ಹಾವೇರಿಯ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳಿಗೆ ನಿತ್ಯ ಗಾಂಧೀಜಿಯ ರಾಮರಾಜ್ಯ ಪಾಠ

|

Updated on: Oct 02, 2024 | 8:58 AM

ಮಹಾತ್ಮಾ ಗಾಂಧೀಜಿಯವರ ಆದರ್ಶ, ತತ್ವ ಸಿದ್ದಾಂತಗಳು ದೇಶಕ್ಕೆ ಮಾದರಿಯಾಗಿವೆ. ಇವುಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವವರು ಕೆಲವು ಜನರು ಮಾತ್ರ. ಆದರೆ, ಹಾವೇರಿ ಜಿಲ್ಲೆಯ ಹೊಸರತ್ತಿಯಲ್ಲಿರುವ ಗುರುಕುಲದಲ್ಲಿ ಗಾಂಧೀಜಿ ತತ್ವ ಸಿದ್ಧಾಂತಗಳನ್ನು ಹೇಳಿಕೊಡಲಾಗುತ್ತಿದೆ.

ಹಾವೇರಿಯ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳಿಗೆ ನಿತ್ಯ ಗಾಂಧೀಜಿಯ ರಾಮರಾಜ್ಯ ಪಾಠ
ಗಾಂಧಿ ಗ್ರಾಮೀಣ ಗುರುಕುಲ
Follow us on

ಹಾವೇರಿ, ಅಕ್ಟೋಬರ್​​ 02: ಪ್ರತಿಯೊಬ್ಬ ವ್ಯಕ್ತಿ ಸ್ವಾವಲಂಭಿಯಾಗಬೇಕು. ಖಾದಿ ಉಳಿಯಬೇಕು, ಕೃಷಿ ಬೆಳೆಯಬೇಕು. ಹೀಗಂತ ಮಹಾತ್ಮ ಗಾಂಧೀಜಿ (Mahatma Gandhi) ಕನಸು ಕಂಡಿದ್ದರು. ಕನಸಿನಂತೆಯೇ ಬದುಕಿದರು. ಆದರೆ, ಪ್ರಸ್ತುತ ದಿನಗಳಲ್ಲಿ ಗಾಂಧೀಜಿ ತತ್ವ ಸಿದ್ದಾಂತಗಳು ಕೇವಲ ಪುಸ್ತಕಕ್ಕೆ ಮಾತ್ರ ಸೀಮಿತವಾಗಿವೆ. ಆದರೆ, ಹಾವೇರಿ ಜಿಲ್ಲೆಯಲ್ಲಿನ ಗುರುಕುಲದಲ್ಲಿ ಗಾಂಧೀಜಿಯವರ ತತ್ವ ಸಿದ್ದಾಂತಗಳನ್ನು ಪಾಲಿಸಿಕೊಂಡು ಬರಲಾಗುತ್ತಿದೆ.

ಹಾವೇರಿ ತಾಲೂಕಿನ ಹೊಸರಿತ್ತಿ ಗ್ರಾಮದಲ್ಲಿರುವ ಗಾಂಧಿ ಗ್ರಾಮೀಣ ಗುರುಕುಲದಲ್ಲಿ ಗಾಂಧೀಜಿ ತತ್ವ ಸಿದ್ಧಾಂತಗಳು ನಿತ್ಯನೂತನವಾಗಿವೆ. ಗುರುಕುಲದಲ್ಲಿನ ಮಕ್ಕಳು ಗಾಂಧೀಜಿ ಕನಸನ್ನು ನನಸು ಮಾಡಲು ತಯಾರಾಗುತ್ತಿದ್ದಾರೆ. ಈ ಶಾಲೆಗೆ ಗಾಂಧಿ ಸೇವಾ ಪ್ರಶಸ್ತಿ ಸಿಕ್ಕಿದೆ.

