AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲ್ಯಾಪ್​ಟಾಪ್​ಗಾಗಿ ಕಳ್ಳತನ ಮಾಡಿ, ಭಿಕ್ಷೆಯಾದ್ರೂ ಬೇಡಿ: HOD ಉಡಾಫೆಗೆ ವಿದ್ಯಾರ್ಥಿಗಳ ಆಕ್ರೋಶ

ಬೆಂಗಳೂರು: ಈ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಗಳಿಗೆ ಬಿಗ್ ಟೆನ್ಷನ್ ಶುರುವಾಗಿದೆ. ಯಾಕಂದ್ರೆ ಮುಂದಿನ ವಾರದರೊಳಗೆ ಲ್ಯಾಪ್ ಟಾಪ್ ತರಲೇ ಬೇಕು. ಇಲ್ಲ ಅಂದ್ರೆ ನೋ ಎಕ್ಸಾಂ ಎಂದು ವಿದ್ಯಾರ್ಥಿಗಳಿಗೆ MVJ ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿಭಾಗದ HOD ಆರ್ಡರ್ ಮಾಡಿದ್ದಾರೆ. ಕಷ್ಟ ಹೇಳಿಕೊಂಡ ವಿದ್ಯಾರ್ಥಿಗಳಿಗೆ ಪ್ರೊಫೆಸರ್ ಸಲಹೆ ನೀಡೋದು ಬಿಟ್ಟು ಉಡಾಫೆಯಾಗಿ ವರ್ತಿಸಿದ್ದಾರೆ. ಲ್ಯಾಪ್​ಟಾಪ್​ ತರ್ಲೇ ಬೇಕು ಇಲ್ಲ ಅಂದ್ರೆ ಪರೀಕ್ಷೆ ಮಿಸ್ ಆನ್​ಲೈನ್ ಕ್ಲಾಸ್ ವೇಳೆ ಎಂವಿಜೆ ಕಾಲೇಜು ಹೆಚ್‌ಒಡಿ ಪ್ರೊ.ಮುರಳೀಧರ್ ವಿದ್ಯಾರ್ಥಿಗಳು ಕಡ್ಡಾಯವಾಗಿ ಲ್ಯಾಪ್‌ಟಾಪ್ […]

ಲ್ಯಾಪ್​ಟಾಪ್​ಗಾಗಿ ಕಳ್ಳತನ ಮಾಡಿ, ಭಿಕ್ಷೆಯಾದ್ರೂ ಬೇಡಿ:  HOD ಉಡಾಫೆಗೆ ವಿದ್ಯಾರ್ಥಿಗಳ ಆಕ್ರೋಶ
ಆಯೇಷಾ ಬಾನು
|

