
Plane Crash
ಗುಜರಾತ್ ರಾಜ್ಯದ ಅಹಮದಾಬಾದ್ನ ಮೇಘನಿನಗರದಲ್ಲಿ ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡಾಗಿದೆ. ಈ ವಿಮಾನದಲ್ಲಿ 242 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಟೇಕಾಫ್ ಆದ 5 ನಿಮಿಷಗಳಲ್ಲೇ ಏರ್ ಇಂಡಿಯಾದ AI 171 ವಿಮಾನ ಅಪಘಾತಕ್ಕೀಡಾಗಿದೆ. ಈ ವಿಮಾನ ಅಹಮದಾಬಾದ್ನಿಂದ ಲಂಡನ್ಗೆ ಹೋಗುತ್ತಿತ್ತು. ಅಹಮದಾಬಾದ್ನ ಮೇಘನಿನಗರದಲ್ಲಿ ಅಪಘಾತಕ್ಕೀಡಾದ ವಿಮಾನದಲ್ಲಿ ಗುಜರಾತ್ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಕೂಡ ಪ್ರಯಾಣಿಸುತ್ತಿದ್ದರು. ವಿಮಾನದಲ್ಲಿದ್ದ ಪ್ರಯಾಣಿಕರಲ್ಲಿ 169 ಭಾರತೀಯ ಪ್ರಜೆಗಳು, 53 ಬ್ರಿಟಿಷ್ ಪ್ರಜೆಗಳು, 1 ಕೆನಡಾ ಪ್ರಜೆ ಮತ್ತು 7 ಪೋರ್ಚುಗೀಸ್ ಪ್ರಜೆಗಳು ಇದ್ದರು. ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ ನಡೆದ AI171 ವಿಮಾನದ ಅಪಘಾತಕ್ಕೆ ಸಂಬಂಧಿಸಿದಂತೆ ಎಲ್ಲಾ ವಿವರಗಳನ್ನು ನೀಡಲು ನಾಗರಿಕ ವಿಮಾನಯಾನ ಸಚಿವಾಲಯದಲ್ಲಿ ಕಾರ್ಯಾಚರಣಾ ನಿಯಂತ್ರಣ ಕೊಠಡಿಯನ್ನು ಸಕ್ರಿಯಗೊಳಿಸಲಾಗಿದೆ. ಅದಕ್ಕಾಗಿ 011-24610843, 9650391859 ದೂರವಾಣಿ ಸಂಖ್ಯೆಯನ್ನು ತೆರೆಯಲಾಗಿದೆ.
Fact Check: ಆಗ್ರಾ ವಿಮಾನ ನಿಲ್ದಾಣದಲ್ಲಿ ಯಾವುದೇ ವಿಮಾನ ಅಪಘಾತಕ್ಕೀಡಾಗಿಲ್ಲ: ವೈರಲ್ ಆಗುತ್ತಿರುವುದು ನಕಲಿ ವಿಡಿಯೋ
Agra Plane Crash Fact Check: ಎಐ ಅಂಶಗಳನ್ನು ಪತ್ತೆ ಹಚ್ಚುವ ಸಾಫ್ಟ್ವೇರ್ WasitAI AI ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಾಗ ಇದು AI ರಚಿತ ಎಂದು ಹೇಳಿದೆ. ಟಿವಿ9 ಕನ್ನಡ ತನಿಖೆ ನಡೆಸಿ ವೈರಲ್ ವಿಡಿಯೋ ನಕಲಿ ಎಂದು ಕಂಡುಹಿಡಿದಿದೆ. ಆಗ್ರಾದಲ್ಲಿ ಯಾವುದೇ ವಿಮಾನ ಅಪಘಾತಕ್ಕೀಡಾಗಿಲ್ಲ, ವೈರಲ್ ಆಗುತ್ತಿರುವ ವಿಡಿಯೋ ಎಐ ಯಿಂದ ರಚಿಸಲಾಗಿದೆ.
