AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Accident-free Driving!ಈ ಡ್ರೈವರ್​ಗಳು 33 ವರ್ಷ ದೀರ್ಘ ಕಾಲದಿಂದ, ದೀರ್ಘ ರೂಟ್​​ಗಳಲ್ಲಿ ಒಂದು ಚಿಕ್ಕ ಅಪಘಾತವೂ ಆಗದಂತೆ ಬಸ್​​​ಗಳನ್ನು ಓಡಿಸುತ್ತಿದ್ದಾರೆ!

Bus Accident: ಇಂದಿನ ರೋಡ್​ ರೇಗಣ್ಣಗಳ ಮಧ್ಯೆ, ಹದಗೆಟ್ಟ ರಸ್ತೆಗಳಲ್ಲಿ 33 ವರ್ಷಗಳ ಕಾಲ ಒಂದು ಚಿಕ್ಕ ಅಪಘಾತವನ್ನೂ ಮಾಡದೆ ಲಾಂಗ್​​ ರೂಟ್​​ಗಳಲ್ಲಿ ಬಸ್​​​ಗಳನ್ನು ಓಡಿಸುವುದಕ್ಕೆ ಸಾಧ್ಯವಾ? ಅಬ್ಬಾ! ಆ ಇಬ್ಬರು ಡ್ರೈವರ್​ಗಳು ಈ ಸಾಧನೆ ಮಾಡಿದ್ದಾರೆ! ಅದಕ್ಕೆ ರಾಷ್ಟ್ರೀಯ ಪ್ರಶಸ್ತಿ ಅವರನ್ನು ಹುಡುಕಿಕೊಂಡು ಬಂದಿದೆ.

Accident-free Driving!ಈ ಡ್ರೈವರ್​ಗಳು 33 ವರ್ಷ ದೀರ್ಘ ಕಾಲದಿಂದ, ದೀರ್ಘ ರೂಟ್​​ಗಳಲ್ಲಿ ಒಂದು ಚಿಕ್ಕ ಅಪಘಾತವೂ ಆಗದಂತೆ ಬಸ್​​​ಗಳನ್ನು ಓಡಿಸುತ್ತಿದ್ದಾರೆ!
ಇಜಾಜ್ ಅಹ್ಮದ್, ಇಶಾಕ್ ಷರೀಫ್
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:Apr 22, 2023 | 12:06 PM

Share

ಮೈಸೂರು: ವರ್ಷಾನುಗಟ್ಟಲೆ ಸುರಕ್ಷಿತವಾಗಿ ಭಾರೀ ವಾಹನಗಳನ್ನು ಚಲಾಯಿಸಲು ಅಗತ್ಯವಿರುವ, ಕಾರಣವಾಗುವ ಮಹತ್ವದ ಅಂಶಗಳು ಯಾವುವು? 33 ವರ್ಷಗಳ ಕಾಲ ಒಂದು ಚಿಕ್ಕ ಅಪಘಾತವನ್ನೂ ಮಾಡದೆ (accident-free driving) ಚಾಲನೆ ಮಾಡಿರುವ ನಮ್ಮ ಹೆಮ್ಮೆಯ ಡ್ರೈವರ್​ಗಳು (Drivers) ರಾಜ್ಯ ರಸ್ತೆ ಸಾರಿಗೆ (Karnataka State Road Transport Corporation -KSRTC) ಸಂಸ್ಥೆಯಲ್ಲಿದ್ದಾರೆ! ಸಾರಿಗೆ ಸಂಸ್ಥೆಯ ಸಂಘದ (ಎಎಸ್‌ಆರ್‌ಟಿಯು) ವತಿಯಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ (ಕೆಎಸ್‌ಆರ್‌ಟಿಸಿ) ಕೆಲ ಮಾಡುತ್ತಿರುವ ಮೈಸೂರು ಜಿಲ್ಲೆಯ ಇಬ್ಬರು ಚಾಲಕರು ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದಾರೆ. ಇದಕ್ಕೆ ಒತ್ತಡ ಮುಕ್ತ ತಮ್ಮ ಸಂತೋಷದ ಕುಟುಂಬ ಜೀವನವೇ ಕಾರಣ ಎಂದು ಪ್ರಶಸ್ತಿ ಪುರಸ್ಕೃತರು ಹೇಳಿದ್ದಾರೆ.

