AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೆ ಕೊಚ್ಚಿ ಹೋಯ್ತು ಸೇತುವೆ! ಕಳಚಿ ಬಿತ್ತು ಐದಾರು ಹಳ್ಳಿಗಳ ಸಂಪರ್ಕ ಕೊಂಡಿ

ಚಿಕ್ಕಮಗಳೂರು: ಭಾರೀ ಮಳೆಗೆ ಸೇತುವೆ ಕೊಚ್ಚಿ ಹೋಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಂಕೇನಹಳ್ಳಿಯಲ್ಲಿ ನಡೆದಿದೆ. ಮಳೆಗಾಲ ಹತ್ತಿರ ಬರ್ತಿದೆ, ಪ್ಲೀಸ್.. ಎಷ್ಟು ಬೇಗ ಆಗುತ್ತೆ ಅಷ್ಟು ಬೇಗ ಸೇತುವೆ ನಿರ್ಮಿಸಿ. ನೀವು ಮುತುವರ್ಜಿ ವಹಿಸಿಲ್ಲ ಅಂದ್ರೆ ನಾವುಗಳು ಸಮಸ್ಯೆಗೆ ಸಿಲುಕೋದು ಖಂಡಿತಾ ಅಂತಾ ಹತ್ತಾರು ಬಾರಿ ಸಚಿವರು, ಶಾಸಕರು, ಜಿಲ್ಲಾಧಿಕಾರಿಗಳು ಸೇರಿದಂತೆ ಎಲ್ಲರಿಗೂ ಆ ಊರಿನ ಜನರು ಪರಿ ಪರಿಯಾಗಿ ಬೇಡಿಕೊಂಡಿದ್ರು. ಕೊನೆಗೆ ಸೇತುವೆ ರಿಪೇರಿಗೆ ಯಾರು ಮುಂದಾಗದಿದ್ದಾಗ ಸ್ಥಳೀಯರೇ ಮುಂದೆ ನಿಂತು ತಾತ್ಕಾಲಿಕ […]

ಮತ್ತೆ ಕೊಚ್ಚಿ ಹೋಯ್ತು ಸೇತುವೆ! ಕಳಚಿ ಬಿತ್ತು ಐದಾರು ಹಳ್ಳಿಗಳ ಸಂಪರ್ಕ ಕೊಂಡಿ
ಆಯೇಷಾ ಬಾನು
|

Updated on:Jul 06, 2020 | 11:02 AM

Share

ಚಿಕ್ಕಮಗಳೂರು: ಭಾರೀ ಮಳೆಗೆ ಸೇತುವೆ ಕೊಚ್ಚಿ ಹೋಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಂಕೇನಹಳ್ಳಿಯಲ್ಲಿ ನಡೆದಿದೆ. ಮಳೆಗಾಲ ಹತ್ತಿರ ಬರ್ತಿದೆ, ಪ್ಲೀಸ್.. ಎಷ್ಟು ಬೇಗ ಆಗುತ್ತೆ ಅಷ್ಟು ಬೇಗ ಸೇತುವೆ ನಿರ್ಮಿಸಿ. ನೀವು ಮುತುವರ್ಜಿ ವಹಿಸಿಲ್ಲ ಅಂದ್ರೆ ನಾವುಗಳು ಸಮಸ್ಯೆಗೆ ಸಿಲುಕೋದು ಖಂಡಿತಾ ಅಂತಾ ಹತ್ತಾರು ಬಾರಿ ಸಚಿವರು, ಶಾಸಕರು, ಜಿಲ್ಲಾಧಿಕಾರಿಗಳು ಸೇರಿದಂತೆ ಎಲ್ಲರಿಗೂ ಆ ಊರಿನ ಜನರು ಪರಿ ಪರಿಯಾಗಿ ಬೇಡಿಕೊಂಡಿದ್ರು. ಕೊನೆಗೆ ಸೇತುವೆ ರಿಪೇರಿಗೆ ಯಾರು ಮುಂದಾಗದಿದ್ದಾಗ ಸ್ಥಳೀಯರೇ ಮುಂದೆ ನಿಂತು ತಾತ್ಕಾಲಿಕ ಸೇತುವೆಯೊಂದನ್ನ ಮಾಡಿಕೊಂಡಿದ್ರು.

ಕಳೆದ ಬಾರಿ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ದಾಖಲೆ ಮಳೆಯಾಗಿ, ಮೂಡಿಗೆರೆ ತಾಲೂಕಿನಲ್ಲಿ ಪ್ರವಾಹ ಏರ್ಪಟ್ಟಿತ್ತು. ಈ ವೇಳೆ ಹತ್ತಾರು ಹಳ್ಳಿಗಳು ಅಕ್ಷರಶಃ ನೀರಿನಲ್ಲಿ ಮುಳುಗಿ ಹೋಗಿದ್ವು. ಇದೇ ವೇಳೆಯಲ್ಲಿ ಬಂಕೇನಹಳ್ಳಿಯ ಸೇತುವೆ ಕೂಡ ಕೊಚ್ಚಿಹೋಗಿತ್ತು. ಒಂದು ವರ್ಷದಿಂದಲೂ ಸಂಕಷ್ಟದಲ್ಲಿ ಜೀವನ ನಡೆಸಿಕೊಂಡು ಬರ್ತಿದ್ದ ಸ್ಥಳೀಯರು, ಸೇತುವೆ ನಿರ್ಮಿಸುವಂತೆ ಅವಲತ್ತುಕೊಂಡಿದ್ರು. ಆದ್ರೆ ಈ ಬಗ್ಗೆ ತಲೆಕೆಡಿಸಿಕೊಳ್ಳದ ಜನಪ್ರತಿನಿಧಿಗಳು, ಅಧಿಕಾರಿಗಳು ಇದೀಗ ಮತ್ತೆ ಅಂತದ್ದೇ ಸಮಸ್ಯೆಗೆ ಕಾರಣರಾಗಿದ್ದಾರೆ.

ಸ್ಥಳೀಯರೇ ನಿರ್ಮಿಸಿಕೊಂಡಿದ್ದ ತಾತ್ಕಾಲಿಕ ಸೇತುವೆ ಕೂಡ ಕೊಚ್ಚಿ ಹೋಗಿದ್ದು ಬಂಕೇನಹಳ್ಳಿ, ಕೂಡಳ್ಳಿ, ಚೇಗು ಸೇರಿದಂತೆ ಐದಾರು ಗ್ರಾಮಗಳ ಸಾವಿರಾರು ಜನರು ಇದೀಗ ಸೇತುವೆ ಇಲ್ಲದಂತೆ ಪರದಾಡುವಂತಾಗಿದೆ. ಒಂದು ವೇಳೆ ಮಳೆ ಇದೇ ರೀತಿ ಜಾಸ್ತಿಯಾದ್ರೆ ಜನರ ಜೊತೆ ಜಾನುವಾರುಗಳಿಗೂ ಅಪಾಯ ಕಟ್ಟಿಟ್ಟ ಬುತ್ತಿ.

Published On - 10:53 am, Mon, 6 July 20