- Vinay Bhat
- Updated on: Jul 1, 2025
- 4:26 pm
ಅಹಮದಾಬಾದ್ನ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ 275 ಮಂದಿ ಸಾವು; ಸರ್ಕಾರದಿಂದ ಅಧಿಕೃತ ಘೋಷಣೆ
ಗುಜರಾತಿನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ವಿಮಾನವು ವೈದ್ಯಕೀಯ ಕಾಲೇಜು ಹಾಸ್ಟೆಲ್ಗೆ ಅಪ್ಪಳಿಸಿತು. ಮೃತರಲ್ಲಿ 241 ಮಂದಿ ಬೋಯಿಂಗ್ 787-8 ಡ್ರೀಮ್ಲೈನರ್ನಲ್ಲಿದ್ದರೆ, 34 ಮಂದಿ ನೆಲದ ಮೇಲೆ ಇದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ವಿಮಾನವು ಲಂಡನ್ನ ಗ್ಯಾಟ್ವಿಕ್ ವಿಮಾನ ನಿಲ್ದಾಣಕ್ಕೆ ತೆರಳುತ್ತಿತ್ತು ಮತ್ತು ಸಿಬ್ಬಂದಿ ಸೇರಿದಂತೆ 242 ಜನರನ್ನು ಹೊತ್ತೊಯ್ಯುತ್ತಿತ್ತು.
- Sushma Chakre
- Updated on: Jun 24, 2025
- 10:11 pm
Air India: ಭೀಕರ ವಿಮಾನಾಪಘಾತಕ್ಕೆ ಕೆಲವೇ ದಿನ ಮೊದಲು ಭರ್ಜರಿ ಸಂಬಳ ಹೆಚ್ಚಳ ಪಡೆದಿದ್ದ ಏರ್ ಇಂಡಿಯಾ ಸಿಇಒ
Air India CEO had got big salary hike before airline crash incident: ಇತ್ತೀಚೆಗೆ ಸಂಭವಿಸಿದ ಏರ್ ಇಂಡಿಯಾ ವಿಮಾನಾಪಘಾತ ಘಟನೆಗೆ 15 ದಿನ ಮುನ್ನ ಅದರ ಸಿಇಒ ಸಂಬಳ ಏರಿಕೆ ಮಾಡಲಾಗಿತ್ತು. ಕ್ಯಾಂಪ್ಬೆಲ್ ವಿಲ್ಸನ್ ಅವರ ಒಟ್ಟು ಸ್ಯಾಲರಿ ಪ್ಯಾಕೇಜ್ 27.75 ಕೋಟಿ ರೂ ಆಫರ್ ಮಾಡಲಾಗಿತ್ತು. ಇದು ಅವರಿಗೆ ಶೇ. 46ರಷ್ಟು ಸಂಬಳ ಹೆಚ್ಚಳ ಆದಂತಾಗಿದೆ. ಇದರಲ್ಲಿ ಶೇ. 60ರಷ್ಟು ಸಂಬಳವು ಪರ್ಫಾರ್ಮೆನ್ಸ್ ಆಧಾರಿತವಾಗಿದ್ದಾಗಿದೆ.
