AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಿಡಿ ಹೊತ್ತಿಸಿದ ಮಾಧುಸ್ವಾಮಿ ಕನಕ ಕದನ, ಇಂದು ಹುಳಿಯಾರು ಬಂದ್..!

ತುಮಕೂರು: ಹುಳಿಯಾರು ಪಟ್ಟಣದಲ್ಲಿರುವ ಸರ್ಕಲ್​ವೊಂದಕ್ಕಿಟ್ಟಿದ್ದ ಕನಕದಾಸರ ಹೆಸರು ಮುಖಂಡರ ಮಧ್ಯೆ ಕಿಡಿ ಹೊತ್ತಿಸಿದೆ. ದಿನಕ್ಕೊಂದು ಹೊಸ ರೂಪ ಪಡೆದು ಇಂದು ಬಂದ್ ಆಚರಣೆಗೂ ಕಾರಣವಾಗಿದೆ. ಬಂದ್​ಗೆ ಕಾರಣವಾದ ‘ಸರ್ಕಲ್ ಹೆಸರು’ ವಿವಾದ: ಕುರುಬ ಸಮುದಾಯ ಮತ್ತು ಸಚಿವ ಜೆ.ಸಿ. ಮಾಧುಸ್ವಾಮಿ‌ ನಡುವಿನ ‘ಕನಕ ಸರ್ಕಲ್’ ವಿವಾದ ತಾರಕಕ್ಕೇರಿದೆ. ಶಮನವಾಗದೆ ಮತ್ತಷ್ಟು ಕಗ್ಗಂಟಾಗಿದೆ. ಸಚಿವರು ಕನಕದಾಸರಿಗೆ ಅವಮಾನಿಸಿದ್ದಾರೆ, ರಾಜೀನಾಮೆ ನೀಡ್ಬೇಕು ಎಂದು ಕುರುಬ ಸಮಾಜದ ಮುಖಂಡರು ಒತ್ತಾಯಿಸಿದ್ದಾರೆ. ಸಭೆ ಸೇರಿ ಚರ್ಚಿಸಿ ಇಂದು ಹುಳಿಯಾರು ಬಂದ್​ಗೆ ಕರೆ ನೀಡಿದ್ದಾರೆ. […]

ಕಿಡಿ ಹೊತ್ತಿಸಿದ ಮಾಧುಸ್ವಾಮಿ ಕನಕ ಕದನ, ಇಂದು ಹುಳಿಯಾರು ಬಂದ್..!
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:Nov 21, 2019 | 10:35 AM

Share

ತುಮಕೂರು: ಹುಳಿಯಾರು ಪಟ್ಟಣದಲ್ಲಿರುವ ಸರ್ಕಲ್​ವೊಂದಕ್ಕಿಟ್ಟಿದ್ದ ಕನಕದಾಸರ ಹೆಸರು ಮುಖಂಡರ ಮಧ್ಯೆ ಕಿಡಿ ಹೊತ್ತಿಸಿದೆ. ದಿನಕ್ಕೊಂದು ಹೊಸ ರೂಪ ಪಡೆದು ಇಂದು ಬಂದ್ ಆಚರಣೆಗೂ ಕಾರಣವಾಗಿದೆ.

ಬಂದ್​ಗೆ ಕಾರಣವಾದ ‘ಸರ್ಕಲ್ ಹೆಸರು’ ವಿವಾದ: ಕುರುಬ ಸಮುದಾಯ ಮತ್ತು ಸಚಿವ ಜೆ.ಸಿ. ಮಾಧುಸ್ವಾಮಿ‌ ನಡುವಿನ ‘ಕನಕ ಸರ್ಕಲ್’ ವಿವಾದ ತಾರಕಕ್ಕೇರಿದೆ. ಶಮನವಾಗದೆ ಮತ್ತಷ್ಟು ಕಗ್ಗಂಟಾಗಿದೆ. ಸಚಿವರು ಕನಕದಾಸರಿಗೆ ಅವಮಾನಿಸಿದ್ದಾರೆ, ರಾಜೀನಾಮೆ ನೀಡ್ಬೇಕು ಎಂದು ಕುರುಬ ಸಮಾಜದ ಮುಖಂಡರು ಒತ್ತಾಯಿಸಿದ್ದಾರೆ. ಸಭೆ ಸೇರಿ ಚರ್ಚಿಸಿ ಇಂದು ಹುಳಿಯಾರು ಬಂದ್​ಗೆ ಕರೆ ನೀಡಿದ್ದಾರೆ.

