ಗದಗ: ಸರ್ವ ಧರ್ಮಿಯರು ಪೂಜಿಸುವ ದರ್ಗಾ ಪಕ್ಕದಲ್ಲಿ ಮಸೀದಿ ನಿರ್ಮಾಣಕ್ಕೆ ಹಿಂದೂ ಸಂಘಟನೆಗಳ ವಿರೋಧ

ಗದಗ ನಗರದ ಖಾನತೋಟ ಬಡಾವಣೆಯಲ್ಲಿರುವ ಖಾನ್​ ಸಾವಲಿ ದರ್ಗಾಕ್ಕೆ ಸರ್ವ ಧರ್ಮದ ಜನರು ಆಗಮಿಸುತ್ತಾರೆ. ಸುಮಾರು ವರ್ಷಗಳಿಂದ ಜನರು ಶ್ರದ್ಧಾ ಭಕ್ತಿಯಿಂದ ದರ್ಗಾಕ್ಕೆ ಹೋಗುತ್ತಿದ್ದಾರೆ. ಆದರೆ, ಈಗ ದರ್ಗಾ ಪಕ್ಕದಲ್ಲಿ ಮಸೀದಿ ನಿರ್ಮಾಣ ಮಾಡಲಾಗುತ್ತಿದೆ. ಇದು ಹಿಂದೂ ಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಯಾವುದೇ ಕಾರಣಕ್ಕೂ ಮಸೀದಿ ನಿರ್ಮಾಣ ಮಾಡಬಾರದು ಹಿಂದೂ ಪರ ಸಂಘಟನೆಗಳು ಪಟ್ಟು ಹಿಡಿದಿವೆ.

ಗದಗ: ಸರ್ವ ಧರ್ಮಿಯರು ಪೂಜಿಸುವ ದರ್ಗಾ ಪಕ್ಕದಲ್ಲಿ ಮಸೀದಿ ನಿರ್ಮಾಣಕ್ಕೆ ಹಿಂದೂ ಸಂಘಟನೆಗಳ ವಿರೋಧ
ದರ್ಗಾ ಪಕ್ಕದಲ್ಲಿ ಮಸೀದಿ ನಿರ್ಮಾಣ
Updated By: ವಿವೇಕ ಬಿರಾದಾರ

Updated on: May 25, 2025 | 5:12 PM

ಗದಗ, ಮೇ 25: ಗದಗ‌ (Gadag) ನಗರದ ಖಾನತೋಟ ಪ್ರದೇಶದ ಖಾನ್​ ಸಾವಲಿ ದರ್ಗಾಕ್ಕೆ (Khan Savli Dargah) ಹಿಂದೂ, ಮುಸ್ಲಿಂ ಎನ್ನದೆ ಸರ್ವ ಧರ್ಮಿಯರು ಶ್ರದ್ಧಾ ಭಕ್ತಿಯಿಂದ ಹೋಗಿ ದರ್ಶನ ಪಡೆಯುತ್ತಾರೆ. ಅವರವರ ಸಂಪ್ರದಾಯದಂತೆ ಪೂಜೆ ಮಾಡುತ್ತಾರೆ. ಆದರೆ, ಈಗ ಖಾನ್ ಸಾವಲಿ ದರ್ಗಾ ಪಕ್ಕದಲ್ಲಿ, ಮಸೀದಿ ನಿರ್ಮಾಣ ಮಾಡಲಾಗುತ್ತಿದೆ. ಇದು ಸ್ಥಳೀಯರ ಹಾಗೂ ಹಿಂದೂ ಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಈ ಸ್ಥಳದಲ್ಲಿ ಮಸೀದಿ ನಿರ್ಮಾಣವಾದರೆ, ನಾವು ದರ್ಗಾಕ್ಕೆ ಬರುವುದಿಲ್ಲ. ಆಗ ಒಂದು ಧರ್ಮದ ಜನರಿಗೆ ಮಾತ್ರ ದರ್ಗಾ ಸಮೀತವಾಗುತ್ತದೆ. ಹೀಗಾಗಿ, ಈ ಜಾಗದಲ್ಲಿ ಮಸೀದಿ ನಿರ್ಮಾಣ ಮಾಡಬಾರದು ಅಂತ ಪಟ್ಟು ಹಿಡದಿದ್ದಾರೆ.

