ಚಾಮರಾಜನಗರ: ಲಾರಿ ಸ್ಕಿಡ್, ಬೈಕ್ ಮೇಲೆ ಉರುಳಿ ಮೂವರ ಸಾವು

ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಶಿವಪುರ ಗ್ರಾಮದ ಬಳಿ ಭೀಕರ ಅಪಘಾತ ಸಂಭವಿಸಿದ್ದು, ಮೂವರು ಸಾವಿಗೀಡಾಗಿದ್ದಾರೆ. ತಮಿಳುನಾಡಿನಿಂದ ಪ್ಲೇವುಡ್ ತೆಗೆದು ಕೊಂಡು ಬರುತ್ತಿದ್ದ ಲಾರಿ ಶಿವಪುರ ಬಳಿ ಸ್ಕಿಡ್​ ಆಗಿ ಬೈಕ್​ ಮೇಲೆ ಉರುಳಿಬಿದ್ದಿದೆ. ಬೈಕ್​ನಲ್ಲಿದ್ದ ಇಬ್ಬರು ಸವಾರರು ಮತ್ತು ಲಾರಿ ಚಾಲಕ ದುರ್ಮರಣಹೊಂದಿದ್ದಾರೆ. ಬ್ರೇಕ್ ನಿಯಂತ್ರಣಕ್ಕೆ ಸಿಗದೇ ಲಾರಿ ಪಲ್ಟಿ: ಬ್ರೇಕ್ ನಿಯಂತ್ರಣಕ್ಕೆ ಸಿಗದೇ ಲಾರಿ ಪಲ್ಟಿ ಹೊಡೆದಾಗ ಲಾರಿ ಕೆಳಗೆ ಸಿಕ್ಕಿಹಾಕಿಕೊಂಡ ಇಬ್ಬರೂ ಬೈಕ್ ಸವಾರರು ಮೃತಪಟ್ಟಿದ್ದಾರೆ. ಶಿವಪುರದ ಕಾಳಪ್ಪ(60) ಮತ್ತು ಶಿವಪ್ಪ(58) ಮೃತ […]

ಚಾಮರಾಜನಗರ: ಲಾರಿ ಸ್ಕಿಡ್, ಬೈಕ್ ಮೇಲೆ ಉರುಳಿ ಮೂವರ ಸಾವು
ಸಾಧು ಶ್ರೀನಾಥ್​

Updated on: Nov 20, 2019 | 2:58 PM

ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಶಿವಪುರ ಗ್ರಾಮದ ಬಳಿ ಭೀಕರ ಅಪಘಾತ ಸಂಭವಿಸಿದ್ದು, ಮೂವರು ಸಾವಿಗೀಡಾಗಿದ್ದಾರೆ. ತಮಿಳುನಾಡಿನಿಂದ ಪ್ಲೇವುಡ್ ತೆಗೆದು ಕೊಂಡು ಬರುತ್ತಿದ್ದ ಲಾರಿ ಶಿವಪುರ ಬಳಿ ಸ್ಕಿಡ್​ ಆಗಿ ಬೈಕ್​ ಮೇಲೆ ಉರುಳಿಬಿದ್ದಿದೆ. ಬೈಕ್​ನಲ್ಲಿದ್ದ ಇಬ್ಬರು ಸವಾರರು ಮತ್ತು ಲಾರಿ ಚಾಲಕ ದುರ್ಮರಣಹೊಂದಿದ್ದಾರೆ.

ಬ್ರೇಕ್ ನಿಯಂತ್ರಣಕ್ಕೆ ಸಿಗದೇ ಲಾರಿ ಪಲ್ಟಿ:
ಬ್ರೇಕ್ ನಿಯಂತ್ರಣಕ್ಕೆ ಸಿಗದೇ ಲಾರಿ ಪಲ್ಟಿ ಹೊಡೆದಾಗ ಲಾರಿ ಕೆಳಗೆ ಸಿಕ್ಕಿಹಾಕಿಕೊಂಡ ಇಬ್ಬರೂ ಬೈಕ್ ಸವಾರರು ಮೃತಪಟ್ಟಿದ್ದಾರೆ. ಶಿವಪುರದ ಕಾಳಪ್ಪ(60) ಮತ್ತು ಶಿವಪ್ಪ(58) ಮೃತ ಸವಾರರು ಎಂದು ಗುರುತಿಸಲಾಗಿದೆ.

ಕ್ಲೀನರ್​ಗೆ ಗಂಭೀರ ಗಾಯಗಳಾಗಿದ್ದು, ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗುಂಡ್ಲುಪೇಟೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.

Published On - 2:50 pm, Wed, 20 November 19

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us