AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಮುಕ್ತ ಗ್ರಾಮ.. ಸಪ್ತದೇವತೆಗಳ ಕೃಪೆಯಿಂದ ಎರಡು ವರ್ಷಗಳಿಂದ ಈ ಗ್ರಾಮಕ್ಕೆ ಕೊರೊನಾ ಎಂಟ್ರಿನೇ ಕೊಟ್ಟಿಲ್ಲ! ಏನದರ ಮಹಾತ್ಮೆ?

ಗ್ರಾಮಕ್ಕೆ ಕೊರೊನಾ ಬರದೇ ಇರಲು ಗ್ರಾಮ ದೇವರೇ ಕಾರಣ ಎಂದು ಇಲ್ಲಿನ ಗ್ರಾಮಸ್ಥರು ತಿಳಿಸಿದ್ದಾರೆ. ಗ್ರಾಮದ ದ್ಯಾಮವ್ವ, ದುರ್ಗವ್ವ, ಬಸವಣ್ಣ,ರಂಗನಾಥ, ಹನುಮಂತ, ನಾರಾಯಣ, ವೀರಭದ್ರೇಶ್ವರ ಸೇರಿದಂತೆ ಸಪ್ತದೇವರುಗಳೇ ಕೊರೊನಾವನ್ನು ಕಟ್ಟಿ ಹಾಕಿದ್ದಾರೆ ಎಂದು ಗ್ರಾಮದ ಹಿರಿಯರು ಅಭಿಪ್ರಾಯ ಹೊರ ಹಾಕಿದ್ದಾರೆ.

ಕೊರೊನಾ ಮುಕ್ತ ಗ್ರಾಮ.. ಸಪ್ತದೇವತೆಗಳ ಕೃಪೆಯಿಂದ ಎರಡು ವರ್ಷಗಳಿಂದ ಈ ಗ್ರಾಮಕ್ಕೆ ಕೊರೊನಾ ಎಂಟ್ರಿನೇ ಕೊಟ್ಟಿಲ್ಲ! ಏನದರ ಮಹಾತ್ಮೆ?
ಬಾಗಲಕೋಟೆ ತಾಲ್ಲೂಕಿನ ನೀರಲಕೇರಿ ಗ್ರಾಮ
ಆಯೇಷಾ ಬಾನು
|

Updated on: May 24, 2021 | 12:03 PM

Share

ಬಾಗಲಕೋಟೆ: ಮಹಾಮಾರಿ ಕೊರೊನಾ ವೈರಸ್ ಇಡೀ ದೇಶವನ್ನು ಆವರಿಸಿದೆ. ಕಣ್ಣಿಗೆ ಕಾಣಿಸದಂತೆ ಜನರ ದೇಹ ಸೇರಿ ಅವರನ್ನು ಹಿಂಸಿಸಿ ನರಳಿ ನರಳಿ ಸಾಯುವಂತೆ ಮಾಡಿದೆ. ಆದರೆ ಇಲ್ಲೊಂದು ಗ್ರಾಮವಿದೆ. ಈ ಗ್ರಾಮಕ್ಕೆ ಇದುವರೆಗೂ ಕೊರೊನಾ ಎಂಟ್ರಿ ಕೊಟ್ಟಿಲ್ಲ. ಕಳೆದ ಎರಡು ವರ್ಷಗಳಿಂದ ಈ ಗ್ರಾಮ ಹೆಮ್ಮಾರಿ ಕೊರೊನಾವನ್ನು ಮೆಟ್ಟಿನಿಂತು ಮಾದರಿ ಗ್ರಾಮವಾಗಿದೆ.

