AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕನ್ನಡದಲ್ಲೇ ಮಾತನಾಡೂ ಗಿಳಿರಾಮ ಮಾಡ್ತಿದ್ದಾನೆ ಮಾತಿನಿಂದಲೇ ಜಾದು

ಮಡಿಕೇರಿ: ಪ್ರಾಣಿ-ಪಕ್ಷಿ ಸಾಕೋದು ಅಂದ್ರೆ ಎಲ್ಲರಿಗೂ ಪ್ರೀತಿ. ಅದ್ರಲ್ಲೂ ಮನೆಯಲ್ಲಿ ಮಕ್ಕಳಿದ್ದರೆ ಒಂದು ಸಾಕು ಪ್ರಾಣಿಗೆ ಜಾಗ ಕೊಡಲೇಬೇಕು. ಇಷ್ಟೆಲ್ಲಾ ಮುದ್ದು ಮಾಡುವ ಸಾಕು ಪ್ರಾಣಿಗಳು ಮಾತಾಡಲು ಶುರು ಮಾಡಿದ್ರೆ ಹೇಗಿರುತ್ತೆ? ಇದೇ ರೀತಿ ಮಡಿಕೇರಿಯಲ್ಲೂ ಮಾತನಾಡುವ ಗಿಳಿ ಇದೆ. ಗಿಳಿರಾಮನ ಮಾತಿಗೆ ಎಲ್ಲರೂ ಫಿದಾ ಆಗಿದ್ದಾರೆ. ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ಬ್ಯಾಡಗೊಟ್ಟದಲ್ಲಿ ಮಾತನಾಡುವ ಗಿಳಿ ಇದೆ. ಅದು ಮನೆಗೆ ಬಂದವರನ್ನ ಮಾತನಾಡಿಸುತ್ತಾ, ಕುಶಲೋಪರಿ ವಿಚಾರಿಸೋ ಗಿಳಿರಾಮ. ಪಂಜರ ಸೇರಿದ್ರೂ ಬೇಸರ ಮಾಡಿಕೊಳ್ಳದೆ ಖುಷಿಯಾಗಿರೋ ಹಕ್ಕಿ. […]

ಕನ್ನಡದಲ್ಲೇ ಮಾತನಾಡೂ ಗಿಳಿರಾಮ ಮಾಡ್ತಿದ್ದಾನೆ ಮಾತಿನಿಂದಲೇ ಜಾದು
ಸಾಧು ಶ್ರೀನಾಥ್​
|

Updated on: Nov 22, 2019 | 7:23 AM

Share

ಮಡಿಕೇರಿ: ಪ್ರಾಣಿ-ಪಕ್ಷಿ ಸಾಕೋದು ಅಂದ್ರೆ ಎಲ್ಲರಿಗೂ ಪ್ರೀತಿ. ಅದ್ರಲ್ಲೂ ಮನೆಯಲ್ಲಿ ಮಕ್ಕಳಿದ್ದರೆ ಒಂದು ಸಾಕು ಪ್ರಾಣಿಗೆ ಜಾಗ ಕೊಡಲೇಬೇಕು. ಇಷ್ಟೆಲ್ಲಾ ಮುದ್ದು ಮಾಡುವ ಸಾಕು ಪ್ರಾಣಿಗಳು ಮಾತಾಡಲು ಶುರು ಮಾಡಿದ್ರೆ ಹೇಗಿರುತ್ತೆ? ಇದೇ ರೀತಿ ಮಡಿಕೇರಿಯಲ್ಲೂ ಮಾತನಾಡುವ ಗಿಳಿ ಇದೆ. ಗಿಳಿರಾಮನ ಮಾತಿಗೆ ಎಲ್ಲರೂ ಫಿದಾ ಆಗಿದ್ದಾರೆ.

ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ಬ್ಯಾಡಗೊಟ್ಟದಲ್ಲಿ ಮಾತನಾಡುವ ಗಿಳಿ ಇದೆ. ಅದು ಮನೆಗೆ ಬಂದವರನ್ನ ಮಾತನಾಡಿಸುತ್ತಾ, ಕುಶಲೋಪರಿ ವಿಚಾರಿಸೋ ಗಿಳಿರಾಮ. ಪಂಜರ ಸೇರಿದ್ರೂ ಬೇಸರ ಮಾಡಿಕೊಳ್ಳದೆ ಖುಷಿಯಾಗಿರೋ ಹಕ್ಕಿ. ಆದರೆ ಈ ಗಿಳಿ ಶಾಸ್ತ್ರ ಹೇಳೋ ಗಿಳಿಯಲ್ಲ, ಆಟೋ ಚಾಲಕರೊಬ್ಬರ ಮನೆಯಲ್ಲಿ ಹ್ಯಾಪಿಯಾಗಿ ಬದುಕುತ್ತಿರೋ ಪ್ಯಾರೋಟ್.

ಮಾತನಾಡುವ ಗಿಳಿಯ ಹೆಸರು ರಾಮು, ಚಿಕ್ಕಂದಿನಿಂದ್ಲೇ ಜನರ ಜತೆ ಬೆಳೆದ ಮುದ್ದಾದ ಗಿಳಿ ನೋಡ ನೋಡುತ್ತಿದ್ದಂತೆ ಮಾತು ಕಲಿತುಬಿಟ್ಟಿದೆ. ಮನೆ ಮಕ್ಕಳಾದ ಚಾಯಾಳನ್ನ ಚಾಯಕ್ಕಾ ಅಂತಾ ಹಾಗೇ ಹರ್ಷನನ್ನ ಹರ್ಷಾ ಎಂದು ಮುದ್ದಾಗಿ ಕರೆಯುತ್ತೆ. ಊಟ ಆಯ್ತಾ ಅವ್ವಾ , ಅಂತಾ ಮನೆಯ ಒಡತಿಯನ್ನೂ ಮಾತನಾಡಿಸುತ್ತೆ. ಪುಟಾಣಿ ಮರಿಯಿದ್ದಾಗಲೇ ಗಿಳಿಯನ್ನ ತಂದು ಸಾಕಿದ ಆಟೋ ಚಾಲಕ ಸತೀಶ್, ಈಗಲೂ ಗಿಳಿಗೆ ಆಸರೆ ನೀಡಿದ್ದಾರೆ. ಸದ್ಯ ಈ ಗಿಳಿರಾಮನಿಗೆ 5 ವರ್ಷ ವಯಸ್ಸು.

ಮನೆಯಲ್ಲಿ ಮಾತನಾಡೋದನ್ನ ಗಮನಿಸಿಯೇ ಗಿಳಿ ತೊದಲು ಮಾತುಗಳನ್ನ ಕಲಿತುಬಿಟ್ಟಿದೆ. ಹೆಸರು ಹೇಳು ಎಂದರೆ ಪ್ರತಿಕ್ರಿಯಿಸೋ ಗಿಳಿ, ನಿತ್ಯ ಮನೆಯವರೊಂದಿಗೆ ಕುಳಿತು ಟಿವಿಯನ್ನೂ ನೋಡುತ್ತೆ. ಮನೆಗೆ ಯಾರಾದ್ರು ಹೊಸಬರು ಬಂದ್ರೆ ಸಾಕು, ತಕ್ಷಣ ಯಾರೋ ಬಂದ್ರು ಅಂತಾ ಹೇಳುವಷ್ಟು ಬುದ್ಧಿಶಕ್ತಿ ಹೊಂದಿದೆ. ಇನ್ನು ಡ್ಯಾನ್ಸ್ ಮಾಡೋದ್ರಲ್ಲೂ ಈ ಗಿಳಿ ಯಾರಿಗೂ ಕಮ್ಮಿ ಇಲ್ಲ.

