AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ ಕೇಳಲು ಮನೆಬಾಗಿಲಿಗೆ ಬರುವವರ ಕೈಲಿ ಚಿಕನ್​-ಮಟನ್​ ಪ್ಯಾಕೆಟ್​; ಕೊಪ್ಪಳದಲ್ಲಿ ‘ರಾತ್ರಿ ಆಮಿಷ’ ಮಾಮೂಲು

ಮುದ್ದಾಬಳ್ಳಿಯಲ್ಲಿ ನಿನ್ನೆ ರಾತ್ರಿ ಚಿಕನ್​, ಮಟನ್​ ಹಂಚಿಕೆಯಾಗಿದೆ. ಆದರೆ ಚುನಾವಣಾ ಸ್ಕ್ವಾಡ್​​ಗಳ ಮೌನ ಅಚ್ಚರಿ ತಂದಿದೆ. ಎಲ್ಲಿಯೂ ದಾಳಿ ಮಾಡುತ್ತಿಲ್ಲ.

ಮತ ಕೇಳಲು ಮನೆಬಾಗಿಲಿಗೆ ಬರುವವರ ಕೈಲಿ ಚಿಕನ್​-ಮಟನ್​ ಪ್ಯಾಕೆಟ್​; ಕೊಪ್ಪಳದಲ್ಲಿ ‘ರಾತ್ರಿ ಆಮಿಷ’ ಮಾಮೂಲು
ಪ್ರಾತಿನಿಧಿಕ ಚಿತ್ರ
Lakshmi Hegde
|

Updated on:Dec 17, 2020 | 2:58 PM

Share

ಕೊಪ್ಪಳ: ಅದು ಯಾವುದೇ ಹಂತದ ಚುನಾವಣೆ ಇರಲಿ, ಮತದಾರರನ್ನು ಸೆಳೆಯಲು ಏನೇನೋ ಆಮಿಷಗಳನ್ನು ಒಡ್ಡುವುದು ಸಾಮಾನ್ಯವಾಗಿಬಿಟ್ಟಿದೆ. ಹಾಗೇ, ಗ್ರಾಮ ಪಂಚಾಯಿತಿ ಚುನಾವಣೆ ಹತ್ತಿರ ಬರುತ್ತಿರುವ ಹೊತ್ತಲ್ಲಿ ಜಿಲ್ಲೆಯಲ್ಲಿ ಮತದಾರರಿಗೆ ಚಿಕನ್​-ಮಟನ್ ಆಫರ್​ ಮಾಡಲಾಗುತ್ತಿದೆ !

ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಅಭ್ಯರ್ಥಿಗಳು ಭರ್ಜರಿ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಅದರಲ್ಲೂ ರೈತರಿಗೆ ಸಂಬಂಧಿಸಿದ, ಗೃಹ ಬಳಕೆ ಸಾಮಗ್ರಿಗಳ ಚಿಹ್ನೆಯನ್ನೇ ಇಟ್ಟುಕೊಂಡು ಮತದಾರರ ಮನೆಮನೆಗೆ ತೆರಳಿ, ಮತ ನೀಡುವಂತೆ ಮನವಿ ಮಾಡುತ್ತಿದ್ದಾರೆ. ಆದರೆ ಹೀಗೆ ಮತ ಯಾಚನೆಯಲ್ಲಿ ತೊಡಗಿಕೊಂಡಿರುವವರು ಯುವಕರಿಗೆ ಚಿಕನ್​, ಮಟನ್​ ಆಫರ್​ ನೀಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಚುನಾವಣಾ ರಂಗು ಈ ಬಾರಿಯ ಗ್ರಾಮ ಪಂಚಾಯಿತಿ ಚುನಾವಣೆ, ಹಿಂದಿನ ಎಲ್ಲ ಚುನಾವಣೆಗಳನ್ನೂ ಮೀರಿ ಭರ್ಜರಿ ರಂಗು ಪಡೆದಿದೆ. ಕೊವಿಡ್​-19ರ ಭಯ ಮರೆತು ಅಭ್ಯರ್ಥಿಗಳು ತಮ್ಮ ಕುಟುಂಬದ ಸದಸ್ಯರ ಜತೆ ಪ್ರತಿದಿನ ರಾತ್ರಿಯೂ ಮನೆಮನೆಗೆ ತೆರಳಿ, ಮತ ಯಾಚಿಸುತ್ತಿದ್ದಾರೆ. ರಾಷ್ಟ್ರೀಯ ನಾಯಕರೂ ಸಹ ಗ್ರಾಮ ಪಂಚಾಯಿತಿ ಚುನಾವಣೆ ಮೇಲೆ ಕಣ್ಣಿಟ್ಟಿರುವುದರಿಂದ ಚುನಾವಣೆ ಇನ್ನಷ್ಟು ಮುಖ್ಯವಾಗಿದೆ.

