ಬೆಂಕಿಯನ್ನು ದೇವರು ಅಂತೀರಲ್ಲ? ಬೆಂಕಿ ಜತೆ ಸ್ವಲ್ಪ ಹೊತ್ತು ಮಲಗ್ತೀರಾ? ನಿಜಗುಣಾನಂದಶ್ರೀ ಪ್ರಶ್ನೆ

ಬೆಂಕಿಯನ್ನು ದೇವರು ಅಂತಿರಲ್ಲ? ದೇವರು ಎಂದು ಅದರ ಜೊತೆ ಸ್ವಲ್ಪ ಹೊತ್ತು ಮಲಗುತ್ತೀರಾ? ಎಂದು ಸನಾತನ ಸಂಸ್ಕೃತಿ, ನಂಬಿಕೆ ಬಗ್ಗೆ ತೋಂಟದ ಶ್ರೀ ನಿಜಗುಣಾನಂದ ಸ್ವಾಮೀಜಿ ಪ್ರಶ್ನೆ ಮಾಡಿದ್ದಾರೆ. ಈ ಮೂಲಕ ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಬೆಂಕಿಯನ್ನು ದೇವರು ಅಂತೀರಲ್ಲ? ಬೆಂಕಿ ಜತೆ ಸ್ವಲ್ಪ ಹೊತ್ತು ಮಲಗ್ತೀರಾ? ನಿಜಗುಣಾನಂದಶ್ರೀ ಪ್ರಶ್ನೆ
ನಿಜಗುಣಾನಂದ ಸ್ವಾಮೀಜಿ
Edited By:

Updated on: May 13, 2024 | 5:10 PM

ಧಾರವಾಡ, (ಮೇ 13): ಬೆಂಕಿಯನ್ನು ದೇವರು ಅಂತಿರಲ್ಲ? ದೇವರು ಎಂದು ಅದರ ಜೊತೆ ಸ್ವಲ್ಪ ಹೊತ್ತು ಮಲಗುತ್ತೀರಾ? ಎಂದು ಸನಾತನ ಸಂಸ್ಕೃತಿ, ನಂಬಿಕೆ ಬಗ್ಗೆ ತೋಂಟದ ಶ್ರೀ ನಿಜಗುಣಾನಂದ ಸ್ವಾಮೀಜಿ (nijagunananda swamiji) ಪ್ರಶ್ನೆ ಮಾಡಿದ್ದಾರೆ. ಇಂದು (ಮೇ 13) ಧಾರವಾಡದಲ್ಲಿ ನಡೆದ ‘ಬಸವಣ್ಣ-ಸಾಂಸ್ಕೃತಿಕ ನಾಯಕ’ ಕುರಿತಾದ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಮಾತನಾಡಿದ ಸ್ವಾಮೀಜಿ, ಬಸವಣ್ಣನವರಿಗೆ ಎಲ್ಲಿಯೂ ಕೆಟ್ಟವರು ಕಾಣಲಿಲ್ಲ. ಆತನ ಸಂಸ್ಕೃತಿ, ಸಂಸ್ಕಾರ ಯಾರಿಗೂ ಕೊಡಲು ಆಗುವುದಿಲ್ಲ. ಕಾಣುವ ಮನುಷ್ಯರನ್ನು ಪ್ರೀತಿ‌ ಮಾಡಲಾರದವರು. ಕಾಣದೇ ಇರೋ ದೇವರನ್ನು ಪ್ರೀತಿ ಮಾಡಲು ಸಾಧ್ಯವೇ? ಎಂದು ಬಸವೇಶ್ವರರ ವಿಚಾರ ಹೇಳುತ್ತ ದೇವರ ಬಗ್ಗೆ ಪ್ರಶ್ನಿಸಿದ್ದಾರೆ.

ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ನಡೆದ ‘ಬಸವಣ್ಣ-ಸಾಂಸ್ಕೃತಿಕ ನಾಯಕ’ ಕುರಿತಾದ ವಿಚಾರ ಸಂಕಿರಣದಲ್ಲಿ ಮಾತನಾಡಿರುವ ಶ್ರೀ ನಿಜಗುಣಾನಂದ ಸ್ವಾಮೀಜಿ , ಬಸವಣ್ಣನವರಿಗೆ ಎಲ್ಲಿಯೂ ಕೆಟ್ಟವರು ಕಾಣಲಿಲ್ಲ. ಆತನ ಸಂಸ್ಕೃತಿ. ಸಂಸ್ಕಾರ ಯಾರಿಗೂ ಕೊಡಲು ಆಗುವುದಿಲ್ಲ. ಕಾಣುವ ಮನುಷ್ಯರನ್ನು ಪ್ರೀತಿ‌ ಮಾಡಲಾರದವರು. ಕಾಣದೇ ಇರೋ ದೇವರನ್ನು ಪ್ರೀತಿ ಮಾಡಲು ಸಾಧ್ಯವೇ? ಯಾವುದು ದೇವರು? ಎಂದು ಪ್ರಶ್ನಿಸಿದರು.

