ಜಾಹಿರಾತು ಫಲಕಗಳಿಂದ ಮುಕ್ತಿ ನೀಡಲು ಬೆಂಗಳೂರಲ್ಲಿ ಮೊಳೆ ಮುಕ್ತ ಮರ ಹಬ್ಬ

ಬೆಂಗಳೂರಿನ ರಸ್ತೆ ಬದಿ ಮರಗಳಿಗೆ ಮೊಳೆ ಹಾಗೂ ಸ್ಟಾಪಲ್ ಪಿನ್‍ ಹೊಡೆದು ಅನಧಿಕೃತವಾಗಿ ಜಾಹಿರಾತುಗಳನ್ನು  ಪ್ರದರ್ಶಿಸಲಾಗುತ್ತಿದೆ. ಇದರಿಂದ ಮರಗಳಿಗೆ ಹಾನಿಯಾಗುತ್ತಿರುವುದಲ್ಲದೆ, ನಗರದ ಸೌಂದರ್ಯಕ್ಕೆ ಧಕ್ಕೆಯಾಗುತ್ತಿದೆ.

ಜಾಹಿರಾತು ಫಲಕಗಳಿಂದ ಮುಕ್ತಿ ನೀಡಲು ಬೆಂಗಳೂರಲ್ಲಿ ಮೊಳೆ ಮುಕ್ತ ಮರ ಹಬ್ಬ

Updated on: Dec 12, 2020 | 9:22 PM

ಬೆಂಗಳೂರು: ಕರ್ನಾಟಕದ ರಾಜಧಾನಿ  ಬೆಂಗಳೂರನ್ನು ಗಾರ್ಡನ್​ ಸಿಟಿ ಎಂದು ಕರೆಯೋಕೆ ಕಾರಣ ಇಲ್ಲಿರುವ ಮರಗಳು. ಆದರೆ, ಇಲ್ಲಿನ ಮರಗಳಿಗೆ ಪೋಸ್ಟರ್​​ಗಳನ್ನು ಅಂಟಿಸಲು ನಿರಂತರವಾಗಿ ಮೊಳೆ ಬೀಳುತ್ತಿದೆ. ಇದನ್ನು ತಪ್ಪಿಸಲು ಈಗ ದೊಡ್ಡ ಮಟ್ಟದಲ್ಲಿ ಮೊಳೆ ಮುಕ್ತ ಮರ ಬೆಂಗಳೂರಿಗೆ ಕರೆ ನೀಡಲಾಗಿದೆ.

ಬೆಂಗಳೂರಿನ ರಸ್ತೆ ಬದಿ ಮರಗಳಿಗೆ ಮೊಳೆ ಹಾಗೂ ಸ್ಟಾಪಲ್ ಪಿನ್‍ ಹೊಡೆದು ಅನಧಿಕೃತವಾಗಿ ಜಾಹಿರಾತುಗಳನ್ನು  ಪ್ರದರ್ಶಿಸಲಾಗುತ್ತಿದೆ. ಇದರಿಂದ ಮರಗಳಿಗೆ ಹಾನಿಯಾಗುತ್ತಿರುವುದಲ್ಲದೆ, ನಗರದ ಸೌಂದರ್ಯಕ್ಕೆ ಧಕ್ಕೆಯಾಗುತ್ತಿದೆ. ಇದನ್ನು ತಡೆಯುವ ಕಾರ್ಯಕ್ರಮಕ್ಕೆ ಮಾಜಿ ಐಪಿಎಸ್​ ಅಧಿಕಾರಿ ಅಣ್ಣಾಮಲೈ, ನಟ ಕಿರಿಕ್ ಕೀರ್ತಿ ಹಾಗೂ ನಟ ಗಣೇಶ್ ರಾವ್ ಬೆಂಬಲ ನೀಡಿದ್ದಾರೆ.

ಭಾನುವಾರ ಬೆಳಗ್ಗೆ ನ್ಯಾಷನಲ್​ ಕಾಲೇಜು ಗ್ರೌಂಡ್​ನಲ್ಲಿ ಬೆಳಗ್ಗೆ 8 ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು, ಕಿರಿಕ್​ ಕೀರ್ತಿ ಆಗಮಿಸಲಿದ್ದಾರೆ. 11 ಗಂಟೆಗೆ 100 ಅಡಿ ರಸ್ತೆಯಲ್ಲಿರುವ ಇಂದಿರಾ ನಗರ ಕ್ಲಬ್​ ಸಮೀಪ ಅಣ್ಣಾಮಲೈ ಬರಲಿದ್ದಾರೆ. ಯಶವಂತಪುರದ ಚೌಡೇಶ್ವರಿ ಬಸ್​ ಸ್ಟಾಪ್​ ಬಳಿ ಮಧ್ಯಾಹ್ನ 3.30ಕ್ಕೆ ಗಣೇಶ್​ ರಾವ್​ ಬರಲಿದ್ದು, ಮೊಳೆ ಮುಕ್ತ ಮರ ಬೆಂಗಳೂರು ಹಬ್ಬಕ್ಕೆ ಕೈ ಜೋಡಿಸಲಿದ್ದಾರೆ.

ಜಾಹಿರಾತು ಫಲಕಗಳ ಹಾವಳಿ: ಶತಾಯುಷಿ ಮರಗಳು ಹೇಳುತ್ತಿವೆ ಕಣ್ಣೀರ ಕತೆ

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us