ಸಾಲು ಸಾಲು ಏರ್ ಇಂಡಿಯಾ ವಿಮಾನಗಳ ಸೇವೆ ರದ್ದು, ಮುಖ್ಯ ಇಂಜಿನೀಯರ್​ಗೆ ಡಿಜಿಸಿಎ ಸಮನ್ಸ್

ಅರುಣ್​ ಕುಮಾರ್​ ಬೆಳ್ಳಿ

Updated on: Jun 17, 2025 | 8:25 PM

ನಿನ್ನೆ ಏರ್ ಇಂಡಿಯಾ ತನ್ನ ಆರು ವಿಮಾನಗಳ ಶೆಡ್ಯೂಲನ್ನು ಒಂದಿಲ್ಲೊಂದು ಕಾರಣಕ್ಕೆ ಒಂದೋ ರದ್ದುಮಾಡಿದೆ ಇಲ್ಲವೇ ಸೇವೆಯನ್ನು ಸ್ಥಗಿತಗೊಳಿಸಿದೆ. ನಿಮಗೆ ನೆನಪಿರಬಹುದು, ಏರ್ ಇಂಡಿಯಾ ಸಂಸ್ಥೆಯ ಒಡೆತನವನ್ನು ಟಾಟಾ ಗ್ರೂಪ್​ ಆಫ್ ಕಂಪನೀಸ್ ವಹಿಸಿಕೊಳ್ಳುವಾಗ ವಿಮಾನಗಳ ತಾಂತ್ರಿಕ ಕ್ಷಮತೆಯ ಬಗ್ಗೆ ಪ್ರಶ್ನೆಗಳೆದ್ದಿದ್ದವು. ಅದರೆ ಟಾಟಾ ಅವುಗಳನ್ನು ನಿರ್ಲಕ್ಷಿಸಿತು ಎಂದು ಹೇಳಲಾಗುತ್ತಿದೆ, ಇದೇ ಹಿನ್ನೆಲೆಯಲ್ಲಿ ವಿಮಾನಗಳ ಸೇವೆ ರದ್ದಾಗುತ್ತಿದೆ.

ಬೆಂಗಳೂರು, ಜೂನ್ 17: ಅಹಮದಾಬಾದ್​ನಲ್ಲಿ ಏರ್ ಇಂಡಿಯ 171 ದುರಂತದ ನಂತರ ಸಂಸ್ಥೆಯ ವಿಮಾನಗಳಿಗೆ ಶನಿಕಾಟ ಶುರುವಾದಂತಿದೆ. ಈಗಾಗಲೇ ವರದಿಯಾಗಿರುವಂತೆ ಸ್ಯಾನ್ ಫ್ರಾನ್ಸಿಸ್ಕೋ-ಮುಂಬೈ ಏರ್ ಇಂಡಿಯಾ ವಿಮಾನವು ಕೊಲ್ಕತ್ತಾಗೆ ಬಂದ ಬಳಿಕ ಅದರ ಒಂದು ಎಂಜಿನ್​ನಲ್ಲಿ ತಾಂತ್ರಿಕ ದೋಷ ಕಂಡಿದೆ, ಹಾಗಾಗಿ ಅದು ಮುಂಬೈಗೆ ಹಾರುವುದನ್ನು ರದ್ದು ಮಾಡಿ ಕೊಲ್ಕತ್ತಾದಲ್ಲೇ ನಿಲ್ಲಿಸಲಾಗಿದೆ. ಇವತ್ತು ಮಧ್ಯಾಹ್ನ ಬೆಂಗಳೂರಿಂದ ಲಂಡನ್​ಗೆ ಹೊರಡಬೇಕಿದ್ದ ಏರ್ ಇಂಡಿಯಾ-133 ವಿಮಾನವನ್ನು ರದ್ದುಗೊಳಿಸಲಾಗಿದೆ. ನಿನ್ನೆಯೂ ಏರ್ ಇಂಡಿಯಾ ಸಂಸ್ಥೆಯು ಸಾಲುಸಾಲು ವಿಮಾನಗಳನ್ನು ರದ್ದು ಮಾಡಿತ್ತು. ಸಂಸ್ಥೆಯ ತಾಂತ್ರಿಕ ವಿಭಾಗದ ಮುಖ್ಯ ಎಂಜಿನೀಯರ್​ಗೆ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿದೆ.

ಇದನ್ನೂ ಓದಿ:  ಕೇದಾರನಾಥ ಧಾಮಕ್ಕೆ ಹೋಗುವಾಗ ತಾಂತ್ರಿಕ ದೋಷದಿಂದ ರಸ್ತೆಯಲ್ಲೇ ಲ್ಯಾಂಡ್ ಆದ ಹೆಲಿಕಾಪ್ಟರ್

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.