AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾಷಣ ಮಾಡುವ ವಿಚಾರಕ್ಕೆ ವೇದಿಕೆಯಲ್ಲೇ ಕಿತ್ತಾಡಿಕೊಂಡ ಕಾಂಗ್ರೆಸ್‌ನ ಮಾಜಿ ಸಚಿವರು: BSYಗೆ ಇರುಸು ಮುರುಸು

ಭಾಷಣ ಮಾಡೋ ವಿಚಾರಕ್ಕೆ ಮಾಜಿ ಸಚಿವ ರಾಯರೆಡ್ಡಿ ಕಿರಿಕ್ ಮಾಡಿದ್ದಾರೆ. ನಾನೇನು ಭಾಷಣ ಮಾಡ್ತೀನಿ ಎಂದು ಹೇಳಿಲ್ಲ ಎಂದು ಪರೋಕ್ಷವಾಗಿ ರಾಯರೆಡ್ಡಿ, ಆರ್ ವಿ.ದೇಶಪಾಂಡೆ ಅವರಿಗೆ ಟಾಂಗ್​ ನೀಡಿದ್ದಾರೆ.

ಭಾಷಣ ಮಾಡುವ ವಿಚಾರಕ್ಕೆ ವೇದಿಕೆಯಲ್ಲೇ ಕಿತ್ತಾಡಿಕೊಂಡ ಕಾಂಗ್ರೆಸ್‌ನ ಮಾಜಿ ಸಚಿವರು: BSYಗೆ ಇರುಸು ಮುರುಸು
ವೇದಿಕೆ ಮೇಲೆ ಕಿರಿಕ್​ ಮಾಡಿದ ರಾಯರೆಡ್ಡಿ
ಪೃಥ್ವಿಶಂಕರ
|

Updated on:Jan 09, 2021 | 2:20 PM

Share

ಕೊಪ್ಪಳ: ಮುಖ್ಯಮಂತ್ರಿ ಯಡಿಯೂರಪ್ಪ ಅವರು ಭಾಗವಹಿಸಿದ್ದ ಕಾರ್ಯಕ್ರಮದಲ್ಲೇ ಭಾಷಣ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ನ ಮಾಜಿ ಸಚಿವರಿಬ್ಬರು ಕಿರಿಕ್‌ ಮಾಡಿಕೊಂಡಿರುವ ಘಟನೆ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಭಾನಾಪುರ ಗ್ರಾಮದಲ್ಲಿ ನಡೆದಿದೆ.

ಘಟನೆಯಿಂದ ಸಿಎಂ B.S.ಯಡಿಯೂರಪ್ಪಗೆ ಇರುಸು ಮುರುಸಾಗಿದೆ. ಅಸಲಿಗೆ ನಡೆದದ್ದೇನೆಂದರೆ, ಗಂಟಲು ಸರಿ ಇಲ್ಲದಿದ್ದರೂ ಕಾಂಗ್ರೆಸ್‌ನ ಮಾಜಿ ಸಚಿವ ಆರ್. ವಿ.ದೇಶಪಾಂಡೆ ಭಾಷಣ ಮಾಡಿದ್ದಾರೆ. ಹೀಗಾಗಿ ಭಾಷಣ ಮಾಡೋ ವಿಚಾರಕ್ಕೆ ಮಾಜಿ ಸಚಿವ ರಾಯರೆಡ್ಡಿ ಕಿರಿಕ್ ಮಾಡಿದ್ದಾರೆ. ನಾನೇನು ಭಾಷಣ ಮಾಡ್ತೀನಿ ಎಂದು ಹೇಳಿಲ್ಲ ಎಂದು ಪರೋಕ್ಷವಾಗಿ ರಾಯರೆಡ್ಡಿ, ಆರ್. ವಿ.ದೇಶಪಾಂಡೆ ಅವರಿಗೆ ಟಾಂಗ್​ ನೀಡಿದ್ದಾರೆ.

ಆರ್.ವಿ. ದೇಶಪಾಂಡೆ ಮಾತು ಆರಂಭಿಸಿದ ಕೂಡಲೇ ಎದ್ದು ನಿಂತ ಬಸವರಾಜ್ ರಾಯರೆಡ್ಡಿ ಈ ರೀತಿ ಕಿರಿಕ್ ಮಾಡಿದ್ದಾರೆ. ಘಟನೆಯನ್ನು ಆಲಿಸಿದ ವೇದಿಕೆ ಮುಂಭಾಗದಲ್ಲಿದ್ದ ಜನ ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗಿದ್ದಾರೆ. ಹಾಗೆಯೇ ರಾಯರೆಡ್ಡಿ ಬೆಂಬಲಿಗರಿಂದ ರಾಯರೆಡ್ಡಿ ಪರ ಘೋಷಣೆ ಮೊಳಗಿದೆ. ಈ ಘಟನೆಯಿಂದಾಗಿ ಮುಖ್ಯಮಂತ್ರಿಗೂ ಇರುಸು ಮುರುಸು ಉಂಟಾಗಿದೆ.

Published On - 1:59 pm, Sat, 9 January 21