AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಯಾವುದೇ ವಿಷಾದವಿಲ್ಲ’; ಟೀಂ ಇಂಡಿಯಾದಲ್ಲಿ ಕಂಬ್ಯಾಕ್ ಬಗ್ಗೆ ಮೌನ ಮುರಿದ ಭುವನೇಶ್ವರ್

Bhuvneshwar Kumar on Team India Comeback: ಟೀಂ ಇಂಡಿಯಾದಿಂದ ದೂರ ಉಳಿದಿರುವ ವೇಗಿ ಭುವನೇಶ್ವರ್ ಕುಮಾರ್, ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದರೂ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿಲ್ಲ. ತಮ್ಮ ಮರಳುವಿಕೆ ಬಗ್ಗೆ ಯಾವುದೇ ಪಶ್ಚಾತ್ತಾಪವಿಲ್ಲ ಎಂದಿರುವ ಭುವಿ, ತಲೆಮಾರುಗಳ ಬದಲಾವಣೆಯನ್ನು ಒಪ್ಪಿಕೊಂಡಿದ್ದಾರೆ. ಕುಟುಂಬಕ್ಕೆ ಕೃತಜ್ಞತೆ ಸಲ್ಲಿಸುತ್ತಾ, ಕ್ರೀಡೆಯ ಮೇಲಿನ ಪ್ರೀತಿಯಿಂದಲೇ ಇನ್ನೂ ಆಡುತ್ತಿರುವುದಾಗಿ ಹೇಳಿದ್ದಾರೆ.

ಪೃಥ್ವಿಶಂಕರ
|

Updated on: Aug 02, 2026 | 10:38 PM

Share
ಟೀಂ ಇಂಡಿಯಾದ ಅನುಭವಿ ವೇಗದ ಬೌಲರ್ ಭುವನೇಶ್ವರ್ ಕುಮಾರ್ ರಾಷ್ಟ್ರೀಯ ತಂಡದಲ್ಲಿ ಕಾಣಿಸಿಕೊಂಡು ವರ್ಷಗಳೇ ಕಳೆದಿವೆ. 2022 ರಲ್ಲಿ ಕೊನೆಯ ಬಾರಿಗೆ ತಂಡದಲ್ಲಿ ಕಾಣಿಸಿಕೊಂಡಿದ್ದ ಭುವನೇಶ್ವರ್​ಗೆ ಆ ಬಳಿಕ ಆಡಲು ಅವಕಾಶ ಸಿಕ್ಕಿಲ್ಲ. ಆದಾಗ್ಯೂ ಐಪಿಎಲ್​ನಲ್ಲಿ ಪ್ರತಿ ಆವೃತ್ತಿಯಲ್ಲೂ ಭುವನೇಶ್ವರ್ ಅತ್ಯದ್ಭುತ ಪ್ರದರ್ಶನವನ್ನು ನೀಡುತ್ತಿದ್ದಾರೆ(PC-PTI).

ಟೀಂ ಇಂಡಿಯಾದ ಅನುಭವಿ ವೇಗದ ಬೌಲರ್ ಭುವನೇಶ್ವರ್ ಕುಮಾರ್ ರಾಷ್ಟ್ರೀಯ ತಂಡದಲ್ಲಿ ಕಾಣಿಸಿಕೊಂಡು ವರ್ಷಗಳೇ ಕಳೆದಿವೆ. 2022 ರಲ್ಲಿ ಕೊನೆಯ ಬಾರಿಗೆ ತಂಡದಲ್ಲಿ ಕಾಣಿಸಿಕೊಂಡಿದ್ದ ಭುವನೇಶ್ವರ್​ಗೆ ಆ ಬಳಿಕ ಆಡಲು ಅವಕಾಶ ಸಿಕ್ಕಿಲ್ಲ. ಆದಾಗ್ಯೂ ಐಪಿಎಲ್​ನಲ್ಲಿ ಪ್ರತಿ ಆವೃತ್ತಿಯಲ್ಲೂ ಭುವನೇಶ್ವರ್ ಅತ್ಯದ್ಭುತ ಪ್ರದರ್ಶನವನ್ನು ನೀಡುತ್ತಿದ್ದಾರೆ(PC-PTI).

