ನರ್ಸ್ ವೇಷದಲ್ಲಿ ಒಂದು ಮಗುವನ್ನ ಕದ್ದು ಮಹಿಳೆ ಪರಾರಿ, ಮಗುವಿಗಾಗಿ ಕಣ್ಣೀರಿಟ್ಟ ತಾಯಿ

ಚಿಕ್ಕಮಗಳೂರು: ನರ್ಸ್ ವೇಷದಲ್ಲಿ ಬಂದ ಮಹಿಳೆಯಿಂದ ಮಗು ಕಳ್ಳತನವಾಗಿರುವ ಘಟನೆ ಚಿಕ್ಕಮಗಳೂರಿನ ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ನಡೆದಿದೆ. ಅಸ್ಸಾಂ ಮೂಲದ ಅಂಜಲಿ-ಸುನಿಲ್ ಎಂಬ ದಂಪತಿಗೆ ಹೊಸ ವರ್ಷಕ್ಕೆ ಜನಿಸಿದ ನಾಲ್ಕು ದಿನದ ನವಜಾತ ಶಿಶು ಕಳ್ಳತನವಾಗಿದೆ. ನರ್ಸ್ ವೇಷದಲ್ಲಿ ಬಂದ ಮಹಿಳೆ ತಾಯಿಯ ಬಳಿ ನರ್ಸ್ ಎಂದು ಹೇಳಿ ಮಗುವಿಗೆ ತಪಾಸಣೆ ಮಾಡಿಸಬೇಕು ಎಂದು ಮಗುವನ್ನು ತಾಯಿಯಿಂದ ದೂರ ಮಾಡಿದ್ದಾಳೆ. ನಾಲ್ಕೇ ದಿನಕ್ಕೆ ಕಂದಮ್ಮನನ್ನು ಕಳೆದುಕೊಂಡು ತಾಯಿ ಕಣ್ಣೀರು ಹಾಕುತ್ತಿದ್ದಾರೆ. ಆಸ್ಪತ್ರೆಯಲ್ಲಿ ಸಿಸಿಟಿವಿಗಳು ತಮ್ಮ ಕಾರ್ಯ ನಿಲ್ಲಿಸಿವೆ. […]

ನರ್ಸ್ ವೇಷದಲ್ಲಿ ಒಂದು ಮಗುವನ್ನ ಕದ್ದು ಮಹಿಳೆ ಪರಾರಿ, ಮಗುವಿಗಾಗಿ ಕಣ್ಣೀರಿಟ್ಟ ತಾಯಿ
ಸಾಧು ಶ್ರೀನಾಥ್​

Updated on: Jan 05, 2020 | 9:58 AM

ಚಿಕ್ಕಮಗಳೂರು: ನರ್ಸ್ ವೇಷದಲ್ಲಿ ಬಂದ ಮಹಿಳೆಯಿಂದ ಮಗು ಕಳ್ಳತನವಾಗಿರುವ ಘಟನೆ ಚಿಕ್ಕಮಗಳೂರಿನ ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ನಡೆದಿದೆ. ಅಸ್ಸಾಂ ಮೂಲದ ಅಂಜಲಿ-ಸುನಿಲ್ ಎಂಬ ದಂಪತಿಗೆ ಹೊಸ ವರ್ಷಕ್ಕೆ ಜನಿಸಿದ ನಾಲ್ಕು ದಿನದ ನವಜಾತ ಶಿಶು ಕಳ್ಳತನವಾಗಿದೆ.

ನರ್ಸ್ ವೇಷದಲ್ಲಿ ಬಂದ ಮಹಿಳೆ ತಾಯಿಯ ಬಳಿ ನರ್ಸ್ ಎಂದು ಹೇಳಿ ಮಗುವಿಗೆ ತಪಾಸಣೆ ಮಾಡಿಸಬೇಕು ಎಂದು ಮಗುವನ್ನು ತಾಯಿಯಿಂದ ದೂರ ಮಾಡಿದ್ದಾಳೆ. ನಾಲ್ಕೇ ದಿನಕ್ಕೆ ಕಂದಮ್ಮನನ್ನು ಕಳೆದುಕೊಂಡು ತಾಯಿ ಕಣ್ಣೀರು ಹಾಕುತ್ತಿದ್ದಾರೆ. ಆಸ್ಪತ್ರೆಯಲ್ಲಿ ಸಿಸಿಟಿವಿಗಳು ತಮ್ಮ ಕಾರ್ಯ ನಿಲ್ಲಿಸಿವೆ. ಎಲ್ಲಾ ಸಿಸಿಟಿವಿಗಳು ಕೆಟ್ಟು ಹಾಳಾಗಿವೆ.

Published On - 9:58 am, Sun, 5 January 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us