ತರಹೇವಾರಿ ಚಿಹ್ನೆಗಳು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಅಭ್ಯರ್ಥಿಗಳು ಹೆಚ್ಚಾಗಿ ರೈತಾಪಿ ವಲಯಕ್ಕೆ ಸಂಬಂಧಿಸಿದ, ಗೃಹ ಬಳಕೆಯ ವಸ್ತುಗಳನ್ನೇ ಚಿನ್ಹೆಗಳನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಪಂಪ್​ಸೆಟ್​, ಟ್ರ್ಯಾಕ್ಟರ್​, ಟಿಲ್ಲರ್​, ಸಿಲಿಂಡರ್​, ರಾಟಿ, ಹಣ್ಣಿನ ಬುಟ್ಟಿಯಂತಹ ಚಿನ್ಹೆಗಳು ಗಮನಸೆಳೆಯುತ್ತಿವೆ.

ಚಿಕನ್​-ಮಟನ್​ ಆಮಿಷ ಇನ್ನು ಚುನಾವಣೆಯಲ್ಲಿ ಅಭ್ಯರ್ಥಿಗಳ ಪರ ಪ್ರಚಾರ ಮಾಡುವವರಿಗೆ, ಮತದಾರರಿಗೆ ಚಿಕನ್​-ಮಟನ್​ಗಳ ಆಫರ್​ ನೀಡಲಾಗುತ್ತಿದೆ. ಬೇಡವೆಂದರೂ ರಾತ್ರಿ ಹೊತ್ತಲ್ಲಿ ಚಿಕನ್​-ಮಟನ್​ ಹೊತ್ತು ಮನೆಗೆ ಬರುತ್ತಾರೆ. ಮನೆಮನೆಗೆ ಒಂದು ಕೆಜಿ ಚಿಕನ್​, ಒಂದು ಕೆಜಿ ಮಟನ್ ನೀಡುತ್ತಿದ್ದಾರೆ ಎಂದು ಜನರೇ ಮಾತನಾಡಿಕೊಳ್ಳುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಮುದ್ದಾಬಳ್ಳಿಯಲ್ಲಿ ನಿನ್ನೆ ರಾತ್ರಿ ಚಿಕನ್​, ಮಟನ್​ ಹಂಚಿಕೆಯಾಗಿದೆ. ಆದರೆ ಚುನಾವಣಾ ಸ್ಕ್ವಾಡ್​​ಗಳ ಮೌನ ಅಚ್ಚರಿ ತಂದಿದೆ. ಎಲ್ಲಿಯೂ ದಾಳಿ ಮಾಡುತ್ತಿಲ್ಲ. ಆಮಿಷ ಒಡ್ಡುವ ವ್ಯಕ್ತಿಗಳ ವಿರುದ್ಧ ಕ್ರಮವನ್ನೂ ಕೈಗೊಳ್ಳುತ್ತಿಲ್ಲ.

