ಮಲಗಿದ್ದ ಬೀದಿನಾಯಿ ಮೇಲೆ ಹೊಯ್ಸಳ ಹತ್ತಿಸಿದ ಪೊಲೀಸ್ ಡ್ರೈವರ್

ಬೆಂಗಳೂರು: ಅತ್ತ, ಹೆಚ್​ಎಸ್​ಆರ್ ಲೇಔಟ್​ನಲ್ಲಿ ಬೀದಿ ನಾಯಿ ಬೊಗಳಿದ್ದಕ್ಕೆ ಡಿಲೆವರಿ ಬಾಯ್ ಹೊಡೆದು ಸಾಯಿಸಿದ ಘಟನೆ ನಡೆದಿತ್ತು. ಆದರೆ ಇಲ್ಲಿ ರಕ್ಷಕರೇ ಭಕ್ಷಕರಾಗಿ ಬೀದಿ ನಾಯಿ ಮೇಲೆ ಅಟ್ಟಹಾಸ ಮೆರೆದಿದ್ದಾರೆ. ಮಾನವೀಯತೆ ಮರೆತ ಪೊಲೀಸರು ಹೊಯ್ಸಳ ವಾಹನವನ್ನು ಬೀದಿ ನಾಯಿಯ ಮೇಲೆ ಹತ್ತಿಸಿದ್ದಾರೆ. ನಿನ್ನೆ ಕೆ.ಆರ್​.ಪುರಂನಲ್ಲಿ ಉಪಚುನಾವಣಾ ಪ್ರಚಾರದ ಗಸ್ತು ತಿರುಗುವ ವೇಳೆ ಈ ಅಮಾನವೀಯ ಘಟನೆ ನಡೆದಿದೆ. ಸೌಜನ್ಯಕ್ಕೂ ಕೆಳಗೆ ಇಳಿದು ನೋಡಿಲ್ಲ: ಪೊಲೀಸರ ಗಸ್ತು ವೇಳೆ ರಸ್ತೆಯಲ್ಲಿ ನಾಯಿ ಕೂತಿತ್ತು. ನಾಯಿ ಇದ್ದದ್ದು ಗೊತ್ತಿದ್ದರೂ […]

ಮಲಗಿದ್ದ ಬೀದಿನಾಯಿ ಮೇಲೆ ಹೊಯ್ಸಳ ಹತ್ತಿಸಿದ ಪೊಲೀಸ್ ಡ್ರೈವರ್
ಸಾಧು ಶ್ರೀನಾಥ್​

Updated on: Dec 02, 2019 | 1:57 PM

ಬೆಂಗಳೂರು: ಅತ್ತ, ಹೆಚ್​ಎಸ್​ಆರ್ ಲೇಔಟ್​ನಲ್ಲಿ ಬೀದಿ ನಾಯಿ ಬೊಗಳಿದ್ದಕ್ಕೆ ಡಿಲೆವರಿ ಬಾಯ್ ಹೊಡೆದು ಸಾಯಿಸಿದ ಘಟನೆ ನಡೆದಿತ್ತು. ಆದರೆ ಇಲ್ಲಿ ರಕ್ಷಕರೇ ಭಕ್ಷಕರಾಗಿ ಬೀದಿ ನಾಯಿ ಮೇಲೆ ಅಟ್ಟಹಾಸ ಮೆರೆದಿದ್ದಾರೆ. ಮಾನವೀಯತೆ ಮರೆತ ಪೊಲೀಸರು ಹೊಯ್ಸಳ ವಾಹನವನ್ನು ಬೀದಿ ನಾಯಿಯ ಮೇಲೆ ಹತ್ತಿಸಿದ್ದಾರೆ. ನಿನ್ನೆ ಕೆ.ಆರ್​.ಪುರಂನಲ್ಲಿ ಉಪಚುನಾವಣಾ ಪ್ರಚಾರದ ಗಸ್ತು ತಿರುಗುವ ವೇಳೆ ಈ ಅಮಾನವೀಯ ಘಟನೆ ನಡೆದಿದೆ.

ಸೌಜನ್ಯಕ್ಕೂ ಕೆಳಗೆ ಇಳಿದು ನೋಡಿಲ್ಲ:
ಪೊಲೀಸರ ಗಸ್ತು ವೇಳೆ ರಸ್ತೆಯಲ್ಲಿ ನಾಯಿ ಕೂತಿತ್ತು. ನಾಯಿ ಇದ್ದದ್ದು ಗೊತ್ತಿದ್ದರೂ ಹೊಯ್ಸಳ ವಾಹನ ಹತ್ತಿಸಿ ಅಟ್ಟಹಾಸ ಮೆರೆದಿದ್ದಾರೆ. ಈ ವೇಳೆ ರಸ್ತೆಯಲ್ಲೇ ನಾಯಿ ಕಿರುಚಾಡಿ ನರಳಾಡಿದೆ. ಸೌಜನ್ಯಕ್ಕೂ ಕೆಳಗೆ ಇಳಿದು ನೋಡದೇ ಪೊಲೀಸರು ಸ್ಥಳದಿಂದ ಹೊರಟು ಹೋಗಿದ್ದಾರೆ. ಕೂಡಲೇ ಸ್ಥಳೀಯರು ಬೀದಿ ನಾಯಿಯನ್ನ ರಕ್ಷಿಸಿದ್ದಾರೆ. ಪೊಲೀಸರ ಈ ವರ್ತನೆಗೆ ಪ್ರಾಣಿಪ್ರಿಯರು, ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Published On - 1:16 pm, Mon, 2 December 19

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us