Sign In

By signing in or creating an account, you agree with Associated Broadcasting Company's Terms & Conditions and Privacy Policy.

Go ಕೊರೊನಾ Go ಎಂದು ಕೂಗುತ್ತಾ.. ಲಸಿಕೆ ಪಡೆದ ಅರೋಗ್ಯ ಸಿಬ್ಬಂದಿಗೆ ತಲೆ ಸುತ್ತು! ಲಸಿಕೆ ಪಡೆಯಲು ಬಂದ ಸಿಬ್ಬಂದಿ ಮಾಯ..

Go ಕೊರೊನಾ Go ಎಂದು ಘೋಷಣೆ ಕುಗುತ್ತಾ ಲಸಿಕೆ ಪಡೆದ ಆರೋಗ್ಯ ಸಿಬ್ಬಂದಿಗೆಯೊಬ್ಬರಿಗೆ ಸುಸ್ತು ಹಾಗೂ ತಲೆಸುತ್ತು ಕಾಣಿಸಿಕೊಂಡಿರುವ ಘಟನೆ ಬಿಬಿಎಂಪಿ ದಾಸರಹಳ್ಳಿಯ ಮಲ್ಲಸಂದ್ರ ಅರೋಗ್ಯ ಕೇಂದ್ರದಲ್ಲಿ ವರದಿಯಾಗಿದೆ.

Go ಕೊರೊನಾ Go ಎಂದು ಕೂಗುತ್ತಾ.. ಲಸಿಕೆ ಪಡೆದ ಅರೋಗ್ಯ ಸಿಬ್ಬಂದಿಗೆ ತಲೆ ಸುತ್ತು! ಲಸಿಕೆ ಪಡೆಯಲು ಬಂದ ಸಿಬ್ಬಂದಿ ಮಾಯ..
Go ಕೊರೊನಾ Go ಎಂದು ಕೂಗುತ್ತಾ ಲಸಿಕೆ ಪಡೆದ ಅರೋಗ್ಯ ಸಿಬ್ಬಂದಿಗೆ ತಲೆ ಸುತ್ತು!
Follow us
KUSHAL V
|

Updated on:Jan 16, 2021 | 6:03 PM

ಬೆಂಗಳೂರು: Go ಕೊರೊನಾ Go ಎಂದು ಘೋಷಣೆ ಕುಗುತ್ತಾ ಲಸಿಕೆ ಪಡೆದ ಆರೋಗ್ಯ ಸಿಬ್ಬಂದಿಗೆಯೊಬ್ಬರಿಗೆ ಸುಸ್ತು ಹಾಗೂ ತಲೆಸುತ್ತು ಕಾಣಿಸಿಕೊಂಡಿರುವ ಘಟನೆ ಬಿಬಿಎಂಪಿ ದಾಸರಹಳ್ಳಿಯ ಮಲ್ಲಸಂದ್ರ ಅರೋಗ್ಯ ಕೇಂದ್ರದಲ್ಲಿ ವರದಿಯಾಗಿದೆ.

ಮಲ್ಲಸಂದ್ರದ ಸರ್ಕಾರಿ ಅರೋಗ್ಯ ಕೇಂದ್ರದಲ್ಲಿ ಸುಮಾರು 50ಕೊರೊನಾ ವಾರಿಯರ್ಸ್​ಗೆ ಲಸಿಕೆ ನೀಡಲು ಏಪಾರ್ಡು ಮಾಡಲಾಗಿತ್ತು. ಈ ವೇಳೆ, Go ಕೊರೊನಾ Go ಎಂದು ಘೋಷಣೆ ಕೂಗುತ್ತಾ ಲಸಿಕೆ ಪಡೆದ ಅರೋಗ್ಯ ಸಿಬ್ಬಂದಿಗೆ ಲಸಿಕೆ ಹಾಕಿಸಿಕೊಂಡ ಒಂದು ಗಂಟೆಯೊಳಗೆ ಸುಸ್ತು, ತಲೆನೋವು ಹಾಗೂ ತಲೆ ಸುತ್ತು ಕಾಣಿಸಿಕೊಂಡಿದೆ.

ಲಸಿಕೆ ಪಡೆಯಲು ಬಂದ ಇತರ ಸಿಬ್ಬಂದಿ ಇದ್ದಕ್ಕಿದ್ದಂತೆ ಮಾಯ! ಲಸಿಕೆ ಪಡೆದ ಅರೋಗ್ಯ ಇಲಾಖೆ ಸಂಪರ್ಕ ಕಾರ್ಯಕರ್ತೆ ನಂದಿನಿ ಅವರ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬರುತ್ತಿದ್ದಂತೆ ಲಸಿಕೆ ಪಡೆಯಲು ಬಂದ ಇತರ ಸಿಬ್ಬಂದಿ ಇದ್ದಕ್ಕಿದ್ದಂತೆ ಮಾಯವಾಗಿದ್ದಾರೆ ಎಂದು ಹೇಳಲಾಗಿದೆ.

ಲಸಿಕೆ ಪಡೆಯಲು ಸುಮಾರು 50ವಾರಿಯರ್​ಗಳ ಹೆಸರನ್ನು ನೋಂದಣಿ ಮಾಡಲಾಗಿತ್ತು. ಆದರೆ, ಘಟನೆ ನಂತರ 50ರಲ್ಲಿ ಕೇವಲ 28ಜನರು ಮಾತ್ರ ಲಸಿಕೆ ಪಡೆದರು ಎಂದು ತಿಳಿದುಬಂದಿದೆ. ಅದರಲ್ಲಿ, 6 ಪುರುಷ, 22 ಮಹಿಳಾ ಸಿಬ್ಬಂದಿ ಮಾತ್ರ ಇದ್ದರು. ಉಳಿದವರು ತಮಗೆ ಏನಾಗುತ್ತೋ ಏನೋ ಅನ್ನೋ ಭಯದಲ್ಲಿ ಆಸ್ಪತ್ರೆಯಿಂದ ಜಾಗ ಖಾಲಿ ಮಾಡಿದರಂತೆ.