1 / 6
ಐಪಿಎಲ್​ನಲ್ಲಿ ಆರ್​ಸಿಬಿ ತಂಡ ಸತತ ಎರಡನೇ ಬಾರಿಗೆ ಚಾಂಪಿಯನ್ ಆಗುವಲ್ಲಿ ಭುವಿ ಅವರ ಪಾತ್ರ ಅಪಾರವಾಗಿದೆ. ಹೀಗಾಗಿ ಭುವಿಯನ್ನು ಮತ್ತೆ ಭಾರತ ತಂಡಕ್ಕೆ ಆಯ್ಕೆ ಮಾಡಬೇಕೆಂಬ ಕೂಗು ಜೋರಾಗಿದೆ. ಆದರೆ ಆಯ್ಕೆ ಮಂಡಳಿ ಮಾತ್ರ ಇದರ ಬಗ್ಗೆ ಗಮನಹರಿಸುತ್ತಿಲ್ಲ. ಇದೀಗ ಈ ಬಗ್ಗೆ ಸ್ವತಃ ಭುವನೇಶ್ವರ್ ಕುಮಾರ್ ಅವರೇ ತಮ್ಮ ಮನದಾಳವನ್ನು ಹಂಚಿಕೊಂಡಿದ್ದಾರೆ(PC-PTI).

ಐಪಿಎಲ್​ನಲ್ಲಿ ಆರ್​ಸಿಬಿ ತಂಡ ಸತತ ಎರಡನೇ ಬಾರಿಗೆ ಚಾಂಪಿಯನ್ ಆಗುವಲ್ಲಿ ಭುವಿ ಅವರ ಪಾತ್ರ ಅಪಾರವಾಗಿದೆ. ಹೀಗಾಗಿ ಭುವಿಯನ್ನು ಮತ್ತೆ ಭಾರತ ತಂಡಕ್ಕೆ ಆಯ್ಕೆ ಮಾಡಬೇಕೆಂಬ ಕೂಗು ಜೋರಾಗಿದೆ. ಆದರೆ ಆಯ್ಕೆ ಮಂಡಳಿ ಮಾತ್ರ ಇದರ ಬಗ್ಗೆ ಗಮನಹರಿಸುತ್ತಿಲ್ಲ. ಇದೀಗ ಈ ಬಗ್ಗೆ ಸ್ವತಃ ಭುವನೇಶ್ವರ್ ಕುಮಾರ್ ಅವರೇ ತಮ್ಮ ಮನದಾಳವನ್ನು ಹಂಚಿಕೊಂಡಿದ್ದಾರೆ(PC-PTI).

2 / 6
ಆರ್​ಸಿಬಿಯ ಪಾಡ್‌ಕ್ಯಾಸ್ಟ್‌ನಲ್ಲಿ ಭುವನೇಶ್ವರ್ ಮಾತನಾಡುತ್ತಾ,‘ನಾನು ಸಂತೋಷವಾಗಿದ್ದೇನೆ ಮತ್ತು ಅದಕ್ಕಾಗಿ ನನ್ನ ಕುಟುಂಬಕ್ಕೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಮನೆಯಲ್ಲಿ, ನಾವು ಎಂದಿಗೂ ಕ್ರಿಕೆಟ್ ಬಗ್ಗೆ ಮಾತನಾಡುವುದಿಲ್ಲ. ನಾನು ಭಾರತೀಯ ತಂಡಕ್ಕೆ ಮರಳುತ್ತೇನೆಯೇ? ನನ್ನನ್ನು ಏಕೆ ಆಯ್ಕೆ ಮಾಡಲಾಗಿಲ್ಲ? ಅಥವಾ ಏನು ತಪ್ಪಾಯಿತು ಎಂಬುದರ ಕುರಿತು ನಾವು ಎಂದಿಗೂ ಮಾತನಾಡುವುದಿಲ್ಲ(PC-PTI).