ಬಾಗಲಕೋಟೆ ತಾಲ್ಲೂಕಿನ ನೀರಲಕೇರಿ ಗ್ರಾಮದಲ್ಲಿ ಕಳೆದ ಎರಡು ವರ್ಷದಿಂದ ಗ್ರಾಮದ ಒಬ್ಬ ಗ್ರಾಮಸ್ಥರಿಗೂ ಕೊರೊನಾ ಸೋಂಕು ತಗುಲಿಲ್ಲವಂತೆ. ವಯಸ್ಸಾದವರು, ಮಕ್ಕಳು, ಯುವಕರೂ ಯಾರಿಗೂ ಕೊರೊನಾ ತಟ್ಟಿಲ್ಲ. ನಾವು ಬೇರೆ ಬೇರೆ ಗ್ರಾಮಗಳಿಗೆ ಹೋಗಿ ಬರುತ್ತೇವೆ ಆದ್ರೆ ನಮಗೆ ಕೊರೊನಾ ಬರೊಲ್ಲ ಎಂದು ಗ್ರಾಮದ ಜನ ತಿಳಿಸಿದ್ದಾರೆ. ಮಹಾಮಾರಿ ಕೊರೊನಾ ಯಾವುದೇ ಸುಳಿವು ನೀಡದೆಯೇ ಜನರ ದೇಹ ಸೇರಿ ಅವರನ್ನ ಮೃತ್ಯಕೂಪಕ್ಕೆ ತಳ್ಳುತ್ತಿದೆ. ಆದರೆ ಈ ಗ್ರಾಮಕ್ಕೆ ಮಾತ್ರ ಕೊರೊನಾ ಎಂಟ್ರಿ ಕೊಡಲು ಭಯ ಪಡುತ್ತಿದೆಯಂತೆ.

bagalkot neralakere

ಗ್ರಾಮದ ದೇವರು

ಗ್ರಾಮಕ್ಕೆ ಸುರಕ್ಷಾ ಕವಚವಾಗಿದ್ದಾರಾ ಗ್ರಾಮದೇವರು? ಗ್ರಾಮಕ್ಕೆ ಕೊರೊನಾ ಬರದೇ ಇರಲು ಗ್ರಾಮ ದೇವರೇ ಕಾರಣ ಎಂದು ಇಲ್ಲಿನ ಗ್ರಾಮಸ್ಥರು ತಿಳಿಸಿದ್ದಾರೆ. ಗ್ರಾಮದ ದ್ಯಾಮವ್ವ, ದುರ್ಗವ್ವ, ಬಸವಣ್ಣ,ರಂಗನಾಥ, ಹನುಮಂತ, ನಾರಾಯಣ, ವೀರಭದ್ರೇಶ್ವರ ಸೇರಿದಂತೆ ಸಪ್ತದೇವರುಗಳೇ ಕೊರೊನಾವನ್ನು ಕಟ್ಟಿ ಹಾಕಿದ್ದಾರೆ ಎಂದು ಗ್ರಾಮದ ಹಿರಿಯರು ಅಭಿಪ್ರಾಯ ಹೊರ ಹಾಕಿದ್ದಾರೆ.

ಈ ಗ್ರಾಮದ ದೇವರಿಗೆ ವಾರಕೊಮ್ಮೆ ಪೂಜೆ, ಪುನಸ್ಕಾರ ನೆರವೇರಿಸಲಾಗುತ್ತೆ. ವಾರಕ್ಕೊಮ್ಮೆ ಊರ ಮಂದಿ ದೇವಸ್ಥಾನದ ಹೊಸ್ತಿಲಿಗೆ ನೀರು ಹಾಕಿ ಪೂಜೆ ಮಾಡುತ್ತಾರೆ. ಊರ ದೇವತೆಗಳ ಕೃಪೆಯಿಂದಾಗಿ ಕೊವಿಡ್ ಮಾರಿ ನಮ್ಮೂರ ಕಡೆ ಸುಳಿದಿಲ್ಲ. ನಮ್ಮೂರ ದೇವರುಗಳೇ ನಮಗೆ ರಕ್ಷೆ ಎಂದು ದೇವರ ಮೇಲಿನ ನಂಬಿಕೆಯಲ್ಲಿ ನೀರಲಕೇರಿ ಗ್ರಾಮದ ಜನರು ಕೊರೊನಾ ಭಯದಿಂದ ಮುಕ್ತರಾಗಿ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.