ಚಿಟ್ಟೆಗಳ ಬೆನ್ನತ್ತಿ: ‘ಕರ್ವಾಲೋ’ದಿಂದ ಪ್ರೇರಣೆ ಪಡೆದವರ ಕ್ಯಾಮರಾದಲ್ಲಿ ಅಮೋಘ ಪಾತರಗಿತ್ತಿ ಸೆರೆ

Published On - 2:55 pm, Thu, 17 December 20

Follow Us
ವಯನಾಡು 'ಕೈ' ಕಚೇರಿ ಬಳಿಯೇ ರಾಹುಲ್​​, ಪ್ರಿಯಾಂಕಾ ವಿರುದ್ಧ ಪೋಸ್ಟರ್​​!
ವಯನಾಡು 'ಕೈ' ಕಚೇರಿ ಬಳಿಯೇ ರಾಹುಲ್​​, ಪ್ರಿಯಾಂಕಾ ವಿರುದ್ಧ ಪೋಸ್ಟರ್​​!
ರಾಮನಗರದ ತೋಟದಲ್ಲಿ ನಡೆಯಲಿದೆ ದಿಲೀಪ್ ರಾಜ್ ಅಂತ್ಯಕ್ರಿಯೆ; ಸಕಲ ಸಿದ್ಧತೆ
ರಾಮನಗರದ ತೋಟದಲ್ಲಿ ನಡೆಯಲಿದೆ ದಿಲೀಪ್ ರಾಜ್ ಅಂತ್ಯಕ್ರಿಯೆ; ಸಕಲ ಸಿದ್ಧತೆ
ವಿಶ್ವಾಸಮತ ಗೆದ್ದ ಬಳಿಕ ಮಹತ್ವದ ಘೋಷಣೆ ಮಾಡಿದ ತಮಿಳುನಾಡು ಸಿಎಂ ವಿಜಯ್​​
ವಿಶ್ವಾಸಮತ ಗೆದ್ದ ಬಳಿಕ ಮಹತ್ವದ ಘೋಷಣೆ ಮಾಡಿದ ತಮಿಳುನಾಡು ಸಿಎಂ ವಿಜಯ್​​
ದಿಲೀಪ್ ರಾಜ್ ನಿಧನ: ಅಂತಿಮ ದರ್ಶನ ಪಡೆದು ಕಂಬನಿ ಮಿಡಿದ ಸೆಲೆಬ್ರಿಟಿಗಳು
ದಿಲೀಪ್ ರಾಜ್ ನಿಧನ: ಅಂತಿಮ ದರ್ಶನ ಪಡೆದು ಕಂಬನಿ ಮಿಡಿದ ಸೆಲೆಬ್ರಿಟಿಗಳು
Live: ತಮಿಳುನಾಡು ಸಿಎಂ ವಿಜಯ್ ವಿಶ್ವಾಸಮತ ಯಾಚನೆ ನೇರಪ್ರಸಾರ
Live: ತಮಿಳುನಾಡು ಸಿಎಂ ವಿಜಯ್ ವಿಶ್ವಾಸಮತ ಯಾಚನೆ ನೇರಪ್ರಸಾರ
ಹಗಲು ರಾತ್ರಿ ಹಣದ ಚಿಂತೆ ಮಾಡುತ್ತಿದ್ದೀರಾ? ಇದರಿಂದ ಯಾವ ದೋಷ ಬರುತ್ತೆ?
ಹಗಲು ರಾತ್ರಿ ಹಣದ ಚಿಂತೆ ಮಾಡುತ್ತಿದ್ದೀರಾ? ಇದರಿಂದ ಯಾವ ದೋಷ ಬರುತ್ತೆ?
ಇಂದು ಈ ರಾಶಿಯವರು ಅತಿಯಾದ ಕೋಪವನ್ನು ಕೈಬಿಡಿ
ಇಂದು ಈ ರಾಶಿಯವರು ಅತಿಯಾದ ಕೋಪವನ್ನು ಕೈಬಿಡಿ
ಬೆಳಗಾವಿಯಲ್ಲಿ ಭಾರಿ ಗಾಳಿ ಮಳೆಗೆ ಧರೆಗುರುಳಿದ ಮರಗಳು: ಸಂಚಾರ ಅಸ್ತವ್ಯಸ್ತ
ಬೆಳಗಾವಿಯಲ್ಲಿ ಭಾರಿ ಗಾಳಿ ಮಳೆಗೆ ಧರೆಗುರುಳಿದ ಮರಗಳು: ಸಂಚಾರ ಅಸ್ತವ್ಯಸ್ತ
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