ಆರ್​ಸಿಬಿಯ ಪಾಡ್‌ಕ್ಯಾಸ್ಟ್‌ನಲ್ಲಿ ಭುವನೇಶ್ವರ್ ಮಾತನಾಡುತ್ತಾ,‘ನಾನು ಸಂತೋಷವಾಗಿದ್ದೇನೆ ಮತ್ತು ಅದಕ್ಕಾಗಿ ನನ್ನ ಕುಟುಂಬಕ್ಕೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಮನೆಯಲ್ಲಿ, ನಾವು ಎಂದಿಗೂ ಕ್ರಿಕೆಟ್ ಬಗ್ಗೆ ಮಾತನಾಡುವುದಿಲ್ಲ. ನಾನು ಭಾರತೀಯ ತಂಡಕ್ಕೆ ಮರಳುತ್ತೇನೆಯೇ? ನನ್ನನ್ನು ಏಕೆ ಆಯ್ಕೆ ಮಾಡಲಾಗಿಲ್ಲ? ಅಥವಾ ಏನು ತಪ್ಪಾಯಿತು ಎಂಬುದರ ಕುರಿತು ನಾವು ಎಂದಿಗೂ ಮಾತನಾಡುವುದಿಲ್ಲ(PC-PTI).

3 / 6
ನನ್ನ ಬದುಕಿನಲ್ಲಿ ಟೀಂ ಇಂಡಿಯಾ ದೊಡ್ಡ ಪಾತ್ರವನ್ನು ವಹಿಸಿದೆ. ಹೀಗಾಗಿ ನನಗೆ ಯಾವುದೇ ವಿಷಾದವಿಲ್ಲ. ನೀವು ತಂಡದ ಪ್ರಮುಖ ಸದಸ್ಯರಾಗಿರುವಾಗ, ಎಲ್ಲರೂ ತಂಡವು ಮೊದಲು ಬರುತ್ತದೆ ಎಂದು ಹೇಳುತ್ತಾರೆ, ಆದರೆ ನೀವು ಇಲ್ಲದಿರುವಾಗ, ಬಹುಶಃ ನಾನು ಇನ್ನೂ ಅಲ್ಲೇ ಇರಬೇಕು ಎಂದು ನೀವು ಭಾವಿಸುತ್ತೀರಿ. ಬದಲಾವಣೆ ಆಟದ ಒಂದು ಭಾಗ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ತಲೆಮಾರುಗಳು ಬದಲಾಗುತ್ತವೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ(PC-PTI).

ನನ್ನ ಬದುಕಿನಲ್ಲಿ ಟೀಂ ಇಂಡಿಯಾ ದೊಡ್ಡ ಪಾತ್ರವನ್ನು ವಹಿಸಿದೆ. ಹೀಗಾಗಿ ನನಗೆ ಯಾವುದೇ ವಿಷಾದವಿಲ್ಲ. ನೀವು ತಂಡದ ಪ್ರಮುಖ ಸದಸ್ಯರಾಗಿರುವಾಗ, ಎಲ್ಲರೂ ತಂಡವು ಮೊದಲು ಬರುತ್ತದೆ ಎಂದು ಹೇಳುತ್ತಾರೆ, ಆದರೆ ನೀವು ಇಲ್ಲದಿರುವಾಗ, ಬಹುಶಃ ನಾನು ಇನ್ನೂ ಅಲ್ಲೇ ಇರಬೇಕು ಎಂದು ನೀವು ಭಾವಿಸುತ್ತೀರಿ. ಬದಲಾವಣೆ ಆಟದ ಒಂದು ಭಾಗ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ತಲೆಮಾರುಗಳು ಬದಲಾಗುತ್ತವೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ(PC-PTI).

4 / 6
ಅಲ್ಲದೆ ತಂಡದಲ್ಲಿ ಅವಕಾಶ ಸಿಗದ ಮೊದಲ ಆಟಗಾರ ನಾನಲ್ಲ, ಮತ್ತು ನಾನು ಖಂಡಿತವಾಗಿಯೂ ಕೊನೆಯವನಲ್ಲ. ಇದು ಆಟದ ಭಾಗ. ಕುಟುಂಬವು ದೊಡ್ಡ ಪಾತ್ರವನ್ನು ವಹಿಸುತ್ತದೆ. ನಾನು ಇರುವಲ್ಲಿ ನನಗೆ ಸಂತೋಷವಾಗಿದೆ. ನಾನು ಮೊದಲು ಭಾರತಕ್ಕಾಗಿ ಆಡಿದ್ದೇನೆ. ನಾನು ಈಗ ಸಾಧಿಸಬೇಕಾದ ವಿಷಯವಲ್ಲ. ನನಗೆ ಇನ್ನೊಂದು ಅವಕಾಶ ಸಿಕ್ಕರೆ ಅದು ನನ್ನ ಅದೃಷ್ಟ(PC-PTI).