ಹುಣಸೂರು ಡಿಪೋದ ಚಾಲಕ ಇಜಾಜ್ ಅಹಮದ್ ಷರೀಫ್ ಮತ್ತು ಸಾತಗಳ್ಳಿ ಡಿಪೋದ ಚಾಲಕ ಇಶಾಕ್ ಷರೀಫ್ ಅವರ ಪ್ರಕಾರ ಅವರದು ಸಂತೋಷದ ಕೌಟುಂಬಿಕ ಜೀವನವಂತೆ. ತಮ್ಮದು ಸದಾ ಒತ್ತಡ ಮುಕ್ತ ಮನಸ್ಸು. ಜೊತೆಗೆ ದಿನದ ಕರ್ತವ್ಯವನ್ನು ಪ್ರಾರಂಭಿಸುವ ಮುನ್ನ ವಾಹನದ ಸ್ಥಿತಿಯನ್ನು ಪರೀಕ್ಷಿಸುವುದು, ಪ್ರಯಾಣಿಕರನ್ನು ತಮ್ಮ ಕುಟುಂಬದ ಸದಸ್ಯರಂತೆ ಪರಿಗಣಿಸುವುದು ಮತ್ತು ಸಹೋದ್ಯೋಗಿಗಳು ಮತ್ತು ಅಧಿಕಾರಿಗಳು ದೀರ್ಘ ಮಾರ್ಗಗಳಲ್ಲಿ ಚಾಲನೆ ಮಾಡಿದರೂ ಅಪಘಾತ-ಮುಕ್ತ ಚಾಲನೆ ನಡೆಸುವುದಕ್ಕೆ ಸಹಾಯ ಮಾಡುತ್ತಾರೆ ಎಂದು ಮುಕ್ತ ಮನಸ್ಸಿಂದ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ಈ ವರ್ಷ ಜುಲೈನಲ್ಲಿ ನಿವೃತ್ತಿ ಹೊಂದಲಿರುವ 59 ವರ್ಷದ ಇಜಾಜ್ ಅಹ್ಮದ್, ಕೆಎಸ್‌ಆರ್‌ಟಿಸಿಯಿಂದ ಅಪಘಾತ ರಹಿತ ಚಾಲನೆಗಾಗಿ ಬೆಳ್ಳಿ ಮತ್ತು ಚಿನ್ನದ ಪದಕವನ್ನು ಗೆದ್ದಿದ್ದಾರೆ.

ತರಬೇತಿ ಅವಧಿಯಲ್ಲಿನ ಎರಡು ವರ್ಷ ಸೇರಿದಂತೆ 35 ವರ್ಷಗಳ ಕಾಲ ನಿಗಮದಲ್ಲಿ ಸೇವೆ ಸಲ್ಲಿಸಿರುವ ಇಶಾಕ್ ಷರೀಫ್, ಬೆಂಗಳೂರಿನಲ್ಲಿ ಈ ಹಿಂದೆ ಸಂಚರಿಸುತ್ತಿದ್ದ ಬಿಟಿಎಸ್ ಸಂಸ್ಥೆಯ ಬಸ್ಸುಗಳು ಸೇರಿದಂತೆ ರಾಜ್ಯದ ಬಹುತೇಕ ಭಾಗಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ ಹುಣಸೂರು ಬಸ್ ಡಿಪೋದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮನೆಯಲ್ಲಿ ಮತ್ತು ಕೆಲಸದಲ್ಲಿ ಸಂತೋಷವಾಗಿರುವುದರಿಂದ ಶ್ರೇಷ್ಠತೆ ಸಾಧಿಸಲು ಸಹಾಯ ಮಾಡಿತು ಎಂದು ಇಜಾಜ್ ಅಹ್ಮದ್ ಹೇಳುತ್ತಾರೆ. ಅವರು ತಮ್ಮ ಎಲ್ಲಾ ನಾಲ್ಕು ಮಕ್ಕಳಿಗೆ ಉನ್ನತ ಶಿಕ್ಷಣವನ್ನು ಒದಗಿಸಿದ್ದಾರೆ. ಇಜಾಜ್ ಅವರ ಮಕ್ಕಳು ಯುಕೆ, ಪಶ್ಚಿಮ ಆಫ್ರಿಕಾ ಮತ್ತು ದುಬೈನಲ್ಲಿ ಕೆಲಸ ಮಾಡುತ್ತಿದ್ದಾರಂತೆ.

