Loading video

Karnataka Budget Session; ಶಿವಕುಮಾರ್ ಬಾಯಿಂದ ಮುನಿರತ್ನ ಹೆಸರು ಹೊರಬಿದ್ದಾಗ ವಿಶೇಷ ಅನಿಸದಿರುತ್ತದೆಯೇ?

|

Updated on: Mar 10, 2025 | 3:19 PM

ಮುನಿರತ್ನ ಅವರ ಹೆಸರನ್ನು ಶಿವಕುಮಾರ್ ಉಲ್ಲೇಖಿಸಿರುವುದನ್ನು ನಾವು ಹೇಳುತ್ತಿರುವುದಕ್ಕೆ ಕಾರಣ ಇಲ್ಲದಿಲ್ಲ. ಅವರ ನಡುವೆ ಮಾತುಕತೆಯಿಲ್ಲ ಅನ್ನೋದು ಎಲ್ಲರಿಗೂ ಗೊತ್ತಿರುವ ಸಂಗತಿ. ಮೊನ್ನೆ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಅವರಿಬ್ಬರು ಅಕ್ಕಪಕ್ಕದಲ್ಲೇ ನಿಂತಿದ್ದರೂ ಪರಸ್ಪರ ಮುಖ ನೋಡಿಕೊಂಡಿರಲಿಲ್ಲ, ಈ ಹಿನ್ನೆಲೆಯಲ್ಲಿ ಶಿವಕುಮಾರ್, ಮುನಿರತ್ನ ಹೆಸರು ಹೇಳಿದ್ದು ವಿಶೇಷವೇ.

ಬೆಂಗಳೂರು, ಮಾರ್ಚ್ 10: ಸದನದಲ್ಲಿ ಗ್ರೇಟರ್ ಬೆಂಗಳೂರು ವಿಧೆಯಕ ಮಂಡನೆಗೆ ಸಂಬಂಧಿಸಿದಂತೆ ಮಾತಾಡಿದ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ಬೃಹತ್ ಬೆಂಗಳೂರು ನಗರ ಪಾಲಿಕೆ ನಡೆದುಕೊಂಡ ಹಾದಿಯನ್ನು ವಿವರಿಸುವಾಗ, ಶಾಸಕರು ಮತ್ತು ಮಿನಿಸ್ಟ್ರುಗಳಾಗಿರುವ ಹಲವಾರು ಜನ ಪ್ರತಿನಿಧಿಗಳು ಮೊದಲು ಕೌನ್ಸಿಲರ್ ಗಳಾಗಿದ್ದರು ಎಂದರು. ಅಂಥ ನಾಯಕರ ಹೆಸರುಗಳನ್ನು ಉಲ್ಲೇಖಿಸುವಾಗ ಅವರು ಬಿಜೆಪಿ ಶಾಸಕ ಮುನಿರತ್ನ ನಾಯ್ಡು ಹೆಸರನ್ನೂ ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಮುಡಾ ಪ್ರಕರಣ ರಾಜಕೀಯ ಪ್ರೇರಿತ ಅಂತ ಮೊದಲೇ ಹೇಳಿದ್ದೆ, ನ್ಯಾಯಾಲಯ ಹೇಳಿದ್ದನ್ನು ಪಾಲಿಸುತ್ತೇವೆ: ಶಿವಕುಮಾರ್