ಅಪ್ಪಿತಪ್ಪಿಯೂ ದಿಲ್ಲಿ ಬಿಟ್ಟು ಕದಲುವ ಮನಸ್ಥಿತಿ, ಪರಿಸ್ಥಿತಿಯಲ್ಲಿಲ್ಲ ಡಿಕೆಶಿ! ಯಾಕೆ?

ಬೆಂಗಳೂರು: ಕಾಂಗ್ರೆಸ್​ನ ವರ್ಚಸ್ವೀ ನಾಯಕ ಡಿ.ಕೆ.‌ ಶಿವಕುಮಾರ್ ಅವರು ಬೆಂಗಳೂರು ಬಿಟ್ಟು 50 ದಿನಗಳೇ ಆಗುತ್ತಿವೆ. ಯಾವತ್ತೂ ಅವರು ಇಷ್ಟು ದಿನ ಕರ್ನಾಟಕ ಬಿಟ್ಟು ಹೋಗಿಲ್ಲ. ಕಾರಣವೇನೇ ಇರಲಿ ಈ ಮಧ್ಯೆ, ನಿನ್ನೆ ಕೋರ್ಟ್​ ಅವರಿಗೆ ಜಾಮೀನು ನೀಡಿ, ನೀವು ಸದ್ಯಕ್ಕೆ ಸ್ವತಂತ್ರರು. ಎಲ್ಲಿಗೆ ಬೇಕಾದರೂ ಹೋಗಬಹುದು, ಆದ್ರೆ ದೇಶವನ್ನೇ ಬಿಟ್ಟು ಹೋಗುವ ಹಾಗಿಲ್ಲ ಎಂದು ಹೇಳಿದೆ. ಸರಿ, ಸಾಕ್ಷಾತ್​ ಕೋರ್ಟ್ ಹೀಗೆ ಹೇಳಿದ ಮೇಲೆ ಡಿಕೆಶಿ, ನಿನ್ನೆ ತಿಹಾರ್​ ಜೈಲಿನಿಂದ ಹೊರಬಂದು ಸೀದಾ ಇಂದಾದರೂ ಬೆಂಗಳೂರಿಗೆ […]

ಅಪ್ಪಿತಪ್ಪಿಯೂ ದಿಲ್ಲಿ ಬಿಟ್ಟು ಕದಲುವ ಮನಸ್ಥಿತಿ, ಪರಿಸ್ಥಿತಿಯಲ್ಲಿಲ್ಲ ಡಿಕೆಶಿ! ಯಾಕೆ?
ಸಾಧು ಶ್ರೀನಾಥ್​

Updated on: Oct 24, 2019 | 12:40 PM

ಬೆಂಗಳೂರು: ಕಾಂಗ್ರೆಸ್​ನ ವರ್ಚಸ್ವೀ ನಾಯಕ ಡಿ.ಕೆ.‌ ಶಿವಕುಮಾರ್ ಅವರು ಬೆಂಗಳೂರು ಬಿಟ್ಟು 50 ದಿನಗಳೇ ಆಗುತ್ತಿವೆ. ಯಾವತ್ತೂ ಅವರು ಇಷ್ಟು ದಿನ ಕರ್ನಾಟಕ ಬಿಟ್ಟು ಹೋಗಿಲ್ಲ. ಕಾರಣವೇನೇ ಇರಲಿ ಈ ಮಧ್ಯೆ, ನಿನ್ನೆ ಕೋರ್ಟ್​ ಅವರಿಗೆ ಜಾಮೀನು ನೀಡಿ, ನೀವು ಸದ್ಯಕ್ಕೆ ಸ್ವತಂತ್ರರು. ಎಲ್ಲಿಗೆ ಬೇಕಾದರೂ ಹೋಗಬಹುದು, ಆದ್ರೆ ದೇಶವನ್ನೇ ಬಿಟ್ಟು ಹೋಗುವ ಹಾಗಿಲ್ಲ ಎಂದು ಹೇಳಿದೆ.