ಇಶಾಕ್ ಷರೀಫ್ ಅವರು ಊಟಿ, ಸೊಲ್ಲಾಪುರ, ಬೆಳಗಾವಿ ಮುಂತಾದ ದೀರ್ಘ ಮಾರ್ಗಗಳಲ್ಲಿ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್​ ಓಡಿಸಿದ್ದಾರೆ. ಅವರು ಕುಟುಂಬ ಸದಸ್ಯರ ಪ್ರಾರ್ಥನೆಗಳು, ಸುಖೀ ಸಂತೋಷದ ಕುಟುಂಬ ಮತ್ತು ವೃತ್ತಿಪರ ಜೀವನವು ಅವರ ವೃತ್ತಿಜೀವನದಲ್ಲಿ ಸಹಾಯ ಮಾಡಿದೆ ಎಂದು ಅವರು ಹೇಳುತ್ತಾರೆ. ನಾನು ಟ್ರಕ್ ಡ್ರೈವರ್ ಆಗಿ ನನ್ನ ಡ್ರೈವಿಂಗ್ ವೃತ್ತಿಜೀವನವನ್ನು ಪ್ರಾರಂಭಿಸಿದೆ. ನಂತರ ಕೆಎಸ್ಆರ್ಟಿಸಿಗೆ ಸೇರಿಕೊಂಡೆ. ಮೈಸೂರು ನಗರ ವ್ಯಾಪ್ತಿಯಲ್ಲಿ ನಾನು ಮಾರ್ಗ ಸಂಖ್ಯೆ 223 ರಲ್ಲಿ 16 ವರ್ಷಗಳ ಕಾಲ ಸೇವೆ ಸಲ್ಲಿಸಿದೆ. ಕುಟುಂಬ ಸೌಖ್ಯದ ಜೊತೆಗೆ ನಿಗಮದ ಅಧಿಕಾರಿಗಳ ಬೆಂಬಲ ಇತ್ಯಾದಿಯೂ ಕೈಹಿಡಿದು ಎಚ್ಚರಿಸುತ್ತದೆ. ಹಾಗಾಗಿ ನಾನು ಸುರಕ್ಷಿತವಾಗಿ ಚಾಲನೆ ಮಾಡುತ್ತೇನೆ ಎಂದು ಇಶಾಕ್ ಹೇಳುತ್ತಾರೆ. ಅಪಘಾತ ರಹಿತ ಚಾಲನೆಗಾಗಿ ಅವರು ಕೆಎಸ್‌ಆರ್‌ಟಿಸಿಯ ಬೆಳ್ಳಿ ಮತ್ತು ಚಿನ್ನದ ಪದಕಗಳನ್ನು ಗೆದ್ದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 12:04 pm, Sat, 22 April 23