ಗ್ರಾಮೀಣ ಬಡ ವಿದ್ಯಾರ್ಥಿಗಳಿಗಾಗಿ ವಸತಿ ಶಾಲೆಯನ್ನು 1984ರಲ್ಲಿ ಕರ್ನಾಟಕದ ಉಕ್ಕಿನ ಮನುಷ್ಯ ಹಳ್ಳಿಕೇರಿ ಗುದ್ಲೇಪ್ಪನವರು ಸ್ಥಾಪನೆ ಮಾಡಿದರು. ಕಳೆದ ನಾಲ್ಕು ದಶಕಗಳಿಂದ ರಾಜ್ಯದ ನಾನಾ ಭಾಗಗಳಿಂದ ಬಂದ ವಿದ್ಯಾರ್ಥಿಗಳು ಗಾಂಧಿಜೀಯ ಮೂಲ ಶಿಕ್ಷಣವನ್ನು ಕಲಿಯುತ್ತಿದ್ದಾರೆ. ಗಾಂಧೀಜಿ ಕಂಡ ಗ್ರಾಮ ರಾಜ್ಯ ಹಾಗೂ ಸ್ವಾವಲಂಭಿ ಬದುಕನ್ನು ಇಲ್ಲಿಯ ವಿದ್ಯಾರ್ಥಿಗಳಿಗೆ ಹೇಳಿಕೊಡಲಾಗುತ್ತಿದೆ.

ಇದನ್ನೂ ಓದಿ: ಚಿಕ್ಕಬ್ಬಳ್ಳಾಪುರದ ನಂದಿ ಬೆಟ್ಟದಲ್ಲಿ 65 ದಿನ ತಂಗಿದ್ದರು ಮಹಾತ್ಮ ಗಾಂಧಿ

ಈ ಗಾಂಧಿ ಗ್ರಾಮೀಣ ಗುರುಕುಲದಲ್ಲಿ 240 ವಿದ್ಯಾರ್ಥಿಗಳು ವಿದ್ಯಾಬ್ಯಾಸ ಮಾಡುತ್ತಿದ್ದಾರೆ. ಪ್ರತಿವರ್ಷವೂ ಸ್ಪರ್ದಾತ್ಮಕ ಪರೀಕ್ಷೆ ನಡೆಸಿ 40 ಗ್ರಾಮೀಣ ಭಾಗದ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವನ್ನು ನೀಡಲಾಗುತ್ತದೆ. ವಿದ್ಯಾರ್ಥಿಗಳಿಗೆ ಸಾಮಾನ್ಯ ಶಿಕ್ಷಣದ ಜೊತೆಗೆ ನೂಲು ತಯಾರಿಸುವುದು, ಕೈಮಗ್ಗ ಮತ್ತು ನೇಯುವುದನ್ನು ವಿದ್ಯಾರ್ಥಿಗಳು ಕಲಿಸಲಾಗುತ್ತಿದೆ. ಇದರ ಜೊತೆಗೆ ಸ್ವಾವಲಂಭಿ ಶಿಕ್ಷಣವಾದ ತೋಟಗಾರಿಕೆ, ಹೈನುಗಾರಿಕೆ ಹಾಗೂ ಕೃಷಿ ಚಟುವಟಿಕೆಗಳ ಕಲಿತು ಸ್ವಾವಲಂಭಿ ಬದುಕನ್ನ ರೂಪಿಸಿಕೊಳ್ಳುವುದನ್ನೂ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಕರ್ನಾಟಕ ಸರ್ಕಾರ ಈ ಬಾರಿ ಗಾಂಧಿ ಗ್ರಾಮೀಣ ಗುರುಕುಲಕ್ಕೆ “ಗಾಂಧಿ ಸೇವಾ ಪ್ರಶಸ್ತಿ” ನೀಡಿ ಗೌರವಿಸಿದೆ.

ಗಾಂಧಿ ಗ್ರಾಮೀಣ ಗುರುಕುಲದಲ್ಲಿ ಮಹಾತ್ಮನ ತತ್ವಗಳನ್ನ ಅಳವಡಿಸಲಾಗಿದೆ. ವಿದ್ಯಾರ್ಥಿಗಳು ಸರಳ ಜೀವನ, ಉದಾತ್ತ ಚಿಂತನೆ ಸೇರಿದಂತೆ ಹಲವು ತತ್ವಗಳನ್ನು ಮಕ್ಕಳು ಅಳವಡಿಸಿಕೊಳ್ಳುತ್ತಿದ್ದಾರೆ. ಶಿಕ್ಷಕರು ಸೇರಿದಂತೆ ವಿದ್ಯಾರ್ಥಿಗಳು ಖಾದಿಯ ಬಟ್ಟೆಗಳನ್ನು ಧರಿಸುತ್ತಾರೆ. ಈ ಮೂಲಕ ಗಾಂಧೀಜಿಯ ಆದರ್ಶ ಪಾಲಿಸುವ ರಾಜ್ಯದ ಏಕೈಕ ಶಾಲೆಯಾಗಿದೆ.

ವರದಿ: ಅಣ್ಣಪ್ಪ ಬಾರ್ಕಿ ಟಿವಿ 9 ಹಾವೇರಿ