ಇತರೆ ಸಮಾಜ ಮುಖಂಡರು ಬಂದ್​ಗೆ ಸಾಥ್ ನೀಡ್ತಿದ್ದು, ಬೆಳಗ್ಗೆ 6ರಿಂದ ಸಂಜೆ 6ರವರೆಗೂ ಅಂಗಡಿ ಮುಂಗಟ್ಟು ಮುಚ್ಚಲಿದ್ದಾರೆ. ಜತೆಗೆ ಪ್ರತಿಭಟನಾ ಱಲಿ ಹಮ್ಮಿಕೊಳ್ಳಲಾಗಿದೆ.

ಸರ್ಕಾರದ ವತಿಯಿಂದ ಕನಕ ವೃತ್ತ ನಿರ್ಮಿಸಲಾಗುವುದು ಎಂದು ಸಿಎಂ ಬಿಎಸ್​ವೈ ರಿಲೀಸ್ ಮಾಡಿರೋ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಹುಳಿಯಾರಿನಲ್ಲಿ ಸರ್ಕಲ್ ನಿರ್ಮಿಸಿ ಕನಕದಾಸ ವೃತ್ತ ಎಂದು ನಾಮಕರಣ ಮಾಡಲಾಗುವುದು. ವೃತ್ತಕ್ಕೆ ಕನಕದಾಸರ ಹೆಸರಿಡೋ ಗೊಂದಲ ಅನಾವಶ್ಯಕ.

ಸರ್ಕಲ್​ಗೆ ಕನಕ ಎಂದು ಹೆಸರಿಡಲು ಯಾವ ಅಭ್ಯಂತರವೂ ಇಲ್ಲ. ಬಗ್ಗೆ ಸಚಿವ ಮಾಧುಸ್ವಾಮಿ ಯಾವುದೇ ವಿರೋಧ ವ್ಯಕ್ತಪಡಿಸಿಲ್ಲ. ಈ ಸಮಯದಲ್ಲಿ ಯಾರು ಉದ್ವೇಗಕ್ಕೆ ಒಳಗಾಗೋದು ಬೇಡ. ಬೈ ಎಲೆಕ್ಷನ್ ಮುಗಿದ ಬಳಿಕ ಸರ್ಕಾರದಿಂದ ವೃತ್ತ ನಿರ್ಮಿಸಲಾಗುವುದು ಎಂದು ಬಿಎಸ್​ವೈ ಮಾಧ್ಯಮ ಪ್ರಕಟಣೆಯಲ್ಲಿ ಹೇಳಿದ್ದಾರೆ.

Published On - 7:32 am, Thu, 21 November 19

Follow Us
ಇಂದು ಆಷಾಢ ಅಮಾವಾಸ್ಯೆ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಆಷಾಢ ಅಮಾವಾಸ್ಯೆ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇರಾನ್ ಜಲಾಂತರ್ಗಾಮಿ ಕೇಂದ್ರದ ಮೇಲೆ ಅಮೆರಿಕದಿಂದ ಕಡಲ ಡ್ರೋನ್ ದಾಳಿ
ಇರಾನ್ ಜಲಾಂತರ್ಗಾಮಿ ಕೇಂದ್ರದ ಮೇಲೆ ಅಮೆರಿಕದಿಂದ ಕಡಲ ಡ್ರೋನ್ ದಾಳಿ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು