AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಟ್ಟುವ ಮಕ್ಕಳಿಗೂ ಹಾರ್ಟ್​ ಪ್ರಾಬ್ಲಂ, ಇದಕ್ಕೆ ಪೋಷಕರೇ ಕಾರಣ!

ಬೆಂಗಳೂರು: ಹಾರ್ಟ್ ಚೆನ್ನಾಗಿದ್ರೆ ಓಕೆ. ಒಂದು ಸಾರಿ ಬಡಿತ ನಿಂತು ಹೋಯ್ತೋ ಮುಗಿದೇ ಹೋಯ್ತು. ಅದ್ರಲ್ಲೂ ಹಾರ್ಟ್ ಅಟ್ಯಾಕ್ ಅದ್ಯಾರಿಗೆ ಬರುತ್ತೆ. ಯಾವ ಟೈಂನಲ್ಲಿ ಬರುತ್ತೆ ಗೊತ್ತಾಗಲ್ಲ. ಇದೀಗ ಸಿಲಿಕಾನ್ ಸಿಟಿ ಮಂದಿಯನ್ನ ಹಾರ್ಟ್ ಪ್ರಾಬ್ಲಂ ಕಾಡ್ತಿದೆ. ಏರಿಕೆಯಾಗ್ತಿದೆ ಹೃದಯ ಸಂಬಂಧಿ ಕಾಯಿಲೆ! ಸಿಲಿಕಾನ್ ಸಿಟಿ ಬೆಂಗಳೂರು ಅದೆಷ್ಟು ವೇಗವಾಗಿ ಬೆಳೀತಿದ್ಯೋ, ಅಷ್ಟೇ ವೇಗವಾಗಿ ಕಾಯಿಲೆಗಳು ಅಟ್ಯಾಕ್ ಮಾಡ್ತಿವೆ. ಬೆಂಗಳೂರಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ವರ್ಷದಿಂದ ವರ್ಷಕ್ಕೆ ಏರಿಕೆಯಾಗ್ತಿದೆ. ವೈದ್ಯರ ತಂಡವೊಂದು ನಡೆಸಿದ ಸಮೀಕ್ಷೆಯಲ್ಲಿ ಹಾರ್ಟ್ ಡಿಸೀಸ್​ಗಳು […]

ಹುಟ್ಟುವ ಮಕ್ಕಳಿಗೂ ಹಾರ್ಟ್​ ಪ್ರಾಬ್ಲಂ, ಇದಕ್ಕೆ ಪೋಷಕರೇ ಕಾರಣ!
ಪ್ರಾತಿನಿಧಿಕ ಚಿತ್ರ
ಸಾಧು ಶ್ರೀನಾಥ್​
|

Updated on:Nov 20, 2019 | 10:43 PM

Share

ಬೆಂಗಳೂರು: ಹಾರ್ಟ್ ಚೆನ್ನಾಗಿದ್ರೆ ಓಕೆ. ಒಂದು ಸಾರಿ ಬಡಿತ ನಿಂತು ಹೋಯ್ತೋ ಮುಗಿದೇ ಹೋಯ್ತು. ಅದ್ರಲ್ಲೂ ಹಾರ್ಟ್ ಅಟ್ಯಾಕ್ ಅದ್ಯಾರಿಗೆ ಬರುತ್ತೆ. ಯಾವ ಟೈಂನಲ್ಲಿ ಬರುತ್ತೆ ಗೊತ್ತಾಗಲ್ಲ. ಇದೀಗ ಸಿಲಿಕಾನ್ ಸಿಟಿ ಮಂದಿಯನ್ನ ಹಾರ್ಟ್ ಪ್ರಾಬ್ಲಂ ಕಾಡ್ತಿದೆ.

