
ಮಡಿಕೇರಿ: ಅಮ್ಮತ್ತಿ ಕಾರ್ಮಾಡು ಗ್ರಾಮದ ತೋಟವೊಂದರಲ್ಲಿ ಕಾಡಾನೆಗಳ ಹಿಂಡು ದಾಳಿ ನಡೆಸಿದೆ. ಇದರ ಪರಿಣಾಮ ತೋಟದಲ್ಲಿದ್ದ ಕಾಫಿ, ತೆಂಗು, ಬಾಳೆಗಳು ನಾಶವಾಗಿವೆ.
ಗ್ರಾಮದ ಕುಟ್ಟಂಡ ಪೂವಿ ಚೋಂದಮ್ಮ ಮತ್ತು ಕೆ.ಎಸ್ ಪೊನ್ನಪ್ಪ ಎಂಬುವವರ ತೋಟಕ್ಕೆ ತಡರಾತ್ರಿ ಕಾಡಾನೆಗಳು ಲಗ್ಗೆಯಿಟ್ಟಿವೆ. ಕಾಡಾನೆಯ ಉಪಟಳಕ್ಕೆ ಬೆಳೆಗಾರರೆಲ್ಲ ಕಂಗಾಲಾಗಿದ್ದು, ಆನೆ ಹಾವಳಿ ತಡೆಯುವಂತೆ ಅರಣ್ಯ ಇಲಾಖೆಗೆ ಒತ್ತಾಯಿಸಿದ್ದಾರೆ.