Follow Us
ಡಾ ರಾಜ್​ಕುಮಾರ್ ಗೀತ ನಮನ ಕಾರ್ಯಕ್ರಮದಲ್ಲಿ ಸಾಧು ಕೋಕಿಲ ಮಾತು
ಡಾ ರಾಜ್​ಕುಮಾರ್ ಗೀತ ನಮನ ಕಾರ್ಯಕ್ರಮದಲ್ಲಿ ಸಾಧು ಕೋಕಿಲ ಮಾತು
ಉತ್ತರ ಪ್ರದೇಶದ ಮುಖ್ಯಮಂತ್ರಿಗೆ ಫೋಟೋ ಟಿಪ್ಸ್ ನೀಡಿದ ರವಿ ಕಿಶನ್
ಉತ್ತರ ಪ್ರದೇಶದ ಮುಖ್ಯಮಂತ್ರಿಗೆ ಫೋಟೋ ಟಿಪ್ಸ್ ನೀಡಿದ ರವಿ ಕಿಶನ್
ಸಮಂತಾ ಸೆಟ್​​​ನಲ್ಲಿ ಹೇಗಿರ್ತಾರೆ? ವಿವರಿಸಿದ ದಿಗಂತ್
ಸಮಂತಾ ಸೆಟ್​​​ನಲ್ಲಿ ಹೇಗಿರ್ತಾರೆ? ವಿವರಿಸಿದ ದಿಗಂತ್
KSRTC ಬಸ್​ ಅಡ್ಡಗಟ್ಟಿ ಕುಡುಕರ ಕಿರಿಕ್​​: ಸೆಲ್ಫಿ ತೆಗೆದು ಹುಚ್ಚಾಟ
KSRTC ಬಸ್​ ಅಡ್ಡಗಟ್ಟಿ ಕುಡುಕರ ಕಿರಿಕ್​​: ಸೆಲ್ಫಿ ತೆಗೆದು ಹುಚ್ಚಾಟ
ಮಗುವನ್ನು ಸಾಕ್ಷಾತ್ ದೇವರಂತೆ ಬಂದು ರಕ್ಷಿಸಿದ ಪೊಲೀಸರು!
ಮಗುವನ್ನು ಸಾಕ್ಷಾತ್ ದೇವರಂತೆ ಬಂದು ರಕ್ಷಿಸಿದ ಪೊಲೀಸರು!
ಲಕ್ಷ್ಮೀಪುರ ಬಿಡಿಎ ಲೇಔಟಲ್ಲಿ ಚೀಲದಲ್ಲಿ ಅಪರಿಚಿತ ಶವ ಪತ್ತೆ, ಬೆಚ್ಚಿದ ಜನ
ಲಕ್ಷ್ಮೀಪುರ ಬಿಡಿಎ ಲೇಔಟಲ್ಲಿ ಚೀಲದಲ್ಲಿ ಅಪರಿಚಿತ ಶವ ಪತ್ತೆ, ಬೆಚ್ಚಿದ ಜನ
ಅಣ್ಣಾವ್ರ ಸಮಾಧಿಗೆ ಪೂಜೆ ಮಾಡಿದ ರಾಘಣ್ಣ ಮತ್ತು ಶಾಸಕ ಗೋಪಾಲಯ್ಯ
ಅಣ್ಣಾವ್ರ ಸಮಾಧಿಗೆ ಪೂಜೆ ಮಾಡಿದ ರಾಘಣ್ಣ ಮತ್ತು ಶಾಸಕ ಗೋಪಾಲಯ್ಯ
ಸಿಇಟಿ ಬರೆಯಲು ಬಂದ ವಿದ್ಯಾರ್ಥಿಯ ಜನಿವಾರ ತೆಗೆಸಿದ್ರಾ ಸಿಬ್ಬಂದಿ?
ಸಿಇಟಿ ಬರೆಯಲು ಬಂದ ವಿದ್ಯಾರ್ಥಿಯ ಜನಿವಾರ ತೆಗೆಸಿದ್ರಾ ಸಿಬ್ಬಂದಿ?
ನಾವೇನು ಪಾಕಿಸ್ತಾನದಲ್ಲಿ ಇದ್ದೇವಾ? ಜನಿವಾರ ತೆಗೆಸಿದ್ದಕ್ಕೆ ವ್ಯಾಪಕ ಆಕ್ರೋಶ
ನಾವೇನು ಪಾಕಿಸ್ತಾನದಲ್ಲಿ ಇದ್ದೇವಾ? ಜನಿವಾರ ತೆಗೆಸಿದ್ದಕ್ಕೆ ವ್ಯಾಪಕ ಆಕ್ರೋಶ
ಒಂದು ರನ್​​ಗಾಗಿ ಇಷ್ಟೆಲ್ಲ ಪೋಸ್​​​ ಬೇಕಿತ್ತಾ ಪಾಂಡ್ಯ?
ಒಂದು ರನ್​​ಗಾಗಿ ಇಷ್ಟೆಲ್ಲ ಪೋಸ್​​​ ಬೇಕಿತ್ತಾ ಪಾಂಡ್ಯ?