ್ನೂ ಓದಿ: ಸಕಲೇಶಪುರ – ದಂತಗಳಿಂದ ತಿವಿದು ಆನೆ ಭೀಮನನ್ನು ಗಾಯಗೊಳಿಸಿರೋ ಕಾಡಾನೆಗಳು, ಗಾಯಗೊಂಡ ಕಾಡಾನೆ ನರಳಾಟ

ಎರಡು ಮೀಟರ್‌ ಗೂ ಹೆಚ್ಚು ಉದ್ದ ಇರುವ ದಂತ ಇದಾಗಿದೆ. ಮತ್ತೊಂದು ಆನೆಯೊಂದಿಗೆ ಚಿನ್ನಾಟ ಆಡುತ್ತಿರುವ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಪ್ರವಾಸಿಗರ ಮೊಬೈಲ್ ನಲ್ಲಿ ಸೆರೆಯಾದ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ಇದೀಗ ವೈರಲ್ ಆಗಿದೆ.

ಬಂಡೀಪುರ ಕುರಿತಾದ ಹೆಚ್ಚಿನ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:04 pm, Mon, 4 September 23

Suraj Prasad SN

ಸೂರಜ್ ಪ್ರಸಾದ್ ಎಸ್.ಎನ್ ಆದ ನಾನು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ. ಬೆಳೆದಿದ್ದು ದಾವಣಗರೆ ಜಿಲ್ಲೆ ನ್ಯಾಮತಿ ತಾಲೂಕಿನಲ್ಲಿ. ಶಿವಮೊಗ್ಗದ ಸಹ್ಯಾದ್ರಿ ಕಾಲೇಜ್ ನಲ್ಲಿ ಪತ್ರಿಕೋದ್ಯಮದಲ್ಲಿ ಪದವಿಪೂರ್ವ ಶಿಕ್ಷಣ ಪಡೆದಿದ್ದು 2014ರಿಂದ ನನ್ನ ಎಲೆಕ್ಟ್ರಾನಿಕ್ ಮಾದ್ಯಮದ ವೃತ್ತಿ ಜೀವನವನ್ನ ಬೆಂಗಳೂರಿನಲ್ಲಿ ಕ್ರೈಂ ಬೀಟ್ ವರದಿಗಾರನಾಗಿ ಆರಂಭಿಸಿದ್ದು ಬೆಂಗಳೂರಿನಲ್ಲಿ 8 ವರ್ಷಗಳ ಕ್ರೈಂ ವರದಿಗಾರನಾಗಿ ಸೇವೆ ಸಲ್ಲಿಸಿ. ನಾಲ್ಕು ಸಂಸ್ಥೆಯಲ್ಲಿ ಕ್ರೈಂ ರಿಪೋರ್ಟರ್ ಹಾಗೂ ಕ್ರೈಂ ಇನ್ವೆಸ್ಟಿಗೇಟಿವ್ ವರದಿಗಾರನಾಗಿ ಹಾಗೂ ಸ್ಟಿಂಗ್ ಅಪರೇಷನ್ ಗಳನ್ನ ಮಾಡಿದ್ದೇನೆ. ಗೌರಿ ಲಂಕೇಶ್ ಕೊಲೆ ಕೇಸನ್ನ ರಾಜ್ಯದಲ್ಲೇ ಮೊದಲು ಬ್ರೇಕ್ ಮಾಡಿ ಈ ಹಿಂದಿನ ಸಂಸ್ಥೆಯಿಂದ ಪ್ರಶಂಸೆ ಪಡೆದಿರುತ್ನೇನೆ2019 ರಲ್ಲಿ ಪಿಎಸ್ಐ ಅಕ್ರಮದ ಸ್ಟಿಂಗ್ ಆಪರೇಷನ್ ಹಾಗೂ ಬೆಂಗಳೂರು ಸಿಂಥಟಿಕ್ ಡ್ರಗ್ ಮಾಫಿಯಾದ ಸ್ಟಿಂಗ್ ಆಪರೇಷನ್ ಮಾಡಿದ್ದು. ಕಳೆದ 10 ವರ್ಷಗಳಿಂದ ಸಕ್ರೀಯವಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಟಿವಿ9 ಸಂಸ್ಥೆಗೆ ಮಂಡ್ಯ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡಿ ಬಳಿಕ ಚಾಮರಾಜನಗರಕ್ಕೆ ವರ್ಗಾವಣೆಯಾಗಿ ಈಗ ಪ್ರಸ್ಥುತ ಚಾಮರಾಜನಗರ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡುತ್ತಿದ್ದೇನೆ. ಹವ್ಯಾಸ ಅಡಿಗೆ ಮಾಡುವುದು, ಕ್ರಿಕೆಟ್ ಆಡುವುದು ಕ್ರೈಂ ಇನ್ವೆಷ್ಟಿಗೇಷನ್ ನಾವೆಲ್ ಗಳನ್ನ ಓದುವುದು.

Read More
Follow Us