ಮೋದಿ ಹೆಸರಲ್ಲಿ ಪಂಗನಾಮ? ಹಣ ದೋಚಿ ಯುವಕ ಪರಾರಿ

ಕೊಪ್ಪಳ: ಮೋದಿ ಹೆಸರು ಬಳಸಿ 15 ಲಕ್ಷ ರೂಪಾಯಿ ಕೊಡಿಸುವುದಾಗಿ ಐವರು ಮಹಿಳೆಯರಿಗೆ ಪಂಗನಾಮ ಹಾಕಿರುವ ಘಟನೆ ಹಿರೇಡಂಕನಕಲ್ ಗ್ರಾಮದಲ್ಲಿ ನಡೆದಿದೆ. ಕನಕಗಿರಿ ತಾಲೂಕಿನ ಲಿಂಗದಳ್ಳಿ ನಿವಾಸಿ ಉಮೇಶ್ ಎಂಬ ಯುವಕ ಮೋದಿ ಹೆಸರು ಬಳಸಿ ನಿಮಗೆ 15 ಲಕ್ಷ ರೂಪಾಯಿ ಕೊಡಿಸ್ತೀನಿ ಎಂದು ವಂಚಿಸಿ ಗ್ರಾಮದ ಐವರು ಮಹಿಳೆಯರ ಬಳಿ ಬಂಗಾರ, ಹಣ ಪೀಕಿದ್ದಾನೆ. ಹಂತಹಂತವಾಗಿ 78 ಸಾವಿರ, ಮೂರು ತೊಲೆ ಬಂಗಾರ ದೋಚಿದ್ದಾನೆ. ಮಹಿಳೆಯರು ಹಣ ಕೇಳಿದ್ದಕ್ಕೆ 60 ಸಾವಿರದ ಚೆಕ್ ಬರೆದುಕೊಟ್ಟಂತೆ ವಂಚಿಸಿದ್ದಾನೆ. […]

ಮೋದಿ ಹೆಸರಲ್ಲಿ ಪಂಗನಾಮ? ಹಣ ದೋಚಿ ಯುವಕ ಪರಾರಿ
ಸಾಧು ಶ್ರೀನಾಥ್​

Updated on: Jan 02, 2020 | 12:13 PM

ಕೊಪ್ಪಳ: ಮೋದಿ ಹೆಸರು ಬಳಸಿ 15 ಲಕ್ಷ ರೂಪಾಯಿ ಕೊಡಿಸುವುದಾಗಿ ಐವರು ಮಹಿಳೆಯರಿಗೆ ಪಂಗನಾಮ ಹಾಕಿರುವ ಘಟನೆ ಹಿರೇಡಂಕನಕಲ್ ಗ್ರಾಮದಲ್ಲಿ ನಡೆದಿದೆ. ಕನಕಗಿರಿ ತಾಲೂಕಿನ ಲಿಂಗದಳ್ಳಿ ನಿವಾಸಿ ಉಮೇಶ್ ಎಂಬ ಯುವಕ ಮೋದಿ ಹೆಸರು ಬಳಸಿ ನಿಮಗೆ 15 ಲಕ್ಷ ರೂಪಾಯಿ ಕೊಡಿಸ್ತೀನಿ ಎಂದು ವಂಚಿಸಿ ಗ್ರಾಮದ ಐವರು ಮಹಿಳೆಯರ ಬಳಿ ಬಂಗಾರ, ಹಣ ಪೀಕಿದ್ದಾನೆ.

ಹಂತಹಂತವಾಗಿ 78 ಸಾವಿರ, ಮೂರು ತೊಲೆ ಬಂಗಾರ ದೋಚಿದ್ದಾನೆ. ಮಹಿಳೆಯರು ಹಣ ಕೇಳಿದ್ದಕ್ಕೆ 60 ಸಾವಿರದ ಚೆಕ್ ಬರೆದುಕೊಟ್ಟಂತೆ ವಂಚಿಸಿದ್ದಾನೆ. ಹಣ ಲಪಟಾಯಿಸಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ. ಉಮೇಶ್ ಫೋನ್ ಆಫ್ ಆಗುತ್ತಿದ್ದಂತೆ ಮಹಿಳೆಯರಿಗೆ ಆತಂಕವಾಗಿದೆ. ಪೊಲೀಸರಿಗೆ ದೂರು ನೀಡಿದ್ದಾರೆ.

ಆನ್​ಲೈನ್​ ದೋಖಾ ನಡೆದಿದ್ದರೆ ಇಲ್ಲಿ ದೂರು ದಾಖಲಿಸಬಹುದು cyberpolicebangalore

Published On - 12:13 pm, Thu, 2 January 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us