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

ಅಯ್ಯೋ 19 ವರ್ಷಗಳಿಂದ ಮಗುವಂತೆ ಸಾಕಿದ್ದ ಬೆಕ್ಕು ಹೋಗಿ ಬಿಡ್ತಾ
ಅಯ್ಯೋ 19 ವರ್ಷಗಳಿಂದ ಮಗುವಂತೆ ಸಾಕಿದ್ದ ಬೆಕ್ಕು ಹೋಗಿ ಬಿಡ್ತಾ
ತರಗತಿಯೊಳಗೆ ಮಗುವನ್ನು ಎತ್ತಿಕೊಂಡು ಬಂದು ಕುಳಿತ ವಿದ್ಯಾರ್ಥಿನಿ
ತರಗತಿಯೊಳಗೆ ಮಗುವನ್ನು ಎತ್ತಿಕೊಂಡು ಬಂದು ಕುಳಿತ ವಿದ್ಯಾರ್ಥಿನಿ
ಎಷ್ಟೇ ಕಷ್ಟಪಟ್ಟರೂ ಮನೆ ಕಟ್ಟೋಕೆ ಸಾಧ್ಯವಾಗ್ತಿಲ್ವಾ?
ಎಷ್ಟೇ ಕಷ್ಟಪಟ್ಟರೂ ಮನೆ ಕಟ್ಟೋಕೆ ಸಾಧ್ಯವಾಗ್ತಿಲ್ವಾ?
ಇಂದು ಈ ರಾಶಿಯವರಿಗೆ ಖರ್ಚು ಹೆಚ್ಚಾಗುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಖರ್ಚು ಹೆಚ್ಚಾಗುವ ಸಾಧ್ಯತೆ
150 ಕೋಟಿ ರೂಪಾಯಿ ಆಸ್ತಿ ಇದ್ದರೂ ಸುಡು ಬಿಸಿಲಲ್ಲಿ ಕೆಲಸ ಮಾಡುತ್ತಿರುವ ನಟ
150 ಕೋಟಿ ರೂಪಾಯಿ ಆಸ್ತಿ ಇದ್ದರೂ ಸುಡು ಬಿಸಿಲಲ್ಲಿ ಕೆಲಸ ಮಾಡುತ್ತಿರುವ ನಟ
ತಿಂಗಳೊಳಗೆ 4 ಹಿಂದೂ ವಿರೋಧಿಗಳು ಸಿಎಂ ಸ್ಥಾನ ಕಳೆದುಕೊಂಡ್ರು: ನಾರಾಯಣಸ್ವಾಮಿ
ತಿಂಗಳೊಳಗೆ 4 ಹಿಂದೂ ವಿರೋಧಿಗಳು ಸಿಎಂ ಸ್ಥಾನ ಕಳೆದುಕೊಂಡ್ರು: ನಾರಾಯಣಸ್ವಾಮಿ
ಮಳೆಯಲ್ಲಿ ರಸ್ತೆ ದಾಟಲು ಪರದಾಟ: ವಿಕಲಚೇತನ ಯುವಕನ ಸಹಾಯಕ್ಕೆ ಬಂದ ಪೊಲೀಸ್
ಮಳೆಯಲ್ಲಿ ರಸ್ತೆ ದಾಟಲು ಪರದಾಟ: ವಿಕಲಚೇತನ ಯುವಕನ ಸಹಾಯಕ್ಕೆ ಬಂದ ಪೊಲೀಸ್
ಪ್ಲೇಆಫ್‌ ಪಂದ್ಯಗಳಲ್ಲಿ ಮುಂದುವರೆದ ಯಶಸ್ವಿ ಜೈಸ್ವಾಲ್ ಕಳಪೆ ಪ್ರದರ್ಶನ
ಪ್ಲೇಆಫ್‌ ಪಂದ್ಯಗಳಲ್ಲಿ ಮುಂದುವರೆದ ಯಶಸ್ವಿ ಜೈಸ್ವಾಲ್ ಕಳಪೆ ಪ್ರದರ್ಶನ
ಡಿಕೆ ಶಿವಕುಮಾರ್​ ಬುಧಾದಿತ್ಯ ಯೋಗದ ಸೀಕ್ರೆಟ್ ಬಿಚ್ಚಿಟ್ಟ ಗುರೂಜಿ
ಡಿಕೆ ಶಿವಕುಮಾರ್​ ಬುಧಾದಿತ್ಯ ಯೋಗದ ಸೀಕ್ರೆಟ್ ಬಿಚ್ಚಿಟ್ಟ ಗುರೂಜಿ
ಕ್ವಾಲಿಫೈಯರ್ 2 ಪಂದ್ಯದಲ್ಲಿ ಎರಡೆರಡು ಬಾರಿ ನಡೆದ ಟಾಸ್
ಕ್ವಾಲಿಫೈಯರ್ 2 ಪಂದ್ಯದಲ್ಲಿ ಎರಡೆರಡು ಬಾರಿ ನಡೆದ ಟಾಸ್