- Vijaya Sarathy SN
- Updated on: Jun 24, 2025
- 4:47 pm
ಏರ್ ಇಂಡಿಯಾ ದುರಂತ; ಮೃತ ಮೆಡಿಕಲ್ ವಿದ್ಯಾರ್ಥಿಗಳ ಕುಟುಂಬಕ್ಕೆ 6 ಕೋಟಿ ನೆರವು ನೀಡಿದ ಯುಎಇ ವೈದ್ಯ
ಅಹಮದಾಬಾದ್ನಲ್ಲಿ ನಡೆದ ಏರ್ ಇಂಡಿಯಾ ಅಪಘಾತದಲ್ಲಿ ಸಾವನ್ನಪ್ಪಿದ ವೈದ್ಯಕೀಯ ವಿದ್ಯಾರ್ಥಿಗಳು, ಈ ದುರಂತದಲ್ಲಿ ಗಾಯಗೊಂಡವರ ಕುಟುಂಬಕ್ಕೆ ಯುಎಇ ವೈದ್ಯ ಶಂಶೀರ್ 6 ಕೋಟಿ ರೂ.ಗಳ ನೆರವು ನೀಡಿದ್ದಾರೆ. ಏರ್ ಇಂಡಿಯಾ ಬೋಯಿಂಗ್ 787-8 ಡ್ರೀಮ್ಲೈನರ್ ವಿಮಾನವು ಬಿಜೆ ವೈದ್ಯಕೀಯ ಕಾಲೇಜು ಹಾಸ್ಟೆಲ್ ಕಟ್ಟಡಕ್ಕೆ ಅಪ್ಪಳಿಸಿ 34 ವೈದ್ಯರು ಸಾವನ್ನಪ್ಪಿದ್ದರು. ಯುಎಇ ವೈದ್ಯರೊಬ್ಬರು ಆ ವೈದ್ಯರ ಕುಟುಂಬಗಳಿಗೆ ಸಹಾಯ ಮಾಡಲು ಮುಂದೆ ಬಂದಿದ್ದಾರೆ. ಯುಎಇಯ ಡಾ. ಶಂಶೀರ್ ವಯಲಿಲ್ ಅವರು 6 ಕೋಟಿ ರೂ. (2.5 ಮಿಲಿಯನ್ ದಿರ್ಹಮ್ಗಳು) ಆರ್ಥಿಕ ನೆರವು ನೀಡುವ ಮೂಲಕ ತಮ್ಮ ಮಾನವೀಯತೆಯನ್ನು ಪ್ರದರ್ಶಿಸಿದ್ದಾರೆ.
- Sushma Chakre
- Updated on: Jun 24, 2025
- 3:49 pm
168 ಪ್ರಯಾಣಿಕರಿದ್ದ ಇಂಡಿಗೋ ವಿಮಾನದಲ್ಲಿ ಮೇಡೇ ಘೋಷಿಸಿದ ಪೈಲಟ್; ಬೆಂಗಳೂರಲ್ಲಿ ತುರ್ತು ಭೂಸ್ಪರ್ಶ
ಇಂಧನ ಕಡಿಮೆ ಇರುವುದರಿಂದ ಇಂಡಿಗೋ ವಿಮಾನವನ್ನು 'ಮೇಡೇ' ಎಂದು ಘೋಷಿಸಲಾಯಿತು. ತಕ್ಷಣ ಗುವಾಹಟಿ-ಚೆನ್ನೈ ಮಾರ್ಗದ ಇಂಡಿಗೋ ವಿಮಾನದ ಮಾರ್ಗ ಬದಲಾಯಿಸಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿಸಲಾಯಿತು. ಗುವಾಹಟಿಯಿಂದ ಚೆನ್ನೈಗೆ ಹೋಗುತ್ತಿದ್ದ ಇಂಡಿಗೋ ವಿಮಾನದಲ್ಲಿ ಕಡಿಮೆ ಇಂಧನವಿದೆ ಎಂದು ಕ್ಯಾಪ್ಟನ್ ಘೋಷಿಸಿದ ನಂತರ ಆ ವಿಮಾನ ಬೆಂಗಳೂರಿನಲ್ಲಿ ತುರ್ತು ಭೂಸ್ಪರ್ಶ ಮಾಡಿತು.
