ಸ್ಥಳ ಮಹಜರುಗೆ ಕರೆದೊಯ್ಯುವ ವೇಳೆ ಮಾಧ್ಯಮಗಳ ವಿರುದ್ಧ ನಾಲಗೆ ಹರಿಬಿಟ್ಟ ಆರ್​ಡಿ ಪಾಟೀಲ್

| Updated By: Rakesh Nayak Manchi

Updated on: Nov 11, 2023 | 7:14 PM

ಕೆಇಎ ನಡೆಸಿದ ಎಫ್​ಡಿಎ ನೇಮಕಾತಿ ಪರೀಕ್ಷೆಯಲ್ಲಿ ನಡೆದ ಅಕ್ರಮ ಪ್ರಕರಣದಲ್ಲಿ ಭಾಗಿಯಾಗಿ ಪೊಲೀಸರ ಬಂಧನದಲ್ಲಿರುವ ಕಿಂಗ್​ಪಿನ್ ಆರ್​ಡಿ ಪಾಟೀಲ್​, ಮಾಧ್ಯಮಗಳ ವಿರುದ್ದ ನಾಲಿಗೆ ಹರಿಬಿಟ್ಟಿದ್ದಾನೆ. ಪಿಎಸ್​ಐ ನೇಮಕಾತಿ ಪರೀಕ್ಷೆ ಅಕ್ರಮದಲ್ಲೂ ಸಿಐಡಿ ತನಿಖೆ ವೇಳೆ ಮಾಧ್ಯಮಗಳ ವಿರುದ್ಧ ದರ್ಪ ತೋರಿದ್ದ.

ಸ್ಥಳ ಮಹಜರುಗೆ ಕರೆದೊಯ್ಯುವ ವೇಳೆ ಮಾಧ್ಯಮಗಳ ವಿರುದ್ಧ ನಾಲಗೆ ಹರಿಬಿಟ್ಟ ಆರ್​ಡಿ ಪಾಟೀಲ್
ಮಾಧ್ಯಮದವರ ವಿರುದ್ಧ ನಾಲಗೆ ಹರಿಬಿಟ್ಟ ಆರ್​ಡಿ ಪಾಟೀಲ್
Follow us on

ಕಲಬುರಗಿ, ನ.11: ಕೆಇಎ (KEA) ನಡೆಸಿದ ಎಫ್​ಡಿಎ ನೇಮಕಾತಿ ಪರೀಕ್ಷೆಯಲ್ಲಿ ನಡೆದ ಅಕ್ರಮ ಪ್ರಕರಣದಲ್ಲಿ ಭಾಗಿಯಾಗಿ ಪೊಲೀಸರ ಬಂಧನದಲ್ಲಿರುವ ಕಿಂಗ್​ಪಿನ್ ಆರ್​ಡಿ ಪಾಟೀಲ್ (R.D.Patil)​, ಮಾಧ್ಯಮಗಳ ವಿರುದ್ದ ನಾಲಿಗೆ ಹರಿಬಿಟ್ಟಿದ್ದಾನೆ. ಎರಡನೇ ಬಾರಿ ಪೊಲೀಸರ ಕೈಗೆ ಸಿಕ್ಕಿಬಿದಿದ್ದರೂ ಈತನ ಧಿಮಾಕು, ದರ್ಪ ಕಡಿಮೆಯಾಗಿಲ್ಲ.

ಸ್ಥಳ ಮಹಜರು ನಡೆಸುವ ನಿಟ್ಟಿನಲ್ಲಿ ಇಂದು ಪೊಲೀಸರು ಆರ್​ಡಿ ಪಾಟೀಲ್​ನನ್ನು ಕೊರೆದೊಯ್ಯುತ್ತಿದ್ದರು. ಈ ವೇಳೆ ಮಾಧ್ಯಮದವರನ್ನು ಕಂಡು ಆಕ್ರೋಶಗೊಂಡ ಆರ್​ಡಿ ಪಾಟೀಲ್, ಸುಮ್ಮನೆ ಬೊಗಳೊದಲ್ಲ, ದಾಖಲೆ ಕೊಡ್ರೋ, ಯೂಸ್ ಲೆಸ್ ಎಂದು ನಾಲಿಗೆ ಹರಿಬಿಟ್ಟು ಧಿಮಾಕು ತೋರಿಸಿದ್ದಾನೆ.

ಇದನ್ನೂ ಓದಿ: KEA ಪರೀಕ್ಷೆಯಲ್ಲಿ ಅಕ್ರಮ ಕೇಸ್: ಆರ್​ಡಿ ಪಾಟೀಲ್ ಮತ್ತೊಂದು ಸ್ಫೋಟಕ ವಿಡಿಯೋ ಬಹಿರಂಗ

ಪೊಲೀಸರ ಕೈಗೆ ಲಾಕ್ ಆದರೂ ಆರ್​ಡಿ ಪಾಟೀಲ್ ಧಿಮಾಕು ಕಮ್ಮಿ ಆಗಿಲ್ಲ. ಈ ಹಿಂದೆ ನಡೆದ ಪಿಎಸ್​ಐ ನೇಮಕಾತಿ ಪರೀಕ್ಷೆ ಅಕ್ರಮದಲ್ಲಿ ಸಿಐಡಿ ತನಿಖೆ ನಡೆಯುತ್ತಿದ್ದಾಗಲೂ ಮಾಧ್ಯಮಗಳ ವಿರುದ್ಧ ದರ್ಪ ತೋರಿದ್ದ. ಕಂಬಿ ಎಣಿಸಿದ್ದರೂ ಪರೀಕ್ಷೆ ಅಕ್ರಮದ ಕಿಂಗ್ ಪಿನ್ ಆರ್​ಡಿ ಪಾಟೀಲ್ ದರ್ಪ, ಧಿಮಾಕು ಕಡಿಮೆಯಾಗಿಲ್ಲ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