Updated on:Jun 05, 2020 | 3:16 PM

Share

ಬೆಂಗಳೂರು: ಈ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಗಳಿಗೆ ಬಿಗ್ ಟೆನ್ಷನ್ ಶುರುವಾಗಿದೆ. ಯಾಕಂದ್ರೆ ಮುಂದಿನ ವಾರದರೊಳಗೆ ಲ್ಯಾಪ್ ಟಾಪ್ ತರಲೇ ಬೇಕು. ಇಲ್ಲ ಅಂದ್ರೆ ನೋ ಎಕ್ಸಾಂ ಎಂದು ವಿದ್ಯಾರ್ಥಿಗಳಿಗೆ MVJ ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿಭಾಗದ HOD ಆರ್ಡರ್ ಮಾಡಿದ್ದಾರೆ. ಕಷ್ಟ ಹೇಳಿಕೊಂಡ ವಿದ್ಯಾರ್ಥಿಗಳಿಗೆ ಪ್ರೊಫೆಸರ್ ಸಲಹೆ ನೀಡೋದು ಬಿಟ್ಟು ಉಡಾಫೆಯಾಗಿ ವರ್ತಿಸಿದ್ದಾರೆ. ಲ್ಯಾಪ್​ಟಾಪ್​ ತರ್ಲೇ ಬೇಕು ಇಲ್ಲ ಅಂದ್ರೆ ಪರೀಕ್ಷೆ ಮಿಸ್ ಆನ್​ಲೈನ್ ಕ್ಲಾಸ್ ವೇಳೆ ಎಂವಿಜೆ ಕಾಲೇಜು ಹೆಚ್‌ಒಡಿ ಪ್ರೊ.ಮುರಳೀಧರ್ ವಿದ್ಯಾರ್ಥಿಗಳು ಕಡ್ಡಾಯವಾಗಿ ಲ್ಯಾಪ್‌ಟಾಪ್ ತರಲೇಬೇಕು ಎಂದು ಆರ್ಡರ್ ಮಾಡಿದ್ದಾರೆ. ಮುಂದಿನ ವಾರದೊಳಗೆ ಎಲ್ಲರೂ ಲ್ಯಾಪ್‌ಟಾಪ್ ತರಬೇಕು. ಮುಂದಿನ ವಾರದಲ್ಲಿ ಇಂಟರ್ನಲ್ ಪರೀಕ್ಷೆಯಿದೆ. ಇಲ್ಲದಿದ್ದರೆ ಪರೀಕ್ಷೆ ಮಿಸ್ ಮಾಡ್ಕೋತಿರಾ. ಲ್ಯಾಪ್‌ಟಾಪ್‌ನಲ್ಲಿ ಸಾಫ್ಟ್‌ವೇರ್‌ ಬಳಸಿ ಪರೀಕ್ಷೆ ಬರೆಯಬೇಕು ಎಂದು ವಿದ್ಯಾರ್ಥಿಗಳಿಗೆ ಸೂಚಿಸಿದ್ದಾರೆ. ಆದರೆ ಹೆಚ್‌ಒಡಿಯ ಸೂಚನೆಗೆ ವಿದ್ಯಾರ್ಥಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಲ್ಯಾಪ್​ಟಾಪ್​ಗಾಗಿ ಕಳ್ಳತನವಾದ್ರೂ ಮಾಡಿ, ಭಿಕ್ಷೆಯಾದ್ರೂ ಬೇಡಿ ಲ್ಯಾಪ್​ಟಾಪ್ ತರಬೇಕು ಎಂದು ಹೆಚ್‌ಒಡಿ ಆರ್ಡರ್ ಮಾಡಿದಾಗ ಕೆಲ ವಿದ್ಯಾರ್ಥಿಗಳು ಲ್ಯಾಪ್​ಟಾಪ್ ಕೊಂಡುಕೊಳ್ಳಲು ನಮ್ಮ ಬಳಿ ಹಣ ಇಲ್ಲ ಸಾರ್ ಎಂದಿದ್ದಾರೆ. ಇದಕ್ಕೆ ಹೆಚ್‌ಒಡಿ ಊಟ ಮಾಡೋಕೆ, ತಿಂಡಿ ತಿನ್ನೋಕೆ, ಸಿನಿಮಾ ನೋಡೋಕೆ ಹಣ ಇರುತ್ತೆ, ಲ್ಯಾಪ್​ಟಾಪ್ ತಗೊಳ್ಳೋಕೆ ಹಣ ಇಲ್ವಾ’ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಲ್ಯಾಪ್​ಟಾಪ್​ಗಾಗಿ ಕಳ್ಳತನವಾದ್ರೂ ಮಾಡಿ, ಭಿಕ್ಷೆಯಾದ್ರೂ ಬೇಡಿ, ಖರೀದಿಯಾದ್ರೂ ಮಾಡಿ ಆದ್ರೆ ಲ್ಯಾಪ್​ಟಾಪ್ ತರಲೇ ಬೇಕು ಎಂದು ಹೇಳಿದ್ದಾರೆ. ಕಷ್ಟ ಹೇಳಿಕೊಂಡ ಹಳ್ಳಿ ವಿದ್ಯಾರ್ಥಿಗಳ ಜೊತೆ ಉಪನ್ಯಾಸಕನ ಉಡಾಫೆ ಮಾತಿಗೆ ವಿರೋಧ ವ್ಯಕ್ತವಾಗಿದೆ.

Published On - 11:09 am, Fri, 5 June 20

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!