ಈ ನಡುವೆ, ಲಸಿಕೆ ತಗೊಂಡ ಬಳಿಕ ತಲೆ ಚಕ್ಕರ್ ಬಂತು. ಬಳಿಕ ತಲೆನೋವು ಆರಂಭವಾಯಿತು. ಒಂದು ಗಂಟೆ ಬಳಿಕ ಸ್ವಲ್ಪ ನಾರ್ಮಲ್ ಆದೆ ಎಂದು ಬಿಬಿಎಂಪಿ ಸಂಪರ್ಕ ಕಾರ್ಯಕರ್ತೆ ನಂದಿನಿ ಹೇಳಿದರು. ಇದಾದ ನಂತರ ಲಸಿಕೆ ಪಡೆಯಲು ಕೆಲವರು ಮುಂದಾದರು ಎಂದು ಹೇಳಲಾಗಿದೆ.

ನಾರ್ವೆಯಲ್ಲಿ ಫೈಜರ್​ ಲಸಿಕೆ ಪಡೆದ 23 ಮಂದಿ ಸಾವು; ಇನ್ನೂ ಹಲವರಲ್ಲಿ ಗಂಭೀರ ಅಡ್ಡಪರಿಣಾಮ

Published On - 6:02 pm, Sat, 16 January 21

ಮೌಢ್ಯಗಳನ್ನು ಅನುಸರಿಸಲ್ಲ ಅಂತ ಮತ್ತೊಮ್ಮೆ ಸಾಬೀತು ಮಾಡಿದ ಸಿದ್ದರಾಮಯ್ಯ
ಮೌಢ್ಯಗಳನ್ನು ಅನುಸರಿಸಲ್ಲ ಅಂತ ಮತ್ತೊಮ್ಮೆ ಸಾಬೀತು ಮಾಡಿದ ಸಿದ್ದರಾಮಯ್ಯ
ಪಹಲ್ಗಾಮ್ ದಾಳಿಕೋರ ಆಸಿಫ್ ಶೇಖ್ ಮನೆಯಲ್ಲಿ ಸ್ಫೋಟ, ಬೆಂಕಿ, ನೆಲಸಮ
ಪಹಲ್ಗಾಮ್ ದಾಳಿಕೋರ ಆಸಿಫ್ ಶೇಖ್ ಮನೆಯಲ್ಲಿ ಸ್ಫೋಟ, ಬೆಂಕಿ, ನೆಲಸಮ
ನಿಮ್ಮಲ್ಲಿನ ದುಶ್ಚಟಗಳನ್ನು ಇನ್ನೊಬ್ಬರಿಗೆ ಕಲಿಸಿದರೆ ಉಂಟಾಗುವ ಪರಿಣಾಮವೇನು?
ನಿಮ್ಮಲ್ಲಿನ ದುಶ್ಚಟಗಳನ್ನು ಇನ್ನೊಬ್ಬರಿಗೆ ಕಲಿಸಿದರೆ ಉಂಟಾಗುವ ಪರಿಣಾಮವೇನು?
Horoscope: ಶುಕ್ರವಾರ, ಇಂದಿನ ದ್ವಾದಶ ರಾಶಿಗಳ ಫಲಾಫಲ ತಿಳಿಯಿರಿ
Horoscope: ಶುಕ್ರವಾರ, ಇಂದಿನ ದ್ವಾದಶ ರಾಶಿಗಳ ಫಲಾಫಲ ತಿಳಿಯಿರಿ
ತವರಿನಲ್ಲಿ ಗೆದ್ದ ಆರ್​ಸಿಬಿ; ಮುಗಿಲು ಮುಟ್ಟಿದ ಫ್ಯಾನ್ಸ್ ಸಂಭ್ರಮ
ತವರಿನಲ್ಲಿ ಗೆದ್ದ ಆರ್​ಸಿಬಿ; ಮುಗಿಲು ಮುಟ್ಟಿದ ಫ್ಯಾನ್ಸ್ ಸಂಭ್ರಮ
ಒಳ್ಳೆಯ ಸಿನಿಮಾ ಮಾಡಿದ್ರೂ ಜನ ಬರಲ್ಲ ಯಾಕೆ? ಪಾಸಿಟಿವ್ ಉತ್ತರ ನೀಡಿದ ರಾಘಣ್ಣ
ಒಳ್ಳೆಯ ಸಿನಿಮಾ ಮಾಡಿದ್ರೂ ಜನ ಬರಲ್ಲ ಯಾಕೆ? ಪಾಸಿಟಿವ್ ಉತ್ತರ ನೀಡಿದ ರಾಘಣ್ಣ
ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ
ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ
‘ರಾಜ್​ಕುಮಾರ್ ಎಂಬ ಹೆಸರು ಕನ್ನಡ ಸಿನಿಮಾದ ಅಭಿವೃದ್ಧಿಗೆ ಕಾರಣ’: ಬರಗೂರು
‘ರಾಜ್​ಕುಮಾರ್ ಎಂಬ ಹೆಸರು ಕನ್ನಡ ಸಿನಿಮಾದ ಅಭಿವೃದ್ಧಿಗೆ ಕಾರಣ’: ಬರಗೂರು
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