ಸರಿ, ಸಾಕ್ಷಾತ್​ ಕೋರ್ಟ್ ಹೀಗೆ ಹೇಳಿದ ಮೇಲೆ ಡಿಕೆಶಿ, ನಿನ್ನೆ ತಿಹಾರ್​ ಜೈಲಿನಿಂದ ಹೊರಬಂದು ಸೀದಾ ಇಂದಾದರೂ ಬೆಂಗಳೂರಿಗೆ ಬಂದು ತಮ್ಮ ಅಭಿಮಾನಿಗಳ ಮುಂದೆ ಕಾಣಿಸಿಕೊಳ್ಳುತ್ತಾರೆ ಎಂದು ಭಾವಿಸಲಾಗಿತ್ತು. ಆದ್ರೆ ಡಿಕೆಶಿ ಸುತರಾಂ ಬೆಂಗಳೂರಿಗೆ ಬರುವ ಮೂಡ್​​ನಲ್ಲಿ ಇಲ್ಲ. ಅಪ್ಪಿತಪ್ಪಿಯೂ ದಿಲ್ಲಿ ಬಿಟ್ಟು ಕದಲುವ ಮನಸ್ಥಿತಿ/ ಪರಿಸ್ಥಿತಿ ಅವರದ್ದಾಗಿಲ್ಲ. ಏಕೆಂದ್ರೆ ಅವರನ್ನು ಇಷ್ಟು ದಿನ ತಿಹಾರ್​ ಜೈಲಿಗೆ ಕಳುಹಿಸಿದ್ದ ಜಾರಿ ನಿರ್ದೇಶನಲಾಯವಾಗಲಿ ಅಥವಾ ಸಿಬಿಐ ಆಗಲಿ ಅವರನ್ನು ಕಣ್ಣಲ್ಲಿ ಕಣ್ಣಿಟ್ಟು ಹೊಂಚುಹಾಕುತ್ತಿದೆ. ಮತ್ತೆ ವಶಕ್ಕೆ ತೆಗೆದುಕೊಳ್ಳಲು. ಇಂತಹ ಪರಿಸ್ಥಿತಿ ಇರುವಾಗ ಡಿಕೆಶಿ ತಾನೇ ಹೇಗೆ ಕರ್ನಾಟಕಕ್ಕೆ ಮರಳುತ್ತಾರೆ.

ಪರಿಸ್ಥಿತಿಯನ್ನು ನಿಭಾಯಿಸಲು ಅಗ್ರಜನಿಗೆ ಭುಜಕ್ಕೆ ಭುಜ ಕೊಟ್ಟು, ಕಷ್ಟಕಾಲದಲ್ಲಿ ತನಗೆ ಕಾಪು ನೀಡುತ್ತಿರುವ ತಮ್ಮ ಡಿ.ಕೆ.‌ ಸುರೇಶ್​ ಮನೆಯಲ್ಲೇ ಸದ್ಯಕ್ಕೆ ಶಿವಕುಮಾರ್ ವಾಸ್ತವ್ಯ ಹೂಡಿದ್ದಾರೆ. ಶಿವಕುಮಾರ್ ವಿಶ್ರಾಂತಿ ಪಡೆಯುತ್ತಿದ್ದು, ಇವತ್ತು ವಕೀಲರನ್ನು ಭೇಟಿ ಮಾಡಲಿದ್ದಾರೆ. ಅವರು ಏನು ಹೇಳುತ್ತಾರೋ ಹಾಗೆ ತಮ್ಮ ಮುಂದಿನ ಹೆಜ್ಜೆ ಇಡಲಿದ್ದಾರೆ ಎಂದು ಸ್ವತಃ ಸುರೇಶ್​ ಹೇಳಿದ್ದಾರೆ. ಅತ್ತ ಸಿಬಿಐ, ತನ್ನ ಕುಣಿಕೆಯನ್ನು ಕೈಯಲ್ಲಿ ಹಿಡಿದು ನಿಂತಿದೆ ಎನ್ನಲಾಗಿದೆ. ಹಾಗಾಗಿ ಡಿಕೆ ಶಿವಕುಮಾರ್​ ಕರ್ನಾಟಕದತ್ತ ತಲೆ ಹಾಕುವ ಆಲೋಚನೆಯನ್ನೂ ಮಾಡಿದಂತಿಲ್ಲ.

Published On - 11:01 am, Thu, 24 October 19

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us