AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chitradurga News: ಇಂಡಿಯಾ ಬುಕ್ ಆಫ್ ರೆಕಾರ್ಡ್, ಕಲಾಂ ವರ್ಡ್ ರೆಕಾರ್ಡ್ ಮಾಡಿದ 2ನೇ ತರಗತಿ ಬಾಲಕ; ಯಾಕೆ ಗೊತ್ತಾ?

ಕೋಟೆನಾಡಿನ ಆ ಪೋರನಿಗಿನ್ನೂ ಏಳು ವರ್ಷವೂ ಪೂರ್ಣಗೊಂಡಿಲ್ಲ. ಆದ್ರೆ, ಆ ಹುಡುಗನ ಟ್ಯಾಲೆಂಟ್ ಕಂಡರೆ, ನೀವು ಹುಬ್ಬೇರಿಸುವುದು ಗ್ಯಾರಂಟಿ. 2ಸಾವಿರಕ್ಕೂ ಹೆಚ್ಚು ಪ್ರಶ್ನೆಗಳಿಗೆ ಆ ಜಾಣ ಬಾಲಕ ಫಟಾಫಟ್ ಎಂದು ಉತ್ತರ ಹೇಳುತ್ತಾನೆ. ಹೀಗಾಗಿ, ಚಿಕ್ಕ ವಯಸ್ಸಿನಲ್ಲೇ ಇಂಡಿಯಾ ಬುಕ್ ಆಫ್ ರೆಕಾರ್ಡ್, ಕಲಾಂ ವರ್ಡ್ ರೆಕಾರ್ಡ್ ದಾಖಲಿಸಿದ್ದಾನೆ. ಯಾರು ಆ ಬಾಲಕ ಅಂತೀರಾ? ಇಲ್ಲಿದೆ ನೋಡಿ.

Chitradurga News: ಇಂಡಿಯಾ ಬುಕ್ ಆಫ್ ರೆಕಾರ್ಡ್, ಕಲಾಂ ವರ್ಡ್ ರೆಕಾರ್ಡ್ ಮಾಡಿದ 2ನೇ ತರಗತಿ ಬಾಲಕ; ಯಾಕೆ ಗೊತ್ತಾ?
ಬಾಲಕ ಹೇಮಂತ್​
ಬಸವರಾಜ ಮುದನೂರ್, ಚಿತ್ರದುರ್ಗ
| Edited By: |

Updated on:Jul 23, 2023 | 12:29 PM

Share

ಚಿತ್ರದುರ್ಗ, ಜು.23: ರಾಮಾಯಣ(Ramayana), ಮಹಾಭಾರತ(Mahabharata)ದ ಕುರಿತ ಪ್ರಶ್ನೋತ್ತರಗಳಿಗೂ ಸೈ. ಸಾಮಾನ್ಯಜ್ಞಾನ (General knowledge )ದ ಪ್ರಶ್ನೋತ್ತರಗಳಿಗೂ ಜೈ. ಯಾವುದೇ ಪ್ರಶ್ನೆ ಕೇಳಿದ್ರೂ, ಫಟಾಫಟ್ ಉತ್ತರಿಸುವ ಜಾಣ ಬಾಲಕ. ಹೌದು, ಚಿತ್ರದುರ್ಗ (Chitradurga) ನಗರದ ಜೋಗಿಮಟ್ಟಿ ಬಡಾವಣೆಯ ನಿವಾಸಿ ಶೃತಿ, ವಿಜಯಕುಮಾರ್ ದಂಪತಿಯ ಪುತ್ರ ಹೇಮಂತ್ ಚಿಕ್ಕ ಎಂಬ ಬಾಲಕ ಚಿಕ್ಕವಯಸ್ಸಿನಲ್ಲೇ ತನ್ನ ಜಾಣ್ಮೆ ಮೂಲಕ ಗಮನಸೆಳೆಯುತ್ತಿದ್ದಾನೆ. ಒಂದು ಸಲ ಹೇಳಿದ್ರೆ, ಸಾಕು ಹೇಮಂತ್ ತನ್ನ ಸ್ಮೃತಿ ಪಟಲದಲ್ಲಿ ಮರೆಯದೇ ಸೇವ್ ಮಾಡಿಕೊಂಡು ಬಿಡುತ್ತಾನೆ. ಈಗ ರಾಮಾಯಣ, ಮಹಾಭಾರತಕ್ಕೆ ಸಂಬಂಧಿಸಿದ 1ಸಾವಿರ ಪ್ರಶ್ನೆ ಜೊತೆಗೆ ಸಾಮಾನ್ಯಜ್ಞಾನಕ್ಕೆ ಸಂಬಂಧಿಸಿದ 1ಸಾವಿರ ಪ್ರಶ್ನೆಗಳಿಗೆ ಉತ್ತರಿಸುತ್ತಾನೆ. ಹೀಗಾಗಿ, ಇಂಡಿಯಾ ಬುಕ್ ಆಫ್ ರೆಕಾರ್ಡ್ ಮತ್ತು ಕಲಾಂ ವರ್ಡ್ ರೆಕಾರ್ಡ್ ದಾಖಲಿಸಿದ್ದಾನೆಂದು ಹೇಮಂತ್ ತಾಯಿ ಶೃತಿಯವರು ಹೇಳುತ್ತಾರೆ.