ಸ್ಥಳೀಯರು ಹಾಗೂ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಮಸೀದಿ ನಿರ್ಮಾಣ ಮಾಡಲು ಅವಕಾಶ ನೀಡಬಾರದು ಎಂದು ಜಿಲ್ಲಾಧಿಕಾರಿಗಳ ಬಳಿ ಮನವಿ ಮಾಡಿಕೊಂಡಿದ್ದಾರೆ. ಇನ್ನು, ಖಾನತೋಟ ಪ್ರದೇಶದಲ್ಲಿನ ಖಾನ್​ ಸಾವಲಿ ದರ್ಗಾಕ್ಕೆ ಸರ್ವ ಧರ್ಮಿಯರೂ ಹೋಗುತ್ತಿದ್ದೇವೆ. ಆದರೆ, ಈಗ ಮಸೀದಿ ನಿರ್ಮಾಣ ಮಾಡಿದರೆ, ನಮಗೆ ಹೋಗಲು ಆಗುವುದಿಲ್ಲ. ಮಸಿದಿ ಕಟ್ಟುವ ಸ್ಥಳದಲ್ಲಿ ಒಂದು ಮಂಗಲ ಕಾರ್ಯಾಲಯ ನಿರ್ಮಾಣ ಮಾಡಬೇಕು, ಆಗ ಹಿಂದೂ-ಮುಸ್ಲಿಂ ಎಲ್ಲರಿಗೂ ಅನುಕೂಲವಾಗುತ್ತದೆ. ಹಿಂದೂ-ಮುಸ್ಲಿಂ ಎಲ್ಲರನ್ನೂ ಸೇರಿಸಿಕೊಂಡು ಒಂದು ಟ್ರಸ್ಟ್ ರಚಿಸಿ. ಎಲ್ಲರಿಗೂ ಅನುಕೂಲವಾಗುತ್ತದೆ ಎಂದು ಹಿಂದೂ ಪರ ಸಂಘಟನೆಗಳು ಮುಖಂಡರು ಹೇಳಿದ್ದಾರೆ.

ಮಸೀದಿ ನಿರ್ಮಾಣಕ್ಕೆ ಅವಕಾಶ ನೀಡಬಾರದು ಎಂದು ನಗರಸಭೆ, ಜಿಲ್ಲಾಧಿಕಾರಿಗಳು, ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಿದ್ದೇವೆ. ಒಂದು ವೇಳೆ ಅವರು ಏನಾದರೂ ಅವಕಾಶ ಮಾಡಿಕೊಟ್ಟರೆ ಖಾಲಿ ಜಾಗದಲ್ಲಿ ನಾವು ದೇವಸ್ಥಾನವನ್ನು ನಿರ್ಮಾಣ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ
ಯುವಕನ ಹಿಂದೆ ಬಿದ್ದು ಹೆಣವಾದ ಮಹಿಳೆ: ಲವ್ವಿಡವ್ವಿ ಕೊಲೆಯಲ್ಲಿ ಅಂತ್ಯ!
ಹುಬ್ಬಳ್ಳಿ-ಕುಷ್ಟಗಿ ನಡುವೆ ಹೊಸ ಎಕ್ಸಪ್ರೆಸ್ ರೈಲು ಆರಂಭ
ಮೂರು ತಿಂಗಳಾದರೂ ಬಂದಿಲ್ಲ ಗೃಹಲಕ್ಷ್ಮಿ ಹಣ: ಗದಗದಲ್ಲಿ ಸಿಡಿದೆದ್ದ ಮಹಿಳೆಯರು
ಗದಗಿನಲ್ಲಿ ಫಕಿರೇಶ್ವರನ ಭಾವೈಕ್ಯತೆಯ ಜಾತ್ರೆ: ಹಿಂದೂ, ಮುಸ್ಲಿಮರು ಭಾಗಿ

ಇದನ್ನೂ ಓದಿ: ಯುವಕನ ಮೇಲೆ ಹಲ್ಲೆ ಮಾಡಿದ್ದ ಉಪ ತಹಶೀಲ್ದಾರ್ ಅಮಾನತು

ಹತ್ತಾರು ವರ್ಷಗಳಿಂದ ಸರ್ವ ಧರ್ಮದ ಜನರು ಆರಾಧನೆ ಮಾಡುತ್ತಿದ್ದ, ದರ್ಗಾ ಪಕ್ಕದಲ್ಲಿ ಮಸೀದಿ ನಿರ್ಮಾಣ ಮಾಡಲಾಗುತ್ತಿದೆ. ಇದು ಆಕ್ರೋಶಕ್ಕೆ ಕಾರಣವಾಗಿದೆ. ಮಸೀದಿ ನಿರ್ಮಾಣಕ್ಕೆ ಅವಕಾಶ ನೀಡಬಾರದು ಎಂದು ಒತ್ತಾಯ ಮಾಡಿದ್ದು, ನಗರಸಭೆ ಹಾಗೂ ಜಿಲ್ಲಾಡಳಿತ ಯಾವ ಕ್ರಮ ಕೈಗೊಳ್ಳುತ್ತೆ ಕಾದು ನೋಡಬೇಕಾಗಿದೆ.

ಕರ್ನಾಟಕದ ಇನ್ನಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