AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಟ್ಟುವ ಮಕ್ಕಳಿಗೂ ಹಾರ್ಟ್​ ಪ್ರಾಬ್ಲಂ, ಇದಕ್ಕೆ ಪೋಷಕರೇ ಕಾರಣ!

ಬೆಂಗಳೂರು: ಹಾರ್ಟ್ ಚೆನ್ನಾಗಿದ್ರೆ ಓಕೆ. ಒಂದು ಸಾರಿ ಬಡಿತ ನಿಂತು ಹೋಯ್ತೋ ಮುಗಿದೇ ಹೋಯ್ತು. ಅದ್ರಲ್ಲೂ ಹಾರ್ಟ್ ಅಟ್ಯಾಕ್ ಅದ್ಯಾರಿಗೆ ಬರುತ್ತೆ. ಯಾವ ಟೈಂನಲ್ಲಿ ಬರುತ್ತೆ ಗೊತ್ತಾಗಲ್ಲ. ಇದೀಗ ಸಿಲಿಕಾನ್ ಸಿಟಿ ಮಂದಿಯನ್ನ ಹಾರ್ಟ್ ಪ್ರಾಬ್ಲಂ ಕಾಡ್ತಿದೆ. ಏರಿಕೆಯಾಗ್ತಿದೆ ಹೃದಯ ಸಂಬಂಧಿ ಕಾಯಿಲೆ! ಸಿಲಿಕಾನ್ ಸಿಟಿ ಬೆಂಗಳೂರು ಅದೆಷ್ಟು ವೇಗವಾಗಿ ಬೆಳೀತಿದ್ಯೋ, ಅಷ್ಟೇ ವೇಗವಾಗಿ ಕಾಯಿಲೆಗಳು ಅಟ್ಯಾಕ್ ಮಾಡ್ತಿವೆ. ಬೆಂಗಳೂರಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ವರ್ಷದಿಂದ ವರ್ಷಕ್ಕೆ ಏರಿಕೆಯಾಗ್ತಿದೆ. ವೈದ್ಯರ ತಂಡವೊಂದು ನಡೆಸಿದ ಸಮೀಕ್ಷೆಯಲ್ಲಿ ಹಾರ್ಟ್ ಡಿಸೀಸ್​ಗಳು […]

ಹುಟ್ಟುವ ಮಕ್ಕಳಿಗೂ ಹಾರ್ಟ್​ ಪ್ರಾಬ್ಲಂ, ಇದಕ್ಕೆ ಪೋಷಕರೇ ಕಾರಣ!
ಪ್ರಾತಿನಿಧಿಕ ಚಿತ್ರ
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:Nov 20, 2019 | 10:43 PM

Share

ಬೆಂಗಳೂರು: ಹಾರ್ಟ್ ಚೆನ್ನಾಗಿದ್ರೆ ಓಕೆ. ಒಂದು ಸಾರಿ ಬಡಿತ ನಿಂತು ಹೋಯ್ತೋ ಮುಗಿದೇ ಹೋಯ್ತು. ಅದ್ರಲ್ಲೂ ಹಾರ್ಟ್ ಅಟ್ಯಾಕ್ ಅದ್ಯಾರಿಗೆ ಬರುತ್ತೆ. ಯಾವ ಟೈಂನಲ್ಲಿ ಬರುತ್ತೆ ಗೊತ್ತಾಗಲ್ಲ. ಇದೀಗ ಸಿಲಿಕಾನ್ ಸಿಟಿ ಮಂದಿಯನ್ನ ಹಾರ್ಟ್ ಪ್ರಾಬ್ಲಂ ಕಾಡ್ತಿದೆ.

ಏರಿಕೆಯಾಗ್ತಿದೆ ಹೃದಯ ಸಂಬಂಧಿ ಕಾಯಿಲೆ! ಸಿಲಿಕಾನ್ ಸಿಟಿ ಬೆಂಗಳೂರು ಅದೆಷ್ಟು ವೇಗವಾಗಿ ಬೆಳೀತಿದ್ಯೋ, ಅಷ್ಟೇ ವೇಗವಾಗಿ ಕಾಯಿಲೆಗಳು ಅಟ್ಯಾಕ್ ಮಾಡ್ತಿವೆ. ಬೆಂಗಳೂರಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ವರ್ಷದಿಂದ ವರ್ಷಕ್ಕೆ ಏರಿಕೆಯಾಗ್ತಿದೆ. ವೈದ್ಯರ ತಂಡವೊಂದು ನಡೆಸಿದ ಸಮೀಕ್ಷೆಯಲ್ಲಿ ಹಾರ್ಟ್ ಡಿಸೀಸ್​ಗಳು ಶೇಖಡಾ 15 ರಿಂದ 20 ಪರ್ಸೆಂಟ್ ಹೆಚ್ಚಾಗ್ತಿದೆ. ಅದರಲ್ಲೂ ಮಕ್ಕಳಲ್ಲಿ ಹಾಗೂ ಯುವ ಪೀಳಿಗೆಯಲ್ಲಿ ಹಾರ್ಟ್ ಹೆಚ್ಚಾಗಿ ಡ್ಯಾಮೇಜ್ ಆಗ್ತಿರೋದು ಆತಂಕಕ್ಕೆ ಕಾರಣವಾಗಿದೆ.

