AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

2018ರಲ್ಲೇ ಏರ್ ಇಂಡಿಯಾಗೆ ಇಂಧನದ ಸ್ವಿಚ್ ಸಮಸ್ಯೆ ಬಗ್ಗೆ ಎಚ್ಚರಿಸಿತ್ತು ಅಮೆರಿಕದ ವಾಯುಯಾನ ಸಂಸ್ಥೆ!

2018ರಲ್ಲಿ ಬೋಯಿಂಗ್ ವಿಮಾನಗಳಲ್ಲಿ ಇಂಧನ ಸ್ವಿಚ್ ಲಾಕಿಂಗ್ ಕಾರ್ಯವಿಧಾನದಲ್ಲಿನ ಸಂಭಾವ್ಯ ಸಮಸ್ಯೆಗಳ ಕುರಿತು ಅಮೆರಿಕದ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (ಎಫ್‌ಎಎ) ಮಾಹಿತಿಯನ್ನು ಬಿಡುಗಡೆ ಮಾಡಿತ್ತು. ಇಂಧನ ನಿಯಂತ್ರಣ ಸ್ವಿಚ್ ಲಾಕಿಂಗ್ ವ್ಯವಸ್ಥೆಯ ಸಂಭಾವ್ಯ ನಿಷ್ಕ್ರಿಯತೆಯ ಬಗ್ಗೆ ಅದು ಎಚ್ಚರಿಕೆ ನೀಡಿತ್ತು, ತಪಾಸಣೆ ಮಾಡಿಸಲು ಸಲಹೆಯನ್ನೂ ನೀಡಿತ್ತು. ಆದರೆ, ಅದನ್ನು ಏರ್ ಇಂಡಿಯಾ ಕಡ್ಡಾಯವಲ್ಲವೆಂದು ನಿರ್ಲಕ್ಷ್ಯಿಸಿದ ಕಾರಣದಿಂದ ಆ ತಪಾಸಣೆಗಳನ್ನು ಮಾಡಲಿಲ್ಲ. ಇದೀಗ ಅದೇ ಕಾರಣದಿಂದ ಕಳೆದ ತಿಂಗಳು ಅಹಮದಾಬಾದ್​​ನಲ್ಲಿ ಏರ್ ಇಂಡಿಯಾ ವಿಮಾನ ಪತನವಾಗಿ ವಿಮಾನದಲ್ಲಿದ್ದ 241 ಜನರು ಮೃತಪಟ್ಟಿದ್ದಾರೆ.

2018ರಲ್ಲೇ ಏರ್ ಇಂಡಿಯಾಗೆ ಇಂಧನದ ಸ್ವಿಚ್ ಸಮಸ್ಯೆ ಬಗ್ಗೆ ಎಚ್ಚರಿಸಿತ್ತು ಅಮೆರಿಕದ ವಾಯುಯಾನ ಸಂಸ್ಥೆ!
Air India Accident
ಸುಷ್ಮಾ ಚಕ್ರೆ
|