- Sushma Chakre
- Updated on: Jun 21, 2025
- 6:50 pm
ಅಹಮದಾಬಾದ್ ಅಪಘಾತದ ಬಳಿಕ ಏರ್ ಇಂಡಿಯಾದ 3 ಅಧಿಕಾರಿಗಳ ಸಸ್ಪೆಂಡ್; ಡಿಜಿಸಿಎ ಮಹತ್ವದ ಆದೇಶ
ಅಹಮದಾಬಾದ್ ವಿಮಾನ ಅಪಘಾತ ನಡೆದ ಕೆಲವು ದಿನಗಳ ನಂತರ ಏರ್ ಇಂಡಿಯಾ ವಿರುದ್ಧ ಡಿಜಿಸಿಎ ಕ್ರಮ ಕೈಗೊಂಡಿದೆ. ನಿಯಮ ಉಲ್ಲಂಘನೆ ಮಾಡಿದ್ದಕ್ಕಾಗಿ ಏರ್ ಇಂಡಿಯಾದ 3 ಅಧಿಕಾರಿಗಳನ್ನು ತೆಗೆದುಹಾಕಲಾಗಿದೆ. ಸಿಬ್ಬಂದಿ ವೇಳಾಪಟ್ಟಿ ಮತ್ತು ವಿಮಾನ ಉಲ್ಲಂಘನೆಗಾಗಿ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಏರ್ ಇಂಡಿಯಾ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ. ಡಿಜಿಸಿಎ ಏರ್ ಇಂಡಿಯಾದ ರೋಸ್ಟರಿಂಗ್ ವಿಭಾಗದಿಂದ ಮೂವರು ಹಿರಿಯ ಅಧಿಕಾರಿಗಳನ್ನು ತೆಗೆದುಹಾಕಲಾಗಿದೆ.
- Sushma Chakre
- Updated on: Jun 21, 2025
- 3:12 pm
ಅಹ್ಮದಾಬಾದ್ ವಿಮಾನ ಅಪಘಾತ: ವಿಮಾದಾರ ಮತ್ತು ನಾಮಿನಿ ಇಬ್ಬರೂ ಮೃತ; ಏನಾಗುತ್ತೆ ಇನ್ಷೂರೆನ್ಸ್ ಹಣ?
Air India flight crash incident, insurance dilemma: ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ 241 ಮಂದಿ ಪ್ರಯಾಣಿಕರು ಮೃತಪಟ್ಟಿದ್ದಾರೆ. ಅವರಲ್ಲಿ ಇನ್ಷೂರೆನ್ಸ್ ಪಾಲಿಸಿ ಹೊಂದಿದ್ದ ಒಬ್ಬ ವ್ಯಕ್ತಿ ಹಾಗೂ ಪಾಲಿಸಿಗೆ ನಾಮಿನಿಯಾಗಿದ್ದ ಅವರ ಹೆಂಡತಿ ಇಬ್ಬರೂ ಬಲಿಯಾಗಿದ್ದಾರೆ. ಇಂಥ ಸಂದರ್ಭದಲ್ಲಿ ಇನ್ಷೂರೆನ್ಸ್ ಹಣಕ್ಕೆ ಯಾರು ಕ್ಲೇಮ್ ಸಲ್ಲಿಸಬಹುದು? ಇಲ್ಲಿದೆ ಡೀಟೇಲ್ಸ್.
- Vijaya Sarathy SN
- Updated on: Jun 20, 2025
- 4:22 pm
Video: ಏರ್ ಇಂಡಿಯಾ ಅಪಘಾತ: ಡಿಎನ್ಎ ಮೂಲಕ 211 ಜನರ ಗುರುತು ಪತ್ತೆ, 189 ಮೃತದೇಹಗಳ ಹಸ್ತಾಂತರ: ಡಾ. ರಾಕೇಶ್
Air India Plane Crash: ಗುಜರಾತ್ನ ಅಹಮದಾಬಾದ್ನಲ್ಲಿ ಕಳೆದ ವಾರ ಸಂಭವಿಸಿದ ವಿಮಾನ ಅಪಘಾತದಲ್ಲಿ 270 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ವೈದ್ಯಕೀಯ ಕಾಲೇಜಿನ ಹಾಸ್ಟೆಲ್ಗೆ ವಿಮಾನ ಡಿಕ್ಕಿ ಹೊಡೆದ ಪರಿಣಾಮ ವಿಮಾನದಲ್ಲಿದ್ದ 241 ಮಂದಿ ಹಾಗೂ ಹಾಸ್ಟೆಲ್ನಲ್ಲಿದ್ದ ವಿದ್ಯಾರ್ಥಿಗಳು ಸೇರಿ 270 ಮಂದಿ ಪ್ರಾಣ ಕಳೆದುಕೊಂಡಿದ್ದರು. ಇದೀಗ ಸಿವಿಲ್ ಆಸ್ಪತ್ರೆಯ ಸೂಪರಿಂಟೆಂಡೆಂಟ್ ಡಾ. ರಾಕೇಶ್ ಜೋಶಿ ಮಾತನಾಡಿ, ಡಿಎನ್ಎ ಮಾದರಿಗಳ ಮೂಲಕ 211 ಜನರ ಗುರುತು ಪತ್ತೆ ಮಾಡಲಾಗಿದೆ.