ಪ್ರಾಣಿದಯವಾದ ಸಂಸ್ಕೃತಿ ಬಸವಣ್ಣನವರದ್ದು. ಹಬ್ಬ-ಹರಿದಿನಗಳಲ್ಲಿ ಕುರಿ, ಕೋಣ ತಂದಿಟ್ಟು ಕಡಿಯುತ್ತಿದ್ದರು. ಆಗ ಬಸವಣ್ಣ ಯಾವ ಸಂಸ್ಕೃತಿ‌ ನಿಮ್ಮದು? ಎಂದು ಕೇಳಿದ್ದರು ದೇವರ ಹೆಸರಿನಲ್ಲಿ ಪ್ರಾಣಿ ವಧೆ ಮಾಡುವುದು ನಿಮ್ಮ ಸಂಸ್ಕೃತಿಯೇ? ದೇವರ ಹೆಸರಲ್ಲಿ ಹೋಮ ಮಾಡಿ ತಿನ್ನುವ ಪದಾರ್ಥ ಹಾಕುತ್ತಿರಲ್ಲ? ಏನಿದು ನಿಮ್ಮ ಸಂಸ್ಕೃತಿ? ಬಸವಣ್ಣ ಸುಮ್ಮನೆ ಸಾಂಸ್ಕೃತಿಕ ನಾಯಕ ಅಲ್ಲ. ಅವರನ್ನು ದಕ್ಕಿಸಿಕೊಂಡು ಮಾತನಾಡಲು ಗಟ್ಟಿತನ ಬೇಕು. ಬೆಂಕಿಯನ್ನು ದೇವರೆನ್ನುವುದು ನಿಮ್ಮ ಸಂಸ್ಕೃತಿಯಾ? ಬೆಂಕಿಗೆ ತುಪ್ಪ ಹಾಕುವುದು ನಿಮ್ಮ ಸಂಸ್ಕೃತಿಯಾ? ಜನರನ್ನು ಯಾವ ಜಾತಿ ಎಂದು ಕೇಳುವುದು ಸಂಸ್ಕೃತಿಯಾ? ಇದೆಲ್ಲವೂ ನನ್ನ ಮಾತಲ್ಲ. ಬಸವಣ್ಣನವರ ಹೇಳಿದ ಮಾತು. ಇದನ್ನು ಬಸವಣ್ಣ ಕೇಳಿದ್ದಾನೆ. ನಾ ಹೇಳಿದೆ ಅಂತಾ ನನ್ನ ಮೇಲೆ ಸಿಟ್ಟಾಗಬೇಡಿ ಎಂದರು.

ಬೆಂಕಿಯನ್ನು ದೇವರು ಅಂತಿರಲ್ಲ. ದೇವರು ಅಂತಾ ಬೆಂಕಿಯ ಮೇಲೆ ಓಡ್ತಾರೆ. ಬೆಂಕಿಯನ್ನು ದೇವರು ಅಂತಾ ಓಡ್ತಿರಲ್ವಾ? ಸ್ವಲ್ಪ‌ ಹೊತ್ತು ಮಲಗಿ‌ ನೋಡೋಣಾ? ಇವತ್ತು ಬೆಂಕಿ ಮತ್ತು ದೇವರುಗಳ‌ ಬಗ್ಗೆ ವಿಚಾರ ಸಂಕಿರಣ ಆಗಬೇಕಿದೆ. ಆದರೆ ದೇವರ ಬಗ್ಗೆ ವಿಚಾರ ಸಂಕಿರಣ ಎಲ್ಲಿ ಆಗುತ್ತದೆ? ಎಂದು ಹೇಳಿದರು.

ಸ್ವಾಮೀಜಿಗಳ ಮಾತಿಗೂ ಇದೆಯಂತೆ ನೀತಿ ಸಂಹಿತೆ ಅಡ್ಡಿ. ನಮ್ಮ ಮಾತು ಸ್ವಲ್ಪ‌ ಕಹಿ. ನೀತಿ ಸಂಹಿತೆ ಇರೋದಿಂದ್ರ ಸ್ವಲ್ಪ ಎಚ್ಚರ ವಹಿಸಬೇಕಾಗುತ್ತದೆ. ಮಾತಿಗೆ ಬರುವ ಪೂರ್ವದಲ್ಲಿಯೇ ಕವಿವಿ ಕುಲಪತಿ ಚೀಟಿ ಸಹ ತೋರಿಸಿದ್ದಾರೆ. ನೀತಿ ಸಂಹಿತೆ ಇದೆ ಎಂದು ಚೀಟಿ ತೋರಿಸಿದ್ದಾರೆ. ನಾವು ನೀತಿ ಸಂಹಿತೆಯೊಳಗೆ ಬದುಕಬೇಕಾಗಿದೆ. ಆದರೆ ಪ್ರಭು ಪರಂಪರೆಯಲ್ಲಿ ನೀತಿ ಸಂಹಿತೆ ಮೀರಿ ಸಮಾಜ ಕಟ್ಟಿದವರು ಬಸವಣ್ಣ. ಅದನ್ನು ಇವತ್ತು ಹೇಳ ಬೇಕಾಗಿದೆ. ಸಮಸಮಾಜದಲ್ಲಿ ನಾವು ಬದಕಬೇಕಿದೆ ಎಂದು ತಿಳಿಸಿದರು.