ಏರಿಕೆಯಾಗ್ತಿದೆ ಹೃದಯ ಸಂಬಂಧಿ ಕಾಯಿಲೆ! ಸಿಲಿಕಾನ್ ಸಿಟಿ ಬೆಂಗಳೂರು ಅದೆಷ್ಟು ವೇಗವಾಗಿ ಬೆಳೀತಿದ್ಯೋ, ಅಷ್ಟೇ ವೇಗವಾಗಿ ಕಾಯಿಲೆಗಳು ಅಟ್ಯಾಕ್ ಮಾಡ್ತಿವೆ. ಬೆಂಗಳೂರಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ವರ್ಷದಿಂದ ವರ್ಷಕ್ಕೆ ಏರಿಕೆಯಾಗ್ತಿದೆ. ವೈದ್ಯರ ತಂಡವೊಂದು ನಡೆಸಿದ ಸಮೀಕ್ಷೆಯಲ್ಲಿ ಹಾರ್ಟ್ ಡಿಸೀಸ್​ಗಳು ಶೇಖಡಾ 15 ರಿಂದ 20 ಪರ್ಸೆಂಟ್ ಹೆಚ್ಚಾಗ್ತಿದೆ. ಅದರಲ್ಲೂ ಮಕ್ಕಳಲ್ಲಿ ಹಾಗೂ ಯುವ ಪೀಳಿಗೆಯಲ್ಲಿ ಹಾರ್ಟ್ ಹೆಚ್ಚಾಗಿ ಡ್ಯಾಮೇಜ್ ಆಗ್ತಿರೋದು ಆತಂಕಕ್ಕೆ ಕಾರಣವಾಗಿದೆ.

ಹುಟ್ಟುವ ಮಕ್ಕಳಿಗೂ ಹಾರ್ಟ್ ಪ್ರಾಬ್ಲಂ! ಇತ್ತೀಚಿನ ದಿನಗಳಲ್ಲಿ ಹುಟ್ಟುವ ಮಕ್ಕಳಿಗೆ ಹೃದಯ ಸಂಬಂಧಿ ಕಾಯಿಲೆ ಹೆಚ್ಚಾಗಿ ಕಾಡುತ್ತಿದೆ. ಈಗಿನ ಮಾಡ್ರನ್ ಯುಗದಲ್ಲಿ ತಾಯಂದಿರ ಲೈಫ್ ಸ್ಟೈಲ್​ ಕೂಡ ಮುಂದೆ ಹುಟ್ಟೋ ಮಕ್ಕಳ ಹಾರ್ಟ್ ಡಿಸೀಸ್​​ಗಳಿಗೆ ಕಾರಣವಾಗುತ್ತಿದೆ.​ ಹೆಣ್ಣು ಮಕ್ಕಳು ಇತ್ತೀಚೆಗೆ ಕುಡಿತ, ಸಿಗರೇಟ್, ಡ್ರಗ್ಸ್ ಸೇವನೆಯಿಂದ ಮಕ್ಕಳಿಗೆ ಸಮಸ್ಯೆಗಳು ಎದುರಾಗಲಿದೆ.

30 ವರ್ಷ ದಾಟಿದ ನಂತರ ಮದುವೆಯಾಗುವೆಯಾದರೆ ಮಕ್ಕಳ ಹಾರ್ಟ್​ಗೆ ತೊಂದರೆಯಾಗಲಿದೆ. ಒಂದು ವೇಳೆ ಗರ್ಭಿಣಿಯರು ಸಿಕ್ಕ ಸಿಕ್ಕ ಮೆಡಿಸನ್ ತೆಗೆದುಕೊಂಡರೂ ಹೃದಯ ಸಂಬಂಧಿ ಕಾಯಿಲೆ ಅಟ್ಯಾಕ್ ಮಾಡಲಿದೆ. ವಂಶ ಪಾರಂಪರ್ಯದಿಂದಲೂ ಕೆಲ ಮಕ್ಕಳಿಗೆ ಹೃದಯದ ತೊಂದರೆ ಕಾಣಿಸಿಕೊಳ್ಳುತ್ತಿದೆ ಎಂದು ಡಾಕ್ಟರ್ಸ್ ನಡೆಸಿರೋ ಸಮೀಕ್ಷೆ ಹೇಳಿದೆ.

ಇನ್ನೊಂದು ಶಾಕಿಂಗ್ ವಿಷ್ಯ ಅಂದ್ರೆ, ಪೋಷಕರು ಸಿಗರೇಟ್, ಮದ್ಯಸೇವನೆ ಸೇರಿದಂತೆ ವಿವಿಧ ಚಟಕ್ಕೆ ದಾಸರಾಗಿದ್ರೆ ಮಕ್ಕಳಿಗೆ ಸಮಸ್ಯೆ ಕಟ್ಟಿಟ್ಟ ಬುತ್ತಿ. ಒಂದು ಚೂರು ನಿರ್ಲಕ್ಷ್ಯ ಮಾಡಿದ್ರೂ ಜೀವಕ್ಕೆ ಕುತ್ತು ಬರಲಿದೆ ಅಂತಾರೆ ಹಿರಿಯ ವೈದ್ಯರು.

Published On - 10:42 pm, Wed, 20 November 19

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!