Mysuru Dasara: ಪಂಜಿನ ಕವಾಯತು ವೀಕ್ಷಿಸಿದ ರಾಜ್ಯಪಾಲ ಗೆಹ್ಲೋಟ್

Updated By: ಪ್ರಸನ್ನ ಹೆಗಡೆ

Updated on: Oct 02, 2025 | 9:55 PM

ಮೈಸೂರು ದಸರಾ ಹಿನ್ನಲೆ ನಗರದ ಬನ್ನಿಮಂಟಪದ ಮೈದಾನದಲ್ಲಿ ನಡೆದ ಪಂಜಿನ ಕವಾಯತನ್ನ ಕರ್ನಾಟಕ ಗವರ್ನರ್​ ವೀಕ್ಷಿಸಿದ್ದಾರೆ. ಕಾರ್ಯಕ್ರಮ ನೋಡಲು ಬಂದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಪೊಲೀಸ್ ಬ್ಯಾಂಡ್ ಮೂಲಕ ಸ್ವಾಗತ ಕೋರಲಾಗಿದೆ. ಆಕರ್ಷಕ ಪಂಜಿನ ಕವಾಯತು ನೆರೆದಿದ್ದ ಸಹಸ್ರಾರು ಜನರ ಮನಸೂರೆಗೊಂಡಿದೆ.

ಮೈಸೂರು, ಅಕ್ಟೋಬರ್​ 02: ವಿಶ್ವ ವಿಖ್ಯಾತ ಮೈಸೂರು ದಸರಾ (Dasara) ಹಿನ್ನಲೆ ನಗರದ ಬನ್ನಿಮಂಟಪದ ಮೈದಾನದಲ್ಲಿ ನಡೆದ ಪಂಜಿನ ಕವಾಯತನ್ನ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ವೀಕ್ಷಿಸಿದ್ದಾರೆ. ಕಾರ್ಯಕ್ರಮ ನೋಡಲು ಬಂದ ಗವರ್ನರ್​ ಗೆ ಪೊಲೀಸ್ ಬ್ಯಾಂಡ್ ಮೂಲಕ ಸ್ವಾಗತ ಕೋರಲಾಗಿದೆ. ಗೌರವ ವಂದನೆ ಸ್ವೀಕರಿಸಿದ ರಾಜ್ಯಪಾಲರು ಲೇಸರ್ ಶೋ, ಡ್ರೋನ್ ಶೋ, ಟಾರ್ಚ್​ ಲೈಟ್​ ಪರೇಡ್ ವೀಕ್ಷಿಸಿದ್ದಾರೆ. ಇನ್ನು ಆಕರ್ಷಕ ಪಂಜಿನ ಕವಾಯತು ಕಂಡು ನೆರೆದಿದ್ದ ಸಹಸ್ರಾರು ಜನರು ಖುಷಿ ಪಟ್ಟರು.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​ ಮಾಡಿ.