ಇನ್ನು ಈ ಟ್ಯಾಲೆಂಟೆಡ್ ಬಾಯ್ ಹೇಮಂತ್ ಸದ್ಯ ಎರಡನೇ ತರಗತಿ ಓದುತ್ತಿದ್ದಾನೆ. ಆದ್ರೆ, ವಯಸ್ಸಿಗೆ ಮೀರಿದ ಬುದ್ಧಿವಂತಿಕೆ, ಮೆಮೊರಿ ಪವರ್ ಹೊಂದಿದ್ದಾನೆ. ರಾಮಾಯಣ ಮತ್ತು ಮಹಾಭಾರತದಲ್ಲಿ ಬರುವ ಪ್ರತಿ ಪಾತ್ರಗಳ ಹೆಸರನ್ನೂ ಹೇಳುತ್ತಾನಲ್ಲದೆ, ಪ್ರತಿ ಪ್ರಶ್ನೋತ್ತರಗಳಿಗೂ ಫಟಾಫಟ್ ಉತ್ತರ ನೀಡುತ್ತಾನೆ. ವಿವಿಧ ದೇಶ, ರಾಜಧಾನಿಗಳ ಹೆಸರು, ಗಾದೆಗಳು, ದೇಶದ ರಾಜಧಾನಿಗಳು, ಕರ್ನಾಟಕದ ಜಿಲ್ಲೆಗಳ ಹೆಸರು, ವಿಜ್ಞಾನಿಗಳು ಮತ್ತು ಸಂಶೋಧನೆಗಳು, ನದಿಗಳು, ಸಂವತ್ಸರಗಳು ಸೇರಿದಂತೆ ಅನೇಕ ಪ್ರಶ್ನೆಗಳಿಗೆ ಉತ್ತರಿಸುತ್ತಾನೆ.

ಇದನ್ನೂ ಓದಿ: India Book of Records ಗೆ ದಾಖಲು! ಧಾರವಾಡದ ಈ ಬಾಲಕಿಯ ಸಾಧನೆ ಏನು ಗೊತ್ತಾ?

ಇನ್ನು ಈ ಬಾಲಕ ಇಂಡಿಯನ್ ಆರ್ಮಿಗೆ ಸೇರಿ ಸೇವೆ ಸಲ್ಲಿಸುವ ಕನಸು ಹೊಂದಿದ್ದಾನೆ. ಮಗನ ಜಾಣ್ಮೆ, ಸಾಧನೆ ಕಂಡು ಪೋಷಕರು ದಿಲ್​ ಖುಷ್ ಆಗಿದ್ದಾರೆ. ಅಂತೆಯೇ ಮಗ ತನ್ನ ಕನಸಿನಂತೆ ಮುನ್ನಡೆದು ಸಾಧಿಸಲಿ ಎಂಬ ಆಶಯ ಹೊಂದಿದ್ದಾರೆ. ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗ ನಗರದ ಜೋಗಿಮಟ್ಟಿ ಬಡಾವಣೆಯ ನಿವಾಸಿ ಶೃತಿ ಮತ್ತು ವಿಜಯಕುಮಾರ್ ದಂಪತಿಯ ಪುತ್ರ ಹೇಮಂತ್ ವಿಶೇಷ ಟ್ಯಾಲೆಂಟ್ ಮೂಲಕ ಗಮನ ಸೆಳೆದಿದ್ದಾನೆ. ವಯಸ್ಸಿಗೆ ಮೀರಿದ ಪ್ರತಿಭೆ ಪ್ರದರ್ಶಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಮತ್ತು ಕಲಾಂ ವರ್ಲ್ಡ್ ರೆಕಾರ್ಡ್ ಸೇರಿದ್ದು, ಹೆತ್ತವರಿಗೆ ಮಾತ್ರವಲ್ಲದೆ ದುರ್ಗಕ್ಕೆ ಕೀರ್ತಿ ತಂದಿದ್ದಾನೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:29 pm, Sun, 23 July 23

ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