ಹುಟ್ಟುವ ಮಕ್ಕಳಿಗೂ ಹಾರ್ಟ್ ಪ್ರಾಬ್ಲಂ! ಇತ್ತೀಚಿನ ದಿನಗಳಲ್ಲಿ ಹುಟ್ಟುವ ಮಕ್ಕಳಿಗೆ ಹೃದಯ ಸಂಬಂಧಿ ಕಾಯಿಲೆ ಹೆಚ್ಚಾಗಿ ಕಾಡುತ್ತಿದೆ. ಈಗಿನ ಮಾಡ್ರನ್ ಯುಗದಲ್ಲಿ ತಾಯಂದಿರ ಲೈಫ್ ಸ್ಟೈಲ್​ ಕೂಡ ಮುಂದೆ ಹುಟ್ಟೋ ಮಕ್ಕಳ ಹಾರ್ಟ್ ಡಿಸೀಸ್​​ಗಳಿಗೆ ಕಾರಣವಾಗುತ್ತಿದೆ.​ ಹೆಣ್ಣು ಮಕ್ಕಳು ಇತ್ತೀಚೆಗೆ ಕುಡಿತ, ಸಿಗರೇಟ್, ಡ್ರಗ್ಸ್ ಸೇವನೆಯಿಂದ ಮಕ್ಕಳಿಗೆ ಸಮಸ್ಯೆಗಳು ಎದುರಾಗಲಿದೆ.

30 ವರ್ಷ ದಾಟಿದ ನಂತರ ಮದುವೆಯಾಗುವೆಯಾದರೆ ಮಕ್ಕಳ ಹಾರ್ಟ್​ಗೆ ತೊಂದರೆಯಾಗಲಿದೆ. ಒಂದು ವೇಳೆ ಗರ್ಭಿಣಿಯರು ಸಿಕ್ಕ ಸಿಕ್ಕ ಮೆಡಿಸನ್ ತೆಗೆದುಕೊಂಡರೂ ಹೃದಯ ಸಂಬಂಧಿ ಕಾಯಿಲೆ ಅಟ್ಯಾಕ್ ಮಾಡಲಿದೆ. ವಂಶ ಪಾರಂಪರ್ಯದಿಂದಲೂ ಕೆಲ ಮಕ್ಕಳಿಗೆ ಹೃದಯದ ತೊಂದರೆ ಕಾಣಿಸಿಕೊಳ್ಳುತ್ತಿದೆ ಎಂದು ಡಾಕ್ಟರ್ಸ್ ನಡೆಸಿರೋ ಸಮೀಕ್ಷೆ ಹೇಳಿದೆ.

ಇನ್ನೊಂದು ಶಾಕಿಂಗ್ ವಿಷ್ಯ ಅಂದ್ರೆ, ಪೋಷಕರು ಸಿಗರೇಟ್, ಮದ್ಯಸೇವನೆ ಸೇರಿದಂತೆ ವಿವಿಧ ಚಟಕ್ಕೆ ದಾಸರಾಗಿದ್ರೆ ಮಕ್ಕಳಿಗೆ ಸಮಸ್ಯೆ ಕಟ್ಟಿಟ್ಟ ಬುತ್ತಿ. ಒಂದು ಚೂರು ನಿರ್ಲಕ್ಷ್ಯ ಮಾಡಿದ್ರೂ ಜೀವಕ್ಕೆ ಕುತ್ತು ಬರಲಿದೆ ಅಂತಾರೆ ಹಿರಿಯ ವೈದ್ಯರು.

Published On - 10:42 pm, Wed, 20 November 19

Follow Us
100ರೂ.ನೀರಿನ ಬಾಟಲಿ ತಗೋತಾರೆ:50ರೂ. ಕೊಟ್ಟು ಸಕ್ಕರೆ ತೆಗೊಂಡ್ರೆ ಏನೂ ಆಗಲ್ಲ
100ರೂ.ನೀರಿನ ಬಾಟಲಿ ತಗೋತಾರೆ:50ರೂ. ಕೊಟ್ಟು ಸಕ್ಕರೆ ತೆಗೊಂಡ್ರೆ ಏನೂ ಆಗಲ್ಲ
ರೈತರಲ್ಲಿ ಆತಂಕ ತಂದ ಅರಣ್ಯ ಇಲಾಖೆ ಸಚಿವರ ಆ ಹೇಳಿಕೆ: ಹೇಳಿದ್ದೇನು?
ರೈತರಲ್ಲಿ ಆತಂಕ ತಂದ ಅರಣ್ಯ ಇಲಾಖೆ ಸಚಿವರ ಆ ಹೇಳಿಕೆ: ಹೇಳಿದ್ದೇನು?
11 ವರ್ಷದ ಬಳಿಕ ಸಿಕ್ಕಿಬಿದ್ದ ತನ್ನನ್ನೇ ತಾನು ಕೊಲೆ ಮಾಡಿಕೊಂಡಿದ್ದ ಭೂಪ
11 ವರ್ಷದ ಬಳಿಕ ಸಿಕ್ಕಿಬಿದ್ದ ತನ್ನನ್ನೇ ತಾನು ಕೊಲೆ ಮಾಡಿಕೊಂಡಿದ್ದ ಭೂಪ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