ಮಂಗಳೂರು: 24 ಅಡಿ ಬಾವಿ ತೋಡಿ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಂಡ 17 ವರ್ಷದ ಬಾಲಕ

|

Updated on: Apr 12, 2023 | 3:24 PM

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನೈಲಾ ಗ್ರಾಮದ 17 ವರ್ಷದ ಬಾಲಕ 24 ಅಡಿ ಆಳದ ಬಾವಿ ತೋಡಿದ್ದಾನೆ.

ಮಂಗಳೂರು: 24 ಅಡಿ ಬಾವಿ ತೋಡಿ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಂಡ 17 ವರ್ಷದ ಬಾಲಕ
ಬಾಲಕ ಸಾಜ್ರನ್​​
Image Credit source: Times of India
Follow us on

ಮಂಗಳೂರು: ದಕ್ಷಿಣ ಕನ್ನಡ (Dakshin Kannada) ಜಿಲ್ಲೆಯ ಬಂಟ್ವಾಳ (Bantwal) ತಾಲೂಕಿನ ನೈಲಾ ಗ್ರಾಮದ 17 ವರ್ಷದ ಬಾಲಕ 24 ಅಡಿ ಆಳದ ಬಾವಿಯನ್ನು (Well) ತೋಡಿದ್ದಾನೆ. ಹೌದು ಬಾಲಕ ಸ್ರಾಜನ್ ತನ್ನ ಊರಿನ ನೀರಿನ ಸಮಸ್ಯೆಯನ್ನು ಪರಿಹರಿಸಬೇಕೆಂಬ ನಿಟ್ಟಿನಲ್ಲಿ ಈ ಮಾರ್ಗವನ್ನು ಅನುಸರಿಸಿದ್ದಾರೆ. ಸ್ರಾಜನ್​ನ ಈ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನೈಲಾ ಗ್ರಾಮದ ಟೈಲರ್ ಲೋಕನಾಥ್ ಮತ್ತು ಬೀಡಿ ಸುತ್ತುವ ಕೆಲಸ ಮಾಡುವ ಮೋಹಿನಿ ಅವರ ಪುತ್ರ ಸ್ರಾಜನ್ ​ ಸರ್ಕಾರಿ ಕಾಲೇಜಿನಲ್ಲಿ ಪಿಯು ವ್ಯಾಸಂಗ ಮಾಡುತ್ತಿದ್ದಾರೆ.

ಗ್ರಾಮದಲ್ಲಿ ನೀರಿನ ಸಮಸ್ಯೆ ಅಧಿಕವಾಗಿದೆ. ಇದನ್ನು ಬಗೆಹರಿಸಬೇಕೆಂದು ಬಾವಿ ತೋಡಲು ಬಯಸಿದ್ದೆ. ಗ್ರಾಮಕ್ಕೆ ಪಂಚಾಯತಿ ಮೂಲಕ ನೀರು ಸರಬರಾಜು ಮಾಡಲಾಗುತ್ತದೆ ಆದರೂ ಕೂಡ ನೀರಿನ ಸಮಸ್ಯೆ ಅಧಿಕವಾಗಿದೆ ಎಂದು ಸ್ರಾಜನ್ ​ ಹೇಳಿದರು.

“ಬಾವಿ ತೋಡುವುದು ನನ್ನ ಮನಸ್ಸಿನಲ್ಲಿತ್ತು, ಆದರೆ ನಾನು ಯಶಸ್ವಿಯಾಗುತ್ತೇನೆಯೇ ಎಂದು ನನಗೆ ಖಚಿತವಾಗಿರಲಿಲ್ಲ. ಕೆಲಸ ಕಷ್ಟಕರವಾಗಿತ್ತು, ಆದರೆ ಅದು ಅಸಾಧ್ಯವಲ್ಲ ಎಂದು ನನಗೆ ತಿಳಿದಿತ್ತು. ಎರಡು ವಾರಗಳ ಹಿಂದೆ ಬಾವಿ ತೋಡಲು ಆರಂಭಿಸಬೇಕೆಂದು ಯೋಚಿಸಿದಾಗಸುಮಾರು 15-16 ಅಡಿಯಲ್ಲಿ ನೀರು ಸಿಗಬಹುದು ಎಂದು ಯೋಚಿಸಿದ್ದೆ, ಅದು ನಿಜವಾಯಿತು. ನಾನು ಬಾವಿ ತೋಡುತ್ತಾ 15-16 ಅಡಿ ತಲುಪಿದಾಗ ನೀರು ದೊರೆಯಿತು ಇದರಿಂದ ಅತೀವ ಆನಂದವಾಯಿತು. ನನ್ನ ಶ್ರಮಕ್ಕೆ ತಕ್ಕ ಫಲ ಸಿಕ್ಕಿದೆ ಎಂದು ನನ್ನ ಮನೆಯವರೂ ಖುಷಿ ಪಟ್ಟರು. ಇದು ನನ್ನನ್ನು ಮತ್ತಷ್ಟು ಅಗೆಯಲು ಪ್ರೇರೇಪಿಸಿತು” ಈ ಹಿನ್ನೆಲೆ ನಾನು 24 ಅಡಿ ಬಾವಿ ತೋಡಿದೆ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:23 pm, Wed, 12 April 23