ಆದರೆ ದೇವರ ಮೇಲಿನ ನಂಬಿಕೆಯೋ ಕಾಕತಾಳಿಯವೊ, ಕೊರೊನಾದ ಎರಡು ಅಲೆಗಳಿಂದಲೂ ಈ ಗ್ರಾಮ ಕೊರೊನಾ ಮುಕ್ತವಾಗಿದೆ. ಇಲ್ಲಿ ಒಬ್ಬರಿಗೂ ಕೊರೊನಾ ಬಂದಿಲ್ಲ. ವಲಸಿಗರು ಬಂದವರು ಇದ್ದಾರೆ, ದಿನವೂ ನಗರಕ್ಕೂ ಹೋಗಿ ಬರ್ತಾರೆ. ಸದ್ಯ ಯಾವುದೇ ಸಮಸ್ಯೆಯಾಗಲಿ ಸಾವಾಗಲಿ ಕೊರೊನಾದಿಂದ ಸಂಭವಿಸಿಲ್ಲ.

bagalkot neralakere

ಗ್ರಾಮದ ದೇವಸ್ಥಾನ

ಇದನ್ನೂ ಓದಿ: ಕೊರೊನಾ ಮಹಾಮಾರಿಯನ್ನು ಮೆಟ್ಟಿನಿಂತು ಮಾದರಿಯಾದ ಒಡಿಶಾದ ಗ್ರಾಮ, ಇದುವರೆಗೂ ಒಂದೇ ಒಂದು ಪ್ರಕರಣವೂ ಇಲ್ಲ

Follow Us
Ayesha Banu
Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Read More
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್
ಕಾಣೆಯಾದ ಹುಡುಗಿಯನ್ನು ಹುಡುಕಲು ಗಾಡಿಯಲ್ಲಿ ಡೀಸೆಲ್ ಇಲ್ಲ ಎಂದ ಪೊಲೀಸ್
ಕಾಣೆಯಾದ ಹುಡುಗಿಯನ್ನು ಹುಡುಕಲು ಗಾಡಿಯಲ್ಲಿ ಡೀಸೆಲ್ ಇಲ್ಲ ಎಂದ ಪೊಲೀಸ್
ಕೈದಿಗಳಿಗೆ ಅಲೋಕ್ ಕುಮಾರ್ ಬಿಗ್ ಶಾಕ್: ಜೈಲುಗಳಲ್ಲಿ ಭಾರಿ ಬದಲಾವಣೆ
ಕೈದಿಗಳಿಗೆ ಅಲೋಕ್ ಕುಮಾರ್ ಬಿಗ್ ಶಾಕ್: ಜೈಲುಗಳಲ್ಲಿ ಭಾರಿ ಬದಲಾವಣೆ
3 ದಿನಗಳಿಂದ ವಿದ್ಯುತ್​​ ಕಡಿತ: ಹೆಸ್ಕಾಂ ವಿರುದ್ಧ ಸಾರ್ವಜನಿಕರ ಪ್ರತಿಭಟನೆ
3 ದಿನಗಳಿಂದ ವಿದ್ಯುತ್​​ ಕಡಿತ: ಹೆಸ್ಕಾಂ ವಿರುದ್ಧ ಸಾರ್ವಜನಿಕರ ಪ್ರತಿಭಟನೆ
ಹಿರಿಯೂರು ಉಪಚುನಾವಣೆ ಮೇಲೆ ಜೆಡಿಎಸ್​​ ಕಣ್ಣು: ದಳಪತಿಗಳ ಲೆಕ್ಕಾಚಾರವೇನು?
ಹಿರಿಯೂರು ಉಪಚುನಾವಣೆ ಮೇಲೆ ಜೆಡಿಎಸ್​​ ಕಣ್ಣು: ದಳಪತಿಗಳ ಲೆಕ್ಕಾಚಾರವೇನು?