ಕಿಡಿ ಹೊತ್ತಿಸಿದ ಮಾಧುಸ್ವಾಮಿ ಕನಕ ಕದನ, ಇಂದು ಹುಳಿಯಾರು ಬಂದ್..!

ತುಮಕೂರು: ಹುಳಿಯಾರು ಪಟ್ಟಣದಲ್ಲಿರುವ ಸರ್ಕಲ್​ವೊಂದಕ್ಕಿಟ್ಟಿದ್ದ ಕನಕದಾಸರ ಹೆಸರು ಮುಖಂಡರ ಮಧ್ಯೆ ಕಿಡಿ ಹೊತ್ತಿಸಿದೆ. ದಿನಕ್ಕೊಂದು ಹೊಸ ರೂಪ ಪಡೆದು ಇಂದು ಬಂದ್ ಆಚರಣೆಗೂ ಕಾರಣವಾಗಿದೆ. ಬಂದ್​ಗೆ ಕಾರಣವಾದ ‘ಸರ್ಕಲ್ ಹೆಸರು’ ವಿವಾದ: ಕುರುಬ ಸಮುದಾಯ ಮತ್ತು ಸಚಿವ ಜೆ.ಸಿ. ಮಾಧುಸ್ವಾಮಿ‌ ನಡುವಿನ ‘ಕನಕ ಸರ್ಕಲ್’ ವಿವಾದ ತಾರಕಕ್ಕೇರಿದೆ. ಶಮನವಾಗದೆ ಮತ್ತಷ್ಟು ಕಗ್ಗಂಟಾಗಿದೆ. ಸಚಿವರು ಕನಕದಾಸರಿಗೆ ಅವಮಾನಿಸಿದ್ದಾರೆ, ರಾಜೀನಾಮೆ ನೀಡ್ಬೇಕು ಎಂದು ಕುರುಬ ಸಮಾಜದ ಮುಖಂಡರು ಒತ್ತಾಯಿಸಿದ್ದಾರೆ. ಸಭೆ ಸೇರಿ ಚರ್ಚಿಸಿ ಇಂದು ಹುಳಿಯಾರು ಬಂದ್​ಗೆ ಕರೆ ನೀಡಿದ್ದಾರೆ. […]

ಕಿಡಿ ಹೊತ್ತಿಸಿದ ಮಾಧುಸ್ವಾಮಿ ಕನಕ ಕದನ, ಇಂದು ಹುಳಿಯಾರು ಬಂದ್..!
ಸಾಧು ಶ್ರೀನಾಥ್​

Updated on: Nov 21, 2019 | 10:35 AM

ತುಮಕೂರು: ಹುಳಿಯಾರು ಪಟ್ಟಣದಲ್ಲಿರುವ ಸರ್ಕಲ್​ವೊಂದಕ್ಕಿಟ್ಟಿದ್ದ ಕನಕದಾಸರ ಹೆಸರು ಮುಖಂಡರ ಮಧ್ಯೆ ಕಿಡಿ ಹೊತ್ತಿಸಿದೆ. ದಿನಕ್ಕೊಂದು ಹೊಸ ರೂಪ ಪಡೆದು ಇಂದು ಬಂದ್ ಆಚರಣೆಗೂ ಕಾರಣವಾಗಿದೆ.

ಬಂದ್​ಗೆ ಕಾರಣವಾದ ‘ಸರ್ಕಲ್ ಹೆಸರು’ ವಿವಾದ:
ಕುರುಬ ಸಮುದಾಯ ಮತ್ತು ಸಚಿವ ಜೆ.ಸಿ. ಮಾಧುಸ್ವಾಮಿ‌ ನಡುವಿನ ‘ಕನಕ ಸರ್ಕಲ್’ ವಿವಾದ ತಾರಕಕ್ಕೇರಿದೆ. ಶಮನವಾಗದೆ ಮತ್ತಷ್ಟು ಕಗ್ಗಂಟಾಗಿದೆ. ಸಚಿವರು ಕನಕದಾಸರಿಗೆ ಅವಮಾನಿಸಿದ್ದಾರೆ, ರಾಜೀನಾಮೆ ನೀಡ್ಬೇಕು ಎಂದು ಕುರುಬ ಸಮಾಜದ ಮುಖಂಡರು ಒತ್ತಾಯಿಸಿದ್ದಾರೆ. ಸಭೆ ಸೇರಿ ಚರ್ಚಿಸಿ ಇಂದು ಹುಳಿಯಾರು ಬಂದ್​ಗೆ ಕರೆ ನೀಡಿದ್ದಾರೆ.

ಇತರೆ ಸಮಾಜ ಮುಖಂಡರು ಬಂದ್​ಗೆ ಸಾಥ್ ನೀಡ್ತಿದ್ದು, ಬೆಳಗ್ಗೆ 6ರಿಂದ ಸಂಜೆ 6ರವರೆಗೂ ಅಂಗಡಿ ಮುಂಗಟ್ಟು ಮುಚ್ಚಲಿದ್ದಾರೆ. ಜತೆಗೆ ಪ್ರತಿಭಟನಾ ಱಲಿ ಹಮ್ಮಿಕೊಳ್ಳಲಾಗಿದೆ.

ಸರ್ಕಾರದ ವತಿಯಿಂದ ಕನಕ ವೃತ್ತ ನಿರ್ಮಿಸಲಾಗುವುದು ಎಂದು ಸಿಎಂ ಬಿಎಸ್​ವೈ ರಿಲೀಸ್ ಮಾಡಿರೋ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಹುಳಿಯಾರಿನಲ್ಲಿ ಸರ್ಕಲ್ ನಿರ್ಮಿಸಿ ಕನಕದಾಸ ವೃತ್ತ ಎಂದು ನಾಮಕರಣ ಮಾಡಲಾಗುವುದು. ವೃತ್ತಕ್ಕೆ ಕನಕದಾಸರ ಹೆಸರಿಡೋ ಗೊಂದಲ ಅನಾವಶ್ಯಕ.

ಸರ್ಕಲ್​ಗೆ ಕನಕ ಎಂದು ಹೆಸರಿಡಲು ಯಾವ ಅಭ್ಯಂತರವೂ ಇಲ್ಲ. ಬಗ್ಗೆ ಸಚಿವ ಮಾಧುಸ್ವಾಮಿ ಯಾವುದೇ ವಿರೋಧ ವ್ಯಕ್ತಪಡಿಸಿಲ್ಲ. ಈ ಸಮಯದಲ್ಲಿ ಯಾರು ಉದ್ವೇಗಕ್ಕೆ ಒಳಗಾಗೋದು ಬೇಡ. ಬೈ ಎಲೆಕ್ಷನ್ ಮುಗಿದ ಬಳಿಕ ಸರ್ಕಾರದಿಂದ ವೃತ್ತ ನಿರ್ಮಿಸಲಾಗುವುದು ಎಂದು ಬಿಎಸ್​ವೈ ಮಾಧ್ಯಮ ಪ್ರಕಟಣೆಯಲ್ಲಿ ಹೇಳಿದ್ದಾರೆ.

Published On - 7:32 am, Thu, 21 November 19

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us