Updated on: Jul 12, 2025 | 4:24 PM

Share

ನವದೆಹಲಿ, ಜುಲೈ 12: ಜೂನ್ 12 ಭಾರತದ ಪಾಲಿಗೆ ಕರಾಳ ದಿನಗಳಲ್ಲಿ ಒಂದು. ಆ ದಿನ ಗುಜರಾತ್​​ನ ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ ಏರ್ ಇಂಡಿಯಾ (Air India Plane Crash) ಬೋಯಿಂಗ್ 787-8 ವಿಮಾನ ಅಪಘಾತಕ್ಕೀಡಾಗಿ ವೈದ್ಯರ ಹಾಸ್ಟೆಲ್​ಗೆ ಅಪ್ಪಳಿಸಿದ್ದರಿಂದ 241 ಪ್ರಯಾಣಿಕರು ಹಾಗೂ 30 ಜನರು ಹಾಸ್ಟೆಲ್ ಸಿಬ್ಬಂದಿ ದಾರುಣವಾಗಿ ಮೃತಪಟ್ಟಿದ್ದರು. ಈ ಅಪಘಾತ ನಡೆದು 1 ತಿಂಗಳಾದ ಬಳಿ ಇದೀಗ ವಿಮಾನ ಅಪಘಾತಕ್ಕೆ ಕಾರಣವೇನೆಂಬುದರ ವಾಸ್ತವಾಂಶ ಬೆಳಕಿಗೆ ಬಂದಿದೆ. ವಿಮಾನದ ಎಂಜಿನ್‌ಗೆ ಇಂಧನ ಪೂರೈಕೆ ಸ್ಥಗಿತಗೊಂಡಿರುವುದು ಸೇರಿದಂತೆ ಹಲವಾರು ಪ್ರಮುಖ ವಿಷಯಗಳನ್ನು ಪತ್ತೆಹಚ್ಚಲಾಗಿದೆ. ವಿಮಾನದ ಇಂಜಿನ್‌ಗಳಿಗೆ ಇಂಧನ ಪೂರೈಕೆಯ ಸ್ವಿಚ್‌ಗಳು ರನ್​ನಿಂದ ಕಟ್ ಆಫ್​ಗೆ ಬದಲಾಯಿತು. ಇದರಿಂದ ಕೇವಲ 1 ಸೆಕೆಂಡಿನಲ್ಲಿ ಎರಡೂ ಇಂಜಿನ್‌ಗೆ ಇಂಧನ ಪೂರೈಕೆ ಸ್ಥಗಿತವಾಯಿತು. ಇದರಿಂದಲೇ ವಿಮಾನ ಟೇಕ್ ಆಫ್ ಆಗಲು ಸಾಧ್ಯವಾಗದೆ ಎದುರಿದ್ದ ಕಟ್ಟಡದೊಳಗೆ ನುಗ್ಗಿತು ಎಂಬುದು ತನಿಖೆಯಲ್ಲಿ ಬಯಲಾಗಿದೆ. ಆದರೆ, ಈ ಬಗ್ಗೆ 7 ವರ್ಷಗಳ ಹಿಂದೆಯೇ ಅಮೆರಿಕದ ವಾಯುಯಾನ ನಿಯಂತ್ರಕ ಎಚ್ಚರಿಕೆ ನೀಡಿತ್ತು. ಆದರೆ, ಅದನ್ನು ನಿರ್ಲಕ್ಷ್ಯ ಮಾಡಲಾಗಿತ್ತು ಎಂಬುದು ಬೆಳಕಿಗೆ ಬಂದಿದೆ.

ಏರ್ ಇಂಡಿಯಾ ಬೋಯಿಂಗ್ ವಿಮಾನದಲ್ಲಿ ಇಂಧನ ನಿಯಂತ್ರಣ ಸ್ವಿಚ್ ಲಾಕಿಂಗ್ ವ್ಯವಸ್ಥೆಯಲ್ಲಿನ ದೋಷಕ್ಕೆ ಸಂಬಂಧಿಸಿದ ವಿಷಯವನ್ನು ಅಮೆರಿಕದ ವಾಯುಯಾನ ನಿಯಂತ್ರಕ ಅಧಿಕಾರಿಗಳು ಮೊದಲೇ ಗುರುತಿಸಿದ್ದರೂ ಸಹ ಅದರ ತಪಾಸಣೆಯನ್ನು ಕಡ್ಡಾಯವೆಂದು ಸೂಚಿಸಿಲ್ಲ ಎಂಬ ಕಾರಣಕ್ಕೆ ಏರ್ ಇಂಡಿಯಾ ಅದನ್ನು ನಿರ್ಲಕ್ಷ್ಯ ಮಾಡಿತ್ತು. ಸ್ವಿಚ್ ವಿಚಾರದಲ್ಲಿ ಏರ್ ಇಂಡಿಯಾ ಯಾವುದೇ ತಪಾಸಣೆ ಮಾಡಿಸಿರಲಿಲ್ಲ. ಇದೀಗ ಅದೇ ಏರ್ ಇಂಡಿಯಾ ದುರಂತಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಅಹಮದಾಬಾದ್ ಏರ್ ಇಂಡಿಯಾ ವಿಮಾನ ಪತನಕ್ಕೆ ಕೊನೆಗೂ ಕಾರಣ ಪತ್ತೆ: ಪ್ರಾಥಮಿಕ ವರದಿಯಲ್ಲಿ ಆಘಾತಕಾರಿ ಅಂಶ

ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡಾಗುವ ಮೊದಲು ಪೈಲಟ್​​ಗಳಿಬ್ಬರ ಮಾತುಗಳನ್ನು ಕಾಕ್​ಪಿಟ್ ವಾಯ್ಸ್ ರೆಕಾರ್ಡರ್​​ನಲ್ಲಿ ದಾಖಲಿಸಲಾಗಿದೆ. ಅವುಗಳನ್ನು ವಶಕ್ಕೆ ಪಡೆದಿರುವ ತನಿಖಾ ಸಂಸ್ಥೆಗೆ ಮಹತ್ವದ ಮಾಹಿತಿ ಸಿಕ್ಕಿದೆ. ಅದರಲ್ಲಿ ಓರ್ವ ಪೈಲಟ್ ನೀವೇಕೆ ಇಂಧನವನ್ನು ಕಟ್ ಆಫ್ ಮಾಡಿದ್ದೀರಿ? ಎಂದು ಕೇಳಿದ್ದಾರೆ. ಅದಕ್ಕೆ ಇನ್ನೊಬ್ಬರು ನಾನು ಅದನ್ನು ಮಾಡಿಲ್ಲ ಎನ್ನುತ್ತಾರೆ. ಅಷ್ಟರಲ್ಲಿ ವಿಮಾನ ಅಪಘಾತಕ್ಕೀಡಾಗಿದೆ. ಇಂಧನ ನಿಯಂತ್ರಣ ಸ್ವಿಚ್​​ಗಳು ತನ್ನಷ್ಟಕ್ಕೆ ತಾನೇ ಆಟೋಮ್ಯಾಟಿಕ್ ಆಗಿ ಕಟ್ ಆಫ್ ಆಗಿದ್ದರಿಂದ ವಿಮಾನದ ಇಂಜಿನ್​ಗಳಿಗೆ ಇಂಧನದ ಪೂರೈಕೆ ಸ್ಥಗಿತವಾಗಿದೆ ಎಂಬುದು ತನಿಖೆ ವೇಳೆ ಬಯಲಾಗಿದೆ.

ಇದನ್ನೂ ಓದಿ: ಅದನ್ನು ಯಾಕೆ ಕಡಿತಗೊಳಿಸಿದಿರಿ? ಏರ್ ಇಂಡಿಯಾ ಪೈಲಟ್​ಗಳ ಕೊನೆಯ ಸಂಭಾಷಣೆಯಲ್ಲಿತ್ತು ಪತನದ ರಹಸ್ಯ

ಪತನವಾದ ಏರ್ ಇಂಡಿಯಾ ಬೋಯಿಂಗ್ ವಿಮಾನ 2 ಜಿಇ ಇಂಜಿನ್​ಗಳನ್ನು ಹೊಂದಿತ್ತು. ವಿಮಾನದ ಇಂಜಿನ್ ಸ್ಟಾರ್ಟ್ ಮಾಡಲು ಮತ್ತು ಆಫ್ ಮಾಡಲು ಈ ಇಂಧನ ನಿಯಂತ್ರಣ ಸ್ವಿಚ್​​ಗಳು ಬಹಳ ಮುಖ್ಯ. ಆದರೆ, ಟೇಕ್ ಆಫ್ ಆಗುವಾಗಲೇ ಅದು ಆಫ್ ಆಗಿದ್ದರಿಂದ ವಿಮಾನ ಅಪಘಾತಕ್ಕೀಡಾಗಿದೆ. ಆ ಸ್ವಿಚ್ ಆನ್ ಮಾಡುವಷ್ಟು ಸಮಯವೂ ಪೈಲಟ್​​ಗಳಿಗೆ ಉಳಿದಿರಲಿಲ್ಲ. ಈ ರೀತಿ ತಾಂತ್ರಿಕ ದೋಷ ಉಂಟಾಗಿರುವುದು ಇದೇ ಮೊದಲು. ಹೀಗಾಗಿ, ಆಧುನಿಕ ಜೆಟ್ ಲೈನರ್​​ಗಳಲ್ಲಿ ಇಂಧನ ನಿಯಂತ್ರಣ ಸ್ವಿಚ್​​ಗಳ ಪ್ರಾಮುಖ್ಯತೆ ಎಷ್ಟಿದೆ ಎಂಬುದಕ್ಕೆ ಈ ಅಪಘಾತ ಉದಾಹರಣೆಯಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್