AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಾನಪದ ಜಾತ್ರೆಯಲ್ಲಿ ಕಿಕ್ಕೇರಿಸೋ ದಂಗಲ್, ಗೆದ್ದು ಬೀಗಿದ ಕುಸ್ತಿಪಟುಗಳು!

ಹಾವೇರಿ: ಅಖಾಡ ಯಾವುದೇ ಇರಲಿ.. ಎದುರಾಳಿ ಯಾರೇ ಇರಲಿ.. ಎಷ್ಟೇ ಬಲಶಾಲಿ ಆಗಿರಲಿ.. ಮುಂದಿಟ್ಟ ಹೆಜ್ಜೆ ಹಿಂದಿಡದೇ ಹೊಡೆಯೋದೇ. ಎದುರಾಳಿನ ಮಣ್ಣು ಮುಕ್ಕಿಸೋದೇ ಅಂತಾ ಪೈಲ್ವಾನರು ತೊಡೆ ತಟ್ಟುತ್ತಿದ್ರೆ, ನೆರೆದಿದ್ದವರು ಜೈಕಾರದ ಮಳೆ ಸುರಿಸುತ್ತಿದ್ರು. ಹಾವೇರಿಯಲ್ಲಿ ಜಾನಪದ ಜಾತ್ರೆ ಸಂಭ್ರಮ: ಹಾವೇರಿಯಲ್ಲಿ ಕುಸ್ತಿ ಪೈಲ್ವಾನರು ಧೂಳೆಬ್ಬಿಸಿದ್ರು. ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾನಪದ ಜಾತ್ರೆ ಪ್ರಯುಕ್ತ ಕುಸ್ತಿ ಪಂದ್ಯಾವಳಿ ಆಯೋಜಿಸಿತ್ತು. ತೂಕದ ಆಧಾರದ ಮೇಲೆ ವಿವಿಧ ಹಂತಗಳಲ್ಲಿ ಕುಸ್ತಿ ಪಂದ್ಯಾವಳಿ ನಡೆಸಲಾಯ್ತು. ದಾವಣಗೆರೆ, ಧಾರವಾಡ, […]

ಜಾನಪದ ಜಾತ್ರೆಯಲ್ಲಿ ಕಿಕ್ಕೇರಿಸೋ ದಂಗಲ್, ಗೆದ್ದು ಬೀಗಿದ ಕುಸ್ತಿಪಟುಗಳು!
ಸಾಧು ಶ್ರೀನಾಥ್​
|

Updated on: Feb 15, 2020 | 12:42 PM

Share

ಹಾವೇರಿ: ಅಖಾಡ ಯಾವುದೇ ಇರಲಿ.. ಎದುರಾಳಿ ಯಾರೇ ಇರಲಿ.. ಎಷ್ಟೇ ಬಲಶಾಲಿ ಆಗಿರಲಿ.. ಮುಂದಿಟ್ಟ ಹೆಜ್ಜೆ ಹಿಂದಿಡದೇ ಹೊಡೆಯೋದೇ. ಎದುರಾಳಿನ ಮಣ್ಣು ಮುಕ್ಕಿಸೋದೇ ಅಂತಾ ಪೈಲ್ವಾನರು ತೊಡೆ ತಟ್ಟುತ್ತಿದ್ರೆ, ನೆರೆದಿದ್ದವರು ಜೈಕಾರದ ಮಳೆ ಸುರಿಸುತ್ತಿದ್ರು.

ಹಾವೇರಿಯಲ್ಲಿ ಜಾನಪದ ಜಾತ್ರೆ ಸಂಭ್ರಮ: ಹಾವೇರಿಯಲ್ಲಿ ಕುಸ್ತಿ ಪೈಲ್ವಾನರು ಧೂಳೆಬ್ಬಿಸಿದ್ರು. ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾನಪದ ಜಾತ್ರೆ ಪ್ರಯುಕ್ತ ಕುಸ್ತಿ ಪಂದ್ಯಾವಳಿ ಆಯೋಜಿಸಿತ್ತು. ತೂಕದ ಆಧಾರದ ಮೇಲೆ ವಿವಿಧ ಹಂತಗಳಲ್ಲಿ ಕುಸ್ತಿ ಪಂದ್ಯಾವಳಿ ನಡೆಸಲಾಯ್ತು. ದಾವಣಗೆರೆ, ಧಾರವಾಡ, ಗದಗ, ಬಾಗಲಕೋಟೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ನೂರಕ್ಕೂ ಹೆಚ್ಚು ಕುಸ್ತಿ ಪಟುಗಳು ಎಂಟ್ರಿ ಕೊಟ್ಟಿದ್ರು.

ನಾನಾ ನೀನಾ ಅಂತಾ ಅಖಾಡದಲ್ಲಿ ಸೆಣಸಾಡಿ ಮಿಂಚಿದ್ರು. ಇನ್ನು, ಯುವಕರಲ್ಲಿನ ದುಶ್ಚಟಗಳನ್ನ ದೂರ ಮಾಡೋದು, ಕುಸ್ತಿ ಉಳಿಸಿ ಬೆಳೆಸಲು ಈ ಪಂದ್ಯಾವಳಿ ಆಯೋಜಿಸಲಾಗಿತ್ತು. ಯುವಕರು ಮಾತ್ರವಲ್ಲದೇ ಬಾಲಕರೂ ಸಹ ನಾವು ಯಾರಿಗೂ ಕಮ್ಮಿ ಇಲ್ಲ ಅನ್ನೋ ರೇಂಜಲ್ಲಿ ಜಬರದಸ್ತ್ ಆಗಿ ಕಾದಾಡಿದ್ರು.

ದಂಗಲ್ ಕಂಡು ನೆರೆದಿದ್ದವರು ಥ್ರಿಲ್: ಹಲಗೆ ಬಾರಿಸುತ್ತಾ ಪೈಲ್ವಾನರನ್ನ ಸಂಘಟಕರು ಅಖಾಡಕ್ಕೆ ಕರೆತರ್ತಿದ್ದಂತೆ ಪ್ರೇಕ್ಷಕರು ಕೇಕೆ, ಚಪ್ಪಾಳೆಗಳ ಸುರಿಮಳೆ ಸುರಿಸ್ತಿದ್ರು. ಕುಸ್ತಿಯಲ್ಲಿ ಸೆಣಸಾಡಿ ಗೆದ್ದವರಿಗೆ ಬಹುಮಾನ ವಿತರಿಸಲಾಯ್ತು. ಒಟ್ನಲ್ಲಿ, ಹಾವೇರಿಯಲ್ಲಿ ಕುಸ್ತಿ ಪಟುಗಳ ಸಮಾಗಮವೇ ಆಗಿತ್ತು. ನಾನಾ ನೀನಾ ಅಂತಾ ಶಕ್ತಿ ಮೀರಿ ಕಾದಾಡಿ ಬಹುಮಾನ ತಮ್ಮದಾಗಿಸಿಕೊಂಡ್ರು. ಈ ಕಿಕ್ಕೇರಿಸೋ ದಂಗಲ್ ಕಂಡು ನೆರೆದಿದ್ದವರು ಥ್ರಿಲ್ ಆದ್ರು.

ಕ್ಯಾಮರೂನ್ ಗ್ರೀನ್‌ ವೇತನದಿಂದ 7.20 ಕೋಟಿ ರೂ. ಕಡಿತ
ಕ್ಯಾಮರೂನ್ ಗ್ರೀನ್‌ ವೇತನದಿಂದ 7.20 ಕೋಟಿ ರೂ. ಕಡಿತ
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?