AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕನ್ನಡದಲ್ಲೇ ಮಾತನಾಡೂ ಗಿಳಿರಾಮ ಮಾಡ್ತಿದ್ದಾನೆ ಮಾತಿನಿಂದಲೇ ಜಾದು

ಮಡಿಕೇರಿ: ಪ್ರಾಣಿ-ಪಕ್ಷಿ ಸಾಕೋದು ಅಂದ್ರೆ ಎಲ್ಲರಿಗೂ ಪ್ರೀತಿ. ಅದ್ರಲ್ಲೂ ಮನೆಯಲ್ಲಿ ಮಕ್ಕಳಿದ್ದರೆ ಒಂದು ಸಾಕು ಪ್ರಾಣಿಗೆ ಜಾಗ ಕೊಡಲೇಬೇಕು. ಇಷ್ಟೆಲ್ಲಾ ಮುದ್ದು ಮಾಡುವ ಸಾಕು ಪ್ರಾಣಿಗಳು ಮಾತಾಡಲು ಶುರು ಮಾಡಿದ್ರೆ ಹೇಗಿರುತ್ತೆ? ಇದೇ ರೀತಿ ಮಡಿಕೇರಿಯಲ್ಲೂ ಮಾತನಾಡುವ ಗಿಳಿ ಇದೆ. ಗಿಳಿರಾಮನ ಮಾತಿಗೆ ಎಲ್ಲರೂ ಫಿದಾ ಆಗಿದ್ದಾರೆ. ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ಬ್ಯಾಡಗೊಟ್ಟದಲ್ಲಿ ಮಾತನಾಡುವ ಗಿಳಿ ಇದೆ. ಅದು ಮನೆಗೆ ಬಂದವರನ್ನ ಮಾತನಾಡಿಸುತ್ತಾ, ಕುಶಲೋಪರಿ ವಿಚಾರಿಸೋ ಗಿಳಿರಾಮ. ಪಂಜರ ಸೇರಿದ್ರೂ ಬೇಸರ ಮಾಡಿಕೊಳ್ಳದೆ ಖುಷಿಯಾಗಿರೋ ಹಕ್ಕಿ. […]

ಕನ್ನಡದಲ್ಲೇ ಮಾತನಾಡೂ ಗಿಳಿರಾಮ ಮಾಡ್ತಿದ್ದಾನೆ ಮಾತಿನಿಂದಲೇ ಜಾದು
ಸಾಧು ಶ್ರೀನಾಥ್​
|

Updated on: Nov 22, 2019 | 7:23 AM

Share

ಮಡಿಕೇರಿ: ಪ್ರಾಣಿ-ಪಕ್ಷಿ ಸಾಕೋದು ಅಂದ್ರೆ ಎಲ್ಲರಿಗೂ ಪ್ರೀತಿ. ಅದ್ರಲ್ಲೂ ಮನೆಯಲ್ಲಿ ಮಕ್ಕಳಿದ್ದರೆ ಒಂದು ಸಾಕು ಪ್ರಾಣಿಗೆ ಜಾಗ ಕೊಡಲೇಬೇಕು. ಇಷ್ಟೆಲ್ಲಾ ಮುದ್ದು ಮಾಡುವ ಸಾಕು ಪ್ರಾಣಿಗಳು ಮಾತಾಡಲು ಶುರು ಮಾಡಿದ್ರೆ ಹೇಗಿರುತ್ತೆ? ಇದೇ ರೀತಿ ಮಡಿಕೇರಿಯಲ್ಲೂ ಮಾತನಾಡುವ ಗಿಳಿ ಇದೆ. ಗಿಳಿರಾಮನ ಮಾತಿಗೆ ಎಲ್ಲರೂ ಫಿದಾ ಆಗಿದ್ದಾರೆ.

ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ಬ್ಯಾಡಗೊಟ್ಟದಲ್ಲಿ ಮಾತನಾಡುವ ಗಿಳಿ ಇದೆ. ಅದು ಮನೆಗೆ ಬಂದವರನ್ನ ಮಾತನಾಡಿಸುತ್ತಾ, ಕುಶಲೋಪರಿ ವಿಚಾರಿಸೋ ಗಿಳಿರಾಮ. ಪಂಜರ ಸೇರಿದ್ರೂ ಬೇಸರ ಮಾಡಿಕೊಳ್ಳದೆ ಖುಷಿಯಾಗಿರೋ ಹಕ್ಕಿ. ಆದರೆ ಈ ಗಿಳಿ ಶಾಸ್ತ್ರ ಹೇಳೋ ಗಿಳಿಯಲ್ಲ, ಆಟೋ ಚಾಲಕರೊಬ್ಬರ ಮನೆಯಲ್ಲಿ ಹ್ಯಾಪಿಯಾಗಿ ಬದುಕುತ್ತಿರೋ ಪ್ಯಾರೋಟ್.

ಮಾತನಾಡುವ ಗಿಳಿಯ ಹೆಸರು ರಾಮು, ಚಿಕ್ಕಂದಿನಿಂದ್ಲೇ ಜನರ ಜತೆ ಬೆಳೆದ ಮುದ್ದಾದ ಗಿಳಿ ನೋಡ ನೋಡುತ್ತಿದ್ದಂತೆ ಮಾತು ಕಲಿತುಬಿಟ್ಟಿದೆ. ಮನೆ ಮಕ್ಕಳಾದ ಚಾಯಾಳನ್ನ ಚಾಯಕ್ಕಾ ಅಂತಾ ಹಾಗೇ ಹರ್ಷನನ್ನ ಹರ್ಷಾ ಎಂದು ಮುದ್ದಾಗಿ ಕರೆಯುತ್ತೆ. ಊಟ ಆಯ್ತಾ ಅವ್ವಾ , ಅಂತಾ ಮನೆಯ ಒಡತಿಯನ್ನೂ ಮಾತನಾಡಿಸುತ್ತೆ. ಪುಟಾಣಿ ಮರಿಯಿದ್ದಾಗಲೇ ಗಿಳಿಯನ್ನ ತಂದು ಸಾಕಿದ ಆಟೋ ಚಾಲಕ ಸತೀಶ್, ಈಗಲೂ ಗಿಳಿಗೆ ಆಸರೆ ನೀಡಿದ್ದಾರೆ. ಸದ್ಯ ಈ ಗಿಳಿರಾಮನಿಗೆ 5 ವರ್ಷ ವಯಸ್ಸು.

ಮನೆಯಲ್ಲಿ ಮಾತನಾಡೋದನ್ನ ಗಮನಿಸಿಯೇ ಗಿಳಿ ತೊದಲು ಮಾತುಗಳನ್ನ ಕಲಿತುಬಿಟ್ಟಿದೆ. ಹೆಸರು ಹೇಳು ಎಂದರೆ ಪ್ರತಿಕ್ರಿಯಿಸೋ ಗಿಳಿ, ನಿತ್ಯ ಮನೆಯವರೊಂದಿಗೆ ಕುಳಿತು ಟಿವಿಯನ್ನೂ ನೋಡುತ್ತೆ. ಮನೆಗೆ ಯಾರಾದ್ರು ಹೊಸಬರು ಬಂದ್ರೆ ಸಾಕು, ತಕ್ಷಣ ಯಾರೋ ಬಂದ್ರು ಅಂತಾ ಹೇಳುವಷ್ಟು ಬುದ್ಧಿಶಕ್ತಿ ಹೊಂದಿದೆ. ಇನ್ನು ಡ್ಯಾನ್ಸ್ ಮಾಡೋದ್ರಲ್ಲೂ ಈ ಗಿಳಿ ಯಾರಿಗೂ ಕಮ್ಮಿ ಇಲ್ಲ.

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Read More
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