ಅಲ್ಲದೆ ತಂಡದಲ್ಲಿ ಅವಕಾಶ ಸಿಗದ ಮೊದಲ ಆಟಗಾರ ನಾನಲ್ಲ, ಮತ್ತು ನಾನು ಖಂಡಿತವಾಗಿಯೂ ಕೊನೆಯವನಲ್ಲ. ಇದು ಆಟದ ಭಾಗ. ಕುಟುಂಬವು ದೊಡ್ಡ ಪಾತ್ರವನ್ನು ವಹಿಸುತ್ತದೆ. ನಾನು ಇರುವಲ್ಲಿ ನನಗೆ ಸಂತೋಷವಾಗಿದೆ. ನಾನು ಮೊದಲು ಭಾರತಕ್ಕಾಗಿ ಆಡಿದ್ದೇನೆ. ನಾನು ಈಗ ಸಾಧಿಸಬೇಕಾದ ವಿಷಯವಲ್ಲ. ನನಗೆ ಇನ್ನೊಂದು ಅವಕಾಶ ಸಿಕ್ಕರೆ ಅದು ನನ್ನ ಅದೃಷ್ಟ(PC-PTI).

5 / 6
ನಾನು ಈಗ ಮಾಡುತ್ತಿರುವುದೆಲ್ಲವೂ ಆಟದ ಮೇಲಿನ ನನ್ನ ಪ್ರೀತಿಯಿಂದಾಗಿ. ನಾನು ಶಿಸ್ತಿನಿಂದ ಇರಬೇಕು ಎಂದು ನನಗೆ ತಿಳಿದಿದೆ. ನಾನು ದೇಶೀಯ ಕ್ರಿಕೆಟ್ ಆಡುತ್ತೇನೆ, ನಾನು UPT20 ಲೀಗ್ ಆಡುತ್ತೇನೆ. ಹಾಗೆಯೇ ಚೇತರಿಸಿಕೊಳ್ಳಲು ಮತ್ತು ರಿಫ್ರೆಶ್ ಆಗಲು ನಾನು ಸಾಕಷ್ಟು ವಿರಾಮಗಳನ್ನು ಸಹ ಪಡೆಯುತ್ತೇನೆ. ನಾನು ಇನ್ನೂ IPL ಮತ್ತು ದೇಶೀಯ ಕ್ರಿಕೆಟ್ ಆಡುತ್ತಿದ್ದೇನೆ ಏಕೆಂದರೆ ನಾನು ಆಟವನ್ನು ಪ್ರೀತಿಸುತ್ತೇನೆ ಎಂದಿದ್ದಾರೆ(PC-PTI).

ನಾನು ಈಗ ಮಾಡುತ್ತಿರುವುದೆಲ್ಲವೂ ಆಟದ ಮೇಲಿನ ನನ್ನ ಪ್ರೀತಿಯಿಂದಾಗಿ. ನಾನು ಶಿಸ್ತಿನಿಂದ ಇರಬೇಕು ಎಂದು ನನಗೆ ತಿಳಿದಿದೆ. ನಾನು ದೇಶೀಯ ಕ್ರಿಕೆಟ್ ಆಡುತ್ತೇನೆ, ನಾನು UPT20 ಲೀಗ್ ಆಡುತ್ತೇನೆ. ಹಾಗೆಯೇ ಚೇತರಿಸಿಕೊಳ್ಳಲು ಮತ್ತು ರಿಫ್ರೆಶ್ ಆಗಲು ನಾನು ಸಾಕಷ್ಟು ವಿರಾಮಗಳನ್ನು ಸಹ ಪಡೆಯುತ್ತೇನೆ. ನಾನು ಇನ್ನೂ IPL ಮತ್ತು ದೇಶೀಯ ಕ್ರಿಕೆಟ್ ಆಡುತ್ತಿದ್ದೇನೆ ಏಕೆಂದರೆ ನಾನು ಆಟವನ್ನು ಪ್ರೀತಿಸುತ್ತೇನೆ ಎಂದಿದ್ದಾರೆ(PC-PTI).

