AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದ್ಯದ ನಶೆಯಲ್ಲಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬೆಂಗಳೂರಿನಲ್ಲಿ ವ್ಯಕ್ತಿಯ ಬರ್ಬರ ಕೊಲೆ

ಮೃತ ರವಿ ಮತ್ತು ರಾಜನ್ ಒಟ್ಟಿಗೆ ಕಟ್ಟಡದಲ್ಲಿ ಕಂಬಿ ಕೆಲಸ ಮಾಡುತ್ತಿದ್ದರು. ಸದ್ಯ ಸ್ಥಳಕ್ಕೆ ಮಾದನಾಯಕನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಬಳಿಕ ಎಸ್ಕೇಪ್ ಆದ ಆರೋಪಿ ರಾಜನ್ಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.

ಮದ್ಯದ ನಶೆಯಲ್ಲಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬೆಂಗಳೂರಿನಲ್ಲಿ ವ್ಯಕ್ತಿಯ ಬರ್ಬರ ಕೊಲೆ
ಮಾದನಾಯಕನಹಳ್ಳಿ ಪೊಲೀಸ್​ ಠಾಣೆ
sandhya thejappa
|

Updated on: May 24, 2021 | 12:49 PM

Share

ನೆಲಮಂಗಲ: ಕುಡಿದ ಮತ್ತಿನಲ್ಲಿ ವ್ಯಕ್ತಿಯೊರ್ವನ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಮಾಚೋಹಳ್ಳಿಯಲ್ಲಿ ನಡೆದಿದೆ. 42 ವರ್ಷದ ರವಿಕುಮಾರ್ ಹತ್ಯೆಯಾದ ವ್ಯಕ್ತಿ. ರವಿಕುಮಾರ್ ತಮಿಳುನಾಡು ತಿರುವಣ್ಣಾಮಲೈ ಮೂಲದವರಾಗಿದ್ದು, ಸೇಲಂ ಮೂಲದ ರಾಜನ್ ಎಂಬುವನಿಂದ ಹತ್ಯೆಕ್ಕೊಳಗಾಗಿದ್ದಾರೆ. ಮೃತ ರವಿ ಮತ್ತು ರಾಜನ್ ಒಟ್ಟಿಗೆ ಕಟ್ಟಡದಲ್ಲಿ ಕಂಬಿ ಕೆಲಸ ಮಾಡುತ್ತಿದ್ದರು. ಸದ್ಯ ಸ್ಥಳಕ್ಕೆ ಮಾದನಾಯಕನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಬಳಿಕ ಎಸ್ಕೇಪ್ ಆದ ಆರೋಪಿ ರಾಜನ್ಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.

2 ಬೈಕ್​ಗಳ ಮಧ್ಯೆ ಡಿಕ್ಕಿ, ಓರ್ವ ಸವಾರ ದುರ್ಮರಣ ಚಿಕ್ಕಬಳ್ಳಾಪುರ: ಎರಡು ಬೈಕ್​ಗಳ ನಡುವೆ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ರಮೇಶ್ (47) ಎಂಬುವವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಘಟನೆ ಜಿಲ್ಲೆಯ ಚಿಂತಾಮಣಿ ಟೌನ್​ನಲ್ಲಿ ಸಂಭವಿಸಿದೆ. ಮೃತ ರಮೇಶ್ ಪತ್ನಿ ಸರೋಜಮ್ಮ ಸ್ಥಿತಿ ಗಂಭೀರವಾಗಿದೆ.

ಸರಣಿ ಅಪಘಾತ ಬೆಂಗಳೂರಿನ ತುಮಕೂರು ರಸ್ತೆ ಎಸ್ಆರ್ಎಸ್ ಜಂಕ್ಷನ್ ಬಳಿ ಸರಣಿ ಅಪಘಾತವಾಗಿದೆ. ಬ್ರೇಕ್ ಫೇಲ್ ಆಗಿ ಲಾರಿ ಪೊಲೀಸ್ ಜೀಪ್ ಮತ್ತು ಕಾರಿಗೆ ಗುದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಬ್ರೇಕ್ ಫೇಲ್ ನಿಂದ ಹಿಂಬದಿಯಿಂದ ಲಾರಿ ಗುದ್ದಿದ ಪರಿಣಾಮ ಪೊಲೀಸ್ ಜೀಪ್ ಸೇರಿ 4 ವಾಹನಗಳು ಜಖಂ ಆಗಿವೆ.

ಇದನ್ನೂ ಓದಿ

ಕೊರೊನಾ ಮುಕ್ತ ಗ್ರಾಮ.. ಸಪ್ತದೇವತೆಗಳ ಕೃಪೆಯಿಂದ ಎರಡು ವರ್ಷಗಳಿಂದ ಈ ಗ್ರಾಮಕ್ಕೆ ಕೊರೊನಾ ಎಂಟ್ರಿನೇ ಕೊಟ್ಟಿಲ್ಲ! ಏನದರ ಮಹಾತ್ಮೆ?

ಉತ್ತರ ಕನ್ನಡದ ಖಾಕಿಗೆ ಕಾಡುತ್ತಿದೆ ಕೊರೊನಾ ಆತಂಕ; ಲಾಕ್​ಡೌನ್​ ಜಾರಿ ನಂತರ 251 ಪೊಲೀಸರಲ್ಲಿ ಸೋಂಕು ಧೃಡ

(Drink a alcohol and then man has been murdered at Bengaluru)