ಪಕ್ಷದಲ್ಲಿ ಇತ್ತೀಚಿನ ವರ್ತನೆ, ನಿರ್ಧಾರಗಳು ತೀವ್ರ ಬೇಸರ ತಂದಿವೆ ಎಂದು ಕಾಂಗ್ರೆಸ್​ಗೆ ರಾಜೀನಾಮೆ ನೀಡಿದ ಹಿರಿಯ ನಾಯಕ

ಕಾಂಗ್ರೆಸ್ ಪಕ್ಷದಲ್ಲಿ ಇತ್ತೀಚಿನ ವರ್ತನೆಗಳು, ನಿರ್ಧಾರಗಳು ತೀವ್ರ ಬೇಸರ ತಂದಿವೆ. ಈ ಕಾರಣಕ್ಕೆ ಪಕ್ಷಕ್ಕೆ ರಾಜೀನಾಮೆ ನೀಡಿರುವೆ ಎಂದು ದಾವಣಗೆರೆ ಮೂಲದ ಡಾ. ಸಿ.ಆರ್. ನಸೀರ್ ಅಹ್ಮದ್ ಹೇಳಿದ್ದಾರೆ.

ಪಕ್ಷದಲ್ಲಿ ಇತ್ತೀಚಿನ ವರ್ತನೆ, ನಿರ್ಧಾರಗಳು ತೀವ್ರ ಬೇಸರ ತಂದಿವೆ ಎಂದು ಕಾಂಗ್ರೆಸ್​ಗೆ ರಾಜೀನಾಮೆ ನೀಡಿದ ಹಿರಿಯ ನಾಯಕ
ಪಕ್ಷದಲ್ಲಿ ಇತ್ತೀಚಿನ ವರ್ತನೆ, ನಿರ್ಧಾರಗಳು ತೀವ್ರ ಬೇಸರ ತಂದಿವೆ ಎಂದು ಕಾಂಗ್ರೆಸ್​ಗೆ ರಾಜೀನಾಮೆ ನೀಡಿದ ಹಿರಿಯ ನಾಯಕ
Edited By:

Updated on: Mar 22, 2022 | 1:41 PM

ದಾವಣಗೆರೆ: ಪಕ್ಷದಲ್ಲಿನ ಇತ್ತೀಚಿನ ವರ್ತನೆಗಳು ಮತ್ತು ನಿರ್ಧಾರಗಳು ತೀವ್ರ ಬೇಸರ ತಂದಿವೆ ಎಂದು ಕಾಂಗ್ರೆಸ್​ಗೆ ರಾಜೀನಾಮೆ ನೀಡುವುದಾಗಿ ಹಿರಿಯ ಕಾಂಗ್ರೆಸ್ಸಿಗ, ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರಿಗೆ ಆಪ್ತರಾಗಿದ್ದ ನಜೀರ್ ಅಹ್ಮದ್ ಪ್ರಕಟಿಸಿದ್ದಾರೆ. ನನ್ನ ರಾಜೀನಾಮೆ ಪತ್ರವನ್ನ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಕಳುಹಿಸಿರುವೆ. ಯಾವ ಪಕ್ಷಕ್ಕೆ ಸೇರ್ಪಡೆಯಾಗಬೇಕು ಎಂದು ಇನ್ನೂ ನಿರ್ಧರಿಸಿಲ್ಲ. ಮುಂದಿನ ದಿನಗಳಲ್ಲಿ ತಿಳಿಸುವೆ ಎಂದು ದಾವಣಗೆರೆ ಮೂಲದ ಡಾ. ಸಿ.ಆರ್. ನಸೀರ್ ಅಹ್ಮದ್ ಹೇಳಿದ್ದಾರೆ.

ಕೇಂದ್ರ ಯೋಜನಾ ಆಯೋಗ ಹಾಗೂ ಅಲ್ಪ ಸಂಖ್ಯಾತರ ಆಯೋಗ ಸದಸ್ಯರಾಗಿದ್ದ ಡಾ. ಸಿ.ಆರ್. ನಸೀರ್ ಅಹ್ಮದ್ ಅವರು ಕಾಂಗ್ರೆಸ್ ನಲ್ಲಿ ಕಳೆದ ಮೂರು ದಶಕಗಳಿಂದ ಸೇವೆ ಸಲ್ಲಿಸುತ್ತಿದ್ದರು. ಕಾಂಗ್ರೆಸ್ ಪಕ್ಷದಲ್ಲಿ ಇತ್ತೀಚಿನ ವರ್ತನೆಗಳು, ನಿರ್ಧಾರಗಳು ತೀವ್ರ ಬೇಸರ ತಂದಿವೆ. ಈ ಕಾರಣಕ್ಕೆ ಪಕ್ಷಕ್ಕೆ ರಾಜೀನಾಮೆ ನೀಡಿರುವೆ ಎಂದು ತಿಳಿಸಿದ್ದಾರೆ.

Also Read:
ಹಾಗೇ ಸುಮ್ಮನೆ ನಿತ್ಯ ಜೀವನದಲ್ಲಿ ತತ್ತ್ವಜ್ಞಾನಗಳು! ಜ್ಞಾನ ಎಲ್ಲಿದ್ದರೂ ಜ್ಞಾನವೆ, ಹತ್ತು ಹಲವು ಜ್ಞಾನಗಳು ಇಲ್ಲಿವೆ!!

Also Read:
ಹೊಸೂರುವರೆಗೂ ನಮ್ಮ ಮೆಟ್ರೋ ರೈಲು ಬಿಡಲು ಸಿಎಂ ಬೊಮ್ಮಾಯಿಗೆ ಪತ್ರ ಬರೆದ ಸಿದ್ದರಾಮಯ್ಯ

Published On - 1:38 pm, Tue, 22 March 22