- Nayana Rajeev
- Updated on: Jun 19, 2025
- 11:41 am
Fact Check: ಅಹಮದಾಬಾದ್ ವಿಮಾನ ಅಪಘಾತ ಎಂದು ಮತ್ತೊಂದು ಸುಳ್ಳು ವಿಡಿಯೋ ವೈರಲ್
Ahmedabad plane crash fact check: ಟಿವಿ9 ಕನ್ನಡ ತನ್ನ ತನಿಖೆಯಲ್ಲಿ ವೈರಲ್ ಆಗಿರುವ ಹೇಳಿಕೆ ಸುಳ್ಳು ಎಂದು ಕಂಡುಹಿಡಿದಿದೆ. ವಾಸ್ತವವಾಗಿ ವೈರಲ್ ಆಗುತ್ತಿರುವ ವಿಡಿಯೋ ಯಾವುದೇ ನೈಜ ಘಟನೆಯದ್ದಲ್ಲ, ಬದಲಾಗಿ ಇದು ಗೇಮಿಂಗ್ ದೃಶ್ಯಾವಳಿಯಾಗಿದೆ. ಇದನ್ನು ನಿಜವೆಂದು ಭಾವಿಸಿ ಹಂಚಿಕೊಳ್ಳಲಾಗುತ್ತಿದೆ.
- Vinay Bhat
- Updated on: Jun 18, 2025
- 6:19 pm
ಸಾಲು ಸಾಲು ಏರ್ ಇಂಡಿಯಾ ವಿಮಾನಗಳ ಸೇವೆ ರದ್ದು, ಮುಖ್ಯ ಇಂಜಿನೀಯರ್ಗೆ ಡಿಜಿಸಿಎ ಸಮನ್ಸ್
ನಿನ್ನೆ ಏರ್ ಇಂಡಿಯಾ ತನ್ನ ಆರು ವಿಮಾನಗಳ ಶೆಡ್ಯೂಲನ್ನು ಒಂದಿಲ್ಲೊಂದು ಕಾರಣಕ್ಕೆ ಒಂದೋ ರದ್ದುಮಾಡಿದೆ ಇಲ್ಲವೇ ಸೇವೆಯನ್ನು ಸ್ಥಗಿತಗೊಳಿಸಿದೆ. ನಿಮಗೆ ನೆನಪಿರಬಹುದು, ಏರ್ ಇಂಡಿಯಾ ಸಂಸ್ಥೆಯ ಒಡೆತನವನ್ನು ಟಾಟಾ ಗ್ರೂಪ್ ಆಫ್ ಕಂಪನೀಸ್ ವಹಿಸಿಕೊಳ್ಳುವಾಗ ವಿಮಾನಗಳ ತಾಂತ್ರಿಕ ಕ್ಷಮತೆಯ ಬಗ್ಗೆ ಪ್ರಶ್ನೆಗಳೆದ್ದಿದ್ದವು. ಅದರೆ ಟಾಟಾ ಅವುಗಳನ್ನು ನಿರ್ಲಕ್ಷಿಸಿತು ಎಂದು ಹೇಳಲಾಗುತ್ತಿದೆ, ಇದೇ ಹಿನ್ನೆಲೆಯಲ್ಲಿ ವಿಮಾನಗಳ ಸೇವೆ ರದ್ದಾಗುತ್ತಿದೆ.
- Arun Belly
- Updated on: Jun 17, 2025
- 8:25 pm