6 / 6
Follow Us
ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಕ್ಷ್ಣ’ ನಟಿ ಹೇಳಿದ್ದೇನು
ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಕ್ಷ್ಣ’ ನಟಿ ಹೇಳಿದ್ದೇನು
‘ರಾಮಾಯಣ’ದಲ್ಲಿ ಯಶ್ ಲುಕ್, ಚಿತ್ರ ಸಾಹಿತಿ ಪ್ರಹ್ಲಾದ್ ವಿಶ್ಲೇಷಣೆ
‘ರಾಮಾಯಣ’ದಲ್ಲಿ ಯಶ್ ಲುಕ್, ಚಿತ್ರ ಸಾಹಿತಿ ಪ್ರಹ್ಲಾದ್ ವಿಶ್ಲೇಷಣೆ
ಗುಡ್ಡ ಕುಸಿತ: ದುರಂತದ ಭಯಾನಕ ಕ್ಷಣವನ್ನು ಬಿಚ್ಚಿಟ್ಟಿ ಪ್ರತ್ಯಕ್ಷದರ್ಶಿ
ಗುಡ್ಡ ಕುಸಿತ: ದುರಂತದ ಭಯಾನಕ ಕ್ಷಣವನ್ನು ಬಿಚ್ಚಿಟ್ಟಿ ಪ್ರತ್ಯಕ್ಷದರ್ಶಿ
ಡ್ಯಾಂ ಸುರಕ್ಷತೆಯ ಹಿತದೃಷ್ಟಿಯಿಂದ ನೀರು ಬಿಟ್ಟಿದ್ದೇವೆ: ಡಿಕೆಶಿ ಸ್ಪಷ್ಟನೆ
ಡ್ಯಾಂ ಸುರಕ್ಷತೆಯ ಹಿತದೃಷ್ಟಿಯಿಂದ ನೀರು ಬಿಟ್ಟಿದ್ದೇವೆ: ಡಿಕೆಶಿ ಸ್ಪಷ್ಟನೆ
ಕರ್ನಾಟಕ ಬಂದ್​ನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದ ವಾಟಾಳ್
ಕರ್ನಾಟಕ ಬಂದ್​ನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದ ವಾಟಾಳ್
ಧಾರಾಕಾರ ಮಳೆಗೆ ನಲುಗಿದ ಮಲೆನಾಡು: ರೈಲ್ವೆ ಹಳಿ ಮೇಲೆ ಕುಸಿದ ಗುಡ್ಡ
ಧಾರಾಕಾರ ಮಳೆಗೆ ನಲುಗಿದ ಮಲೆನಾಡು: ರೈಲ್ವೆ ಹಳಿ ಮೇಲೆ ಕುಸಿದ ಗುಡ್ಡ
ಉದ್ಯೋಗದ ಕನಸು: ಅಮ್ಮನ ಜತೆ ಪರೀಕ್ಷೆಗೆ ಬಂದ ಕಂದನಿಗೆ ಲಾಲಿ ಹಾಡಿದ ಪೊಲೀಸ್ರು
ಉದ್ಯೋಗದ ಕನಸು: ಅಮ್ಮನ ಜತೆ ಪರೀಕ್ಷೆಗೆ ಬಂದ ಕಂದನಿಗೆ ಲಾಲಿ ಹಾಡಿದ ಪೊಲೀಸ್ರು
ಕಾವೇರಿ ವಿವಾದ: ಊರ್ವಶಿ ಚಿತ್ರಮಂದಿರದಲ್ಲಿ ‘ಜನ ನಾಯಗನ್’ ಬದಲಿಗೆ ‘ಕರಾವಳಿ’
ಕಾವೇರಿ ವಿವಾದ: ಊರ್ವಶಿ ಚಿತ್ರಮಂದಿರದಲ್ಲಿ ‘ಜನ ನಾಯಗನ್’ ಬದಲಿಗೆ ‘ಕರಾವಳಿ’
ನಶಾ ಮುಕ್ತ ಭಾರತ ಅಭಿಯಾನ, ಪ್ರಧಾನಿ ಮೋದಿ ಏನಂದ್ರು ನೋಡಿ
ನಶಾ ಮುಕ್ತ ಭಾರತ ಅಭಿಯಾನ, ಪ್ರಧಾನಿ ಮೋದಿ ಏನಂದ್ರು ನೋಡಿ
ಕಬಿನಿ ಜಲಾಶಯ ಸಂಪೂರ್ಣ ಭರ್ತಿ
ಕಬಿನಿ ಜಲಾಶಯ ಸಂಪೂರ್ಣ ಭರ್ತಿ