ಫೀಸ್ ಕಟ್ಟದ್ದಕ್ಕೆ ಆನ್​ಲೈನ್ ಕ್ಲಾಸ್​ ಬಂದ್: ಪೋಷಕರ ಪ್ರತಿಭಟನೆ ವೇಳೆ ಶಿಕ್ಷಕರ ಮೇಲೆ ಹಲ್ಲೆ ಆರೋಪ

ಫೀಸ್ ಕಟ್ಟದ್ದಕ್ಕೆ ಆನ್​ಲೈನ್ ಕ್ಲಾಸ್​ ಬಂದ್​ ಮಾಡಿದ ಹಿನ್ನೆಲೆಯಲ್ಲಿ ಕೆಂಪೇಗೌಡನಗರ ಬಳಿಯಿರುವ ನಾರಾಯಣ E ಟೆಕ್ನೋ ಶಾಲೆ ಬಳಿ ಪೋಷಕರ ಪ್ರತಿಭಟನೆ ನಡೆಸಿದರು. ಈ ಮಧ್ಯೆ, ಪ್ರತಿಭಟನೆ ವೇಳೆ ಶಿಕ್ಷಕರ ಮೇಲೆ ಪೋಷಕರೊಬ್ಬರು ಹಲ್ಲೆ ಮಾಡಿದ್ದಾರೆ ಎಂದು ಶಾಲಾ ಸಿಬ್ಬಂದಿ ಆರೋಪಿಸಿದ್ದಾರೆ.

ಫೀಸ್ ಕಟ್ಟದ್ದಕ್ಕೆ ಆನ್​ಲೈನ್ ಕ್ಲಾಸ್​ ಬಂದ್: ಪೋಷಕರ ಪ್ರತಿಭಟನೆ ವೇಳೆ ಶಿಕ್ಷಕರ ಮೇಲೆ ಹಲ್ಲೆ ಆರೋಪ
ನಾರಾಯಣ E ಟೆಕ್ನೋ ಶಾಲೆ

Updated on: Jan 05, 2021 | 10:27 PM

ಬೆಂಗಳೂರು: ಫೀಸ್ ಕಟ್ಟದ್ದಕ್ಕೆ ಆನ್​ಲೈನ್ ಕ್ಲಾಸ್​ ಬಂದ್​ ಮಾಡಿದ ಹಿನ್ನೆಲೆಯಲ್ಲಿ ಕೆಂಪೇಗೌಡನಗರ ಬಳಿಯಿರುವ ನಾರಾಯಣ E ಟೆಕ್ನೋ ಶಾಲೆ ಬಳಿ ಪೋಷಕರ ಪ್ರತಿಭಟನೆ ನಡೆಸಿದರು. ಈ ಮಧ್ಯೆ, ಪ್ರತಿಭಟನೆ ವೇಳೆ ಶಿಕ್ಷಕರ ಮೇಲೆ ಪೋಷಕರೊಬ್ಬರು ಹಲ್ಲೆ ಮಾಡಿದ್ದಾರೆ ಎಂದು ಶಾಲಾ ಸಿಬ್ಬಂದಿ ಆರೋಪಿಸಿದ್ದಾರೆ.

ಈ ಹಿನ್ನೆಲೆಯಲ್ಲಿ, ಮಹಾಲಕ್ಷ್ಮೀ ಲೇಔಟ್ ಠಾಣೆಗೆ ಶಾಲಾ ಸಿಬ್ಬಂದಿ ದೂರು ಸಲ್ಲಿಸಿದ್ದಾರೆ. ತ್ರಿಲೋಕೇಶ್ ಎಂಬ ಪೋಷಕರು ಶಿಕ್ಷಕರನ್ನ ಥಳಿಸಿದ್ದಾರೆ ಎಂದು ಶಾಲಾ ಸಿಬ್ಬಂದಿ ತಮ್ಮ ದೂರಿನಲ್ಲಿ ಆರೋಪ ಮಾಡಿದ್ದಾರೆ. ಹಾಗಾಗಿ, ತ್ರಿಲೋಕೇಶ್ ವಿರುದ್ಧ ಮಹಾಲಕ್ಷ್ಮೀ ಲೇಔಟ್ ಠಾಣೆಯಲ್ಲಿ FIR ದಾಖಲಾಗಿದೆ.

ಬ್ರಿಟನ್‌ನಿಂದ ಬಂದಿದ್ದ 121 ಜನರು ಇನ್ನೂ ಪತ್ತೆಯಾಗಿಲ್ಲ -BBMPಯಿಂದ ಕಳವಳಕಾರಿ ಮಾಹಿತಿ ಬಿಡುಗಡೆ