ಸುಳ್ವಾಡಿ ಪ್ರಸಾದ ದುರಂತ: ಶೀಘ್ರವೇ ಮಾರಮ್ಮ ದೇವಾಲಯ ಬಾಗಿಲು ತೆರೆಸುವ ಭರವಸೆ

ಚಾಮರಾಜನಗರ: ಸುಳ್ವಾಡಿ ಮಾರಮ್ಮ ದೇವಾಲಯದ ವಿಷ ಪ್ರಸಾದ ದುರಂತದಿಂದ ಇಡೀ ರಾಜ್ಯದಲ್ಲಿ ಪ್ರಸಾದ ಕೊಡುವ ಮುನ್ನ ಪರೀಕ್ಷೆ ಮಾಡುವ ದುಸ್ಥಿತಿ ಬಂದಿದೆ ಎಂದು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ವಿಷಾದ ವ್ಯಕ್ತಪಡಿಸಿದರು. ಹನೂರು ತಾಲೂಕಿನ ಸುಳ್ವಾಡಿ ಗ್ರಾಮದಲ್ಲಿರುವ ಮಾರಮ್ಮ ದೇವಾಲಯಕ್ಕೆ ಇಂದು ಸಚಿವ ಎಸ್.ಸುರೇಶ್ ಕುಮಾರ್ ಇಂದು ಭೇಟಿ ನೀಡಿದರು. ಸಚಿವರ ಭೇಟಿ ವೇಳೆ ಮುಚ್ಚಿರುವ ದೇವಾಲಯವನ್ನು ತೆರೆಸುವಂತೆ ಭಕ್ತರು ಆಗ್ರಹಿಸಿದರು. ಈ ವೇಳೆ ದೇವಾಲಯ ತೆರೆಯದೇ ಇರುವುದರಿಂದ ಮಾರಮ್ಮಗೆ ಪೂಜೆ ಸಲ್ಲಿಸಲು ಆಗುತ್ತಿಲ್ಲ ಎಂದು ಸಚಿವರಿಗೆ […]

ಸುಳ್ವಾಡಿ ಪ್ರಸಾದ ದುರಂತ: ಶೀಘ್ರವೇ ಮಾರಮ್ಮ ದೇವಾಲಯ ಬಾಗಿಲು ತೆರೆಸುವ ಭರವಸೆ
ಸಾಧು ಶ್ರೀನಾಥ್​

Updated on: Nov 19, 2019 | 2:56 PM

ಚಾಮರಾಜನಗರ: ಸುಳ್ವಾಡಿ ಮಾರಮ್ಮ ದೇವಾಲಯದ ವಿಷ ಪ್ರಸಾದ ದುರಂತದಿಂದ ಇಡೀ ರಾಜ್ಯದಲ್ಲಿ ಪ್ರಸಾದ ಕೊಡುವ ಮುನ್ನ ಪರೀಕ್ಷೆ ಮಾಡುವ ದುಸ್ಥಿತಿ ಬಂದಿದೆ ಎಂದು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ವಿಷಾದ ವ್ಯಕ್ತಪಡಿಸಿದರು.

ಹನೂರು ತಾಲೂಕಿನ ಸುಳ್ವಾಡಿ ಗ್ರಾಮದಲ್ಲಿರುವ ಮಾರಮ್ಮ ದೇವಾಲಯಕ್ಕೆ ಇಂದು ಸಚಿವ ಎಸ್.ಸುರೇಶ್ ಕುಮಾರ್ ಇಂದು ಭೇಟಿ ನೀಡಿದರು. ಸಚಿವರ ಭೇಟಿ ವೇಳೆ ಮುಚ್ಚಿರುವ ದೇವಾಲಯವನ್ನು ತೆರೆಸುವಂತೆ ಭಕ್ತರು ಆಗ್ರಹಿಸಿದರು. ಈ ವೇಳೆ ದೇವಾಲಯ ತೆರೆಯದೇ ಇರುವುದರಿಂದ ಮಾರಮ್ಮಗೆ ಪೂಜೆ ಸಲ್ಲಿಸಲು ಆಗುತ್ತಿಲ್ಲ ಎಂದು ಸಚಿವರಿಗೆ ಕೈ ಮುಗಿದು, ಗ್ರಾಮಸ್ಥರು ಕಣ್ಣೀರು ಹಾಕಿ, ಮನವಿ ಮಾಡಿದರು.

ಯಾರೋ ಮಾಡಿದ ತಪ್ಪಿಗೆ ಅಮಾಯಕರಿಗೆ ಶಿಕ್ಷೆ:
ಭಕ್ತರನ್ನ ಸಮಾಧಾನ ಪಡಿಸಿದ ಸಚಿವರು, ಯಾರೋ ಮಾಡಿದ ತಪ್ಪಿಗೆ ಇವತ್ತು ಅಮಾಯಕ ಭಕ್ತರು ಶಿಕ್ಷೆ ಅನುಭವಿಸುತ್ತಿದ್ದಾರೆ. ಈ ದುರಂತದಿಂದ ಇಡೀ ರಾಜ್ಯದಲ್ಲಿ ಪ್ರಸಾದ ಕೊಡುವ ಮುನ್ನ ಪರೀಕ್ಷೆ ಮಾಡುವ ದುಸ್ಥಿತಿ ಬಂದಿದೆ. ಶೀಘ್ರದಲ್ಲಿಯೇ ದೇವಾಲಯ ತೆರೆಯಲು ಕ್ರಮ ಜರುಗಿಸುಸುವೆ ಎಂದು ಸಚಿವರು ಭರವಸೆ ನೀಡಿದರು.

ಕಳೆದ ವರ್ಷ ಡಿಸೆಂಬರ್ 14 ರಂದು ದೇವಾಲಯದಲ್ಲಿ ನೀಡುತ್ತಿದ್ದ ಪ್ರಸಾದ ಸೇವಿಸಿ 17 ಮಂದಿ ಮೃತಪಟ್ಟಿದ್ದರು. ನೂರಾರು ಜನ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ಸಂಬಂಧ ಈಗಾಗಲೇ ಹಲವರನ್ನು ಪೊಲೀಸರು ಬಂಧಿಸಿದ್ದಾರೆ. ನಂತರ ಜಿಲ್ಲಾಡಳಿತ ಮಾರಮ್ಮ ದೇವಾಲಯಕ್ಕೆ ಬೀಗ ಹಾಕಿದೆ.

Published On - 2:40 pm, Tue, 19 November 19

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us