ಜೂನ್ 8ರಿಂದ ಇವೆಲ್ಲಾ ಓಪನ್ ಆಗುತ್ತೆ, ನಿಯಮ ಪಾಲಿಸದಿದ್ರೆ ದಂಡ ಬೀಳುತ್ತೆ

ಬೆಂಗಳೂರು: ಕೊರೊನಾ ಹಿನ್ನೆಲೆಯಲ್ಲಿ ಲಾಕ್​ಡೌನ್ ಆಗಿದ್ದ ಕರ್ನಾಟಕ ಷರತ್ತು ಬದ್ಧ ಸಡಿಲಿಕೆಯನ್ನು ಪಡೀತಿದೆ. ಮನೆಯಲ್ಲೇ ಕೂತಿದ್ದ ಮಂದಿ ತಮ್ಮ ಕೆಲಸಗಳಲ್ಲಿ ಬಿಜಿ ಆಗಿದ್ದಾರೆ. ಜೂನ್ 8ರಿಂದ ಧಾರ್ಮಿಕ ಸ್ಥಳ, ಮಾಲ್​ಗಳು ಓಪನ್​ ಆಗ್ತಿವೆ. ಈ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಕ್ರಮ ಜಾರಿ ಮಾಡುವುದಕ್ಕೆ ಬಿಬಿಎಂಪಿ ಪ್ಲ್ಯಾನ್ ಮಾಡಿಕೊಂಡಿದೆ. ವ್ಯಾಪಾರ ಮಾಡುವವರು ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯಾಪಾರ ವಹಿವಾಟು ಮಾಡಬೇಕು. ವ್ಯಾಪಾರದ ವೇಳೆ ಹ್ಯಾಂಡ್ ಸ್ಯಾನಿಟೈಸರ್, ಮಾಸ್ಕ್ ಬಳಸಲೇ ಬೇಕು. ಈ ಎಲ್ಲಾದರ ಬಗ್ಗೆ ಬಿಬಿಎಂಪಿ ಮಾರ್ಷಲ್‌ಗಳು ನಗರದಲ್ಲಿ ಪರಿಶೀಲನೆ […]

ಜೂನ್ 8ರಿಂದ ಇವೆಲ್ಲಾ ಓಪನ್ ಆಗುತ್ತೆ, ನಿಯಮ ಪಾಲಿಸದಿದ್ರೆ ದಂಡ ಬೀಳುತ್ತೆ
ಬಿಬಿಎಂಪಿ
ಆಯೇಷಾ ಬಾನು

Updated on: May 31, 2020 | 2:20 PM

ಬೆಂಗಳೂರು: ಕೊರೊನಾ ಹಿನ್ನೆಲೆಯಲ್ಲಿ ಲಾಕ್​ಡೌನ್ ಆಗಿದ್ದ ಕರ್ನಾಟಕ ಷರತ್ತು ಬದ್ಧ ಸಡಿಲಿಕೆಯನ್ನು ಪಡೀತಿದೆ. ಮನೆಯಲ್ಲೇ ಕೂತಿದ್ದ ಮಂದಿ ತಮ್ಮ ಕೆಲಸಗಳಲ್ಲಿ ಬಿಜಿ ಆಗಿದ್ದಾರೆ. ಜೂನ್ 8ರಿಂದ ಧಾರ್ಮಿಕ ಸ್ಥಳ, ಮಾಲ್​ಗಳು ಓಪನ್​ ಆಗ್ತಿವೆ. ಈ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಕ್ರಮ ಜಾರಿ ಮಾಡುವುದಕ್ಕೆ ಬಿಬಿಎಂಪಿ ಪ್ಲ್ಯಾನ್ ಮಾಡಿಕೊಂಡಿದೆ.

ವ್ಯಾಪಾರ ಮಾಡುವವರು ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯಾಪಾರ ವಹಿವಾಟು ಮಾಡಬೇಕು. ವ್ಯಾಪಾರದ ವೇಳೆ ಹ್ಯಾಂಡ್ ಸ್ಯಾನಿಟೈಸರ್, ಮಾಸ್ಕ್ ಬಳಸಲೇ ಬೇಕು. ಈ ಎಲ್ಲಾದರ ಬಗ್ಗೆ ಬಿಬಿಎಂಪಿ ಮಾರ್ಷಲ್‌ಗಳು ನಗರದಲ್ಲಿ ಪರಿಶೀಲನೆ ನಡೆಸಲಿದ್ದಾರೆ. ಅಲ್ಲದೆ ಆರೋಗ್ಯ ಅಧಿಕಾರಿಗಳು, ಬಿಬಿಎಂಪಿ ಸಿಬ್ಬಂದಿಯನ್ನು ಕೂಡ ನಿಯೋಜನೆ ಮಾಡಲಾಗ್ತಿದೆ. ಬಿಬಿಎಂಪಿ ನಿಯಮಗಳನ್ನ ಪಾಲಿಸದಿದ್ರೆ ವ್ಯಾಪಾರಿಗಳು, ಗ್ರಾಹಕರಿಗೆ ಎಪಿಡೆಮಿಕ್ ಆ್ಯಕ್ಟ್‌ನಡಿ ಕ್ರಮ ಕೈಗೊಳ್ಳಲು ಹಾಗೂ ದಂಡ ವಿಧಿಸುವುದಕ್ಕೂ ಬಿಬಿಎಂಪಿ ತೀರ್ಮಾನ ಮಾಡಿದೆ.

Published On - 9:27 am, Sun, 31 May 20

Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Follow Us