ಮೂಢನಂಬಿಕೆ, ಅಂಧಾನುಶ್ರದ್ಧೆ ಬಿಟ್ಟು ನಡೆಯೋಣ. ನಾನು ಹೆಚ್ಚು ಮಾತನಾಡುವುದಿಲ್ಲ. ಏಕೆಂದರೆ ನೀತಿ ಸಂಹಿತೆ ಇದೆ. ಇವತ್ತಿನ ರಾಜಕಾರಣಿಗಳನ್ನು ನೋಡಿದರೆ ಏನೂ ಮಾತನಾಡಬಾರದು ಅನ್ಸುತ್ತೆ. ಆದರೆ ಬಸವಣ್ಣ ಅಂದ್ರೆ ರಾಜಕಾರಣದ ಬಗ್ಗೆ ಮಾತನಾಡಬೇಕಿದೆ. ಬಸವಣ್ಣ ಅಂದ್ರೆ ದಲಿತೋದ್ಧಾರಕ ಹೇಗೆ ಎಂದು ಮಾತನಾಡಬೇಕಿದೆ. ಈ ಜಗತ್ತಿಗೆ ಸಂಸ್ಕೃತಿ ಕಲಿಸಿದವರು ದೀನರು, ದಲಿತರು, ದುಃಖಿತರು ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Narasimha Murti Pyati

ಕೊಪ್ಪಳದವರಾದ ನರಸಿಂಹಮೂರ್ತಿ ಪ್ಯಾಟಿ ಸದ್ಯ ಟಿವಿ9 ವಾಹಿನಿಯ ಧಾರವಾಡ ಜಿಲ್ಲಾ ಹಿರಿಯ ವರದಿಗಾರರು. ಮೆಕ್ಯಾನಿಕಲ್ ಇಂಜನಿಯರಿಂಗ್ ಮುಗಿಸಿರುವ ಇವರು, ಕೆಲವರ್ಷ ಕೊಪ್ಪಳ ಜಿಲ್ಲೆಯಲ್ಲಿ ಐಟಿಐ ಕಾಲೇಜಿನ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ್ದಾರೆ. 23 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯರಾಗಿದ್ದು, ಮೊದಲು ಕೊಪ್ಪಳ ಜಿಲ್ಲೆ, ನಂತರ ಧಾರವಾಡ ಜಿಲ್ಲಾ ಹಿರಿಯ ವರದಿಗಾರರಾಗಿ ಕಳೆದ 17 ವರ್ಷಗಳಿಂದ ಟಿವಿ9 ವಾಹಿನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವರದಿಗಾರಿಕೆಯ ಜೊತೆಗೆ ಪ್ರಬಂಧ ರಚನೆ ಇವರ ಆಸಕ್ತಿಯಾಗಿದ್ದು ಈಗಾಗಲೇ 'ಬ್ರಾಹ್ಮಣ ಕುರುಬ' ಮತ್ತು 'ಕೃಷ್ಣಾಚಾರ್ @ ಕಿಷ್ಕಿಂಧಾ ಬಾರ್' ಪ್ರಬಂಧ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಅವರ ಪ್ರಬಂಧಗಳು ಕಥನದ ಚೆಲುವು, ಸೊಬಗು ಮತ್ತು ಅರ್ಥವ್ಯಾಪ್ತಿಯಿಂದಾಗಿ ಓದುಗನ ಮನ ತಣಿಸುತ್ತವೆ ಎಂದು ವಿಮರ್ಶಕರು ಗುರುತಿಸಿದ್ದಾರೆ. ಸಾವಯವ ಹಾಗೂ ಅರಣ್ಯ ಕೃಷಿಕರೂ ಆಗಿರುವ ನರಸಿಂಹಮೂರ್ತಿ ಪ್ಯಾಟಿ ಸಂಗೀತ, ಟ್ರೆಕ್ಕಿಂಗ್, ಪ್ರವಾಸಗಳಲ್ಲೂ ಆಸಕ್ತಿ ಹೊಂದಿದ್ದಾರೆ.

Read More
Follow Us