ನೆರೆ ಸಂತ್ರಸ್ತೆಯ ಹಣ ಪೀಕಿದ ಆರೋಪ: ಬಿಲ್​ ಕಲೆಕ್ಟರ್ ವಿರುದ್ಧ ದೂರು​​

ಮಡಿಕೇರಿ: 2018ರಲ್ಲಿ ಬಂದಿದ್ದ ಭೀಕರ ಪ್ರವಾಹದ ವೇಳೆ ಹಲವರು ಮನೆ, ಜಮೀನು ಕಳೆದುಕೊಂಡು ಬೀದಿಗೆ ಬಂದಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಆದ್ರೆ, ಮನೆ ಮಠ ಕಳೆದುಕೊಂಡಿರುವವರಿಗೆ ಸಹಾಯ ಮಾಡುವ ಬದಲು ವೃದ್ಧ ಪ್ರವಾಹ ಸಂತ್ರಸ್ತೆಯಿಂದ ಹಣ ಪೀಕಿರುವ ಘಟನೆ ಬೆಳಕಿಗೆ ಬಂದಿದೆ. ಮಡಿಕೇರಿ ನಗರಸಭೆಯ ಬಿಲ್‌ ಕಲೆಕ್ಟರ್‌ ಲೋಹಿತ್‌ ವಿರುದ್ಧ ಹಣ ಪಡೆದಿರುವ ಗಂಭೀರ ಆರೋಪ ಕೇಳಿಬಂದಿದೆ. 2018ರ ಪ್ರವಾಹದ ವೇಳೆ ನೂರ್‌ಜಹಾನ್‌ ಎಂಬುವರ ಮನೆಗೆ ಹಾನಿಯಾಗಿತ್ತು. ಈ ವೇಳೆ ಬಾಡಿಗೆ ರೂಪದಲ್ಲಿ ನೂರ್‌ಜಹಾನ್‌ಗೆ ಸರ್ಕಾರ 1.40 […]

ನೆರೆ ಸಂತ್ರಸ್ತೆಯ ಹಣ ಪೀಕಿದ ಆರೋಪ: ಬಿಲ್​ ಕಲೆಕ್ಟರ್ ವಿರುದ್ಧ ದೂರು​​
ಸಾಧು ಶ್ರೀನಾಥ್​

Updated on: Feb 26, 2020 | 10:14 AM

ಮಡಿಕೇರಿ: 2018ರಲ್ಲಿ ಬಂದಿದ್ದ ಭೀಕರ ಪ್ರವಾಹದ ವೇಳೆ ಹಲವರು ಮನೆ, ಜಮೀನು ಕಳೆದುಕೊಂಡು ಬೀದಿಗೆ ಬಂದಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಆದ್ರೆ, ಮನೆ ಮಠ ಕಳೆದುಕೊಂಡಿರುವವರಿಗೆ ಸಹಾಯ ಮಾಡುವ ಬದಲು ವೃದ್ಧ ಪ್ರವಾಹ ಸಂತ್ರಸ್ತೆಯಿಂದ ಹಣ ಪೀಕಿರುವ ಘಟನೆ ಬೆಳಕಿಗೆ ಬಂದಿದೆ. ಮಡಿಕೇರಿ ನಗರಸಭೆಯ ಬಿಲ್‌ ಕಲೆಕ್ಟರ್‌ ಲೋಹಿತ್‌ ವಿರುದ್ಧ ಹಣ ಪಡೆದಿರುವ ಗಂಭೀರ ಆರೋಪ ಕೇಳಿಬಂದಿದೆ.

2018ರ ಪ್ರವಾಹದ ವೇಳೆ ನೂರ್‌ಜಹಾನ್‌ ಎಂಬುವರ ಮನೆಗೆ ಹಾನಿಯಾಗಿತ್ತು. ಈ ವೇಳೆ ಬಾಡಿಗೆ ರೂಪದಲ್ಲಿ ನೂರ್‌ಜಹಾನ್‌ಗೆ ಸರ್ಕಾರ 1.40 ಲಕ್ಷ ಹಣ ವರ್ಗಾವಣೆ ಮಾಡಿತ್ತು. ಈ ಹಣದಲ್ಲಿ 45 ಸಾವಿರ ರೂಪಾಯಿಯನ್ನು ಚಾಮುಂಡೇಶ್ವರಿ ನಗರದ ನಿವಾಸಿ ಲೋಹಿತ್ ಪಡೆದಿದ್ದ. ಬಳಿಕ ಮತ್ತೆ ಹಣ ನೀಡುವಂತೆ ನೂರ್‌ಜಹಾನ್‌ಗೆ ಕಿರುಕುಳ ನೀಡುತ್ತಿದ್ದಾನೆ ಎನ್ನಲಾಗಿದೆ. ಹಾಗಾಗಿ ಬಿಲ್‌ ಕಲೆಕ್ಟರ್‌ ಕಿರುಕುಳದಿಂದ ಬೇಸತ್ತ ಪ್ರವಾಹ ಸಂತ್ರಸ್ತೆ ಮಡಿಕೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us